Skip to main content

Posts

Showing posts from July, 2015

ದಾಂಪತ್ಯ ಕಲಹಗಳ ನಿವಾರಣೆಗಾಗಿ

ದಾಂಪತ್ಯ ಕಲಹಗಳ ನಿವಾರಣೆಗಾಗಿ (ಪರಸ್ತ್ರೀ ಸಹವಾಸದಿಂದ ಉಂಟಾಗಿರುವ ಸಾಂಸಾರಿಕ ತೊಂದರೆಗಳ ನಿವಾರಣೆಗಾಗಿ ಪರಿಹಾರೋಪಾಯಗಳು) ೧.ಕೃತಿಕಾ ಉತ್ತರ ಉತ್ತರಾಷಾಡ ನಕ್ಷತ್ರ ಅಥವ ಸಪ್ತಮಿ ತಿಥಿ ಭಾನುವಾರ ಇರುವಾಗ ಹಿಂದಿನ ದಿನವೇ(ಶನಿವಾರದಂದು) ಬಿಳಿ ಎಕ್ಕದ ಗಿಡವನ್ನು ಪೂಜಾಸಾಮಗ್ರಿಗಳಿಂದ ಮೊಸರನ್ನ ನೈವೇದ್ಯ ಮಾಡಿ ಒಂದು ಅರಿಸಿನ ಕೊನೆಯನ್ನು ಅರಿಸಿನದ ದಾರಮಾಡಿ ಗಿಡಕ್ಕೆ ಕಟ್ಟಿ ೫ಜನ ಸ್ತ್ರೀಯರಿಗೆ ಅರಿಸಿನ ಕುಂಕುಮ ನೀಡಿ ಬರುವುದು ಭಾನುವಾರ ದಂದು ಆಗಿಡಬಳಿ ಬಂದು ಮತ್ತೆ ಪೂಜೆ ಮಾಡಿ ಅರಿಸಿನದ ಕೊಂಬು ಕಟ್ಟಿರುವ ಕೊಂಬೆಯನ್ನು ಕತ್ತರಿಕೊಂಡು ತಂದು ಮನೆಯಲ್ಲಿ ಒಂದು ತಟ್ಟೆಯಲ್ಲಿ ನವದಾನ್ಯ ಗಳಮೇಲೆ ಆ ಅರಿಸಿನದ ಕೊಂಬಿನ ಸಮೆತ ಇರುವ ಎಕ್ಕದ ಗಿಡವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ದೇವಿಯ ಯಾವುದಾದರು ಮಂತ್ರವನ್ನು ಅಥವ ಶತನಾಮಾವಳಿಯನ್ನು ೧೦೮ ಸಲ ಜಪಿಸಿ ನಂತರ ಆ ಗಿಡವನ್ನು ನಮಿಸಿ ದೇವರ ಮನೆಯಲ್ಲಿ ಅಥವ ಮನೆಯ ಮುಂಬಾಗಿಲಿನ ಗೋಡೆಗೆ ಒಳಬಾಗದಲ್ಲಿ ಕಟ್ಟುವುದು ನಿತ್ಯವು ಪೂಜೆಮಾಡುವುದು. ೨.ಪ್ರದೋಷ ವಿರುವ ದಿವಸ ನೋಡಿಕೊಂಡು ಒಂದು ತಾಮ್ರದ ತಗಡಿನಲ್ಲಿ ಪತಿಯ ಹೆಸರು,ಅವನ ತಾಯಿಯ ಹೆಸರು(ಅತ್ತೆಯ ಹೆಸರು)ಪತ್ನಿಯ ಹೆಸರು ತನ್ನ ತಾಯಿಯ ಹೆಸರು ಬರೆದು ಒಂದು ಜೇನುತುಪ್ಪದ ಬಾಟಲ್ ನಲ್ಲಿ ಹಾಕಿ ತಗಡನ್ನು ಸುತ್ತಿ ಜೇನಿನಲ್ಲಿ ಸಂಪೂರ್ಣ ಮುಳುಗುವಂತಿರಲಿ ಮುಚ್ಚಳ ಹಾಕಿ ಪೂಜೆ ಮಾಡಿ ಪ್ರಾಥಿಸಿಕೊಂಡು ಹರಿಯುವ ನೀರಲ್ಲಾಗಲಿ ಪಾಳು ಬಾವಿಯಲ್ಲಾಗಲಿ ಹುತ್ತದ

ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು.

ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು. ೧) ಬೆಟ್ಟದ ನೆಲ್ಲಿಕಾಯಿ ೧೧ ಅಥವ ೨೧ ರಲ್ಲಿ ದೀಪವನ್ನು ಮಾಡಿ ತುಪ್ಪದಿಂದ ದೀಪವನ್ನು ಮಾಡಿ ೧೧ ಶುಕ್ರವಾರ ಅಥವ ಗುರುವಾರ ಮುಂಜಾನೆ ಅಥವ ಸಂಜೆ ಯಲ್ಲಿ ಅರಳಿ ಅಥವ ಅತ್ತಿ ಮರದ ಬುಡದಲ್ಲಿ ಇಟ್ಟು ೧೧ ಪ್ರದಕ್ಷಿಣೆ ಮಾಡಿ ಗುರು ಮತ್ತು ಶುಕ್ರರನ್ನು ಪ್ರಾರ್ಥಿಸಿಕೊಂಡು ಬರುವುದು ಮೊದಲ ಮತ್ತು ಕೊನೆಯ ದಿನ ಗಳಂದು ಹಣ್ಣು ಕಾಯಿ ನೈವೇದ್ಯಗಳಿಂದ ವೃಕ್ಷವನ್ನು ಪೂಜಿಸುವುದು. ೨)ಇದು ವಿಶೇಷವಾದ ಖಚಿತ ಫಲವನ್ನು ನೀಡುವ ಪರಿಹಾರವಾಗಿದೆ ನಂಬಿಕೆ,ಶ್ರದ್ದೆ,ಭಕ್ತಿ ಬಹಳ ಮುಖ್ಯ. ಪೂಜೆಗೆ ಬೇಕಾದ ವಸ್ತುಗಳು ಒಂದು ತಾಮ್ರದ ಚಂಬು,೫ ಕೆಂಪು ಕುಪ್ಪಸ,೫ ಬೊಗಸೆ ಅಕ್ಕಿ, (೧೫ ಹಿಡಿ ಅಕ್ಕಿ)೫ ಕಗ್ಗಲಿ ೯ ಅಂಗುಲದ ಗಟ್ಟಿಯಾದ ತುಂಡು (ಗಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ) ಒಂದು ಮರದ ಮಣೆ ಅಥವ ತಟ್ಟೆ ಪೂಜಾ ಸಾಮಗ್ರಿಗಳು (ಹೂವು,ಹಣ್ಣು,ಎಲೆ ಅಡಿಕೆ,ಕಡ್ಡಿ ಕರ್ಪೂರ ಅರಿಸಿನ ಕುಂಕುಮ ಇತ್ಯಾದಿ) ಮಂಗಳವಾರದ ದಿನ ಮೊದಲು ಮನೆ ಶುಚಿಗೊಳಿಸಿ ನಂತರ ತಾವು ಶುಚಿಯಾಗಿ ದೇವರಮನೆಯಲ್ಲಿ ಒಂದು ಮಣೆಯನ್ನು ಹಾಕಿ ಅದರ ಮೇಲೆ ಒಂದು ಕೆಂಪು ಕುಪ್ಪಸ ಹಾಕಿ ಅದರ ಮೇಲೆ ಒಂದು ಬೊಗಸೆ ಅಕ್ಕಿ ಹಾಕಿ ಅದರ ಮೇಲೆ ತಾಮ್ರದ ಚಂಬು ಇಟ್ಟು ಚಂಬಿನಲ್ಲಿ ತುಗರಿ ಬೇಳೆ ತುಂಬಿ ಅದರ ಮೇಲೆ ೧ ಕಗ್ಗಲಿ ತುಂಡನ್ನು ಇಟ್ಟು ಮೇಲೆ ಒಂದು ಕೆಂಪು ಕುಪ್ಪಸವನ್ನು ಹಾಕಿ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಯಾವುದಾದರು ಶತನಾಮಾವಳಿ (ದುರ್ಗ,ಚಾಮುಂಡಿ,ಲಕ್ಷ್ಮಿ) ಯನ್ನ

ಈ ಕೆಳಗಿನ ಗಿಡಮೂಲಿಕೆಗಳ ಬಳಕೆ ಮಧುಮೇಹ ರೋಗವನ್ನು ಹತೋಟಿಯಲ್ಲಿಡಲು ಖಂಡಿತ ಸಹಕಾರಿಯಾಗುವುದು.

ಈ ಕೆಳಗಿನ ಗಿಡಮೂಲಿಕೆಗಳ ಬಳಕೆ ಮಧುಮೇಹ ರೋಗವನ್ನು ಹತೋಟಿಯಲ್ಲಿಡಲು ಖಂಡಿತ ಸಹಕಾರಿಯಾಗುವುದು. 1. ಬೇವು: ಇದು ನಮ್ಮ ಪಿತ್ತಕೋಶವನ್ನು ಪ್ರಚೋದಿಸಿ ಕಾರ್ಯಾಚರಿಸುವಂತೆ ಮಾಡುವುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸಿ ಹೋಗಲಾಡಿಸುತ್ತದೆ. 2. ಅಮೃತ ಬಳ್ಳಿ: ನಮ್ಮ ಆಯುರ್ವೇದ ಇದನ್ನು ‘ಅಮೃತ’ ವೆಂದೇ ಹೇಳುತ್ತಿದೆ. ಇದು ಶಕ್ತಿವರ್ಧಕವೂ, ರೋಗನಿರೋಧಕವೂ ಆಗಿದೆ. ಇದು ಮಧುಮೇಹಕ್ಕೆ ಔಷಧವೆಂದೇ ಆಯುರ್ವೇದ ಹೇಳುತ್ತದೆ. ಇದು ಹೃದ್ರೋಗವನ್ನು, ರಕ್ತದಲ್ಲಿನ ಸಕ್ಕರೆ ಅಂಶವನ್ನು ಕುಗ್ಗಿಸಿ, ತಗ್ಗಿಸುತ್ತದೆ. ಅಮೃತಬಳ್ಳಿಯನ್ನು ಕಬ್ಬು ತಿನ್ನುವಂತೆ ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆರಡು ಬಾರಿ ಜಗಿದು ರಸವನ್ನು ಸೇವಿಸಿರಿ. ಇಲ್ಲದಿದ್ದರೆ ಬಳ್ಳಿಯನ್ನು ಜಜ್ಜಿ ರಸ ತೆಗೆದು ಕುಡಿಯಿರಿ. ಬಳ್ಳಿಯ ಚೂರ್ಣವನ್ನು ತಯಾರಿಸಿ ಅರ್ಧ ಚಮಚ ಬಿಸಿ ನೀರಿನಲ್ಲಿ ಕದಡಿ ಕುಡಿಯಬೇಕು. ದಿನಕ್ಕೆರಡು ಸಲ ಊಟದ ಅರ್ಧಗಂಟೆ ಮೊದಲು ಸೇವಿಸಿರಿ. ಅಮೃತಬಳ್ಳಿಯ ಎಲೆಯನ್ನು ಕೂಡಾ ಹಲ್ಲಿನಿಂದ ಕಡಿದು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. 3. ನೆಲ್ಲಿಕಾಯಿ: ಜೀವಕೋಶಗಳು ಇನ್‌ಸುಲಿನ್ ಹೀರುವಿಕೆಯಲ್ಲಿ ಹೆಚ್ಚಿನ ಕಾರ್ಯ ದಕ್ಷತೆ ತೋರಿಸುವ ಕಾರ್ಯದಲ್ಲಿ ಮೊದಲಿಗ ನಮ್ಮ ನೆಲ್ಲಿಕಾಯಿ. ಮೇಧೋಜೀರಕದ ಕಾರ್ಯಾಚರಣೆಯಲ್ಲಿ ಕ್ಷಮತೆಯನ್ನುಂಟು ಮಾಡುತ್ತದೆ. 4. ಜಂಬೂನೇರಳೆ: ಇದು ರಕ್ತದಲ್ಲಿರುವ ಸಕ್ಕರೆಯನ್ನು ಹೋಗಲಾಡಿಸುವುದರಲ್ಲಿ ಪ್ರವೀಣತೆ ಪಡೆದಿ

ಮುದ್ರೆ ಮಂತ್ರ ಕೀರ್ತೇಶ್ವರಿ,ಮದ್ಯಪಾನಿ, ವಾಸ್ತು ದಿಗ್ಬಂಧನ ಪಂಚಮುಖಿ ಆಂಜನೇಯ ಮುದ್ರೆ ಮಂತ್ರ

ಓಂ ಹ್ರೀಂ ಶ್ರೀಂ ಐಂ ವದ ವದ ಕೀರ್ತೇಶ್ವರಿ ಸರಸ್ವತೈ ಸ್ವಾಹಾ ಈ ಹ್ರೀಂ ಶ್ರೀಂ ಐಂ ಜಯಸರಸ್ವತೈ ಸ್ವಾಹಾ ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ ಕೊಟ್ಟ ಹಣ ವಾಪಸ್ ಪಡೆಯೋ ಮಂತ್ರ ಕುಬೇರಮುದ್ರೆ ಧರಿಸಿ ಉತ್ತರಾಭಿಮುಖವಾಗಿ ಕುಳಿತು ೧೦೮ ಸಲ ಜಪಿಸಿರಿ. ಮದ್ಯಪಾನಿ ನಿರೋಧಕ ಮುದ್ರೆ ಮಂತ್ರ(ಕುಡಿತದ ಚಟ ಬಿಡಿಸಬಹುದಾದ ಮಂತ್ರ ಮುದ್ರೆ) ಪೂರ್ವಾಭಿಮುಖವಾಗಿ ಕುಳಿತು ಮುದ್ರೆಯೊಂದಿಗೆ ೨೦ನಿಮಿಷ ಜಪಿಸಿರಿ ಅಥವ ಮದ್ಯಪಾನಿಗಳ ಮುಂದೆ ಕುಳಿತು ಕೂಡ ಮನೆಯವರು ಮಾಡಬಹುದು. ಮಂತ್ರ:-ಓಂ ಅನಿರುದ್ದಾಯ ನಮಃ (ಕುಡಿತದ ಚಟ ಶನಿ+ ಚಂದ್ರನಿಂದ+ ಶುಕ್ರ/ರಾಹುವಿನಿಂದ ಉಂಟಾಗುತ್ತದೆ) ವಾಸ್ತು ದಿಗ್ಬಂಧನ,ಜಾತಕದಲ್ಲಿನ ಶತೃದೋಷನಿವಾರಣೆಗಾಗಿ,ವಾಸ್ತುದೋಷನಿವಾರಣೆಗಾಗಿ ಅಲ್ಲದೆ ಮನೆಯಲ್ಲಿರುವವರಿಗೆ ಉಂಟಾಗುವ ಶತೃಕಾಟನಿವಾರಣೆಗಾಗಿ ಈ ಪಂಚಮುಖಿ ಆಂಜನೇಯ ಮುದ್ರೆ ಮಂತ್ರ.ಪೂರ್ವಾಭಿಮುಖವಾಗಿ ಮನೆಯ ಮದ್ಯಭಾಗದಲ್ಲಿ ಕುಳಿತು ೧೧ಸಲ ಅಥವ ೧೦೮ ಸಲ ಜಪಿಸಿ. ಮಂತ್ರ:-ಓಂ ನಮೋ ಭಗವತೇ ಪಂಚವದನಾಯ ಪೂರ್ವೇಕಪಿಮುಖಾಯ ಓಂ ಶ್ರೀ ವೀರ ಹನುಮತೇ ಓಂ ಠಂ ಠಂ ಠಂ ಠಂ ಠಂ ಠಂ ಸಕಲ ಶತೃವಿನಾಶಾಯ ಸರ್ವ ಶತೃ ಸಂಹಾರಣಾಯ ಮಹಾಬಲಾಯ ಹುಂಫಟ್ ಶ್ರೀ ವೀರ ಹನುಮತೇ ನಮಃ ಉತ್ತರಾಭಿಮುಖ ವಂಶಾಭಿವೃದ್ದಿ,ದನದಾನ್ಯವೃದ್ದಿ ವಾಸ್ತುದೋಷನಿವಾರಣೆಗಾಗಿ ಈ ಪಂಚಮುಖಿ ಆಂಜನೇಯ ಮಂತ್ರ ಮತ್ತು ಮುದ್ರೆ ಮಾಡಿದರೆ ಎಲ್ಲಾ ದೋಷ ನಿವಾರಣೆಯಾಗುತ್ತವೆ. ಮಂತ್ರ:-ಓಂ ನ

ಮೂಲವ್ಯಾಧಿ

* ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ. * ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ. * ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು. * ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ. * ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು. * ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ. * ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ. *

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ!

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ! ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು, ಹೌದು ಮಧುಮೇಹವನ್ನು ನಿಯಂತ್ರಸುವ ಆಹಾರವಸ್ತುಗಳನ್ನು ನಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ಇದನ್ನು ಆರ೦ಭದ ಹ೦ತದಲ್ಲಿಯೇ ತೊಡೆದು ಹಾಕಲು ಸಾಧ್ಯವಾಗುತ್ತದೆ. ಮಧುಮೇಹಿಗಳ ಪಾಲಿಗೆ ಅತ್ಯುತ್ತಮವಾಗಿರುವ ಈ ಆಹಾರವಸ್ತುಗಳ ಕುರಿತು ಅವಲೋಕಿಸುವಾಗ, ನಾವು ಮುಖ್ಯವಾಗಿ ಮಧುಮೇಹಿಗಳ ಪಾಲಿಗೆ ವರದಾನವಾಗಬಲ್ಲ ತರಕಾರಿಗಳ ಕುರಿತು ಬೆಳಕು ಬೀರಲಿದ್ದೇವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ ಜಂಬು ನೇರಳೆ ಹಣ್ಣು,ಸೀತಾಪಲ. ಗಡ್ಡೆಕೋಸು,ಬೆಂಡೆಕಾಯಿ. ಇವುಗಳು ಮದುಮೇಹ ನಿಯಂತ್ರಣದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತವೆ ಪಾಲಕ್ ಸೊಪ್ಪು ಪಾಲಕ್ ಸೊಪ್ಪು ಹಚ್ಚಹಸುರಾದ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್‌ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ. ಹಾಗಲಕಾಯಿ ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗ

ಕಿಡ್ನಿ ಸಮಸ್ಯೆಗಳ ನಿವಾರಣೆಗಾಗಿ ಮುದ್ರೆ ಮಂತ್ರ

ಓಂ ಕ್ಲಾಂ ಕ್ಲೀಂಕ್ಲೂಂ ಗೋಪಾಲಾಯ ವಿದ್ಮಹೇ ಕ್ಲೀಂ ಗೋವಿಂದಾಯ ಧೀಮಹೀ ತನ್ನೋ ಕೃಷ್ಣ ಪ್ರಚೋದಯಾತ್ ಅಥವ ಓಂ ಕ್ಲೀಂ ಹೃಷಿಕೇಶಾಯ ನಮಃ ಈ ಮಂತ್ರವನ್ನು ಜಪಿಸುತ್ತಾ ಬಲಗೈನ ಮದ್ಯಭಾಗದಲ್ಲಿನ ನರವನ್ನು ಅದುಮಿ ಇಡಿಯುವುದರಿಂದ ಕಿಡ್ನಿಗೆ ಡಯಾಲಿಸೀಸ್ ಆಗಿತ್ತದೆ ಕಿಡ್ನಿ ಸಮಸ್ಯೆ ಇಲ್ಲದವರು ಇದನ್ನು ಮಾಡುವುದರಿಂದ ಆರೋಗ್ಯವಂತರಾಗಬಹುದು. ಕಿಡ್ನಿಯಲ್ಲಿ ಕಲ್ಲಿದ್ದರೆ ಅದನ್ನು ಪತಾಕ ಹಸ್ತ ಮುದ್ರೆಯೋಂದಿಗೆ ಎರಡು ಹೆಬ್ಬೆರಳ ತುದಿಯನ್ನು ೧೦-೨೦ನಿಮಿಷ ಘರ್ಷಿಸುವುದರಿಂದ ಕಲ್ಲು ಕರಗುತ್ತದೆ. ಮಕರಮುದ್ರೆಯೊಂದಿಗೆ ಈ ಮಂತ್ರವನ್ನು ೨೦-೩೦ನಿಮಿಶ ನಿತ್ಯ ೩ವೇಳೆ ಜಪಿಸುವುದರಿಂದ ಕಿಡ್ನಿಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮಂತ್ರ:- ಓಂ ಝೂಂ ಸಃ ಹಸಃ ಮಾಂ ಪಾಲಯ ಪಾಲಯ ಸೋ ಹಂ ಸಃ ಝೂಂ ಓಂ (ಮಕರ ಮುದ್ರೆಯೊಂದಿಗೆ ಈ ಮಂತ್ರವನ್ನು ಜಪಿಸುವುದು) ತಂತ್ರ ಪ್ರಯೋಗ:-ಎರಡು ನಿಂಬೆ ಹಣ್ಣನ್ನು ತಗೆದುಕೊಂಡು ಎರಡು ಪಾದದ ಕೆಳಗೆ ಇಟ್ಟುಕೊಂಡು ಈ ಮಂತ್ರವನ್ನು ೧೦೮ಸಲ ಜಪಿಸುವುದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಕೃಪೆ:- ಮಾರ್ನಿಂಗ್ ಮಂತ್ರ ಟಿವಿ ಕಾರ್ಯಕ್ರಮ