Skip to main content

ಗ್ರಹಗಳ ಕಾರಕಗಳು ಮತ್ತು ದ್ವಾದಶಭಾವಗಳು

ಗ್ರಹಗಳ ಕಾರಕಗಳು ಮತ್ತು ದ್ವಾದಶಭಾವಗಳು *ನಾರಾಯಣಾಚಾರ್ಯ ಜೋಶಿ ಮಳ್ಳಿ ನಾವು ಇಂಥ ರಾಶಿಯಲ್ಲೇ ಹುಟ್ಟಬೇಕೆಂದು ಕೇಳಿಕೊಂಡು ಹುಟ್ಟಲು ಆಗಲ್ಲ. ನಾವು ಹುಟ್ಟಿದ ಕ್ಷಣ ನಮ್ಮ ರಾಶಿಯನ್ನು ನಿರ್ಧರಿಸುತ್ತದೆ. ಹಾಗೆಯೇ ಆಯಾ ರಾಶಿಯ ಮೇಲೆ ನಮ್ಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎನ್ನುವುದು ಜ್ಯೋತಿಷ್ಯದ ನಂಬಿಕೆ. ಯಾವುದೇ ವ್ಯಕ್ತಿಯ ಕುಂಡಲಿಯನ್ನು ಪರಿಶೀಲಿಸಿದಾಗ ಅದರಲ್ಲಿ ಮುಖ್ಯವಾಗಿ ದ್ವಾದಶ ಭಾವಗಳು ಅದಕ್ಕೆ ಸಂಬಂಧಪಟ್ಟ ಗ್ರಹಗಳು ಮತ್ತು ಕಾರಕಗಳು ಎಂಬ ವಿಷಯ ಬಹಳ ಮುಖ್ಯವಾದದ್ದು. ಭಾವ ಮತ್ತು ಕಾರಕಗಳೆಂದರೆ ಏನೆಂಬ ವಿಷಯ ತಿಳಿಯುವುದು ಬಹಳ ಮುಖ್ಯ. ದ್ವಾದಶ ಅಂದರೆ ಹನ್ನೆರಡು ಭಾವಗಳು ಅಂದರೆ ಹನ್ನೆರಡು ಸ್ಥಾನಗಳು. ಇವುಗಳಲ್ಲಿ ಮೊದಲನೆಯ ಭಾವ ಅಥವಾ ಸ್ಥಾನವನ್ನು ತನು ಸ್ಥಾನವೆಂದು ಕರೆಯುತ್ತಾರೆ. ಲಗ್ನ ಅಥವಾ ರಾಶಿಯಿಂದ ಅಂದರೆ ಅದೇ ಸ್ಥಾನವನ್ನು ತನು ಎಂದರೆ ಮನುಷ್ಯನ ವ್ಯಕ್ತಿತ್ವ, ರೂಪ, ಬಣ್ಣ, ಮನಸ್ಸು, ಧೈರ್ಯ ಇವುಗಳನ್ನು ತನು ಅಥವಾ ಪ್ರಥಮ ಭಾವದಿಂದ ಹೇಳಲಾಗುತ್ತದೆ. ಆ ಭಾವದಲ್ಲಿ ಶುಭ ಗ್ರಹಗಳಿದ್ದರೆ ಅಥವಾ ಸ್ವಕ್ಷೇತ್ರ ಉಚ್ಚರಾಶಿಯ ಗ್ರಹಗಳಿದ್ದರೆ ಒಳ್ಳೇ ಶರೀರ, ಆತ್ಮ ವಿಶ್ವಾಸ, ಆರೋಗ್ಯ, ರೂಪವಂತಿಕೆ, ಗುಣವಂತಿಕೆಯನ್ನು ಆ ವ್ಯಕ್ತಿ ಹೊಂದಿರುತ್ತಾನೆ. ಪಾಪ ಗ್ರಹಗಳಿದ್ದರೆ ವಿರುದ್ಧ ಫಲಗಳನ್ನು ಹೇಳಲಾಗುತ್ತದೆ. ದ್ವಿತೀಯ ಅಥವಾ ಧನಭಾವವೆಂದು ಕರೆಯುವ ಎರಡನೆಯ ಸ್ಥಾನದ ಅಧಿಪತಿ ಮತ್ತು ಅದಕ್ಕೆ ಸಂಬಂಧಪಟ್ಟ ಗ್ರಹಗಳಿಂದ ಮನುಷ್ಯನ ಐಶ್ವರ್ಯ, ಸಂಪತ್ತು, ನೇತ್ರ , ಪಾಥಮಿಕ ಶಿಕ್ಷಣ ಮತ್ತು ಮಾತುಗಾರಿಕೆ ಇವುಗಳನ್ನು ನಿರ್ಧರಿಸುತ್ತಾರೆ. ತೃತೀಯ ಅಥವಾ ಸಹಜಭಾವವಾದ ಮೂರನೆಯ ಸ್ಥಾನವನ್ನು ಸಹಜ ಅಥವಾ ಸಹೋದರ ಸ್ಥಾನವೆಂದು ಕರೆಯುತ್ತಾರೆ. ಈ ಭಾವದಿಂದ ಮನುಷ್ಯನ ಶ್ರವಣಶಕ್ತಿ, ಸಹೋದರ ಸಹೋದರಿಯರು ಮತ್ತು ಪ್ರಾಮಾಣಿಕತೆಯನ್ನು ನಿರ್ಧರಿಸಲಾಗುತ್ತದೆ. ಈ ಭಾವದಲ್ಲಿ ಪುರುಷ ಗ್ರಹಗಳಿದ್ದರೆ ಅಥವಾ ಆ ಸ್ಥಾನದ ಸಂಬಂಧವನ್ನು ಹೊಂದಿದ್ದರೆ ಸಹೋದರರನ್ನೂ, ಸ್ತ್ರೀ ಗ್ರಹಗಳ ಸಂಬಂಧವನ್ನೂ ಹೊಂದಿದ್ದರೆ ಸಹೋದರಿಯರನ್ನು ಹೊಂದಿರುತ್ತಾರೆ. ಚತುರ್ಥ ಅಥವಾ ನಾಲ್ಕನೇ ಭಾವವನ್ನು ಕುಟುಂಬ ಭಾವವೆಂದೂ ಮಾತ್ರ ಭಾವವೆಂದು ಕರೆಯುತ್ತಾರೆ. ಈ ಸ್ಥಾನದಿಂದ ಕುಟುಂಬದ ಸೌಖ್ಯ , ತಾಯಿಯ ಸೌಖ್ಯ ಮತ್ತು ವಾಹನಾದಿಗಳ ಯೋಗವನ್ನು ನಿರ್ಧರಿಸಲಾಗುತ್ತದೆ. ಶುಭಗ್ರಹಗಳಿದ್ದರೆ ಒಳ್ಳೇ ಫಲಗಳನ್ನೂ ಪಾಪಗ್ರಹಗಳಿದ್ದರೆ ಕೆಟ್ಟ ಫಲವನ್ನೂ ಹೇಳಲಾಗುತ್ತದೆ. ಬಹಳ ಮುಖ್ಯವಾದ ಐದನೆಯ ಅಥವಾ ಪಂಚಮ ಭಾವವನ್ನು ಸಂತಾನ ಸ್ಥಾನವೆಂದೂ ಕರೆಯಲಾಗುತ್ತದೆ. ಇದರಲ್ಲಿ ಶುಭಕಾರಕನಾದ ಬ್ರಹಸ್ಪತಿಯಿದ್ದರೆ ಪಂಚಪುತ್ರವೆಂದು ವಿಯೋಗ ಶಾಸ್ತ್ರಕಾರರು ಬರೆಯುತ್ತಾರೆ. ಬುಧ ಶನಿಗಳಿದ್ದರೆ ದತ್ತು ಪುತ್ರಯೋಗವೆಂದೂ ನಿರ್ಧರಿಸಲಾಗುತ್ತದೆ. ರಾಹುವಿದ್ದರೆ ಸರ್ಪದೋಷವೆಂದೂ ಹೇಳಲಾಗುತ್ತದೆ. ಅದಕ್ಕೆ ತಕ್ಕಾ ಪರಿಹಾರಗಳನ್ನೂ ಹೇಳಲಾಗಿದೆ. ಷಷ್ಠಮ ಅಥವಾ ಆರನೇ ಸ್ಥಾನವನ್ನು ಶತ್ರು ಸ್ಥಾನವೆಂದೂ ರೋಗ ಸ್ಥಾನವೆಂದೂ ಕರೆಯುತ್ತಾರೆ. ಅದರಲ್ಲಿ ಪಾಪ ಗ್ರಹಗಳಿದ್ದರೆ ಮನುಷ್ಯನಿಗೆ ರೋಗಗಳೂ, ಶತ್ರುಗಳೂ ಕಡಿಮೆಯೆಂದು, ರಾಹುವಿದ್ದರೆ ಒಳ್ಳೆಯದೆಂದೂ ಅಭಿಪ್ರಾಯಪಡಲಾಗುತ್ತದೆ. ಸಪ್ತಮ ಅಥವಾ ಏಳನೆಯ ಸ್ಥಾನವನ್ನು ಸಂಗಾತಿಯ ಸ್ಥಾನವೆಂದು ಕರೆದಿದ್ದಾರೆ. ಸಪ್ತಮದಲ್ಲಿ ಬಲಿಷ್ಠರಾದ ಬ್ರಹ್ಮಸ್ಮತಿ, ಶುಕ್ರವಿದ್ದರೆ ಒಳ್ಳೆ ಸಂಗಾತಿಯನ್ನು ಹೊಂದಿ ಆದರ್ಶ ದಾಂಪತ್ಯ ಜೀವನವನ್ನು ನಡೆಸುತ್ತಾರೆಂದು ಹೇಳಲಾಗುತ್ತದೆ. ಅಷ್ಟಮ ಅಥವಾ ಎಂಟನೆಯ ಸ್ಥಾನವನ್ನು ನಿಧನ ಸ್ಥಾನವೆಂದೂ, ಆಯುಷ್ಯ ಸ್ಥಾನವೆಂದೂ ಕರೆಯಲಾಗುತ್ತದೆ. ಇದರಲ್ಲಿ ಬಲಿಷ್ಟನಾದ ಶನಿಯಿದ್ದರೆ ಶತಾಯುಷಿಯೆಂದು ನಿರ್ಧರಿಸಲಾಗುತ್ತದೆ. ನವಮ ಅಥವಾ ಒಂಭತ್ತನೆಯ ಸ್ಥಾನವನ್ನು ಭಾಗ್ಯಸ್ಥಾನವೆಂದೂ, ಧರ್ಮ ಸ್ಥಾನವೆಂದೂ , ಪಿತೃಸ್ಥಾನವೆಂದೂ ಕರೆಯಲಾಗುತ್ತದೆ. ಈ ಸ್ಥಾನದಲ್ಲಿ ಬಲಿಷ್ಠನಾದ ಬ್ರಹಸ್ಮತಿಯಿದ್ದರೆ ಆಥವಾ ಶುಭಗ್ರಹಗಳಿದ್ದರೆ ಅತ್ಯಂತ ಧಾರ್ಮಿಕನೂ, ಭಾಗ್ಯವಂತನೂ ಆಗುತ್ತಾನೆ. ಪಾಪಗ್ರಹಗಳಿದ್ದರೆ ವಿರುದ್ಧ ಫಲಗಳನ್ನು ಹೇಳಲಾಗುತ್ತದೆ. ಈ ಸ್ಥಾನದಲ್ಲಿ ಪಿತೃಕಾರಕನಾದ ರವಿಯಿದ್ದರೆ ಸುಮಾರು 70 ವರ್ಷದವರೆಗೂ ತಂದೆಯು ಜೀವಿಸುತ್ತಾನೆ. ಪಿತೃ ಸೌಖ್ಯವನ್ನು ಹೊಂದುತ್ತಾನೆ. ಅತ್ಯಂತ ಮುಖ್ಯವಾದ ದಶಮ ಅಥವಾ ಹತ್ತನೆಯ ಸ್ಥಾನವನ್ನು ಕರ್ಮ ಅಥವಾ ವೃತ್ತಿಸ್ಥಾನವೆಂದು ಕರೆಯಲಾಗುತ್ತದೆ. ಈ ಸ್ಥಾನದಿಂದ ಮನುಷ್ಯನ ವೃತ್ತಿ ಜೀವನವನ್ನು ನಿರ್ಧರಿಸಬಹುದು. ಹತ್ತನೆಯ ಸ್ಥಾನದಲ್ಲಿ ಬಲಿಷ್ಠನಾದ ರವಿಯಿದ್ದರೆ ಒಳ್ಳೇ ಸರಕಾರಿ ಅಧಿಕಾರಿಯಾಗುವ ಯೋಗವಿರುತ್ತದೆ. ಗುರುವಿನ ದೃಷ್ಟಿಯಿದ್ದರೆ ಮಂತ್ರಿ ಮೊದಲಾದ ಸ್ಥಾನವನ್ನು ಹೊಂದುವ ಯೋಗವಿರುತ್ತದೆ. ನಿರ್ಬಲ ಅಥವಾ ಪಾಪಗ್ರಹಗಳಿದ್ದರೆ ನಿರುದ್ಯೋಗಿಯೂ ಆಲಸಿಯೂ ಆಗುತ್ತಾನೆಂದು ಹೇಳಲಾಗುತ್ತದೆ. ಏಕಾದಶ ಅಥವಾ ಹನ್ನೊಂದನೆಯ ಸ್ಥಾನವನ್ನು ಲಾಭಸ್ಥಾನವೆಂದೂ ಕರೆದಿದ್ದಾರೆ. ಇಲಿ ಶುಭಗ್ರಹಗಳಿದ್ದರೆ ಜೀವನದಲ್ಲಿ ಒಳ್ಳೇ ಲಾಭಗಳನ್ನೂ ಹೊಂದುವ ಸಾಧ್ಯತೆಯಿರುತ್ತದೆ. ದ್ವಾದಶ ಅಥವಾ ಹನ್ನೆರಡನೇಯದಾದ ಕೊನೇಭಾವವನ್ನು ವ್ಯಯಭಾವರೆಂದೂ ಕರೆದಿದ್ದಾರೆ. ಇದರಲ್ಲಿ ಕೇತುವಿದ್ದರೆ ಒಳ್ಳೇ ಆಧ್ಯಾತ್ಮಜೀವಿಯೆಂದೂ, ಕ್ಷೀಣ ಚಂದ್ರನಿದ್ದರೆ ಅತ್ಯಂತ ವಿಕಾರೀ ಮನೋವೃತ್ತಿಯವನೆಂದೂ, ಮಹಾಪಾತಕಿಯೆಂದೂ ಶಾಸ್ತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಜ್ಯೋತಿಷ್ಯಶಾಸ್ತ್ರವು ಅತ್ಯಂತ ಪ್ರಮಾಣ ಬದ್ಧವಾದ ಶಾಸ್ತ್ರವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಕಾತುರ ಪ್ರದವಾಗಿದೆ. ಅದರ ಉಪಾಸನೆಯಿಂದ ತಕ್ಕ ಪರಿಹಾರವನ್ನು ಮಾಡುವುದರಿಂದ ಒಳ್ಳೇ ಫಲಕಾರಿಯಾಗಿದೆಯೆಂದು ಅನುಭವ ಸಿದ್ಧವಾಗಿದೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ