ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
ಪಂಚಮದಲ್ಲಿ ಚಂದ್ರನಿದ್ದರೆ ಇವರಿಗೆ ಹೆಂಗಸರ ಬುದ್ಧಿ ಇರುತ್ತದೆ. ಬಹಳ ಶ್ರಮ ಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಪಂಚಮದಲ್ಲಿ ಚಂದ್ರನಿದ್ದು, ಬೇರೆ ಗ್ರಹಗಳು ಇಲ್ಲದಿದ್ದರೆ ಇವರಿಗೆ ಕನ್ಯಾ ಸಂತತಿ ಮಾತ್ರ ಇರುತ್ತದೆ. ಪುತ್ರ ಸಂತತಿ ಇರುವುದಿಲ್ಲ. ಚಂದ್ರನು ಕ್ಷೀಣಯುತನಾದರೆ ಚಂಚಲ ಪುತ್ರಿಯನ್ನು ಹೊಂದುತ್ತಾರೆ. ಇವರು ರೋಗಿಯೂ, ಭಯಾನಕರೂ ಆಗುವರು. ಪಂಚಮದ ಚಂದ್ರನು ಆರನೇ ವರ್ಷದಲ್ಲಿ ಅಗ್ನಿ ಯಾ ಬಿಸಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದರಲ್ಲಿ ಚಂದ್ರನಿರಲು ಧೈರ್ಯ, ಒಳ್ಳೆಯ ಬುದ್ಧಿ, ಅಭಿವೃದ್ಧಿ ಹೊಂದುತ್ತಾರೆ. ಇವರದ್ದು ದೊಡ್ಡ, ಚೆಲುವಾದ ದೇಹ. ತೇಜಸ್ವಿ, ಮುಕ್ತ ವಿಚಾರಶೀಲರೂ ಆಗುತ್ತಾರೆ. ಇವರು ರಾಜಕೀಯದಲ್ಲಿ ಬಹಳ ಹೆಸರು ಮಾಡುತ್ತಾರೆ. ನಾಲ್ಕರ ಚಂದ್ರ ವಿಲಾಸ, ವಿನೋದ, ಮನೋರಂಜನೆಯಲ್ಲಿ ಆಸಕ್ತಿ ಇರುವವರೂ, ಮಕ್ಕಳಲ್ಲಿ, ಹೆಂಗಸರಲ್ಲಿ ಮೆಚ್ಚುಗೆ ಗಳಿಸುವವರೂ ಆಗುತ್ತಾರೆ. ಇವರ ಮಕ್ಕಳು ಚೆಲುವಾದ ದೇಹವನ್ನು ಹೊಂದುತ್ತಾರೆ. ಚಂದ್ರ ಬಲಿಷ್ಠನಾಗಿದ್ದರೆ ಇವರು ಮಟ್ಕಾ, ಜುಗಾರಿಯಲ್ಲಿ ಭಾರಿ ಲಾಭ ಪಡೆಯುತ್ತಾರೆ.
ಚತುರ್ಥಮ ದ್ವಿಭಾವ ರಾಶಿಯಾಗಿದ್ದರೆ ಇವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ಪಂಚಮದ ಚಂದ್ರನನ್ನು ಶನಿ ನೋಡುತ್ತಿದ್ದರೆ ಇವರು ವಂಚಕ, ಕಪಟ ಬುದ್ಧಿಯುಳ್ಳವರಾಗಿರತ್ತಾರೆ. ಮಾತಿನಿಂದ ಮರಳುಗೊಳಿಸಿ ಆಪ್ತ ಜನರನ್ನು ಕಷ್ಟಕ್ಕೆ ಈಡು ಮಾಡಿ ಹಣ ಸಂಗ್ರಹ ಮಾಡುತ್ತಾರೆ. ಈ ರಾತ್ರಿ ಚಂದ್ರ ಸಂತಾನ ಫಲ ಕೊಡುತ್ತಾನೆ. ಚಂದ್ರನೊಂದಿಗೆ ಕುಜನಿದ್ದರೆ ಇವರು ಸಾಹಸ ಮನೋವೃತ್ತಿಯುಳ್ಳವರಾಗುತ್ತಾರೆ. ಚಂದ್ರನು ಪಂಚಮದಲ್ಲಿ ಬಲಿಷ್ಠನಾಗಿದ್ದರೆ ಮಕ್ಕಳು ಭಾಗ್ಯವಂತರಾಗುತ್ತಾರೆ. ಇವರು ಮೇಧಾವಿ, ಮೆಲ್ಲ ಮೆಲ್ಲನೇ ನಡೆಯುವ ಮಂತ್ರಿಯಾಗುತ್ತಾರೆ. ಪಂಚಮ ಸ್ಥಾನವು ವೃಷಭ, ಕನ್ಯಾ, ಮಕರವಾದರೆ ಇವರಿಗೆ ಹೆಣ್ಣು ಮಕ್ಕಳು ಜಾಸ್ತಿಯಾಗುತ್ತರೆ. ಇವರಿಗೆ ವಿಳಂಬವಾಗಿ ನಲ್ವತ್ತೆರಡು ಪ್ರಾಯವಾಗುವಾಗ ಒಂದು ಗಂಡು ಮಗುವಾಗುವುದು. ಪಂಚಮವು ಮಿಥುನ, ತುಲಾ, ಕುಂಭವಾಗಿ ಅಲ್ಲಿ ಚಂದ್ರನಿದ್ದರೆ ಇವರಿಗೆ ಗಂಡು ಸಂತತಿಯಾಗಲು ದೋಷ ಇದ್ದು, ಸ್ತ್ರೀ ಸಂತಾನ ಇರುತ್ತದೆ. ಪಂಚಮ ಕರ್ಕಾಟಕ, ವಶ್ಚಿಕ, ಮೀನ, ಮೇಷ, ಸಿಂಹ, ಧನುಗಳ ಚಂದ್ರ ಪುತ್ರ ಸಂತಾನಕ್ಕೆ ಅನಿಷ್ಟದಾಯಕನಾಗುತ್ತಾನೆ. ಮೊದಲನೆಯ ಪುತ್ರ ಸಂತಾನ ನಷ್ಟವಾಗಿ ಬಳಿಕ ಸ್ತ್ರೀ ಸಂತಾನ ಹೊಂದಿ ಬಳಿಕ ಪುತ್ರ ಸಂತಾನವಾಗುವುದು.
ಅನ್ಯರ ಮನಸ್ಸನ್ನು ಬದಲುಗೊಳಿಸುವ ಪೌರುಷ ಸಾಧನೆ ಚಂದ್ರನಿಂದಾಗುವುದು. ಕಲಾವಿದರು ನಾಟಕದಲ್ಲಿ ಪೌರುಷ ತೋರಿಸುವುದು ಚಂದ್ರನಿಂದಾಗಿ. ನಪುಂಸಕತ್ವದ ಚಂದ್ರ, ಮಿಥುನ, ತುಲಾ, ಕುಂಭವು ಪಂಚಮ ಭಾವವಾದರೆ ಆಗುವ ಸಂಭವ ಇದೆ. ಪಂಚಮವು ಪುರುಷ ರಾಶಿ ಅಂದರೆ ಮೇಷ, ಮಿಥುನ, ಸಿಂಹ, ತುಲಾ, ಧನು ಮತ್ತು ಕುಂಭ ಈ ಭಾವವು ಶುಭ ಫಲವನ್ನು ಹೊಂದುತ್ತದೆ. ಮೇಷ, ಸಿಂಹ, ಧನು ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದು, ಅದಕ್ಕೆ ಕುಜನ ದೃಷ್ಟಿ ಇದ್ದರೆ ಇವರಿಗೆ ಅಗ್ನಿ ಬಾಧೆಗಳು ಬರುತ್ತದೆ. ಪಂಚಮವು ಮೇಷ, ಸಿಂಹ, ಧನು ರಾಶಿಗಳಾಗಿ ಅದರಲ್ಲಿ ಚಂದ್ರನು ಇದ್ದವರ ವಿದ್ಯೆಯು ಅಪೂರ್ಣವಾಗುವುದು. ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಚೆನ್ನಾಗಿರುವುದಿಲ್ಲ. ವೃಷಭ, ಕನ್ಯಾ, ಮಕರ ಇದು ಪಂಚಮವಾಗಿ ಇಲ್ಲಿ ಚಂದ್ರನಿದ್ದರೆ ಇವರ ವಿದ್ಯಾಭ್ಯಾಸವು ಮೊಟಕುಗೊಳ್ಳುವುದು. ಇವರು ಸಾರ್ವಜನಿಕ ಹಿತ ಖಾತೆ, ಬ್ಯಾಂಕ್, ಅಂಚೆ ಕಚೇರಿಯಲ್ಲಿ ಉದ್ಯೋಗ ಹೊಂದುವರು. ಕರ್ಕಾಟಕ, ವಶ್ಚಿಕ, ಮೀನ ರಾಶಿಗಳು ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರು ವಕೀಲರೂ, ವೈದ್ಯರೂ ಆಗುತ್ತಾರೆ. ಜೀವನ ಮಾರ್ಗದಲ್ಲಿ ಜನತೆಯಲ್ಲಿ ಮುಂದುವರಿದು ಬರುವ ಮಹತ್ವಾಕಾಂಕ್ಷೆ ಇವರಲ್ಲಿ ತುಂಬಿರುತ್ತದೆ. ಮಿಥುನ, ತುಲಾ, ಕುಂಭ ಪಂಚಮವಾಗಿ ಅಲ್ಲಿ ಚಂದ್ರನಿದ್ದರೆ ಇವರ ಕೆಲಸವು ಜಯವಾಗುವುದು. ಹಣಕಾಸಿನ ಆಸೆ ಜಾಸ್ತಿಯಾಗಿ ದಾಂಪತ್ಯ ವಿಷಯಾಸಕ್ತಿಗಳಿಂದ ದೂರಗೊಳ್ಳುತ್ತಾರೆ. ಸಂತಾನ ವಿಷಯದಲ್ಲಿ ಈ ಚಂದ್ರ ಶುಭನಾಗಿರುವುದಿಲ್ಲ
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments