ಧನಯೋಗ, ಜಾತಕ ಮತ್ತು ಹಣ ಸಂಪಾದನೆ * ಡಿ.ವಿ. ಸುಬ್ಬಣ್ಣ
ಪ್ರತಿಯೊಂದು ಜಾತಕದಲ್ಲಿ ಹಣ ಸಂಪಾದನೆಯನ್ನು ಪ್ರತಿಪಾದಿಸುವ ಸ್ಥಾನಗಳು ಲಗ್ನಾತ್ 2-8-11. ದ್ವಿತೀಯ ಭಾವ, ಸ್ವಯಾರ್ಜಿತ, ಶ್ರಮದ ದುಡಿಮೆಯಿಂದ ಬರುವ ಹಣವನ್ನು ಅಷ್ಟಮ ಭಾವ, ಕಳತ್ರ (ಪತಿ, ಪತ್ನಿ) ಮೂಲದ ಹಣವನ್ನು ಹಾಗೂ ಲಾಭ ಸ್ಥಾನವೆನಿಸಿರುವ 11ನೇ ಮನೆಯು ನಿರಾಯಾಸವಾಗಿ ಉಂಟಾಗುವ ಲಾಭವನ್ನು ಸೂಚಿಸುತ್ತದೆ.
ಇದರೊಂದಿಗೆ ಆಕಸ್ಮಿಕ ಧನಾಗಮನವನ್ನು ಜಾತಕದಲ್ಲಿ ಕೂರಿಸುವ ಸ್ಥಾನಗಳು ಎಂದರೆ, ಐದು ಹಾಗೂ ಎಂಟು. ಈ ಪಂಚಮ ಅಷ್ಟಮ ಭಾವಾಧಿಪತಿಗಳು ಜತೆಗೂಡಿಯೋ ಪರಸ್ಪರ ದೃಷ್ಟಿಕರಾಗಿಯೋ ಇದ್ದಲ್ಲಿ ದಶಾಭುಕ್ತಿ ಕಾಲ ಉಂಟಾದರಂತೂ ಖಂಡಿತ ಆಕಸ್ಮಿಕ ಧನ ಯೋಗ ಉಂಟಾಗುತ್ತದೆ. ಆ ಧನಯೋಗವು ಗ್ರಹಗಳ ಬಲಾಬಲಗಳು ಹಾಗೂ ಶತ್ರು ಮಿತ್ರತ್ವವನ್ನು ಆಧರಿಸಿರುತ್ತದೆ. ಪಂಚಮ ಹಾಗೂ ಅಷ್ಟಮಾಧಿಪತಿಗಳು ಶುಭಗ್ರಹಗಳಾದಲ್ಲಿ ಸಾವಯ ರೀತಿಯ ಸಂಪಾದನೆಯೂ, ಅಶುಭರಾದಲ್ಲಿ ಅಶುಭ ರೀತಿಯಿಂದಲೂ ಉಂಟಾಗುವುದು. ಅಷ್ಟಮವೂ ಮರಣಪತ್ರ (ಉಯಿಲು), ಕೋರ್ಟು ಕಚೇರಿಗಳಿಂದ ಉಂಟಾಗುವ ಲಾಭ ಹಾಗೂ ಭೂಮ್ಯಾಂತರ್ಗತ ನಿಧಿ ಇವುಗಳಿಂದಾಗುವ ಧನಲಾಭವನ್ನು ಸೂಚಿಸುತ್ತದೆ.
ರಾಹು-ಕೇತುಗಳಂತ ಅಶುಭ ಹಾಗೂ ಭಯ ಗ್ರಹಗಳು ಲಾಭ ಸ್ಥಾನದಲ್ಲಿ ಸ್ಥಿತರಾದಲ್ಲಿ ಅನಿರೀಕ್ಷಿತ ಧನ ಪ್ರಾಪ್ತಿಯಾದರೂ, ಒಮ್ಮೆಲೆಗೆ ಅನಿಷ್ಟವು ಒದಗಿ, ಎಲ್ಲ ಹಾಳಾಗುವ ಸಂಭವವುಂಟು. ಅದರಲ್ಲಿಯೂ ರಾಹು ಗ್ರಹವು ಸಟ್ಟಾ, ಜೂಜುಗಳಿಂದ ಉಂಟಾಗುವ ನಷ್ಟಕ್ಕೆ ಕಾರಕನು.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments