Skip to main content

Posts

Showing posts from August, 2014

ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ

ಪೀಡಾಪರಿಹಾರಕ ಶ್ರೀಶನಿದೇವರ ಸ್ತೋತ್ರ ಶ್ರೀಶನಿಸ್ತೋತ್ರಮ್ ನಮಸ್ತೇ ಕೋಣಸಂಸ್ಥಾಯ ಪಿಂಗಲಾಯ ನಮೋಸ್ತು ತೇ | ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತು ತೇ || ೧ || ನಮಸ್ತೇ ರೌದ್ರದೇಹಾಯ ನಮಸ್ತೇ ಚಾಂತಕಾಯ ಚ | ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ || ೨ || ನಮಸ್ತೇ ಮಂದಸಂಜ್ಞಾಯ ಶನೈಶ್ಚರ ನಮೋಸ್ತು ತೇ | ಪ್ರಸಾದಂ ಕುರು ದೇವೇಶ ದಿನಸ್ಯ ಪ್ರಣತಸ್ಯ ಚ || ೩ || ಕೋಣಸ್ಥಃ ಪಿಂಗಲೋ ಬಭ್ರುಃ ಕೃಷ್ಣೋ ರೌದ್ರೋಂತಕೋ ಯಮಃ | ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ || ೪ || ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ | ಶನೈಶ್ಚರಕೃತಾ ಪೀಡಾ ನ ಕದಾಚಿದ್‍ಭವಿಷ್ಯತಿ || ೫ || ಸಾಡೇಸಾತಿ ಅಥವಾ ಏಳರಾಟ ಶನಿಕಾಟವಿದ್ದವರು ಪ್ರತಿನಿತ್ಯ ಪ್ರಾತಃ ಕಾಲದಲ್ಲಿ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದರೆ ಪಿಡೆಯಿಂದ ಶೀಘ್ರ ಪರಿಹಾರವಾಗಿ ಶ್ರೀಶನೈಶ್ಚರನ ಅನುಗ್ರಹವಾಗುತ್ತದೆ. ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | ಅರಿಷ್ಟಂ ಹರ ಮೇಭೀಷ್ಟಂ ಕುರು ಮಾ ಕುರು ಸಂಕಟಮ್ || ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ | ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ. ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ

ಕರ್ಕರಾಶಿಯಲ್ಲಿ ಗುರು ಗೋಚಾರ 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ

ಕರ್ಕರಾಶಿಯಲ್ಲಿ ಗುರು ಗೋಚಾರ 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ ನವಗ್ರಹಗಳಲ್ಲಿ ಗುರುಗ್ರಹವು ನೈಸರ್ಗಿಕವಾಗಿ ಹೆಚ್ಚು ಶುಭ ಎಂದು ಹೇಳಲಾಗಿದೆ. ಎಲ್ಲರ ಜೀವನದದಲ್ಲಿ ಗುರು ಅನುಗ್ರಹವಿದ್ದಲ್ಲಿಯೇ ಸಂಪತ್ತು, ಧನಪ್ರಾಪ್ತಿ, ಒಳ್ಳೆಯ ಸ್ಥಾನಮಾನ, ಕೌಟುಂಬಿಕ ಸುಖ ಶಾಂತಿ, ವಿವಾಹ ಯೋಗ, ಸಂತಾನ ಸುಖ, ಆರೋಗ್ಯ ಭಾಗ್ಯ, ಒಳ್ಳೆಯ ಬುದ್ಧಿ ಮೊದಲಾದವುಗಳನ್ನು ಸಾರ್ಥಕವಾಗಿ ಅನುಭವಿಸಲು ಸಾಧ್ಯ. ಇವುಗಳ ಕಾರಕನಾದ ಗುರುವು ತನ್ನ ಪ್ರತಿವಾರ್ಷಿಕ ಗೋಚಾರದಿಂದ ದ್ವಾದಶ ರಾಶಿಗಳ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತಾನೆ. ಗುರುವು ಪೂರ್ಣ ರಾಶಿಚಕ್ರವನ್ನು ಸುತ್ತಲು ಹನ್ನೆರಡು ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಪ್ರತಿಯೊಂದು ರಾಶಿಯಲ್ಲಿ ಗುರುವಿನ ವಾಸ್ತವ್ಯ ಸರಿಸುಮಾರು ಒಂದು ವರ್ಷಗಳಷ್ಟಾಗಿರುತ್ತದೆ. ಗ್ರಹಗತಿಗಳಲ್ಲಿ ಉಂಟಾಗುವ ವಕ್ರೀ, ಸ್ತಂಭೀ ಚಾರಣಗತಿಗಳಿಂದಾಗಿ ಈ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಅವಧಿಯ ಅಂತರವನ್ನು ಕಾಣುಬಹುದು. ಗುರು ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡುತ್ತಾನೆ, ಈ ದೀರ್ಘ ಕಾಲಾವಧಿಯ ಗುರು ಗೋಚಾರಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಕೊಟ್ಟಿರುತ್ತಾರೆ. ದೇವಗುರು ಬ್ರಹಸ್ಪತಿಯು 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ. ಕರ್ಕರಾಶಿಯಲ್ಲಿ ಗುರು ಪ್ರವೇಶ ಸಮಯ ಮುಂಜಾನೆ 08ಗಂ 47ನಿಮಿಷ. ಪಂಚಾಂಗದ