Skip to main content

Posts

Showing posts from July, 2014

ನಕ್ಷತ್ರ ಮಾಲಿಕೆ: ಸ್ವಾತಿ ನಕ್ಷತ್ರದವರು ಸಹಾಯ ಹಸ್ತರು

ರತ್ನರಾಜ್ ಜೈನ್ ನೋಡುವಾಗ ಮಾಣಿಕ್ಯರತ್ನದಂತೆ ಏಕ ನಕ್ಷತ್ರ. ಹಾಗಾಗಿ ಮಾಣಿಕ್ಯರತ್ನದ ಜತೆ ಏಕಮುಖ ರುದ್ರಾಕ್ಷಿ ಧರಿಸಬಹುದು. ಈ ನಕ್ಷತ್ರಕ್ಕೆ ದೇವತೆ ವಾಯು. ನರಸಿಂಹ ಸ್ವಾಮಿ ದೇವರ ಜನನ ಈ ನಕ್ಷತ್ರದಲ್ಲಿಯೇ ಆಗಿರುತ್ತದೆ. (ಇದು ಸತ್ಯವೇ ಎಂದು ತಿಳಿದುಕೊಳ್ಳಬೇಕಾದರೆ 13.5.2014ರ ಮಂಗಳವಾರ ವೈಶಾಖ ಶುದ್ಧ ಚತುರ್ದಶಿ ದಿನ ಸ್ವಾತಿ ನಕ್ಷತ್ರವಿದೆ ಅದನ್ನು ನೋಡಬಹುದು). ಆ ದಿನ ನರಸಿಂಹಜಯಂತಿ ಕೂಡ ಆಗಿದೆ. ಜೈನರ 24ನೇ ತೀರ್ಥಂಕರರು ಮಹಾವೀರಸ್ವಾಮಿ ದೀಪಾವಳಿ ಅಮಾವಾಸ್ಯೆಯ ದಿನದಂದು ಸ್ವಾತಿ ನಕ್ಷತ್ರದಲ್ಲಿಯೇ ಮೋಕ್ಷ ಪಡೆದರು. ನಕ್ಷತ್ರದ ವಿಶೇಷತೆಯೆಂದರೆ ಈ ನಕ್ಷತ್ರದ ದಿನ ಗೃಹ ಪ್ರವೇಶವಾದರೆ ಮೂರು ವರ್ಷಗಳಲ್ಲಿ ಮನೆಯನ್ನು ಮಾರಾಟ ಮಾಡಿ ಬೇರೆ ಮನೆ ಕಟ್ಟುವಿರಿ. ಸಮುದ್ರದಲ್ಲಿರುವ ಮುತ್ತುಗಳಿಗೆ ಈ ನಕ್ಷತ್ರದ ಮಳೆ ಶ್ರೇಷ್ಠ ಆಗಿದೆ. ಈ ನಕ್ಷತ್ರದ ದಿನ ಅಮೂಲ್ಯವಸ್ತು ಕಳವಾದರೆ ಸಿಗಲಾರದು. ವಧು-ವರರ ಕೂಟಗಳಲ್ಲಿ ವ್ಯತ್ಯಾಸವಿದ್ದರೂ ಮಾಡಬಹುದು. ಆದರೆ ವಿವಾಹದ ನಂತರ ಲಕ್ಷ್ಮೀ ನರಸಿಂಹದೇವರ ದರ್ಶನ ಮಾಡತಕ್ಕದ್ದು. ಈ ನಕ್ಷತ್ರದಲ್ಲಿ ಜನಿಸಿದವನು ದೈವ ಭಕ್ತನೂ,ವಿನಯವಂತನೂ,ಉತ್ತಮ ವ್ಯಾಪಾರಿಯೂ, ದಯೆ ಉಳ್ಳವನೂ, ಕೈಲಾಸದ ಬಡ ಜನರಿಗೆ ಸಹಾಯ ಹಸ್ತ ಉಳ್ಳವನೂ, ಇವನ ಆರಾಧ್ಯ ದೇವರು ಲಕ್ಷ್ಮೀ ನರಸಿಂಹಸ್ವಾಮಿ. ಸ್ತ್ರೀಯಾದರೆ ಐಶ್ವರ್ಯವಂತಳೂ, ಪತಿವ್ರತೆ, ಪುತ್ರಸಂಹಾರ ಉಳ್ಳವಳೂ, ಯಶೋವಂತಳೂ, ನಿಧಾನವಾಗಿ ಕೆಲಸ ಮಾಡುವವಳು. ಆದರೆ ತವರು ಮನೆ ಬಗ್ಗೆ

ವಿಶಾಖ ನಕ್ಷತ್ರದವರು ನೇರ ನುಡಿಯುವವರು

ನಕ್ಷತ್ರಗಳ ಸಾಲಿನಲ್ಲಿ 16ನೇ ನಕ್ಷತ್ರವೇ ವಿಶಾಖ. ವಿಶಾಖ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ತಿ, ತು, ತೇ ಮತ್ತು ತೊ ಗಳಿಂದ ಆರಂಭಿಸಿದರೆ ಒಳ್ಳೆಯದಾಗುವುದು. ಜೈನರ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ಈ ನಕ್ಷತ್ರದಲ್ಲಿಯೇ ಜನಿಸಿದವರು. ವೈಶಾಖ ಹುಣ್ಣಿಮೆ ದಿನ ವಿಶಾಖ ನಕ್ಷತದ ದಿನವೇ ಗೌತಮ ಬುದ್ಧರ ಜನನ ಆಗಿದೆ. ಪ್ರಖ್ಯಾತ ರಾಜಕಾರಣಿಗಳಾದ ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜನಿಸಿದುದು ಈ ನಕ್ಷತ್ರದಲ್ಲಿ. ಅಲ್ಲದೇ ಇಬ್ಬರದ್ದೂ ವೃಶ್ಚಿಕ ರಾಶಿ ಆಗಿರುವುದು ಇನ್ನೊಂದು ವಿಶೇಷ. ಈ ನಕ್ಷತ್ರದ ಚಿಹ್ನೆ ಕುಂಬಾರನ ಚಕ್ರ ರೂಪದಲ್ಲಿ 5 ನಕ್ಷತ್ರಗಳಿಂದ ಕೂಡಿರುತ್ತದೆ. ಹಾಗಾಗಿ ಪಂಚಮುಖಿ ರುದ್ರಾಕ್ಷಿ ಇವರಿಗೆ ಹಿಡಿಸಲಿದೆ. ಇಂದ್ರಾಗ್ನಿ ದೇವತೆ. ಸಾಲ ಕೊಡಲು ಈ ನಕ್ಷತ್ರ ಇರುವ ದಿನ ಉತ್ತಮ. ಆದರೆ ಯಾವುದೇ ಶುಭ ಕಾರ್ಯ, ವಿವಾಹಾದಿ ಮಂಗಳ ಕಾರ್ಯ, ಗೃಹ ಆರಂಭ ಮತ್ತು ಗೃಹ ಪ್ರವೇಶಗಳಿಗೆ ಉತ್ತಮ ದಿನವಲ್ಲ. ಆದರೆ ಔಷಧ ಅಂಗಡಿ ತೆರೆಯಲು, ಅಗ್ನಿ ಸಂಬಂಧ ವಸ್ತುಗಳ ವ್ಯವಹಾರ ಆರಂಭಿಸಲು, ಅಡುಗೆ ಅನಿಲ ವಿತರಿಸುವ ವ್ಯವಹಾರ ಆರಂಭಿಸಲು ಈ ನಕ್ಷತ್ರ ಬುಧವಾರ ಇದ್ದ ದಿನ ಉತ್ತಮ ಆಗಿದೆ. ಈ ದಿನ ಅಮೂಲ್ಯ ವಸ್ತು ಕಳೆದರೆ ಬೇಗನೇ ಸಿಗಲಿದೆ. ದೀರ್ಘ ರೋಗ ಚಿಕಿತ್ಸೆಗೆ ಮದ್ದು ಆರಂಭಿಸಲು ಉತ್ತಮ ದಿನ. ಈ ನಕ್ಷತ್ರದಲ್ಲಿ ಜನಿಸಿದವರು ಸಿಡುಕು ಸ್ವಭಾವದವರೂ

ಹೆಸರಲ್ಲೇ ಅಡಗಿದೆ ವ್ಯಕ್ತಿಯ ವ್ಯಕ್ತಿತ್ವ ಡಾ.ಅನಸೂಯಾ ಎಸ್. ರಾಜೀವ್

ಪ್ರತಿಯೊಬ್ಬರೂ ಹೆಸರಿನ ಮಹತ್ವವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಶಕ್ತಿಯುತವಾದ ಹೆಸರಿನ ಬಲ ಮಾನವನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಹೆಸರಿನಿಂದ ನಮ್ಮ ಭಾವನೆಗಳು, ವ್ಯಕ್ತಿತ್ವ ತಿಳಿದುಬರುತ್ತವೆ. ಹೆಸರು ವ್ಯಕ್ತಿಯ ಬಲವನ್ನು ತೋರಿಸುತ್ತದೆ. ಶಕ್ತಿಯುತವಾದ ಹೆಸರನ್ನಿಡದೆ ಹೋದರೆ ಅದು ಆ ವ್ಯಕ್ತಿಗೆ ಆಭಾಸವಾಗುತ್ತದೆ. ಉದಾಹರಣೆಗೆ 'ಸರಸ್ವತಿ' ಎಂದು ಹೆಸರಿಟ್ಟು ಆಕೆಗೆ ವಿದ್ಯೆಯೇ ಹತ್ತಲಿಲ್ಲ ಎಂದರೆ ಅದು ವಿರೋಧಾಭಾಸವಾಗುತ್ತದೆ. ಹಾಗಾಗಿ ಹೆಸರು ವ್ಯಕ್ತಿಗೆ ಬಲವನ್ನು ತಂದುಕೊಡುವಂತಹದ್ದಾಗಿರಬೇಕು. ಜ್ಯೋತಿಷ್ಯಾಸ್ತ್ರದಲ್ಲಿ ಪ್ರಮುಖವಾಗಿ ಮೂರು ರೀತಿಯಾಗಿ ಹೆಸರನ್ನು ಸೂಚಿಸುವ ಪದ್ಧತಿ ಇದೆ. ಮೊದಲನೆಯದಾಗಿ ನೇಮಾಲಜಿ ಅಥವಾ ನಾಮಶಾಸ್ತ್ರ,ಎರಡನೆಯದಾಗಿ ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ, ಮೂರನೆಯದಾಗಿ ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹಗಳ ಬಲ ಹೆಚ್ಚಿರುವುದೋ ಅದಕ್ಕೆ ಸಂಬಂಧಿಸಿದ ಅಕ್ಷರಗಳನ್ನಿಡುವುದು ಅಥವಾ ವ್ಯಕ್ತಿಯ ನಕ್ಷತ್ರಕ್ಕನುಗುಣವಾಗಿ ಹೆಸರನ್ನಿಡುವುದು. ಮೊದಲನೆಯದಾಗಿ ನೇಮಾಲಜಿಯನ್ನು ತೆಗೆದುಕೊಳ್ಳೋಣ. ಇಲ್ಲಿ ವ್ಯಕ್ತಿಯ ನಕ್ಷತ್ರವನ್ನು ತೆಗೆದುಕೊಂಡು, ಆ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಸೂಚಿಸುವ ಅಕ್ಷರಗಳನ್ನು ತೆಗೆದುಕೊಂಡು ಹೆಸರಿಡುವುದು. ಉದಾಹರಣೆಗೆ ವ್ಯಕ್ತಿಯ ನಕ್ಷತ್ರ ಅಶ್ವಿನಿಯಾಗಿದ್ದರೆ ಈ ನಕ್ಷತ್ರಕ್ಕೆ ತಾರಾನುಕೂಲವಾಗುವ ನಕ್ಷತ್ರಗಳು ಭರಣಿ, ಪುಬ್ಬ, ಪೂರ್ವಾಷಾಢ, ರೋಹಿಣಿ