ಜ್ಯೋತಿಷ್ಯ ನಂಬಿ ಕೆಡಬೇಡಿ * ದೈವಜ್ಞ ಹರೀಶ್ ಕಾಶ್ಯಪ್
ಇತ್ತೀಚೆಗೆ ಜನರು ಜ್ಯೋತಿಷ್ಯದ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಇದನ್ನರಿತ ಕಪಟ ಜ್ಯೋತಿಷ್ಯರು ಇದನ್ನೇ ಬಂಡವಾಳವಾಗಿ ಮಾಡುತ್ತಿದ್ದಾರೆ. ಹೀಗಾಗಿ ಹಾದಿ ಬೀದಿಯಲ್ಲಿ ಜ್ಯೋತಿಷ್ಯರು ಕಂಡು ಬರುತ್ತಿದ್ದಾರೆ. ಜ್ಯೋತಿಷ್ಯ ಇಂದು ಬಿಕರಿಯ ವಸ್ತುವಾಗಿದೆ. ವಿಜ್ಞಾನ ವಾಹಿಯಾಗಿ ಉಳಿದಿಲ್ಲ. ಜ್ಯೋತಿಷ್ಯವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ? ಸಿದ್ಧತೆಗಳೇನು? ಅವುಗಳ ಬಗ್ಗೆ ತಿಳಿದುಕೊಳ್ಳೋಣ.
* ಜ್ಯೋತಿಷ್ಯ ಶಾಸ್ತ್ರಕ್ಕೂ ಮಾಟ ಮಂತ್ರ ಪ್ರಯೋಗಗಳಿಗೂ ಸಂಬಂಧವಿಲ್ಲ. ಹಾಗೆಯೇ ನಾಡಿ, ಶಕುನ, ಕೊರವಂಜಿ, ಗಿಳಿ ಹೆಸರಿನ ಸೋಗಿಗೂ ಜ್ಯೋತಿಷ್ಯಕ್ಕೂ ಸಂಬಂಧವಿಲ್ಲ. ಧಾರ್ಮಿಕ ಗೊಡ್ಡು ವೇಷ ಧರಿಸಿ ಹೀಗೆ ಮಾಡುವವರೆಲ್ಲ 'ಜ್ಯೋತಿಷ್ಯ' ಎಂದು ನಂಬಬೇಡಿ.
* ಜ್ಯೋತಿಷ್ಯ ಶಾಸ್ತ್ರದಿಂದ ಯಾರಿಗೂ ಕೆಡುಕು ಮಾಡಲಾಗದು. ಆ ಹೆಸರಿನಿಂದ ದುರಾಚಾರ ಮಾಡುವವರಿಂದ ದೂರವಿರಿ. ಇತರರನ್ನೂ ದೂರವಿರಿಸಿ.
* ಮಹಾಜ್ಞಾನ ಪೀಠಗಳಾದ (ಅದ್ವೈತ, ದ್ವೈತ, ವಿಶಿಷ್ಟಾದ್ವೈತ) ಮಠಗಳ ಘನತೆ ಇರುವ ಪೀಠಾಧಿಪತಿಗಳಿಂದ ಪೋಷಿತರಾದ ಯೋಗ್ಯ ಜ್ಯೋತಿಷಿಗಳಿಗೆ ನಿಮ್ಮ ಮನ್ನಣೆ ಇರಲಿ.
* ಅನೂಜಾನವಾಗಿ ಅಧ್ಯಯನ ಮಾಡಿದ ಮತ್ತು ಶಾಸ್ತ್ರೋಕ್ತ ವಿಧಿ ವಿಧಾನ ತಿಳಿದವರೆಂದು ನೋಡಿ ಮಾರ್ಗದರ್ಶನ ಪಡೆಯಿರಿ. ಸುಮ್ಮನೆ ಢಾಳತನ, ಆಟಾಟೋಪ ಢೋಂಗಿ, ದೊಡ್ಡ ಬೋರ್ಡ್ಗಳ ಹಿಂದೆ ಹೋಗಬೇಡಿ.
* ಹೀಗೆ ಅರಸಿ ಯೋಗ್ಯರಲ್ಲೂ ನಿಮ್ಮ ನಡೆಯು ಉದಾರವಾಗಿರಲಿ. ಅವರನ್ನು ಆಧರಿಸಿ, ಮೆಚ್ಚಿಸಿ ಅದರಿಂದ ಅವರಲ್ಲಿರುವ ಆ ವಿಜ್ಞಾನವು ನಿಮ್ಮೆಡೆ ಉದಾರವಾಗಿ ತೆರೆದುಕೊಳ್ಳುವುದು.
* ಮದುವೆ ವಿಚಾರ: ಜನರು ಇಂದು ವಿಚಾರ ತತ್ವ್ತಹೀನರಾಗಿ ಬರಿದೇ ಜಾತಕ ಪೇಪರ್ಗಳು ಕೊಡಿಸಹೋಗುವವರೇ ಹೊರತು, ಮನುಷ್ಯ ಸಂಬಂಧಗಳನ್ನಲ್ಲ. ಒಬ್ಬ ಜಾತಕ ಕೂಡುವುದೆಂದರೆ ಮತ್ತೊಬ್ಬ ಕೂಡದು ಎನ್ನುವ. ಇದರ ಮಧ್ಯೆ ಮಾತಾಪಿತರು ಅಪ್ಪಚ್ಚಿಯಾಗುತ್ತಿರುವರು.
* ರಾಶಿ, ನಕ್ಷತ್ರ, ಗಣ, ಯೋಗಿ, ಸಪ್ತಮ-ಭಾಗ್ಯ ಭಾವಾದಿಗಳ ವಿಚಾರವು ಜ್ಯೋತಿಷ್ಯಶಾಸ್ತ್ರದಲ್ಲಿ ಇದೆ. ಆದರೆ ಅವು ರಚಿಸಿದ ಕಾಲಮಾನ ಮತ್ತು ಜನತಂತ್ರಕ್ಕೂ ನಾವು ಇಂದಿರುವ ಜನ ವ್ಯವಸ್ಥೆಗೂ ವ್ಯತ್ಯಾಸವಿದೆ.
* ಬ್ರಾಹ್ಮಣಾದಿ ಜಾತುವರ್ಣ ವ್ಯವಸ್ಥೆಯಲ್ಲಿ ಋಷಿಗೋತ್ರ, ಕುಲ ಮತ್ತು ಆಚಾರ ಸಿದ್ಧಾಂತಗಳಿರುವ ಜನ ಸಮೂಹಕ್ಕೆ ಮಾತ್ರ ಈ 'ಜಾತಕ ಕೂಟ'ಗಳು ಲಾಗೂ ಆಗುತ್ತವೆ ಹೊರತು, ಇಂದಿನ ಸಂಕ್ರಾಮಿಕ ಮತ್ತು ಅವ್ಯವಸ್ಥಿತ ಸಮಾಜಕ್ಕೆ ಅಲ್ಲ.
* ವಧು, ವರರ ಕುಟುಂಬ ಹಿನ್ನೆಲೆ, ಸ್ಥಿತಿಗತಿ ಮತ್ತು ಪರಸ್ಪರ ಒಪ್ಪಿಗೆ ಪ್ರಧಾನವಾಗಲಿ. ಜಾತಕ ಮೇಳೈಕೆ ಅಲ್ಲ.
* ಯೋಗ್ಯ ಆಚಾರ್ಯರಲ್ಲಿ ಜಾತಕ ತೋರಿಸಿ. ಪ್ರತಿ ಜಾತಕದಲ್ಲೂ ಏನಾದರೂ ತೊಂದರೆ ಇರುತ್ತದೆ. ಪ್ರತಿ ತೊಂದರೆಗೂ ಶಾಸ್ತ್ರದಲ್ಲಿ ಉಪಾಯ ಇರುತ್ತದೆ. ಆ ಉಪಾಯ ಪರಿಹಾರ ನಡೆಸಿ ಮದುವೆ ಮಾಡಿರಿ.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments