Skip to main content

ಕರಣಿಕ ಯೋಗಾದಿಗಳು

ಕರಣಿಕ ಯೋಗಾದಿಗಳು *ದೆಸೆ ಗ್ರಹ ಚಂದ್ರ: ಜೀವನದ ಅಚಲ ನಿರ್ಧಾರಗಳು ಫಲಕಾರಿ. ಜೀವಿತ ವೈಭವೀಕರಣ ದೇವರ ಇಚ್ಛೆಯಂತೆ, ಆಕಸ್ಮಿಕ ಅದೃಷ್ಟಗಳು, ಐಶ್ವರ್ಯ ಮತ್ತು ರಾಜ ಯೋಗಗಳು ಜೀವಿತ ಮಧ್ಯ ಭಾಗದಲ್ಲಿ ಮಾತ್ರ. ಸಂಶೋಧನೆ, ಅನ್ವೇಷಣೆ ಪ್ರಗತಿ, ಛಲದಿಂದ ಮಾತ್ರ ಸಾಧನೆಗಳು ಸಾಧ್ಯ. ಪಂಚಭೂತಗಳು ತಮ್ಮನ್ನು ಸದಾ ಸುತ್ತಿವೆ ಎಚ್ಚರಿಕೆಯಿಂದಿರಿ. *ಮಂಗಳ: ಪೂರ್ವಜರ ಆಶೀರ್ವಾದದಿಂದ ಜೀವನವು ಸದಾ ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ ಮತ್ತು ತೇಜಸ್ಸುಗಳಿಂದ ಕೂಡಿರುತ್ತವೆ. ದೇಹ ಬೆಳೆದಂತೆಲ್ಲ ಅಧಿಕ ಜ್ಞಾಪಕಶಕ್ತಿ, ಧೀರತ್ವ ರಾಜಯೋಗಗಳು ಲಭಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಜೀವನ ಕಾಮಧೇನು ಕಲ್ಪವೃಕ್ಷ. * ಬುಧ: ಜೀವನವಿಡೀ ಪಂಚೇಂದ್ರಿಯಗಳು ತಮ್ಮ ಅಧೀನದಲ್ಲಿ ಇಡಲು ಸಾಧ್ಯವಿಲ್ಲ. ಸದಾ ಚಂಚಲ ಸ್ವಭಾವ, ಕಾಮ, ಕ್ರೋಧ, ಮಧ ಮತ್ತು ಮಾತ್ಸರ್ಯಗಳು ಸದಾ ಸುತ್ತುತ್ತಿರುತ್ತವೆ. ಬುದ್ಧಿ ಬ್ರಹ್ಮಾಂಡ ದೈವಚೇತನ, ಸಮಾಜೋದ್ಧಾರ ಮತ್ತು ವಿದ್ಯಾದಾನದಲ್ಲಿ ಸಂಪೂರ್ಣ ಆಸಕ್ತಿ ಸಂಗೀತ, ನೃತ್ಯ ಕಲಾಸೇವೆಯಲ್ಲಿ ಆಸಕ್ತಿ. *ಗುರು: ವಿಶ್ವವಿಖ್ಯಾತಿ ಮಹಾಜ್ಞಾನ ಮಹಾ ವಿಜ್ಞಾನ ತಮ್ಮಲ್ಲಿ ಮೂಡಲಿದೆ. ಜೀವನದಲ್ಲಿ ಉನ್ನತ ಪದವಿ, ಆಕಸ್ಮಿಕ ಅದೃಷ್ಟಗಳು, ವಿದೇಶ ವಾಸ್ತವ್ಯ, ಉತ್ತುಂಗ ಪುರಸ್ಕಾರ, ಅಮೃತ ಸಿದ್ಧ ಯೋಗಗಳು ಆಕಸ್ಮಿಕ, ಬೆಂಕಿಯಲ್ಲಿ ಸುಟ್ಟು ಹೊರಬರುವ ಪೀನಿಕ್ ಪಕ್ಷಿಯಂತೆ ಕಾಲಗಣನಾ ಚಕ್ರ. *ಶುಕ್ರ: ಜೀವನವಿಡೀ ಸುಖಮಯ ಸಂಸಾರ ಯಾವುದೇ ಆಘಾತ ಮತ್ತು ಅವಗಢಗಳಿಗೆ ಸಿಲುಕಲಾರರು, ಸಾಗರ ಸಂಶೋಧನೆ, ಜಲ ಕ್ರೀಡೆಗಳು, ಸಂಘಟನೆ, ವಾಯುಯಾನ, ಸಂಶೋಧನೆ, ವಿಜ್ಞಾನಗಳಲ್ಲಿ ಪ್ರಗತಿ, ತಮ್ಮಲ್ಲಿ ಒಂದು ದೈವಶಕ್ತಿ ಅಡಕವಾಗಿದೆ. ಅದೇ ಶಕ್ತಿ ತಮ್ಮ ಜೀವನದ ದಾರಿ ಉದ್ದಕ್ಕೂ ಭವಿಷ್ಯ ರೂಪಿಸಲಿದೆ. *ಶನಿ: ಜೀವನದಲ್ಲಿ ಬಾಧೆಗಳ ಬಿಗಿ ಮುಷ್ಠಿಯಲ್ಲಿ ಸಿಕ್ಕಿ ಬೇಯುವುದು. ಅಚಲ ನಿರ್ಧಾರಗಳು ಫಲಕಾರಿ ರಾಷ್ಟ್ರ ಹಾಗೂ ರಾಜ್ಯದ ಉನ್ನತ ಹುದ್ದೆ ಲಭ್ಯ. ಮಹಿಳೆಯರು ಮಹಾ ವಿಜ್ಞಾನಿ ಹಾಗೂ ಸಮಾಜ ಸುಧಾರಕರು ಆಗಬಹುದು. ಸಮಾಜದ ಬಿಗಿ ಮುಷ್ಠಿಯಿಂದ ತುಂಬಾ ಎಚ್ಚರ. *ರವಿ: ನಭೋಮಂಡಲದಲ್ಲಿ ಆತ್ಮವು ಎರಡು ನಭೋ ನಿಲ್ದಾಣಗಳನ್ನು ಹೊಂದಿರುವ ನಿರಂತರ ಪ್ರಯಾಣಿಕ ಎರಡು ನಿಲ್ದಾಣಗಳು ಮಧ್ಯೆ ಸಂಭವಿಸುವ ಭೌತಿಕ ಗುಣಗಳು ಮಾತ್ರ ತಮ್ಮ ಭವಿಷ್ಯವನ್ನು ರೂಪಿಸುತ್ತಿರುತ್ತವೆ. ನಿಮ್ಮ ಭವಿಷ್ಯ ನಿರ್ಧಾರಗಳ ಮೇಲೆ ನಿಂತಿದೆ. *ಪೃಥ್ವಿ: ಕಾಲಗಣನಾಚಕ್ರದಲ್ಲಿ ಯೋಗ-ಯೋಗಾದಿಗಳು ಬರುತ್ತಲೇ ಇರುತ್ತವೆ. ಇದರಿಂದ ದೈವಚೇತನ ಜ್ಞಾನಮಾರ್ಗ ವೃದ್ಧಿಸುತ್ತಲೇ ಇರುತ್ತದೆ. ತನ್ನ ದೇಹ ತನ್ನ ಹಿಡಿತದಲ್ಲಿ ಎಂದಿಗೂ ಇರುವುದಿಲ್ಲ. ಸುಖ-ಸಂತೋಷ ಸರಿ ಸಮನಾಗಿರುತ್ತವೆ. ಜೀವನ ಇಡೀ ಯಾವುದೇ ಗ್ರಹ ದೋಷಗಳು ಇರಲಾರವು. *ಪ್ಲೂಟೋ: ಜೀವಿತ ಚಿದಂಬರ ರಹಸ್ಯಗಳು ತಮಗೆ ತಿಳಿಯುತ್ತಲೇ ಇರುತ್ತವೆ. ತಮ್ಮ ದೇಹವೇ ಒಂದು ಭವಿಷ್ಯ ದೇಹ. ದೃಢ ಮನಸ್ಸುಳ್ಳ ಸ್ವಭಾವ ಸಮಾಜ ಉದ್ದಾರಕ್ಕೆ ತಮ್ಮ ದೇಹವು ಸದಾ ಮೀಸಲು ಪಂಚ ಭೂತಗಳು ತಮ್ಮನ್ನು ಸದಾ ಉತ್ತುಂಗಕ್ಕೆ ಏರಿಸುತ್ತಿರುತ್ತವೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ