Skip to main content

ವ್ಯಕ್ತಿತ್ವದ ಕನ್ನಡಿ ಜಾತಕ

ವ್ಯಕ್ತಿತ್ವದ ಕನ್ನಡಿ ಜಾತಕ ಗೌರಿಪುರ ಚಂದ್ರು 'ಕಣ್ಣು ಆರೋಗ್ಯದ ಕನ್ನಡಿ', 'ಹೃದಯ ಆರೋಗ್ಯದ ಕನ್ನಡಿ' ಎನ್ನುತ್ತದೆ ವಿಜ್ಞಾನ. ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯ ಆರೋಗ್ಯ, ಉನ್ನತಿ ಗ್ರಹಗಳ ಸ್ಥಾನಮಾನದ ಮೇಲೆ ಆಧರಿಸಿದೆ. ಜನ್ಮ ಲಗ್ನದಲ್ಲಿ ಪಾಪಗ್ರಹಗಳಿದ್ದಾಗ ವ್ಯಕ್ತಿಯ ಆರೋಗ್ಯ, ಅಭಿವೃದ್ಧಿ ಎಲ್ಲದರಲ್ಲೂ ಏರುಪೇರಾಗುತ್ತದೆ. ಕೆಲವೊಮ್ಮೆ ವೈದ್ಯರಿಗೂ ಗೋಚರವಾಗದಂತಹ ಅಥವಾ ವಾಸಿಯಾಗದ ಕಾಯಿಲೆಗಳು ಕಾಡುತ್ತವೆ. ಕರ್ಮ ಸಿದ್ಧಾಂತದ ಪ್ರಕಾರ ಅಂತಹ ಜಾತಕವನ್ನು ಪ್ರಾರಬ್ಧ ಕರ್ಮ ಕಾಡುತ್ತಿದೆ ಎನ್ನುತ್ತಾರೆ. ಇದನ್ನೇ ನಾವು ಸಂಕ್ಷಿಪ್ತವಾಗಿ 'ಪೂರ್ವ ಜನ್ಮ ಕೃತಂ ಪಾಪಂ ವ್ಯಾ ರೂಪಂ ಬಾಧಯೇತ್' ಎನ್ನುತ್ತೇವೆ. ಈ ಅಂಶವನ್ನು ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಗ್ರಹಗಳ ಚಲನವಲನದ ಮೇಲೆ ನಮ್ಮ ಆರೋಗ್ಯ, ಬೆಳವಣಿಗೆ, ಅಭಿವೃದ್ಧಿ ನಿಂತಿದೆ. ಗ್ರಹಗಳ ಚಲನವಲನವನ್ನು, ಅದರ ಸ್ಥಾನಮಾನವನ್ನು ಜಾತಕದ ಜನ್ಮ ಕುಂಡಲಿ ಸೂಚಿಸುತ್ತದೆ. ಇಲ್ಲಿ ಜನ್ಮ ಕುಂಡಲಿ ಕನ್ನಡಿಯಾಗುತ್ತದೆ. ಅಂದರೆ, ಜಾತಕ ಆರೋಗ್ಯದ ಕನ್ನಡಿ ಎಂದಾಯಿತು. ಜನ್ಮ ಕುಂಡಲಿಯಲ್ಲಿ ಏನಿದೆ? ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ರಾಶಿಯಲ್ಲಿ ಇದ್ದವೆಂದು ತಿಳಿಸುವ ವಿವರ ಅಥವಾ ನಕ್ಷೆಯೇ ಜನ್ಮ ಕುಂಡಲಿ. ಜನ್ಮ ಕುಂಡಲಿಯಲ್ಲಿ ಮುಖ್ಯವಾದುದೇ ಲಗ್ನ ಭಾವ. ಲಗ್ನ ಸ್ಥಾನವನ್ನು ಕುಂಡಲಿಯ ಮೊದಲ ಸ್ಥಾನ ಎನ್ನುತ್ತಾರೆ. ಲಗ್ನ ಸ್ಥಾನವನ್ನು ಆಧಾರವಾಗಿಟ್ಟುಕೊಂಡು ಅಪ್ರದಕ್ಷಿಣಾಕಾರದಲ್ಲಿ ಗ್ರಹಗಳ ಸ್ಥಾನವನ್ನು ಜ್ಯೋತಿಷಿಗಳು ನಿಷ್ಕರ್ಷೆ ಮಾಡುತ್ತಾ ಹೋಗುತ್ತಾರೆ. ಕುಂಡಲಿಯಲ್ಲಿ 12 ಸ್ಥಾನಗಳಿರುತ್ತವೆ. ಒಂಬತ್ತು ಗ್ರಹಗಳ ಜತೆಗೆ ಲಗ್ನವಿರುವ ರಾಶಿಯ ಪ್ರಭಾವವನ್ನೂ ಜ್ಯೋತಿಷಿ ಗಣನೆಗೆ ತೆಗೆದುಕೊಳ್ಳುತ್ತಾನೆ. ಆ ಲಗ್ನವಿರುವ ರಾಶಿಯು ಹೊಂದಿರುವ ಗುಣ ಲಕ್ಷಣಗಳು ಜಾತಕದ ದೇಹ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಅದರ ಜತೆಗೆ ಆ ಲಗ್ನದ ನಕ್ಷತ್ರ, ಅದರ ಪಾದದ ಅಂಶ, ಅದರಲ್ಲಿರುವ ಗ್ರಹ, ಅದರ ಮೇಲೆ ಬೇರೆ ಬೇರೆ ಗ್ರಹಗಳ ದೃಷ್ಟಿ ಇವು ಜಾತಕದ ದೇಹ ಲಕ್ಷಣ ಭವಿಷ್ಯದ ಆರೋಗ್ಯಾದಿ ವಿಷಯಗಳನ್ನು ತಿಳಿದುಕೊಳ್ಳಬಹುದು. ವ್ಯಕ್ತಿಯ ಫಲಾಫಲಗಳು ಲಗ್ನ ಸ್ಥಾನದಲ್ಲಿರುವ ಶುಭ ಅಥವಾ ಅಶುಭ (ಪಾಪ) ಗ್ರಹಗಳನ್ನು ಆಧರಿಸಿದೆ. ಶುಭ ಗ್ರಹಗಳು : ಚಂದ್ರ, ಬುಧ, ಗುರು, ಶುಕ್ರ ಪಾಪ ಗ್ರಹಗಳು : ರಾಹು, ಕುಜ, ಶನಿ, ರವಿ ಮತ್ತು ಕೇತು ಲಗ್ನ ಸ್ಥಾನದಲ್ಲಿ ರಾಶಿಯ ಪ್ರಭಾವ: ಸೂರ್ಯ : ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿರುತ್ತಾನೆ. ಆತ ಸೋಲರಿಯದವನಾಗಿರುತ್ತಾನೆ. ಧೈರ್ಯವಂತನಾಗಿ, ತಂದೆ, ತಾಯಿಯರಲ್ಲಿ ಭಕ್ತಿಯುಳ್ಳವನಾಗಿ, ನಾಯಕತ್ವದ ಎಲ್ಲ ಗುಣಗಳನ್ನು ಹೊಂದಿರುತ್ತಾನೆ. ಧಾರ್ಮಿಕ ಮನೋವೃತ್ತಿ, ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿರುತ್ತಾನೆ. ಚಂದ್ರ : ಭಾವನಾತ್ಮಕ, ಭೋರ್ಗರೆಯುವ, ತುಂಬಾ ವೇಗವಾಗಿ ನಡೆಯುವವನು, ಉತ್ಸಾಹಿ, ಹಾಸ್ಯ ಮನೋಭಾವ ಉಳ್ಳವನು ಮತ್ತು ಅಂಜುಬುರುಕನೂ ಆಗಿರುತ್ತಾನೆ. ಕುಜ : ಮಂಗಳ ಅಥವಾ ಕುಜ ಗ್ರಹದ ಪ್ರಭಾವ ವ್ಯಕ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸಮರ, ತನಿಖೆ ಮತ್ತು ಅಪಘಾತ ಮತ್ತಿತರ ಸಂಗತಿಗಳು ಅಂತಹ ವ್ಯಕ್ತಿಯ ಸಾಮಾನ್ಯ ಗುಣಗಳಾಗಿರುತ್ತವೆ. ಬುಧ : ಬುದ್ಧಿವಂತ, ಸೌಹಾರ್ಧ ಮನೋಭಾವ, ತ್ವರಿತ ಬುದ್ಧಿಯ, ಉದ್ಯಮಿ, ಶ್ರೀಮಂತ ಮತ್ತು ದುಡ್ಡು ಮಾಡುವ ಮನೋಭಾವ ಉಳ್ಳವನಾಗಿರುತ್ತಾನೆ. ಗುರು : ಸತ್ಯವಂತ, ಮಾನವೀಯತೆ, ಬುದ್ಧಿವಂತ ಮತ್ತು ಅದೃಷ್ಟಶಾಲಿಯಾಗಿರುತ್ತಾನೆ. ತನ್ನ ಪತ್ನಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ ಮತ್ತು ಸನ್ಯಾಸಿಯ ಗುಣವನ್ನು ಹೊಂದಿರುತ್ತಾನೆ. ಅವನಿಗೆ ಜೀವನದಲ್ಲಿ ಏನೂ ಕೊರತೆಯಿರುವುದಿಲ್ಲ. ಉಳಿದವರು ಅವನಿಗೆ ಸಹಾಯ ಮಾಡುತ್ತಾರೆ. ಶುಕ್ರ : ಮಹಿಳೆಯರಲ್ಲಿ ಆಸಕ್ತನಾಗಿರುತ್ತಾನೆ. ನೋಡಲಿಕ್ಕೆ ಅಷ್ಟೇನು ಸುಂದರನಾಗಿ ಇರದಿದ್ದರೂ ಆಕರ್ಷಕನಾಗಿ ಇರುತ್ತಾನೆ. ಆಕರ್ಷಕ ವ್ಯಕ್ತಿತ್ವ, ಭೋಗಲಾಲಸೆಯ, ನಿಷ್ಠುರ ಸ್ವಭಾವ ಮತ್ತು ಅದೃಷ್ಟಶಾಲಿಯಾಗಿರುತ್ತಾನೆ. ಆದರೆ ಅಷ್ಟೇ ಸೋಮಾರಿ. ಶನಿ : ಎತ್ತರವಾಗಿ ಕಪ್ಪಗಿರುತ್ತಾನೆ. ತಣಿವಿಲ್ಲದ ಆಸೆ ಮತ್ತು ದುಡ್ಡಿನ ದಾಹದಿಂದ ಕೂಡಿರುತ್ತಾನೆ. ಅಜ್ಞಾನದಿಂದ ಕೂಡಿರುತ್ತಾನೆ, ಒಂಟಿಯಾಗಿದ್ದರೂ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿರುತ್ತಾನೆ. ರಾಹು : ನಿಗೂಢ ಪ್ರಕೃತಿಯವನು. ಅವನಿಗೆ ಮುಂದೆ ತಾನಿಡುವ ಹೆಜ್ಜೆಯ ಅರಿವೇ ಇರುವುದಿಲ್ಲ. ಆತ ತುಂಬಾ ಅಪಾಯಕಾರಿ ವ್ಯಕ್ತಿಯಾಗಿ ಕಾಣುತ್ತಾನೆ. ಒಂದು ವೇಳೆ ರಾಹುವಿನ ಜತೆ ಶನಿ ಮತ್ತು ಮಂಗಳ ಗ್ರಹಗಳು ಸೇರಿದರೆ, ಅಂತಹ ವ್ಯಕ್ತಿ ವಿಧೇಯನಾಗಿರುತ್ತಾನೆ, ಸೇಡು ತೀರಿಸಿಕೊಳ್ಳುವವರೆಗೂ ದ್ವೇಷವನ್ನು ಕಾಯ್ದುಕೊಳ್ಳುತ್ತಾನೆ. ರಾಹು ಲಗ್ನ ಭಾವದಲ್ಲಿದ್ದರೆ, ಕೌಟುಂಬಿಕ ಜೀವನ ಅಷ್ಟೇನು ತೃಪ್ತಿದಾಯಕವಾಗಿರುವುದಿಲ್ಲ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ