Skip to main content

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಕಬ್ಬಿಣದ ಅಂಶವು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವಂತೆ ವೈದ್ಯರು ಸೂಚಿಸಬಹುದು. ಕಬ್ಬಿಣದ ಅಂಶದ ಉತ್ತಮ ಮೂಲ ಅಂದರೆ ಕೆಂಪು ಮಾಂಸ, ಅದರಲ್ಲೂ ವಿಶೇಷವಾಗಿ ಬೀಫ್‌ ಮತ್ತು ಲಿವರ್‌. ಚಿಕನ್‌, ಟರ್ಕಿ, ಪೋರ್ಕ್‌, ಮೀನು ಮತ್ತು ಚಿಪ್ಪುಮೀನುಗಳೂ ಸಹ ಕಬ್ಬಿಣದ ಅಂಶಗಳ ಉತ್ತಮ ಮೂಲಗಳು. ದೇಹವು ಮಾಂಸಜನ್ಯವಲ್ಲದ ಆಹಾರಗಳಿಗಿಂತಲೂ ಮಾಂಸಜನ್ಯ ಆಹಾರಗಳಿಂದ ಬಹಳ ಚೆನ್ನಾಗಿ ಕಬ್ಬಿಣದ ಅಂಶಗಳನ್ನು ಹೀರುತ್ತದೆ. ಹಾಗಿದ್ದರೂ, ಕೆಲವು ಮಾಂಸಜನ್ಯವಲ್ಲದ ಆಹಾರಗಳೂ ಸಹ ನಿಮ್ಮ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಹಕಾರಿಗಳಾಗಿರುತ್ತವೆ. ಮಾಂಸಜನ್ಯವಲ್ಲದ ಕಬ್ಬಿಣದ ಅಂಶಗಳ ಉತ್ತಮ ಮೂಲಗಳೆಂದರೆ; < ಕಬ್ಬಿಣದ ಅಂಶಗಳಿಂದ ಪುಷ್ಟಿಗೊಳಿಸಿದ ಬ್ರೆಡ್‌ ಮತ್ತು ಕಾಳುಗಳು. < ಬಟಾಣಿಗಳು, ಬಿಳಿ, ಕೆಂಪು ಮತ್ತು ಬೇಯಿಸಿದ ಅವರೆಕಾಳುಗಳು; ಸೋಯಾಬೀನ್ಸ್‌ ಮತ್ತು ಕಡಲೆ ಬೀಜಗಳು <ರಾಗಿ ಕಬ್ಬಿಣದ ಅಂಶದ ಸಮೃದ್ಧ ಮೂಲ < ಒಣ ಹಣ್ಣುಗಳು, ದಾಳಿಂಬೆ, ಪಪ್ಪಾಯ, ಬಸಳೆ ಮತ್ತು ಇತರ ದಟ್ಟ ಹಸಿರು ಬಣ್ಣದ ಸೊಪ್ಪು ತರಕಾರಿಗಳು, ಬೀಟ್‌ ರೂಟಿನಂತಹ ಇನ್ನಿತರ ಬಣ್ಣದ ತರಕಾರಿಗಳು ಶರೀರವು ಕಬ್ಬಿಣದ ಅಂಶಗಳನ್ನು ಹೀರಿಕೊಳ್ಳಲು ವಿಟಾಮಿನ್‌ ಸಿ ಸಹಾಯ ಮಾಡುತ್ತದೆ. ಹಣ್ಣು ತರಕಾರಿಗಳು ವಿಟಾಮಿನ್‌ ಸಿ ಯ ಉತ್ತಮ ಮೂಲಗಳು. ಅದರಲ್ಲೂ ವಿಶೇಷವಾಗಿ, ನಿಂಬೆ ಜಾತಿಯ ಹಣ್ಣುಗಳು. ನಿಂಬೆ ಜಾತಿಯ ಹಣ್ಣುಗಳಲ್ಲಿ ಕಿತ್ತಲೆ, ದ್ರಾಕ್ಷಿ ಹಣ್ಣುಗಳು ಟ್ಯಾಂಜೆರಿನ್‌ ಮತ್ತು ಇಂತಹದೇ ಇತರ ಹಣ್ಣುಗಳು. ಡಬ್ಬದಲ್ಲಿ ಸಂಸ್ಕರಿಸಿದ ಹಣ್ಣು ತರಕಾರಿಗಳಿಗಿಂತಲೂ, ತಾಜಾ ಮತ್ತು ಶೀತಲಗೊಳಿಸಿದ ಹಣ್ಣು ತರಕಾರಿಗಳಲ್ಲಿ ಮತ್ತು ಹಣ್ಣಿನ ರಸಗಳಲ್ಲಿ ಸಾಮಾನ್ಯವಾಗಿ ಹೆಚ್ಚು ವಿಟಾಮಿನ್‌ ಸಿ ಇರುತ್ತದೆ. ವಿಟಾಮಿನ್‌ ಸಿ ಹೇರಳವಾಗಿರುವ ಇನ್ನಿತರ ಹಣ್ಣುಗಳು ಎಂದರೆ, ಕಿವಿ ಫೂಟ್‌, ಸ್ಟ್ರಾಬೆರಿ ಮತ್ತು ಕ್ಯಾಂಟಲೋಪಸ್‌ ಗಳು. ವಿಟಾಮಿನ್‌ ಸಿ ಹೇರಳವಾಗಿರುವ ತರಕಾರಿಗಳು ಅಂದರೆ ಬ್ರಾಕಲಿ, ಮೆಣಸು, ಮೊಳಕೆ ಕಾಳುಗಳು, ಟೊಮ್ಯಾಟೋಗಳು, ಕ್ಯಾಬೆಜ್‌, ಬಟಾಟೆಗಳು ಮತ್ತು ಬಸಳೆಯಂತಹ ಸೊಪ್ಪು ತರಕಾರಿಗಳು. ಕಬ್ಬಿಣದ ಕೊರತೆಯ ರಕ್ತಹೀನತೆಗೆ ರಕ್ತ ಪೂರಣ ಆವಶ್ಯಕವೇ? ರಕ್ತಹೀನತೆಯು ಬಹಳ ತೀವ್ರ ರೂಪದಲ್ಲಿ ಇದ್ದರೆ, ಅಥವಾ ಹೃದಯ ವೈಫಲ್ಯವಾದರೆ, ಅಥವಾ ವ್ಯಕ್ತಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ಅಗತ್ಯದ್ದರೆ ಮಾತ್ರವೇ ರಕ್ತ ಪೂರಣ ಮಾಡಲಾಗುವುದು. ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ಹೇಗೆ ತಡೆಯಬಹುದು? ಸಂತುಲಿತ ಆಹಾರ ಸೇವನೆ, ಅಂದರೆ ಆಹಾರದಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ಕಬ್ಬಿಣದ ಅಂಶದ ಕೊರತೆಯ ರಕ್ತ ಹೀನತೆ ಉಂಟಾಗದಂತೆ ತಡೆಯಬಹುದು. ಕಬ್ಬಿಣದ ಅಂಶದ ಕೊರತೆ ಇದೆ ಎಂಬುದನ್ನು ಗೊತ್ತು ಪಡಿಸದೆ ಕಬ್ಬಿಣದ ಅಂಶದ ಪೂರಣಗಳಾದ ಸಿರಫ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಹಾಗಾಗಿ, ಈ ಪೂರಣಗಳನ್ನು ವೈದ್ಯರ ಶಿಫಾರಸಿನ ಮೇರೆಗೆ ಮಾತ್ರ ತೆಗೆದುಕೊಳ್ಳುವುದು ಅತ್ಯವಶ್ಯ. ನವಜಾತ ಶಿಶುಗಳು ಮತ್ತು ಎಳೆಯ ಮಕ್ಕಳು ಒಂದು ಮಗುವು ಸೇವಿಸುವ ಆಹಾರವು ಆ ಮಗುನಲ್ಲಿ ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆಗೆ ಕಾರಣವಾಗಬಹುದು. ಉದಾಹರಣೆಗೆ, ಹಸುವಿನ ಹಾಲಿನಲ್ಲಿ ಕಬ್ಬಿಣದ ಅಂಶ ಬಹಳ ಕಡಿಮೆ ಇರುತ್ತದೆ. ಈ ಕಾರಣಕ್ಕಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ, ಮಗುವಿಗೆ ಮೊದಲ ವರ್ಷ ಹಸುವಿನ ಹಾಲನ್ನು ಶಿಫಾರಸು ಮಾಡುವುದಿಲ್ಲ. ನಿಮ್ಮ ಮಗುವಿಗೆ ಒಂದು ವರ್ಷ ತುಂಬಿದ ಬಳಿಕ ಮಿತ ಪ್ರಮಾಣದಲ್ಲಿ ಹಸುವಿನ ಹಾಲನ್ನು ಕೊಡಬಹುದು. ಮಗುವು ಬೆಳೆದಂತೆಲ್ಲಾ ಮತ್ತು ಘನ ಆಹಾರಗಳನ್ನು ಸೇವಿಸಲು ಆರಂಭಿಸುವಾಗ ಅದಕ್ಕೆ ಕಬ್ಬಿಣದ ಅಂಶಗಳ ಅಗತ್ಯ ಹೆಚ್ಚು ಇರುತ್ತದೆ. ನಿಮ್ಮ ಮಗುವಿಗೆ ಕೊಡಬಹುದಾದ ಆರೋಗ್ಯಕರ ಆಹಾರ ಮತ್ತು ಸಾಕಷ್ಟು ಕಬ್ಬಿಣದ ಅಂಶಗಳು ಇರುವ ಆಹಾರದ ಆಯ್ಕೆಗಳ ಬಗ್ಗೆ ನಿಮ್ಮ ಮಗುವಿನ ವೈದ್ಯರ ಜೊತೆಗೆ ಮಾತನಾಡಿರಿ. ನಿಮ್ಮ ಮಗುವಿನ ವೈದ್ಯರು ಕಬ್ಬಿಣದ ಡ್ರಾಪ್ಸ್‌ ಗಳನ್ನು ಶಿಫಾರಸು ಮಾಡಬಹುದು. ಮಗುವಿಗೆ ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕಬ್ಬಿಣದ ಅಂಶದ ಪೂರಣಗಳನ್ನು ನೀಡುವುದು ಅಷ್ಟೊಂದು ಒಳ್ಳೆಯದಲ್ಲ. ವೈದ್ಯರ ಸಲಹೆಗಳನ್ನು ಪಾಲಿಸಿ, ಅಗತ್ಯಕ್ಕಿಂತ ಹೆಚ್ಚು ಕಬ್ಬಿಣದ ಪೂರಣಗಳು ಮತ್ತು ವಿಟಾಮಿನ್‌ ಗಳಿಂದ ಮಕ್ಕಳನ್ನು ಆದಷ್ಟು ದೂರವಿರಿಸಿ. ಮಹಿಳೆಯರು ಮಕ್ಕಳನ್ನು ಪಡೆಯಲು ಸಮರ್ಥ ವಯಸ್ಸಿನಲ್ಲಿರುವ ಮಹಿಳೆಯರು ತಮ್ಮಲ್ಲಿ ಕಬ್ಬಿಣದ ಅಂಶದ ಕೊರತೆ ಇದೆಯೇ ಎಂಬುದಕ್ಕಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ವಿಶೇಷವಾಗಿ ಈ ಮಹಿಳೆಯರು ಪರೀಕ್ಷೆ ಮಾಡಿಸಿಕೊಳ್ಳಬೇಕು: < ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆಯ ಹಿನ್ನೆಲೆ ಇರುವವರು. < ಋತುಸ್ರಾವದ ಅವಧಿಯಲ್ಲಿ ಅಧಿಕ ರಕ್ತ ಸ್ರಾವವಾಗುತ್ತಿರುವವರು. < ಕಬ್ಬಿಣದ ಅಂಶದ ಕೊರತೆಯ ಇನ್ನಿತರ ಅಪಾಯಕಾರಿ ಸ್ಥಿತಿ ಇರುವವರು. ಗರ್ಭಿಣಿ ಸ್ತ್ರೀಯರು ಗರ್ಭಧಾರಣೆಯ ಅವಧಿಯಲ್ಲಿ ಇನ್ನಿತರ ತಪಾಸಣೆಗಳ ಜೊತೆ ಜೊತೆಗೆ, ರಕ್ತಹೀನತೆಯ ತಪಾಸಣೆಗಳನ್ನೂ ಸಹ ನಡೆಸಿಕೊಳ್ಳಬೇಕು. ನಿಮ್ಮ ವೈದ್ಯರು ಈ ಅವಧಿಯಲ್ಲಿ ಕಬ್ಬಿಣದ ಅಂಶಗಳ ಪೂರಣಗಳನ್ನೂ ಸಹ ಸೂಚಿಸಬಹುದು ಅಥವಾ ಕಬ್ಬಿಣದ ಅಂಶ ಹೇರಳವಾಗಿರುವ ಆಹಾರವನ್ನು ಸೇವಿಸುವಂತೆ ಸಲಹೆ ನೀಡಬಹುದು. ವೈದ್ಯರು ಕಬ್ಬಿಣದ ಪೂರಣವನ್ನು ಸೂಚಿಸಿದ ಬಳಿಕ ಏನು ಮಾಡಬೇಕು? ಒಂದು ವೇಳೆ ನಿಮಗೆ ಕಬ್ಬಿಣದ ಅಂಶದ ಕೊರತೆಯ ರಕ್ತ ಹೀನತೆ ಇದ್ದಲ್ಲಿ, ನಿಮ್ಮ ಕಬ್ಬಿಣದ ಅಂಶದ ಮಟ್ಟವನ್ನು ಸರಿದೂಗಿಸಲು ಸಾಕಷ್ಟು ಆರೈಕೆಯನ್ನು ಪಡೆದುಕೊಳ್ಳಿ. ನಿಮ್ಮ ಚೆಕ್‌-ಅಪ್‌ ಅವಧಿಯಲ್ಲಿ ನಿಮ್ಮ ವೈದ್ಯರು ಔಷಧಿಗಳನ್ನು ಅಥವಾ ಪೂರಣಗಳನ್ನು ಬದಲಿಸಬಹುದು. ನಿಮ್ಮ ಆಹಾರವನ್ನು ಉತ್ತಮಪಡಿಸಿಕೊಳ್ಳಲು ಅವರು ಕೆಲವು ಸಲಹೆಗಳನ್ನೂ ಸಹ ನೀಡಬಹುದು. ಕಬ್ಬಿಣದ ಅಂಶಗಳ ಪೂರಣಗಳನ್ನು ನಿಮ್ಮ ವೈದ್ಯರು ಸೂಚಿಸಿದ ರೀತಿಯಲ್ಲಿಯೇ ತೆಗೆದುಕೊಳ್ಳಿ. ಪೂರಣಗಳ ರೂಪದಲ್ಲಿ ಕಬ್ಬಿಣದ ಅಂಶವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ದೇಹದಲ್ಲಿ ಅತ್ಯಧಿಕ ಕಬ್ಬಿಣವು ಸಂಗ್ರಹಗೊಳ್ಳುವ ಸಾಧ್ಯತೆಗಳೂ ಇವೆ (ಈ ಸ್ಥಿತಿಗೆ ಕಬ್ಬಿಣದ ಅಧಿಕ ಪ್ರಮಾಣ ಎಂದು ಹೆಸರು). ದೇಹದಲ್ಲಿ ಅಧಿಕ ಪ್ರಮಾಣದ ಕಬ್ಬಿಣದ ಸಂಗ್ರಹದಿಂದ ಅಂಗಾಂಗಳಿಗೆ ಹಾನಿಯಾಗುವ ಸಾಧ್ಯತೆಗಳೂ ಇವೆ. ನಿಮ್ಮ ಶರೀರದಲ್ಲಿ ಕಬ್ಬಿಣದ ಅಂಶವು ಸಹಜ ಮಟ್ಟಕ್ಕೆ ಬರುವವರೆಗೂ ನಿಮಗೆ ನಿಶ್ಯಕ್ತಿ ಮತ್ತು ಇನ್ನಿತರ ಲಕ್ಷಣಗಳು ಬಾಧಿಸಬಹುದು, ಶರೀರದಲ್ಲಿ ಕಬ್ಬಿಣದ ಅಂಶವು ಸರಿಹೋಗಲು ಸುಮಾರು ಒಂದು ತಿಂಗಳು ಹಿಡಿಯಬಹುದು. ನಿಮ್ಮಲ್ಲಿ ಏನಾದರೂ ಹೊಸ ಲಕ್ಷಣಗಳು ಕಾಣಿಸಿಕೊಂಡರೆ, ಅಥವಾ ಇರುವ ಲಕ್ಷಣಗಳು ಉಲ್ಬಣಿಸಿದರೆ ಈ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ