Skip to main content

Posts

Showing posts from September, 2014

*ಮೂಲಾ ನಕ್ಷತ್ರ ಮೂರುಲೋಕವಾಸ*

*ಮೂಲಾ ನಕ್ಷತ್ರ ಮೂರುಲೋಕವಾಸ* ಮೂಲಾ ನಕ್ಷತ್ರವು ಒಂದು ವರ್ಷದಲ್ಲಿ ತಲಾ ೪ ತಿಂಗಳಿನಂತೆ ಸ್ವರ್ಗ,ಮರ್ತ್ಯ,ಪಾತಾಳಗಳಲ್ಲಿ ವಾಸಮಾಡುತ್ತದೆ. ಆಷಾಡ,ಆಶ್ವೀಜ,ಬಾದ್ರಪದ,ಮಾಘಮಾಸಗಳಲ್ಲಿ ಸ್ವರ್ಗಲೋಕದಲ್ಲಿಯು. ವೈಶಾಖ,ಜ್ಯೇಷ್ಟ,ಮಾರ್ಗಶಿರ,ಪಾಲ್ಗುಣ ಮಾಸಗಳಲ್ಲಿ ಪಾತಾಳದಲ್ಲು. ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ ಭೂಲೋಕದಲ್ಲಿಯು ವಾಸಮಾಡುತ್ತದೆ. ಭೂಲೋಕದಲ್ಲಿ ಮೂಲಾ ನಕ್ಷತ್ರವು ವಾಸಮಾಡುತ್ತಿರುವಾಗ ಮಗು ಜನಿಸಿದರೆ(ಅಂದರೆ ಚೈತ್ರ,ಶ್ರಾವಣ,ಕಾರ್ತೀಕ,ಪುಷ್ಯ ಮಾಸಗಳಲ್ಲಿ)ಮಾತ್ರ ದೋಷ ಉಂಟಾಗುತ್ತದೆ.ಆಗ ಗೋಮುಖಪ್ರಸವ ಶಾಂತಿ ಮಾಡಿಸಬೇಕು. ಪೂರ್ವಾಷಾಡ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ತಂದೆ-ತಾಯಿಗೆ ದೋಷವುಂಟಾಗುತ್ತದೆ. ಆದ್ದರಿಂದ ಕಂಚಿನ ಪಾತ್ರೆಯಲ್ಲಿ ಅಕ್ಕಿಯನ್ನು ತುಂಬಿ ವಸ್ತ್ರ,ಫಲ,ತಾಂಬೂಲ,ದಕ್ಷಿಣೆ ಸಹಿತ ಪುರೋಹಿತರಿಗೆ/ಬಡವರಿಗೆ/ಗುರುಗಳಿಗೆ ದಾನಕೊಡಬೇಕು ಈ ಕಾರ್ಯ ಮಗು ಜನಿಸಿದ ೨೭ ದಿನದೊಳಗೆ ನಡೆಯಬೇಕು. ಅಶ್ಲೇಷ:- ಈ ನಕ್ಷತ್ರಕ್ಕೆ ಆದಿಶೇಷನು ಅಧಿಪತಿಯಾಗಿರುವುದರಿಂದ ಸರ್ಪದ ಹೆಡೆ ಅಗಲದಷ್ಟು ಇರುವ ಕಲಾಪತ್ತಿನ ಅಂಚುಳ್ಳ ಶಾಲನ್ನು ತಂದುಶಾಂತಿ ಮಾಡತಕ್ಕ ಸ್ಥಳದಲ್ಲಿ ಸಾರಿಸಿ ಗಣಪತಿಯನ್ನು ಸ್ಥಾಪಿಸಿ ಪೂಜಿಸಬೇಕು.ರಂಗವಲ್ಲಿಯಿಂದ ಕಮಲಾಕಾರದ ಮಂಡಲವನ್ನು ಬರೆದು ಒಂದು ಹೊಸ ಮೊರದಲ್ಲಿ ಭತ್ತವನ್ನು (ಅಕ್ಕಿ)ಹರವಿ ಒಂದು ದೊನ್ನೆಯಲ್ಲಿ ೯ವಿಧ ದಾನ್ಯವನ್ನು ಹಾಕಿ(ನವದಾನ್ಯ)೯ ವಿಧವಾದ ಪತ್ರೆಗಳಿಂದ(ಬಿಲ್ವ,ಭನ್ನಿ,ಎಕ್ಕ,ಅರಳ

ಜನನ ನಕ್ಷತ್ರ ದೋಷ ಮತ್ತು ಶಾಂತಿ(ಪರಿಹಾರ)

ಅಶ್ವಿನಿ:- ಈ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ತಂದೆಗೆ ಅರಿಷ್ಟ ಇದು ೩ತಿಂಗಳವರೆಗು ಇರುತ್ತದೆ.ಆದ್ದರಿಂದ ಇದರ ಪರಿಹಾರಕ್ಕಾಗಿ ಮಗು ಜನಿಸಿದ ೫ದಿನದೊಳಗಾಗಿ ಒಂದು ಗುಲಗಂಜಿ ತೂಕದ ಬಂಗಾರ ಮತ್ತು ಬಿಳಿವಸ್ತ್ರವನ್ನು ಫಲ,ತಾಂಬೂಲ ಸಹಿತ ಪುರೋಹಿತರಿಗೆ ಅಥವ ಗುರುಗಳಿಗೆ ಅಥವ ತೀರಾ ಬಡವರಿಗೆ ದಕ್ಷಿಣೆ ಸಮೇತ ದಾನಕೊಡುವುದು. ಆನಂತರ ತಂದೆಯು ಮಗುವಿನ ಮುಖವನ್ನು ನೋಡಬೇಕು.ದಾನಕೊಡದೆ ತಂದೆ ಮಗುವಿನ ಮುಖವನ್ನು ನೋಡಬಾರದು. ಭರಣಿ:- ಈ ನಕ್ಷತ್ರದಲ್ಲಿ ಜನಿಸಿದ ಕೂಸಿಗೆ ಅರಿಷ್ಟ ಉಂಟಾಗುವುದು. ಜನಿಸಿದ ೨೭ದಿನದೊಳಗಾಗಿ ತಾಮ್ರದ ಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಜಂಗಮರಿಗೆ ದಾನಕೊಡಬೇಕು. ರೋಹಿಣಿ:- ಈ ನಕ್ಷತ್ರದಲ್ಲಿ ಶ್ರೀ ಕೃಷ್ಣ ಜನಿಸಿ ಸೋದರ ಮಾವನಾದ ಕಂಸನಿಗೆ ಕಂಟಕನಾದನು ಆದ್ದರಿಂದ ಮಗುವಿನ ಸೋದರಮಾವಂದಿರಿಗೆ ಅರಿಷ್ಟ ಉಂಟಾಗುವುದರಿಂದ ಬೆಳ್ಳಿಪಾತ್ರೆಯಲ್ಲಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಸೋದರಮಾವಂದಿರು ಪುರೋಹಿತರಿಗೆ ದಾನಮಾಡಿದ ಮೇಲೆ ಮಗುವಿನ ಮುಖವನ್ನು ನೋಡಬೇಕು.ಈ ಕಾರ್ಯವನ್ನು ಮಗು ಜನಿಸಿದ ೨೭ದಿನದೊಳಗಾಗಿ ಮಾಡಬೇಕು. ಆರಿದ್ರಾ:- ಈ ನಕ್ಷತ್ರದಲ್ಲಿ ಮಗು ಜನಿಸಿದರೆ ತಾಯಿಗೆ ಅರಿಷ್ಟ ಉಂಟಾಗುವುದರಿಂದ ಹಿತ್ತಾಳೆ ಪಾತ್ರೆಯಲ್ಲಿ ೨೭ದಿನದೊಳಗಾಗಿ ಅಕ್ಕಿ ತುಂಬಿ ವಸ್ತ್ರ,ದಕ್ಷಿಣೆ,ಫಲ,ತಾಂಬೂಲ ಸಹಿತ ಮಾತಾಪಿತೃಗಳು ಪುರೋಹಿತರಿಗೆ ದಾನಕೊಡಬೇಕು. ಪುಷ್ಯ:- ಈ ನಕ್ಷ್ತತ್ರದಲ್

ಜಾತಕ ಫಲ ತರುವುದು ಭಾಗ್ಯ

ಭಾಗ್ಯಕ್ಕಾಗಿ ಚಿಂತೆ ಮಾಡುವ ಜನರೇ ಇರುವರು. ಭಾಗ್ಯಕ್ಕಾಗಿ ಬಹಳ ಪ್ರಯತ್ನ ಮಾಡುವವರೂ ಇರುತ್ತಾರೆ. ಆದರೆ ಪ್ರಯತ್ನ ಮಾಡದೆ ಭಾಗ್ಯ ಬರುವುದು ಇದೆ. ಇದು ಅವರವರ ಗ್ರಹಗಳಿಂದ ಬರುತ್ತದೆ. ರಾಷ್ಟ್ರದ ಪ್ರಧಾನಿಯ ಜಾತಕದಲ್ಲಿ ಶುಕ್ರ ಮತ್ತು ಶನಿಯ ದೃಷ್ಟಿ ಗುರುವಿನ ಮೇಲೆ ಇರುವುದರಿಂದ ಇವರು ರಾಷ್ಟ್ರದ ಮುಖಂಡರಾದರು. ಸಾಮಾನ್ಯವಾಗಿ ಜಾತಕದಲ್ಲಿ ಲಗ್ನ ಅಥವಾ ಚಂದ್ರನ ನವಮ ಸ್ಥಾನ ಭಾಗ್ಯ ಸ್ಥಾನ. ಇದರಲ್ಲಿ ಬಲಿಷ್ಠವಾಗಿರುವವನ ಭಾವದಿಂದ ಭಾಗ್ಯವನ್ನು ನೋಡಬೇಕು. ಭಾಗ್ಯದ ಅಧಿಪತಿ ಇರುವ ಸ್ಥಾನ, ಭಾಗ್ಯದಲ್ಲಿರುವ ಬಲಿಷ್ಠ ಅಥವಾ ಬಲಹೀನ ಗ್ರಹರು ಇದನ್ನೆಲ್ಲ ನೋಡಿ ಲೆಕ್ಕಾಚಾರ ಮಾಡಬೇಕು. ಭಾಗ್ಯ ಸ್ಥಾನದಲ್ಲಿ ಭಾಗ್ಯಾಧಿಪತಿ ಇದ್ದರೆ ಅಥವಾ ಭಾಗ್ಯ ಸ್ಥಾನವನ್ನು ನೋಡಿದರೆ ಜಾತಕನು ಭಾಗ್ಯ ಫಲ ಪಡೆಯುತ್ತಾನೆ. ತೃತೀಯ ಪಂಚಮ ಅಥವಾ ಲಗ್ನದಲ್ಲಿರುವ ಗ್ರಹರು ಬಲಿಷ್ಠವಾಗಿ ಭಾಗ್ಯ ಭಾವವನ್ನು ಪೂರ್ಣ ದೃಷ್ಟಿಯಿಂದ ನೋಡಿದರೆ ಇಂತಹವರು ಅತಿ ಭಾಗ್ಯವಂತರಾಗುತ್ತಾರೆ. ಗುರುವು ಭಾಗ್ಯ ಭಾವದಲ್ಲಿ ಇದ್ದಾಗ ಜಾತಕನು ಮಂತ್ರಿ ಆಗುತ್ತಾನೆ. ನವಮದ ಗುರುವನ್ನು ಚಂದ್ರನು ನೋಡಿದರೆ ಜಾತಕನು ಭೋಗವಂತನಾಗುತ್ತಾನೆ. ಭಾಗ್ಯದಲ್ಲಿರುವ ಗುರುವನ್ನು ಕುಜನು ನೋಡಿದರೆ ಜಾತಕನಲ್ಲಿ ಬಂಗಾರ ಇರುತ್ತದೆ. ಭಾಗ್ಯದಲ್ಲಿರುವ ಗುರುವನ್ನು ಬುಧನು ನೋಡಿದರೆ ಇವರು ಧನವಂತರಾಗುತ್ತಾರೆ. ನವಮದಲ್ಲಿರುವ ಗುರುವನ್ನು ಶುಕ್ರನು ನೋಡಿದರೆ ಮನೆ, ವಾಹನ ಮತ್ತು ಧನದಿಂದ ಕೂಡಿದವನಾಗುತ್ತಾನೆ. ನವಮದಲ್ಲಿರ

ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜಿಸಿ

ಮಾನವ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕ್ಕತಿಕ ಜೀವನದ ಸ್ವರೂಪವು ಅದರ ಮೂಲಭೂತ ಜೀವನ-ಸಿದ್ದಾಂತವನ್ನು ಅವಲಂಬಿಸಿರುತ್ತದೆ. ಹಿಂದೂಗಳಿಗೆ ಮೂಲ ನೆಲೆಯಾಗಿರುವುದು ಧರ್ಮ. ಈ ಧರ್ಮಕ್ಕೆ ಮೂರು ದೃಷ್ಟಿಕೋನಗಳು. 1. ಮೂಲಭೂತ ತತ್ವಗಳ ಅಥವಾ ಸಿದ್ದಾಂತದ ದೃಷ್ಟಿಕೋನ 2. ಆ ತತ್ವಗಳನ್ನು ಜನ ಸಾಮಾನ್ಯನಿಗೆ ನಿರೂಪಿಸುವ ಪೌರಾಣಿಕ ದೃಷ್ಟಿಕೋನ. 3. ಆ ತತ್ವಗಳ ಸಿದ್ದಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆಯ ದೃಷ್ಟಿಕೋನ. ಎರಡನೇ ಬಗೆಯ ವರ್ಗೀಕರಣವನ್ನು ವ್ರತಕ್ಕೆ ನಿಗದಿಯಾದ ಕಾಲದ ಆಧಾರದ ಮೇಲೆ ಮಾಡಬಹುದು. ಒಂದು ದಿನ ಮಾತ್ರ ನಡೆಯುವ ವ್ರತವನ್ನು ಶಿದಿನವ್ರತಷಿವೆಂದೂ, ಒಂದು ವಾರ ನಡೆಯುವುದನ್ನು ಶಿವಾರವ್ರತಷಿವೆಂದೂ, ಒಂದು ಪಕ್ಷದ ಕಾಲ ನಡೆಯುವುದನ್ನು ಶಿಪಕ್ಷವ್ರತಷಿ ವೆಂದೂ ಒಂದು ತಿಥಿ ಅಥವಾ ಒಂದು ನಕ್ಷತ್ರದ ಅವಧಿಯಲ್ಲಿ ನಡೆಸಬೇಕಾದ್ದನ್ನು ಶಿನಕ್ಷತ್ರ ವ್ರತಷಿ ವೆಂದು ವಿಂಗಡಿಸಲಾಗಿದೆ. ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ವ್ಯಕ್ತಿಗಳ ಜನ್ಮಕಾಲದಲ್ಲಿಯ ನಕ್ಷತ್ರವನ್ನು ತಿಳಿದು ಆಚರಿಸಿದರೆ. ದೋಷಗಳು ಪರಿಹಾರವಾಗಿ, ಶುಭಫಲವನ್ನೇ ನೀಡುತ್ತವೆ. ನಿಯಮಗಳನ್ನು ತಿಳಿದು ಆಚರಿಸಬೇಕು. ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು

ಉದ್ಯೋಗ ದೊರೆಯತ್ತಿಲ್ಲವೆ? ಉದ್ಯೋಗ ಪಡೆಯಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ಜ್ಯೋತಿಷಿಯನ್ನು ಭೇಟಿಯಾಗಿ. ಯಾವ ಗ್ರಹದ ಕಾರಣ ನಿಮಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ತಿಳಿದುಕೊಳ್ಳಿ. ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾದರೆ ಈ ಕೆಳಗೆ ನೀಡಿದ ತರಹದ ಉಪಾಯ ಓದಿ ಮತ್ತು ನೌಕರಿ ಗಿಟ್ಟಿಸಿಕೊಳ್ಳಿ. * ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ. * ಚಂದ್ರ ದೋಷವಿದ್ದರೆ , ರಾತ್ರಿ ಹಾಲನ್ನು ಸೇವಿಸಬೇಡಿ ಮತ್ತು ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ. * ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ. ಮನೆಯಲ್ಲಿ ನಿಮ್ಮ ಸ್ನಂತ ಕೈಯಿಂದ ಗಿಡ-ಬಳ್ಳಿಗಳನ್ನು ಹಚ್ಚಬೇಡಿ. * ಗುರ ಗ್ರಹದ ದೋಷವಿದ್ದರೆ ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ. ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. *ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ, ಮನೆಯ ಹಿರಿಯ ಮಹಿಳೆಯರ ಪಾದ ಸ್ಪರ್ಶ ಮಾಡಿರಿ ಈ ನಿಯಮ ಪ್ರತಿನಿತ್ಯ ಅನುಸರಿಸಿ. * ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ.

ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!

ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು. ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ. ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ.

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು -ಗ್ರಹಗಳಿಗೆ ಅರ್ಪಿಸಬೇಕಾದ ಹೂಗಳನ್ನು ಮತ್ತು ಹಾರಗಳನ್ನು -ಓದಿ

ಸೂರ್ಯದೇವನ 21 ಹೆಸರುಗಳನ್ನು ತಿಳಿದುಕೊಳ್ಳಲು ಓದಿ ಭಗವಾನ್‌ ಸೂರ್ಯದೇವರ 21 ಹೆಸರುಗಳನ್ನು ಪಠಣ ಮಾಡಿದರೆ 1000ರಷ್ಟು ಫಲ ಸಿಗುತ್ತದೆ . ಈ ಮಂತ್ರಗಳನ್ನು ಪಠಿಸುವುದು ಪವಿತ್ರ ಎಂದು ನಂಬಲಾಗುತ್ತದೆ. ಈ 21 ಸೂರ್ಯನ ಮಂತ್ರಗಳು ಸೂರ್ಯೊದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕು. ಇದರಿಂದ ಮನುಷ್ಯನ ರೋಗಗಳು ದೂರವಾಗುತ್ತವೆ. ಇದರಿಂದ ಮನುಷ್ಯನ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ ಮತ್ತು ಇದರಿಂದ ಮನುಷ್ಯನ ಸಂಪತ್ತು ಹೆಚ್ಚುತ್ತದೆ ಎಂದು ಜ್ಯೋತಿಷ ಶಾಸ್ತ್ರ ತಿಳಿಸುತ್ತದೆ . ಬನ್ನಿ ತಿಳಿದುಕೊಳ್ಳೊಣ ಸೂರ್ಯನ ಹೇಸರುಗಳನ್ನು ತಿಳಿದುಕೊಳ್ಳೊಣ 1. ವಿಕರ್ತನ ( ವಿಪತ್ತುಗಳನ್ನು ದೂರ ಮಾಡುವುದು ) 2. ವಿವಸ್ಥಾನ್ ( ಪ್ರಕಾಶ ರೂಪ ) 3. ಮಾರ್ತಂಡ್ 4. ಭಾಸ್ಕರ 5.ರವಿ 6. ಲೋಕ ಪ್ರಕಾಶಕ್ 7.ಶ್ರೀಮಾನ್‌ 8. ಲೋಕ ಚಕ್ಷು 9.ಗೃಹೇಶ್ವರ 10. ಲೋಕ ಸಾಕ್ಷಿ 11.ತ್ರಿಲೋಕೆಶ 12.ಕರ್ತಾ 13.ಹರ್ತಾ 14.ತಮಿಸ್ತ್ರಾಹ ( ಅಂಧರ ತೋಲಗಿಸುವವ) 15.ತಪನ್‌ 16. ತಾಪನ್‌ 17 ಶೂಚಿ ( ಪವಿತ್ರ) 18. ಸಪ್ತಾಶ್ವಾಹನ್ 19. ಗಭಾಸ್ತಿಹಸ್ತ 20.ಬ್ರಹಾ 21.ಸರ್ವದೇವನಮಸ್ಕ್ರುತ್. ಭಗವಾನ ಸೂರ್ಯನ ನಾಮ ಪಠಿಸುವುದರಿಂದ ಮನುಷ್ಯನಿಗ ಯಶಸ್ವಿ ಸಿಗುತ್ತದೆ ಮತ್ತು ವೈಭಮ , ಸಂಪತ್ತು , ಉತ್ತಮ ಆರೋಗ್ಯ ಲಭಿಸುತ್ತದೆ. ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ? ಪುಷ್ಪಗಳು ದೇವತೆಗಳಿಗೆ ಮನುಷ್ಯನು ಸಮರ್ಪಣೆ ಮಾಡುವುದರಲ್ಲಿ ಪ್

ಪ್ರೇಮ ವಿವಾಹ ಯಾಕೆ ಸಫಲವಾಗುವುದಿಲ್ಲ?:

ಪ್ರೇಮ ವಿವಾಹ ಯಾಕೆ ಸಫಲವಾಗುವುದಿಲ್ಲ?: ಉತ್ತರ ಪ್ರೀತಿ. ಯಾರಿಗೆ ಆಗುವುದಿಲ್ಲ ಹೇಳಿ. ಇಂತಹ ಪ್ರೀತಿಯ ಬಗ್ಗೆ, ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯದಲ್ಲೂ ಕೆಲವಾರು ವಿವರಗಳು ಸಿಗುತ್ತವೆ. ವರ್ತಮಾನದ ಆಧುನಿಕತೆ ಪ್ರವೇಶ, ಬಿಚ್ಚುಸಂಸ್ಕೃತಿ, ಟಿವಿ, ಸಿನಿಮಾ, ವ್ಯಾಲೆಂಟೈನ್ ಡೇ... ನಮ್ಮ ಸಂಸ್ಕೃತಿ ಹಲವನ್ನು ಒಳಗೊಂಡು ಮುಂದೆ ಹೋಗುತ್ತಲೇ ಇದೆ. ಹೀಗಾಗಿ ಪ್ರೀತಿ, ಪ್ರೇಮಗಳ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಜತೆಗೆ ಪ್ರೇಮ ವಿವಾಹ ಬೆಳೆದಂತೆಯೇ ವಿಚ್ಚೇದನವೂ ಹೆಚ್ಚಾಗುತ್ತಲೇ ಇವೆ. ಯಾವ ಗ್ರಹಗಳ ಕಾರಣದಿಂದ ವ್ಯಕ್ತಿಯೊಬ್ಬ ಪ್ರೇಮಕ್ಕೆ ಬೀಳುತ್ತಾನೋ.. ಅದೇ ಗ್ರಹಗಳ ಕಾರಣದಿಂದಲೇ ಆ ವ್ಯಕ್ತಿ ತನ್ನ ಪ್ರೇಮದಲ್ಲಿ ವಿಫಲನೂ/ಳೂ ಆಗುತ್ತಾನೆ/ಳೆ ಎಂಬುದು ಜ್ಯೋತಿಷ್ಯದ ವಿಶೇಷ ಕುತೂಹಲಕರ ವಿಷಯ. ಪ್ರೇಮ ವಿವಾಹಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟ ವಿವರಗಳು ಸಿಗದಿದ್ದರೂ, ಪ್ರೇಮ ವಿವಾಹ ಯಾಕೆ ಸಫಲವಾಗುವುದು ಕಡಿಮೆ ಎಂಬುದಕ್ಕೆ ಹಲವು ಕಾರಣಗಳು ಸಿಗುತ್ತವೆ. 1. ಶುಕ್ರ ಅಥವಾ ಮಂಗಳನ ಸ್ಥಿತಿ ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಯವುದೇ ಜಾತಕದ ಕುಂಡಲಿಯಲ್ಲಿ ಶುಕ್ರ ಹಾಗೂ ಮಂಗಳ ಅನುಕೂಲ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪ್ರೇಮ ಸಂಬಂಧದಲ್ಲಿ ಪ್ರತಿಕೂಲ ಪರಿಸ್ಥಿತಿ ಉಂಟಾಗುತ್ತದೆ. ಅಂದರೆ ಪ್ರೇಮ ವಿಫಲವಾಗಿ ನೋವಿನಲ್ಲಿ ನರಳಬೇಕಾಗುತ್ತದೆ. 2. ಸಪ್ತಮ ಭಾವ ಅಥವಾ ಸಪ್ತಮೇಶದ ಪಾಪ ಪೀಡಿತನಾದರೂ ಪ್ರೇಮ ವಿಫಲವಾಗುತ್ತದೆ. ಅಂದರೆ ಸಪ್ತ

ನಿಮಗ್ಯಾವ ರೋಗ ಬರಬಹುದು ಗೊತ್ತೇ

ಎಷ್ಟು ಹಣ ಇದ್ದರೇನು ಪ್ರಯೋಜನ...ಆ ಹಣವನ್ನು ಅನುಭವಿಸಲು ಮನುಷ್ಯನ ಆರೋಗ್ಯವೇ ಸರಿಯಿಲಿಲ್ಲವಾದರೆ ಏನು ಉಪಯೋಗ..?' ಎಂದು ಬಲ್ಲವರು ಹೇಳುತ್ತಾರೆ. ಹೌದು. ಎಲ್ಲಕ್ಕೂ ಆರೋಗ್ಯವೇ ಮೂಲ. ಬಡವರಾಗಲಿ, ಸಿರಿವಂತರಾಗಲೀ, ರೋಗ ಎಂಬುದು ಯಾರ ಮೇಲೂ ಯಾವ ಬೇಧವನ್ನೂ ಮಾಡಿಲ್ಲ. ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಎಂಥವನನ್ನೂ ರೋಗ ದಾಳಿ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಹಾಗಿದ್ದೂ, ಸಂಖ್ಯಾಶಾಸ್ತ್ರಗಳ ಪ್ರಕಾರ ಪಂಡಿತರು ಮೂಲಾಂಕಗಳ ಪ್ರಕಾರ ಯಾರ‌್ಯಾರಿಗೆ ಯಾವ ಯಾವ ರೋಗಗಳು ಬರುವ ಸಾಧ್ಯತೆ ಹೆಚ್ಚು ಎಂದು ಲೆಕ್ಕಾಚಾರ ಹಾಕಿದ್ದಾರೆ. ದೇಹಾರೋಗ್ಯ ಕಾಪಾಡಿಕೊಳ್ಳದಿದ್ದರೆ, ಯಾರ‌್ಯಾರು ಎಂತೆಂಥ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬ ವಿವರ ಇಲ್ಲಿದೆ. ಈ ಲೇಖನದಲ್ಲಿ ಮೂಲಾಂಕಗಳಿಗೆ ಅನುಗುಣವಾಗಿ ರೋಗಸಾಧ್ಯತೆಯನ್ನು ವಿವರಿಸಲಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಅವರವರ ಮೂಲಾಂಕ ಪತ್ತೆಹಚ್ಚಿ ತಮ್ಮ ರೋಗ ಪತ್ತೆ ಹಚ್ಚಬಹುದು. ಮೂಲಾಂಕ ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅವರವರು ಹುಟ್ಟಿದ ದಿನಾಂಕವನ್ನು ಕೂಡಿಸಿ ಬರುವ ಏಕಂಕಿಯೇ ಅವರವರ ಮೂಲಾಂಕ. ಮೂಲಾಂಕ ಪತ್ತೆಹಚ್ಚುವಲ್ಲಿ ನೀವು ಹುಟ್ಟಿದ ಇಸವಿ ಹಾಗೂ ತಿಂಗಳು ಮುಖ್ಯವಾಗುವುದಿಲ್ಲ. ಕೇವಲ ನೀವು ಹುಟ್ಟಿದ ತಾರೀಕಷ್ಟೇ ಮುಖ್ಯ. ಉದಾಹರಣೆಗೆ, ನೀವು ಹುಟ್ಟಿದ್ದು ಆಗಸ್ಟ್ 27 ಎಂದಾದಲ್ಲಿ 27 ಸಂಖ್ಯೆಯ 2 ಹಾಗೂ 7ನ್ನು ಪರಸ್ಪರ ಕೂಡಿಸಿರಿ. ಆಗ 9 ಬರುತ್ತದೆ. ಹಾಗಾಗಿ ನಿಮ್ಮ ಮೂಲಾಂಕ 9. ನೀವು ಸೆಪ್ಟ

ರಾಹುದೆಶೆ ಮತ್ತು ರಾಹು ದೋಷ

ಕಂಟಕಶನಿ, ಸಾಡೆ ಸಾಥ್ ,ದಶಾಸಂಧಿ, ರಾಹು ಕೇತು ಇವೇ ಮೊದಲಾದುವುಗಳು ಗ್ರಹ ದೋಷಗಳಲ್ಲಿ ಪ್ರಧಾನವಾಗಿರುವವುಗಳು.ಜಾತಕ ಪ್ರಕಾರ ರಾಹು ದೆಶೆ ಅನುಭವಿಸುವವರು ಮತ್ತು ರಾಹು ಅನಿಷ್ಟ ಸ್ಥಾನದಲ್ಲಿರುವವರಿಗೆ ಕೆಲವು ಅಡಚಣೆಗಳು, ಮನೋವೇದನೆಗಳು ಅನುಭವಕ್ಕೆ ಬರುವುದು. ನವಗ್ರಹಗಳಲ್ಲಿ ರಾಹುವಿಗೆ ಸರ್ಪದ ರೂಪವಿದೆ ಎಂದು ನಂಬಿಕೆ. ಆದುದರಿಂದಲೇ ಗ್ರಹ ಸ್ಥಾನದಲ್ಲಿ 'ಸ' ಎಂಬ ಅಕ್ಷರವನ್ನು ರಾಹುವಿನ ಸ್ಥಾನವನ್ನು ತೋರಿಸಲು ಬಳಸಲಾಗುತ್ತದೆ. ರಾಹು ಯಾವಾಗಲೂ ಒಂದೂವರೆ ಗಂಟೆಗಳಷ್ಟು ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ಸಂಕಲ್ಪದಿಂದಾಗಿ ಈ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ.ಆದುದರಿಂದಲೇ ಶುಭ ಕಾರ್ಯನಿಮಿತ್ತ ಮನೆಯಿಂದ ಹೊರಡುವುದಾದರೆ ಈ ಘಳಿಗೆಯ ಮೊದಲು ಅಥವಾ ನಂತರ ಹೊರಡುವುದು ಸೂಕ್ತ. ರಾಹುಕಾಲದಲ್ಲಿ ಪ್ರತಿದಿನವೂ ಪ್ರಾರ್ಥನೆ, ಬಲಿವಾಡು ಮೊದಲಾದವುಗಳನ್ನು ಕೈಗೊಂಡಲ್ಲಿ ದೋಷ ಪರಿಹಾರವಾಗುವುದು. ಭಾನುವಾರ ಸಂಜೆ 4.30 ರಿಂದ 6 ಗಂಟೆಯ ವರೆಗೆ ರಾಹುವಿಗೆ ಬಲಿವಾಡು ಅರ್ಪಿಸಲು ತಕ್ಕುದಾದ ಸಮಯವಾಗಿದೆ. ಶಿವನ ಅವತಾರವಾದ ಶರಭೇಶ್ವರನನ್ನು ಪ್ರಾರ್ಥಿಸುವುದರಿಂದ ರಾಹುದೋಷ ಪರಿಹಾರವಾಗುವುದು. ರಾಶಿ ಚಕ್ರದಲ್ಲಿ ರಾಹುವಿನ ಇಷ್ಟ ಸ್ಥಾನವು 3,6,11 ಆಗಿದ್ದು ಮಿಥುನ ರಾಶಿ ಉಚ್ಛವೂ ಧನುರಾಶಿ ನೀಚವೂ ಆಗಿರುವುದು. ಶನಿಮಂಡಲ ಮತ್ತು ಗುರುಮಂಡಲದ ನಡುವೆ ರಾಹು ಕೇತುಗಳ ಸ್ಥಾನವಿರುವುದು. 18 ವರುಷಗಳನ್ನು ಬಳಸಿ ಅವುಗಳು ಸೂರ್ಯನ ಸುತ

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿಗಾಗಿ ಮುಂದೆ ಓದಿ *ಶನಿವಾರ ವೃತ ಮಾಡಿ * ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ) * ಶನಿವಾರ ಶನಿದೇವರ ವೃತದ ಕಥೆ ಓದಿ. * ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ. * ಸಂಜೆ ಹನುಮಾನ ದೇವರ ದರ್ಶನ ಮಾಡಿ . * ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ . * ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ.

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು

ದಾಂಪತ್ಯದಲ್ಲಿ ಅಡೆತಡೆಗಳ ನಿವಾರಣೆಗಾಗಿ ಜ್ಯೋತಿಷ್ಯದಲ್ಲಿನ ಪರಿಹಾರೋಪಾಯಗಳು ಸ್ವರ್ಗದಲ್ಲಿ ಮದುವೆ ನಿಶ್ಚಯವಾಗಿರುತ್ತವೆ ಎಂದು ಹೇಳುತ್ತಾರೆ ನಂಬಬಹುದು.ಆದರೆ ಕಲಹವನ್ನು ಅಲ್ಲಿಂದಲೇ ತಂದಿರುತ್ತಾರೋ ಏನೋ ಎಂದು ಒಂದೋಂದುಸಲ ಅನ್ನಿಸುತ್ತದೆ.ಸುಕಕರವಾದ ದಾಂಪತ್ಯ ಜೀವನ ಯಾರದಾಗಿರುತ್ತದೋ ಅವರೇ ಪುಣ್ಯವಂತರು.ಅಲವಾರು ಸಂಸಾರಗಳಲ್ಲಿ ಪತಿ ಹೊಂದಾಣಿಕೆಯಿದ್ದರೆ ಸತಿ ಇರುವುದಿಲ್ಲ.ಸತಿ ಇದ್ದಲ್ಲಿ ಪತಿ ಇರುವುದಿಲ್ಲ. ಸತಿ-ಪತಿಯಲ್ಲಿ ಯಾವುದಾದರು ವಿಚಾರಕ್ಕೆ ಜಗಳವಿಲ್ಲದೆ ದಿನವೊಂದು ಕಳೆದರೆ ಅದರಂಥ ಶುಭ ದಿನವೇ ಇನ್ನೊಂದಿಲ್ಲ ಎನ್ನಬೇಕಾಗುತ್ತದೆ. ಸತಿ-ಪತಿಯರಲ್ಲಿ ಚಿಕ್ಕಪುಟ್ಟ ಮಾತುಗಳಿಗು ಜಗಳವಾಗಬುದು.ಗಂಡ ಹೆಂಡಿರ ಜಗಳ ಉಂಡುಮಲಗುವತನಕ ಇದ್ದರೆ ಚೆಂದ ಜಗಳ ವಿಕೋಪಕ್ಕೆ ಹೋದರೆ ಸಂಸಾರಜೀವನ ಅಧೋಗತಿ. ಸಾಮಾನ್ಯವಾಗಿ ಸತಿ-ಪತಿಗಳಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ ಓದುಗರು ತಮಗೆ ಆಗಬಹುದಾದ ತೊಂದರೆಯಾನುಸಾರ ಯತಾಶಕ್ತಿ ಸೂಚಿಸಿದಂತೆ ಪರಿಹಾರಮಾಡಿಕೊಂಡರೆ ತಾವು ನೆಮ್ಮದಿಯ ಜೀವನಮಾಡಬಹುದು. ೧.ಗಂಡ ಶ್ರೀರಾಮನಂತಿದ್ದರೂ ಹೆಂಡತಿ ಆತನನ್ನು ಅನುಮಾನದಿಂದನೋಡುವುದು.ಮನೆಗೆ ಬಂದರೆ ಆತನಿಗೆ ಮನೆ ನರಕವೆಂದೆನಿಸುದು,ಹಾಸಿಗೆ ಮುಳ್ಳಿನಂತಾಗುವುದು.ಜೀವನವೇ ಬೇಸರವೆನಿಸುವುದು. ಪರಿಹಾರ:-ಪತಿಯು ೯ ಶುಕ್ರವಾರ ಹಸುವಿಗೆ ಹಸಿಹುಲ್ಲನ್ನು ತಿನ್ನಿಸುವುದು. ೨.ಪತಿ ಸಮಾದಾನಿಯಿದ್ದರೂ ಪತ್ನಿಗೆ ತಾಳ್ಮೆ ಇರುವುದಿಲ್

ಉದ್ಯೋಗ ದೊರೆಯತ್ತಿಲ್ಲವೆ? ಉದ್ಯೋಗ ಪಡೆಯಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು

ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ಜ್ಯೋತಿಷಿಯನ್ನು ಭೇಟಿಯಾಗಿ. ಯಾವ ಗ್ರಹದ ಕಾರಣ ನಿಮಗೆ ಉದ್ಯೋಗ ದೊರೆಯುತ್ತಿಲ್ಲ ಎಂದು ತಿಳಿದುಕೊಳ್ಳಿ. ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾದರೆ ಈ ಕೆಳಗೆ ನೀಡಿದ ತರಹದ ಉಪಾಯ ಓದಿ ಮತ್ತು ನೌಕರಿ ಗಿಟ್ಟಿಸಿಕೊಳ್ಳಿ. * ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ. * ಚಂದ್ರ ದೋಷವಿದ್ದರೆ , ರಾತ್ರಿ ಹಾಲನ್ನು ಸೇವಿಸಬೇಡಿ ಮತ್ತು ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ. * ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ. ಮನೆಯಲ್ಲಿ ನಿಮ್ಮ ಸ್ನಂತ ಕೈಯಿಂದ ಗಿಡ-ಬಳ್ಳಿಗಳನ್ನು ಹಚ್ಚಬೇಡಿ. * ಗುರ ಗ್ರಹದ ದೋಷವಿದ್ದರೆ ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ. ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. *ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ, ಮನೆಯ ಹಿರಿಯ ಮಹಿಳೆಯರ ಪಾದ ಸ್ಪರ್ಶ ಮಾಡಿರಿ ಈ ನಿಯಮ ಪ್ರತಿನಿತ್ಯ ಅನುಸರಿಸಿ. * ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ

ಗ್ಯಾಸ್ಟ್ರಿಕ್‌ಗೆ ಗ್ಯಾರಂಟಿ ಚಿಕಿತ್ಸೆ

ಗ್ಯಾಸ್ಟ್ರಿಕ್‌ಗೆ ಗ್ಯಾರಂಟಿ ಚಿಕಿತ್ಸೆ ಹೊಟ್ಟೆ ತುಂಬ ತಿಂದಾದ ಮೇಲೆ ಎದೆ ಉರಿ, ಸಣ್ಣ ಕಿರಿಕಿರಿ. ಒಮ್ಮೊಮ್ಮೆ ವಾಂತಿಯಾಗಿ ಶಾಂತವಾಗುವುದು ಹಲವರ ಬದುಕಿನ ಒಂದು ಭಾಗ. ಇದು ಗ್ಯಾಸ್ಟ್ರಿಕ್ ಸಮಸ್ಯೆ. ಗೊತ್ತಿದ್ದೂ ಬಹುತೇಕರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ನಾವು ಸೇವಿಸುವ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ. ಜಠರದಲ್ಲಿರುವ ಸೆಲ್‌ನಿಂದ ಗ್ಯಾಸ್ಟರೈಟೀಸ್ ದ್ರವ ಉತ್ಪತ್ತಿ ಆಗುತ್ತದೆ. ನಾವು ತೆಗೆದುಕೊಂಡ ಆಹಾರವು ಗ್ಯಾಸ್ಟ್ರಿಕ್ ಜ್ಯೂಸ್ ಜತೆ ಮಿಶ್ರಣವಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕೆಲವು ಸಮಯದಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಜತೆ ಮಿಶ್ರಣವಾಗಿ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಕೆಲವು ಸಮಯದಲ್ಲಿ ಈ ಗ್ಯಾಸ್ಟ್ರಿಕ್ ಜ್ಯೂಸ್ ಪ್ರಮಾಣ ಏನಾದರೂ ಜಾಸ್ತಿಯಾಗಿ ಉತ್ಪತ್ತಿಯದರೆ ಆಮ್ಲಪಿತ್ತ ಅಥವಾ ಗ್ಯಾಸ್ಟ್ರಟೀಸ್ ಆಗುತ್ತದೆ. ಈ ರೀತಿಯಾದಾಗ ಎದೆಯಲ್ಲಿ ಹಾಗೂ ಹೊಟ್ಟೆಯ ಭಾಗದಲ್ಲಿ ಉರಿ, ಹುಳಿತೇಗು ಹಾಗೂ ಒಮ್ಮೊಮ್ಮೆ ವಾಂತಿ ಬಂದ ಹಾಗೆ ಅನ್ನಿಸುತ್ತದೆ. ಹೊಟ್ಟೆ ಉಬ್ಬರ, ನೋವು, ಅಜೀರ್ಣ ಹಾಗೂ ತಲೆ ಸುತ್ತಬಹುದು. ಗ್ಯಾಸ್ಟರೈಟೀಸ್‌ನಲ್ಲಿ ಅಕ್ಯೂಟ್ಸ್ ಅಂತ ಹೇಳುತ್ತೇವೆ. ತಕ್ಷಣ ಆಗುವ ಆಲ್ಕೋಹಾಲ್ ಕನ್ಸ್ಶೂಮೆಡ್‌ನಲ್ಲಿ ಅಂತ ಹೇಳುತ್ತೇವೆ. ಮಸಾಲ ಪದಾರ್ಥಗಳ ಅತೀ ಸೇವನೆ, ನೋವು ನಿರೋಧಕ ಮಾತ್ರೆಗಳನ್ನು ತೆಗೆದುಕೊಂಡರೆ ಗ್ಯಾಸ್ಟ್ರಿಕ್ ಆಗಬಹುದು.

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ-ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ

ಪಲ್ಲವಿ ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ಚರಣ ನಷ್ಟ ಮೊದಲಾದಂಥ ಕಷ್ಟ ಬಿಡಿಸೊ ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತಜನರೊಳು ಎನ್ನ ಸೇರಿಸೊ ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ [೧] ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ [೨] ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ [೩] ರಚನೆ : ಪುರಂದರದಾಸರು ರಾಗ : ಸಿಂಧು ಭೈರವಿ ತಾಳ : ಆದಿ ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ  ಪಂಕಜ ನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಾಂ ತುಂಬುರು ನಾರದ ಗಾನವಿಲೋಲಂ ಮಕರ ಕುಂಡಲಧಾರ ಮದನ ಗೋಪಾಲಂ ಭಕ್ತ ಪೋಷಕ ಶ್ರೀ ಪುರಂದರ ವಿಠಲಂ

ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮಿ ವ್ರತ ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು ಪೂಜಾ ವಿಧಾನ ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿ

ಸೊಪ್ಪು-ತರಕಾರಿ-ಜೀವಸತ್ವ-ಉಪಯೋಗ

ಹರಿವೆ ಸೊಪ್ಪು ಹರಿವೆ ಅಥವಾ ಕೀರೆ ದಂಟಿನ ಜಾತಿಗೆ ಸೇರಿದ ಸೊಪ್ಪು ತರಕಾರಿಯದರೂ ಅದರಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹರಿವೆಯ ಕಾಂಡಭಾಗ ಸಣಕಲು; ಎಲೆಗಳೂ ಸಣ್ಣವೇ, ಕಾಂಡ ಹಾಗೂ ಎಲೆಗಳ ಬಣ್ಣ ತಿಳಿ ಹಸುರು ಇಲ್ಲವೇ ಕೆಂಪು. ತಿಳಿ ಹಸುರು ಬಗೆಯ ಸೊಪ್ಪು ಹೆಚ್ಚು ರುಚಿಯಾಗಿರುತ್ತದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡುಬರುತ್ತದೆ. ಪೌಷ್ಟಿಕ ಗುಣಗಳು: ಹರಿವೆ ದಂಟುಸೊಪ್ಪಿನಷ್ಟೇ ಪೌಷ್ಟಿಕ. ಅದರಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ. ಔಷಧೀಯ ಗುಣಗಳು : ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಹಾಗೂ ಇತರ ಖನಿಜ ಪದಾರ್ಥಗಳಿದ್ದು ರಕ್ತದ ಉತ್ಪಾದನೆಗೆ ನೆರವಾಗುತ್ತವೆ. ಅದೇ ರೀತಿ ಇದರಲ್ಲಿನ ನಾರಿನ ಅಂಶ ಮಲಬದ್ಧತೆಯನ್ನು ದೂರ ಮಾಡಬಲ್ಲದು. ಕ್ರಮವರಿತು ತಿನ್ನುತ್ತಿದ್ದಲ್ಲಿ ಅದರ ಸಂಪೂರ್ಣ ಲಾಭ ಸಿಗುತ್ತದೆ. ಉಗಮ ಮತ್ತು ಹಂಚಿಕೆ : ಇದು ಬಹುಶಃ ಸ್ವದೇಶೀ ಎನಿಸಿದ್ದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಸ್ಯ ವರ್ಣನೆ : ಹರಿವೆ ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಣಕಲಾದ ಕಾಂಡಗಳನ್ನು ಹೊಂದಿರುತ್ತದೆ. ಎಲೆಗಳೂ ಸಹ ಸಣ್ಣವಿರುತ್ತವೆ. ಬುಡಭಾಗದಲ್ಲಿ ಹಲವಾರು ಕವಲು ರೆಂಬೆಗಳಿದ್ದು ಸ್ವಲ್ಪ ಮಟ್ಟಿಗೆ ಪೊದರೆಯಂತೆ ಹರಡಿ ಬೆಳೆದಿರುತ್ತದೆ. ಒಟ್ಟಾಗಿ ಸೇರಿಸಿ ಕುಡುಗೋಲಿನಿಂದ ನೆಲಮಟ್ಟಕ್ಕೆ ಕೊಯ್ದು ತೆಗೆಯಬೇಕು. ಮೊದಲ ಕೊಯ್ಲಿನ ನಂತರ ಮತ್ತಷ್ಟು ಚಿಗುರು ಮೂಡಿ ಬೆಳೆಯುತ್ತವ

ಮಾರಕ ರೋಗಕ್ಕೂ ಮೃತ್ತಿಕಾ ಚಿಕಿತ್ಸೆ

ಮಾರಕ ರೋಗಕ್ಕೂ ಮೃತ್ತಿಕಾ ಚಿಕಿತ್ಸೆ ಮೃತ್ತಿಕಾ ಚಿಕಿತ್ಸೆಗೆ ಆಯರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಮೃತ್ತಿಕಾ ಚಿಕಿತ್ಸೆಯಲ್ಲಿ ಪ್ರಾಕೃತಿಕವಾಗಿ ದೊರೆಯುವ ಮಣ್ಣನ್ನು ಸಂಸ್ಕರಿಸಿ ಬಳಸಲಾಗುತ್ತದೆ. ಕಪ್ಪು ಮಣ್ಣನ್ನು ಚರ್ಮರೋಗಗಳಿಗೆ, ಕೆಂಪು ಮಣ್ಣನ್ನು ಉದರ ಶೂಲೆ, ಗಂಟು ಬೇನೆಗೆ, ಹುತ್ತದ ಮಣ್ಣನ್ನು ಚರ್ಮ ರೋಗ ಗುಣ ಪಡಿಸಲು ಮತ್ತು ಬಿಳಿ ಮಣ್ಣನ್ನು ಯಕೃತ್ ತೊಂದರೆ ನಿವಾರಿಸಲು ಹಾಗೂ ಹಳದಿ ಮಣ್ಣನ್ನು ಪಚನ ಕ್ರಿಯೆ ತೊಂದರೆ ಮತ್ತು ಮಧುಮೇಹ ಕಾಯಿಲೆಗೆ ಬಳಸಲಾಗುತ್ತದೆ. ಮಣ್ಣನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಸರ್ವಾಂಗ ಲೇಪನ ಮತ್ತು ಸ್ಥಾನಿಕ ತೊಂದರೆಗಳಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಮಣ್ಣಿನ ಲೇಪ ಹಾಕಿಕೊಂಡು 20-30 ನಿಮಿಷ ಕಾಲ ಒಣಗಲು ಹಾಗೆಯೇ ಬಿಡಬೇಕು. ಮೃತ್ತಿಕಾ ಚಿಕಿತ್ಸೆಯ 24 ತಾಸುಗಳ ಮೊದಲು ಸಂಗ್ರಹಿಸಿದ ಮಣ್ಣನ್ನು ನೀರಿನಲ್ಲಿ ನೆನೆಸಿಡಬೇಕು. ಅದನ್ನು ನೇರವಾಗಿ ಬಳಸಬಹುದು ಅಥವಾ ಬಿಳಿ ಬಟ್ಟೆಯಲ್ಲಿ ಸುತ್ತಿ ದೇಹದ ಭಾಗಕ್ಕೆ ಹಚ್ಚಬಹುದು. ಮಣ್ಣಿನ ಚಿಕಿತ್ಸೆಯ ಪ್ರಯೋಜನ * ಮೃತ್ತಿಕಾ ಸ್ನಾನದಿಂದ ದೇಹ ರಿಫ್ರೆಶ್ ಆಗುತ್ತದೆ. * ಮಣ್ಣಿನ ಪ್ಯಾಕ್ ಹಾಕಿಸಿಕೊಂಡರೆ ತಣ್ಣೀರಿನ ಪ್ಯಾಕ್ ಹಾಕಿಸಿಕೊಳ್ಳುವದಕ್ಕಿಂತಲೂ ಹೆಚ್ಚಾಗಿ, ದೇಹದಲ್ಲಿ ನೀರಿನಂಶ ದೀರ್ಘ ಕಾಲ ಉಳಿಯುತ್ತದೆ. * ಚರ್ಮದ ಪಿಎಚ್ ಮೌಲ್ಯವನ್ನು ಸರಿಯಾಗಿರಿಸುತ್ತದೆ. * ದೇಹದಲ್ಲಿ ಸುಗಮ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ. * ಮಡ್ ಥೆರಪಿಯಿಂದ

ಮೂತ್ರಕೋಶದ ಕಲ್ಲಿಗೆ ಪ್ರಕೃತಿ ಚಿಕಿತ್ಸೆ

ಮೂತ್ರದಿಂದ ಬೇರ್ಪಟ್ಟು ಮೂತ್ರಕೋಶದಲ್ಲಿ ಒಂದೆಡೆ ಗಟ್ಟಿಯಾಗಿ ಸೇರ್ಪಡೆಗೊಳ್ಳುವ ವಸ್ತುಗಳು ಮೂತ್ರಕೋಶದ ಕಲ್ಲುಗಳು ಅಂದೆನಿಸಿಕೊಳ್ಳುತ್ತವೆ. ಮೂತ್ರಕೋಶದಲ್ಲಿ ಕಲ್ಲುಗಳು ಬೆಳೆಯಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಮೂತ್ರವು ಕ್ಯಾಲ್ಸಿಯಂ, ಆಕ್ಸಲೇಟ್, ಯೂರಿಕ್ ಆಸಿಡ್ ಮತ್ತು ಫಾಸ್ಫೇಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದು, ಮೂತ್ರದಲ್ಲಿ ನೀರಿನಂಶವು ಕಡಿಮೆಯಿರುವುದು, ಮೂತ್ರದಲ್ಲಿರುವ ಅಂಶಗಳು ಹೆಚ್ಚೆಚ್ಚು ಹೊರಹೋಗುವುದು, ವಾತಾವರಣದಲ್ಲಿ ಉಷ್ಣತೆ ಹೆಚ್ಚಿರುವುದು ಹಾಗೂ ನೀರನ್ನು ಕಡಿಮೆ ತೆಗೆದುಕೊಳ್ಳುವುದು, ಆಹಾರದಲ್ಲಿ ಪ್ರೋಟೀನ್, ಸೋಡಿಯಂ ಮತ್ತು ಕ್ಯಾಲ್ಸಿಯಂನ್ನು ಹೆಚ್ಚಾಗಿ ತೆಗೆದುಕೊಳ್ಳುವುದು, ಮೂತ್ರವನ್ನು ಸಮಯಕ್ಕೆ ಸರಿಯಾಗಿ ವಿಸರ್ಜಿಸದಿರುವುದು, ದೇಹದಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ ಶೇಖರಣೆಗೊಂಡಿರುವುದು ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಕಾರಣ. ಮೂತ್ರದಲ್ಲಿ ಕ್ಯಾಲ್ಸಿಯಂ ಇರುವುದನ್ನು ಹೆಚ್ಚು ಉಪ್ಪಿನಂಶವನ್ನು ತಿನ್ನುವವರಲ್ಲಿ ಕಾಣಬಹುದು. ಮೂತ್ರದಲ್ಲಿ ಆಕ್ಸ್‌ಲೇಟ್ ಸಾಮಾನ್ಯವಾಗಿ ಕರುಳಿನ ತೊಂದರೆ, ಪ್ಯಾನ್ಕ್ರಿಯಾಸ್‌ನ ತೊಂದರೆಗಳಲ್ಲಿ ಕಾಣಬಹುದು. ಸ್ಟ್ರುವೈಟ್‌ನ ಕಲ್ಲುಗಳು ಯೂರಿಯಾವನ್ನು ವಿಭಜಿಸುವ ಜೀವಿಯಿಂದ ಬರುತ್ತದೆ. ಈ ಕಲ್ಲುಗಳು ಮೂತ್ರ ನಾಳದಲ್ಲಿ ನಿಂತು ಬಿಡುತ್ತವೆ. ಯೂರಿಕ್ ಆಸಿಡ್ ಕಲ್ಲುಗಳು ಮೂತ್ರದಲ್ಲಿ ಯೂರಿಕ್ ಆಸಿಡ್‌ನ ಅಂಶವು ಹೆಚ್ಚಿದ್ದರೆ ಮೂತ್ರದ ಆಮ್ಲತೆ ಹೆಚ್ಚಿರುತ್ತದೆ. ಮೂತ್ರಕೋ

ಪಿತೃದೋಷ ಏಕೆ ಬರುತ್ತದೆ?

ಪಿತೃದೋಷ ಏಕೆ ಬರುತ್ತದೆ? *ಪಿತೃದೋಷ ಏಕೆ ಬರುತ್ತದೆ? ಜಾತಕದಿಂದ ಅದನ್ನು ಹೇಗೆ ನೋಡುವುದು, ಪರಿಹಾರ ಏನು? ಜಾತಕದ ಲಗ್ನಾತ್ ಪಂಚಮಾಧಿಪತಿ ಮತ್ತು ಕರ್ಮಪತಿ ದುಃಸ್ಥಿತಿಯಲ್ಲಿದ್ದು, ಕುಜ-ಶನಿಗಳ ಅನಿಷ್ಟ ಭಾವವಿದ್ದೂ ಯಾ ಮಾಂದೀ-ಮಂದಾರ ಯೋಗಗಳಿದ್ದರೆ, ಆ ಕುಲದ ಪಿತೃಗಳು ಕರ್ಮದೋಷದಿಂದ ಬಳಲುತ್ತಿದ್ದಾರೆ ಎಂದು ನಿಶ್ಚಯ. ಸಾರಾವಳಿ, ಪರಾಶರಾದಿ ಸಂಹಿತೆಯಲ್ಲಿ ಈ ಕಾರಣಕ್ಕೆ ವಿವರ ನೀಡಿರುತ್ತಾರೆ. ದೈವ-ಗುರು-ಆಚಾರಗಳು ಕೆಟ್ಟಿದ್ದರೆ ಪಿತೃದೋಷ ಯಾ ಕುಟುಂಬ ಸೌಖ್ಯ ದೋಷಗಳು ಅನುಭವಕ್ಕೆ ಬರುತ್ತದೆ. ದಕ್ಷಿಣಾಯನದ ಪ್ರದೋಷ ಅಮಾವಾಸ್ಯೆ ಯಾ ಪಿತೃಪಕ್ಷದಲ್ಲಿ ವಿಧಿವತ್ತಾಗಿ ಪೂಜಾ ಪ್ರಾಯಶ್ಚಿತ್ತಗಳಿಂದ ಪರಿಹಾರ ಸಿಗುವುದು. *ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುತ್ತಾ, ಧಾರ್ಮಿಕವಾಗಿ ಇದ್ದರೂ ಮಂಗಳ ಕಾರ್ಯಗಳು ಕಾಲಕ್ಕೆ ಏಕೆ ನಡೆಯುತ್ತಿಲ್ಲ?* ಎಚ್.ಎಸ್.ಸುಮಿತ್ರಾ, ಬೆಂಗಳೂರು ಬೆಳೆ ಬಿತ್ತಿ ಉತ್ತಮ ಮಳೆಯಾದರೂ ಫಸಲು ಸೊರಗುವ ಕಾರಣವನ್ನು, ಬೀಜದ ಗುಣದಲ್ಲಿ ತಿಳಿಯಬೇಕಾಗುತ್ತದೆ. ಹಾಗೆಯೇ ಧಾರ್ಮಿಕವಾಗಿ ಇರುವುದರ ಹಿಂದೆ, ಕುಟುಂಬದ ಹಿರಿಯರ ನಡಾವಳಿ ಮತ್ತು ದೈವಾನುಕೂಲ ಹೇಗಿದೆ ಎಂದು ನೋಡಬೇಕು.-ಎಚ್.ಟಿ.ಶಂಕರ್, ಬೆಂಗಳೂರು -ಸಂಗ್ರಹ

ಭವಿಷ್ಯಕ್ಕೆ ಜನ್ಮ ದಿನಾಂಕವೇ ಆಧಾರ

ವಾಸ್ತು ಎಂದರೆ ವಾಸಿಸುವ ಮನೆ ಎಂದರ್ಥ. ಈ ಮನೆಯು 9 ನವಗ್ರಹಗಳ ಅಧಿಪತ್ಯಕ್ಕೆ ಒಳಪಡುವುದರಿಂದ ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ಕೊಠಡಿಗಳು ಇರಬೇಕು ಯಾವ ಯಾವ ದಿಕ್ಕುಗಳಲ್ಲಿ ಯಾವ ಯಾವ ವಸ್ತುಗಳು ಇರಬೇಕೆಂಬುದನ್ನು ಈ ವಾಸ್ತು ತಿಳಿಸುತ್ತದೆ. ಆದರೆ ಗುರುಬಲವಿದ್ದಾಗ ಮನೆ ಕಟ್ಟುವ ಕಾರ್ಯವು ಸುಸೂತ್ರವಾಗಿ ನಡೆಯುತ್ತದೆ. ಜನ್ಮ ದಿನಾಂಕದ ಮೇಲೆ ಶುಭ ವರ್ಷಗಳು ಯಾವುವು, ಶುಭ ದಿನಗಳು ಯಾವುವು ಯಾವ ವರ್ಷ ಮನೆ ಕಟ್ಟುವ ಕಾರ್ಯ ಆರಂಭ ಮಾಡಬೇಕು ಎಂಬ ವಿವರ ಇಲ್ಲಿದೆ. 1,10,19,28ನೇ ದಿನಾಂಕಗಳಂದು ಜನಿಸಿದವರಿಗೆ 1,10,19, 28, 37, 46, 55, 64, 73, 82ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಭಾನುವಾರ ಶುಭ ದಿನ. ಕೆಂಪು ಬಣ್ಣ ಶುಭ. 2,11,20,29ನೇ ದಿನಾಂಕಗಳಂದು ಜನಿಸಿದವರಿಗೆ 2, 11, 20, 29, 38, 47, 56, 74, 83ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಸೋಮವಾರ ಶುಭ ದಿನ. ಬಿಳಿಯ ಬಣ್ಣ ಶುಭ. 3,12, 21, 30ನೇ ದಿನಾಂಕಗಳಂದು ಜನಿಸಿದವರಿಗೆ 3, 12, 21, 30, 39, 48, 57, 66, 75, 84ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಗುರುವಾರ ಶುಭ ದಿನ. ಹಳದಿ ಬಣ್ಣ ಶುಭ. 4, 13, 22, 31ನೇ ಈ ದಿನಾಂಕಗಳಂದು ಜನಿಸಿದವರಿಗೆ 4, 13, 22, 31, 40, 49, 58, 67, 76, 85ನೇ ವರ್ಷಗಳು ಶುಭ ವರ್ಷಗಳಾಗಿರುತ್ತವೆ. ಇವರಿಗೆ ಶನಿವಾರ ಮತ್ತು ಮಂಗಳವಾರ ಶುಭ ದಿನ. ಕಪ್ಪು ಬಣ್ಣ ಶುಭ. 5, 14, 23ನೇ ದಿನಾಂಕಗಳಂದು ಜನಿ

ಜಾತಕದಲ್ಲಿ ಗೃಹ ಬಲ

ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜತೆಯಲ್ಲಿದ್ದು 1-4-7-10-5-9ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಕಷ್ಟರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾಗದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಕಷ್ಟದಿಂದ ುರುಷಾರ್ಥದಿಂದ ಸ್ವಂತ ಸಂಪಾದನೆಯಿಂದ ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಕೊಳ್ಳುವುದು. ವೈಶಿಷ್ಟ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರ ಜತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತಿದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಮನೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟು ಪರಿಪೂರ್ಣ ಎನಿಸಿದ್ದು ಮತ್ತು ಸಾಮಾನ್ಯ ಜನರ ಮನೆುವರಿಗಿಂತ ಬೇರೆಯೇ ರೀತಿಯಾಗಿ ಇರುತ್ತದೆ. ದೊಡ್ಡ ಬಂಗಲೆಯ ಯೋಗ : ನಿಮ್ಮ ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಇಂತಹ ಯೋಗವುಳ್

ಜನ್ಮ ಲಗ್ನಕ್ಕೆ ಸಂಬಂಸಿದ ವ್ಯಾಪಾರದ ಫಲಗಳು

ಜನ್ಮ ಲಗ್ನಕ್ಕೆ ಅನುಗುಣವಾಗಿ ವ್ಯಾಪಾರ ಪ್ರಾರಂಭಿಸಿದರೆ ಶುಭ ಫಲಗಳು ದೊರಕುತ್ತವೆ. ಈ ಸಂಬಂಧವಾಗಿ ಸಂಬಂಧಪಟ್ಟ ಲಗ್ನಗಳಿಗೆ ಯಾವ ವ್ಯಾಪಾರ ಮಾಡಿದರೆ ಶುಭ ದೊರಕುತ್ತದೆ ಎಂಬುದರ ಬಗ್ಗೆ ಒಂದು ವಿಶ್ಲೇಷಣೆ. ಮೇಷ: ವೈದ್ಯಕೀಯ, ವಕೀಲ ವೃತ್ತಿ, ಪೊಲೀಸ್ ಇಲಾಖೆ, ಕಲ್ಲಿದ್ದಲು, ಔಷಧ ವ್ಯಾಪಾರ, ಖನಿಜ ಪದಾರ್ಥ, ಉಪ್ಪು, ಬಣ್ಣದ ವ್ಯಾಪಾರ, ಎಲೆಕ್ಟ್ರಾನಿಕ್ಸ್ ವ್ಯಾಪಾರ, ತಂಬಾಕು, ಸಿಮೆಂಟ್, ಎಣ್ಣೆ ವ್ಯಾಪಾರ, ವನಸ್ಪತಿ, ವಿದ್ಯುತ್ ಉಪಕರಣಗಳ ವ್ಯಾಪಾರ. ವೃಷಭ: ಕಲಾಕ್ಷೇತ್ರ, ವ್ಯವಸಾಯ ಹಾಗೂ ಕೃಷಿಗೆ ಸಂಬಂಧಿಸಿದ ವ್ಯವಹಾರ, ಅಲಂಕಾರದ ವಸ್ತುಗಳು, ಸ್ಟೇಷನರಿ, ಬಣ್ಣದ ವ್ಯಾಪಾರ, ಎಂಜಿನಿಯರಿಂಗ್ ಉದ್ಯೋಗ. ಮಿಥುನ: ಗುಪ್ತ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ, ಹಣಕಾಸು ವಿಭಾಗ, ಕವನ, ಲೇಖನಗಳನ್ನು ಬರೆಯುವ ಕಲೆ, ಪಾಕಶಾಸ್ತ್ರ ಪ್ರವೀಣ ವಿದ್ಯೆ. ಕಟಕ: ಸಿನಿಮಾ ರಂಗ, ಫೋಟೋಗ್ರಫಿ, ಕಲಾಕೃತಿ, ಕಲೆ, ನೀರಿಗೆ ಸಂಬಂಧಿಸಿದ ವ್ಯಾಪಾರಗಳು, ಬಣ್ಣದ ಕೆಲಸ, ಅಲಂಕಾರಿಕ ವಸ್ತುಗಳ ವ್ಯಾಪಾರ, ಮುತ್ತು, ರತ್ನಗಳ ವ್ಯಾಪಾರ. ಸಿಂಹ: ತಾಂತ್ರಿಕ ಹುದ್ದೆ, ಬಟ್ಟೆ, ಖಾದಿ, ನೂಲು, ದಾರದ ವ್ಯಾಪಾರ, ಹಣ್ಣಿನ ವ್ಯಾಪಾರ, ಕೃಷಿ ಕ್ಷೇತ್ರ ಹಾಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳ ವ್ಯಾಪಾರ, ಲೇವಾದೇವಿ ವ್ಯಾಪಾರ. ಕನ್ಯಾ: ಯಂತ್ರ, ಮಂತ್ರ, ಜ್ಯೋತಿಷ್ಯಶಾಸ್ತ್ರ, ಬೃಹತ್ ಕಂಪನಿಗಳು ವ್ಯವಸ್ಥಾಪಕ, ಕಲೆ, ಲೇಖನ, ಪಾಕಶಾಸ್ತ್ರ, ಬ್ಯಾಂಕಿಂಗ್, ಫೈನಾನ್ಸ್, ಕ್ರಯ ವಿಕ್ರಯ. ತುಲಾ: ಅಧ್ಯಾಪ

ಮನೆಮದ್ದು:

ಮನೆಮದ್ದು: ಪುಳಂ ಪುರಚಿ (ಹುಳಿ) ಸೊಪ್ಪು ಎಲ್ಲರಿಗೂ ಚಿರಪರಿಚಿತವಾದ ಸೊಪ್ಪು ಪುಳಂ ಪುರಚಿ ಅಥವಾ ಹುಳಿ ಸೊಪ್ಪು. ಇದರ ಹೆಸರೇ ಹೇಳುವಂತೆ ಇದರ ರುಚಿ ಹುಳಿ. ಭೂಮಿಯ ಮೇಲೆ ಹರಡಿಕೊಂಡಿರುವ ಇದು ನೋಡಲು ಸುಂದರವಷ್ಟೆ ಅಲ್ಲ, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. * ತಲೆ ನೋವಿನಿಂದ ಬಳಲುತ್ತಿದ್ದರೆ ಪುಳಂ ಪುರಚಿ ಸೊಪ್ಪಿನ ಜತೆ ಈರುಳ್ಳಿಯನ್ನು ಬೇಯಿಸಿ ಅದರ ರಸವನ್ನು ಹಣೆಗೆ ಲೇಪಿಸಿದರೆ ತಲೆ ನೋವು ಮಾಯ. * ಈ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಿದರೆ ಎಲ್ಲಾ ತರಹದ ಬಾಯಿಯ ರೋಗ ಹಾಗೂ ಒಸಡಿನ ರೋಗ ಗುಣವಾಗುತ್ತದೆ. * ಆಮಶಂಕೆ, ಬೇದಿಯಿಂದ ಬಳಲುತ್ತಿದ್ದರೆ 2-5ಗ್ರಾಂ ಪುಳಂ ಪುರಚಿ ಸೊಪ್ಪಿನ ರಸವನ್ನು 2-3 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ. *10 -15 ಎಲೆಗಳನ್ನು ನೀರಿನಲ್ಲಿ ಜಜ್ಜಿ , ಪೊಟ್ಟಲೀಸ್ ಮಾಡಿ ಹುಣ್ಣಿನ ಮೇಲೆ ಇಟ್ಟರೆ ಉರಿ ಕಡಿಮೆಯಾಗುತ್ತದೆ. * ಪುಳಂ ಪುರಚಿ ಸೊಪ್ಪು, ಬೇರು, ಖಾಂಡ, ಹೂವು ಎಲ್ಲವನ್ನು ತುಪ್ಪದಲ್ಲಿ ಹುರಿದು ಪಲ್ಯ ಮಾಡಿ ಮೋಸರಿನ ಜತೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ. * ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ 30-40 ಮಿಲಿ ಪುಳಂ ಪುರಚಿ ಸೊಪ್ಪಿನ ಕಷಾಯ ಮಾಡಿ, ಅದಕ್ಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. * ಈ ಸೊಪ್ಪಿನ ರಸವನ್ನು ಹುಳ ಕಚ್ಚಿದ ಜಾಗಕ್ಕೆ ತಕ್ಷಣ ಹಚ್ಚಿದರೆ ನೋವು, ಉರಿ ಕಡಿಮೆಯಾಗುತ್ತದೆ. -ಸಂಗ್ರಹ

ಶೂನ್ಯವಲ್ಲ ಮಾನ್ಯಮಾಸ

ಧನುರ್ಮಾಸವನ್ನು ಶೂನ್ಯಮಾಸ ಎಂದು ಕರೆಯುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆ. ಶೂನ್ಯಭಾವದಲ್ಲಿ ಲಾಭಾ ಲಾಭಗಳ ಯೋಚನೆ ಇರುವುದಿಲ್ಲ. ಅದೊಂದು ರೀತಿಯ ನಿರ್ಯೋಚನಾ ಅಥವಾ ಏಕಾಂತ ಸ್ಥಿತಿ ಎಂತಲೂ ಕರೆಯಬಹುದು. ಶೂನ್ಯ ಮಾಸದ ಏಕಾಂತ ಸ್ಥಿತಿಗೆ ಭಕ್ತಿಯೆಂಬ ಅಂಕಿಯನ್ನು ಹಾಕಬೇಕು. ಆಗ ಮಾಸಕ್ಕೊಂದು ಬೆಲೆ. ಅದುವೇ ಶೂನ್ಯಮಾಸದ ಮಹತ್ವ. * ಗೌರಿಪುರ ಚಂದ್ರು ಕಾಲಾಯ ತಸ್ಮೈ ನಮಃ. ನಾವೆಲ್ಲರೂ ಕಾಲನ ಅಧೀನರು. ಜ್ಯೋತಿಷ್ಯ ಶಾಸ್ತ್ರದ ರೀತ್ಯ ಕಾಲವನ್ನು ಘಟಿ ಮತ್ತು ವಿಘಟಿಯ ಮೂಲಕ ನಿರ್ಣಯಿಸುತ್ತೇವೆ. ಒಂದು ಗಂಟೆಗೆ (60 ನಿಮಿಷಕ್ಕೆ) 2.5 ಘಟಿ, ಒಂದು ನಿಮಿಷಕ್ಕೆ 2.5 ವಿಘಟಿ. ಹೀಗೆ ಕಾಲನಿರ್ಣಯದ ಮೇಲೆ ಫಲಾಫಲಗಳನ್ನು ಲೆಕ್ಕ ಹಾಕುತ್ತಾರೆ. ಅದನ್ನೇ ವೈಜ್ಞಾನಿಕವಾಗಿ ಗಂಟೆ, ನಿಮಿಷ, ಸೆಕೆಂಡ್‌ಗಳಂತಲೂ ಗುರುತಿಸುತ್ತೇವೆ. ಕಾಲಮಾನ ಸೂರ್ಯನ ಗತಿಯನ್ನು ಆಧರಿಸಿದೆ. ನಮಗೆ ಒಂದು ದಿನದಲ್ಲಿ ಹಗಲು, ರಾತ್ರಿಗಳಿದ್ದಂತೆ ದೇವತೆಗಳಿಗೂ ಹಗಲು, ರಾತ್ರಿಗಳಿವೆ. ದೇವತೆಗಳಿಗೆ ರಾತ್ರಿಯು ದಕ್ಷಿಣಾಯನ ಪುಣ್ಯಕಾಲವಾದರೆ, ಉತ್ತರಾಯಣ ಪುಣ್ಯಕಾಲವು ಹಗಲಾಗಿದೆ. ಅಶುಭವಲ್ಲ ಶುಭಮಾಸ ಉತ್ತರಾಯಣ ಪುಣ್ಯಕಾಲದ ಆರಂಭವೇ ಧನುರ್ಮಾಸ. ಕೆಲವರು ಇದನ್ನು ಶೂನ್ಯಮಾಸ ಎಂತಲೂ ಕರೆಯುತ್ತಾರೆ. ಧನುರ್ಮಾಸವನ್ನು ಶೂನ್ಯಮಾಸ ಎಂದು ಕರೆಯುವುದರ ಹಿಂದೆ ಒಂದಷ್ಟು ವೈಜ್ಞಾನಿಕ ಕಾರಣಗಳಿವೆ. ಶೂನ್ಯ ಎಂದರೆ ವ್ಯಾಕ್ಯೂಮ್. ಶೂನ್ಯಭಾವದಲ್ಲಿ ಲಾಭಾ ಲಾಭಗಳ ಯೋಚನೆ ಇರುವುದಿಲ್ಲ. ಅದೊಂದು

ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು

ಸಂಬಂಧಗಳನ್ನು ಗಟ್ಟಿಗೊಳಿಸಲು, ಹೊಸ ಸಂಬಂಧಗಳನ್ನು ಬೆಳೆಸಲು ಆಮಂತ್ರಣ ಪತ್ರಿಕೆ ಮಹತ್ವದ ಪಾತ್ರವಹಿಸುತ್ತದೆ. ಮಗುವಿನ ನಾಮಕರಣ, ಉಪನಯನ, ವಿವಾಹ ಮತ್ತು ಗೃಹಪ್ರವೇಶಾದಿ ಎಲ್ಲ ಕಾರ್ಯಗಳಲ್ಲಿ ಮುಹೂರ್ತವನ್ನು ನಿಗದಿಪಡಿಸಲು ವಿಶೇಷ ಮಹತ್ವ ಕೊಡಲಾಗುತ್ತದೆ. ಆದರೆ ಆಮಂತ್ರಣ ಪತ್ರಿಕೆಯ ವಿಷಯದಲ್ಲಿ ಈ ಅಂಶವನ್ನು ನಿರ್ಲಕ್ಷಿಸಲಾಗಿದೆ. ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವ ಪೂರ್ವದಲ್ಲಿ ಒಂದು ಹಸ್ತ ಲಿಖಿತ ಪ್ರತಿಯನ್ನು ತಯಾರಿಸಬೇಕು. ಅದನ್ನು ತಯಾರಿಸಲು ಮುದ್ರಣಕ್ಕೆ ಕೊಡಲು ಶುಭ ತಿಥಿ ವಾರ ಮತ್ತು ನಕ್ಷತ್ರಗಳನ್ನು ನೋಡುವುದು ಅವಶ್ಯವಾಗಿದೆ. ಆಮಂತ್ರಣ ಪತ್ರಿಕೆಗಳನ್ನು ಕೊಡಲು ವ್ಯಕ್ತಿಗತವಾಗಿ ಹೋಗುವುದಿದ್ದರೆ ಯಾವ ದಿನ ಯಾವ ದಿಕ್ಕಿಗೆ ಹೋಗಬೇಕು ಎನ್ನುವುದನ್ನು ಕೂಡ ಗಮನಿಸಬೇಕು. ಚಂದ್ರ ಚಂದ್ರನು ಮುಹೂರ್ತದ ಆಧಾರವಾಗಿರುವನು. ಕಾರಣ ಚಂದ್ರನು ಬಲಿಷ್ಣನಾಗಿರುವಾಗ ಆಮಂತ್ರಣ ಪತ್ರಿಕೆ ಬರೆಯಬೇಕು. ಶುಕ್ಲ ಪಕ್ಷದ ದಶಮಿಯಿಂದ ಕೃಷ್ಣ ಪಕ್ಷದ ಪಂಚಮಿಯವರೆಗೆ ಚಂದ್ರ ಬಲಿಷ್ಠನಾಗಿರುವನು. ಶುಕ್ಲ ಪಕ್ಷ ಪ್ರತಿಪಾದದಿಂದ ದಶಮಿಯವರೆಗೆ ಮಧ್ಯಮ ಬಲ ಮತ್ತು ಕೃಷ್ಣ ಪಕ್ಷದ ಪಂಚಮಿಯಿಂದ ಅಮಾವಾಸ್ಯೆಯವರೆಗೆ ಬಲಹೀನನಾಗಿರುತ್ತಾನೆ. ರಿಕ್ತಾ, ಅಮಾವಾಸ್ಯೆ, ಭದ್ರಾ, ಸಂಕ್ರಾಂತಿ ತಿಥಿಗಳು ನಿಷಿದ್ಧವಾಗಿವೆ. ವಾರ ಮತ್ತು ತಿಥಿ ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಶ್ರೇಷ್ಠವಾಗಿವೆ. ಸೋಮವಾರ ಮತ್ತು ಶನಿವಾರಗಳು ಮಧ್ಯಮ. ಅದರಲ್ಲಿಯೂ ಬುಧವಾರ ದ್ವಿತೀ