Skip to main content

ಕಡಿಮೆ ರಕ್ತದೊತ್ತಡವುಂಟಾಗಲು ಪ್ರಮುಖ 10 ಕಾರಣಗಳು

ತೀವ್ರತರದ ಮಾನಸಿಕ ಒತ್ತಡವು ಕಡಿಮೆ ರಕ್ತದೊತ್ತಡವೆಂದೆ ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇದರರ್ಥ ಪ್ರತಿ ಬಾರಿಯು ಹೃದಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಬಡಿದುಕೊಂಡಾಗ ಮತ್ತು ಆದ ನಂತರ ರಕ್ತದ ಒತ್ತಡವು ರಕ್ತ ನಾಳಗಳ ಗೋಡೆಗೆ ಅತಿಯಾಗಿ ಘರ್ಷಣೆ ಮಾಡುವುದನ್ನು ಕಡಿಮೆ ರಕ್ತದೊತ್ತಡ ಎಂದು ಹೇಳುತ್ತಾರೆ. ಈ ತೋರಿಕೆಯು ವಿಶ್ವದಲ್ಲಿ ಬಹುತೇಕ ಮಂದಿಯಲ್ಲಿ ಕಂಡುಬರುತ್ತದೆ. ನಮ್ಮಲ್ಲಿ ಹಲವಾರು ಜನರಿಗೆ ಈ ಸಮಸ್ಯೆಯು ಕಂಡುಬರುತ್ತದೆ. ಆದರೆ ನಾವು ಇದನ್ನು ತಲೆಸುತ್ತುವಿಕೆ ಮತ್ತು ನಿರ್ಜಲೀಕರಣದ ಇನ್ನೊಂದು ರೂಪವೆಂದು ಭಾವಿಸಿ ಇದರ ಕುರಿತಾಗಿ ಉದಾಸೀನ ಮಾಡುತ್ತೇವೆ. ನಿರಂತರವಾಗಿರುವ ಕಡಿಮೆ ರಕ್ತದೊತ್ತಡವು ಮೆದುಳಿನತ್ತ ಸಾಗುವ ಆಮ್ಲಜನಕ ಮತ್ತು ಇನ್ನಿತರ ಪೋಷಕಾಂಶಗಳ ಚಲನೆಯನ್ನು ತಡೆಯುತ್ತದೆ. ಇದು ತೀರಾ ಆದಾಗ ಜೀವಕ್ಕೆ ಅಪಾಯ ಮತ್ತು ಸಾವು ಸಹ ಸಂಭವಿಸಬಹುದು. ಕಡಿಮೆ ರಕ್ತದೊತ್ತಡದಿಂದ ನಿಮ್ಮ ಜೀವನದಲ್ಲಿ ಮುಂದೆ ಸಂಭವಿಸಬಹುದಾದ ಅಚಾತುರ್ಯಗಳನ್ನು ನಿಗ್ರಹಿಸಲು ನಾವು ಇಲ್ಲಿ ನಿಮಗೆ ಕಡಿಮೆ ರಕ್ತದೊತ್ತಡವುಂಟಾಗಲು ಇರುವ ಕಾರಣಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಕಡಿಮೆ ರಕ್ತದೊತ್ತಡ ಉಂಟಾಗಲು ಹಲವು ಕಾರಣಗಳು ಇರಬಹುದು. ಆದರೆ ಇಲ್ಲಿ ನಾವು ಅವುಗಳಲ್ಲಿ ಇರುವ ಸಾಮಾನ್ಯ ಕಾರಣಗಲ ಪಟ್ಟಿಯನ್ನು ನೀಡಿದ್ದೇವೆ. ಕಡಿಮೆ ರಕ್ತದೊತ್ತಡವುಂಟಾಗಲು ಇರುವ ಕಾರಣಗಳು 1. ನಿರ್ಜಲೀಕರಣ ನಿರ್ಜಲೀಕರಣವು ನಮ್ಮ ದಿನನಿತ್ಯದಲ್ಲಿ ಎದುರಾಗುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಈ ನಿರ್ಜಲೀಕರಣದ ಹಿಂದೆ ಬಹುದಿನಗಳಿಂದ ಕಾಡುತ್ತಿರುವ ವಾಕರಿಕೆ, ವಾಂತಿ ಅಥವಾ ಡಯೇರಿಯಾ ಸಮಸ್ಯೆ ಇರಬಹುದು. ಮತ್ತೊಂದು ಕಾರಣ ಅತಿಯಾಗಿ ವ್ಯಾಯಾಮ ಮಾಡುವುದು, ಅತಿಯಾಗಿ ಬೆವರುವುದು ಮತ್ತು ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಲ್ಲುವ ಕಾರಣದಿಂದ ಸಹ ನಿರ್ಜಲೀಕರಣದ ಸಮಸ್ಯೆ ಕಾಡಬಹುದು. 2. ರಕ್ತ ಸ್ರಾವ ರಕ್ತಸ್ರಾವವು ಅಧಿಕವಿದ್ದರು ಅಥವಾ ಕಡಿಮೆಯಿದ್ದರು ಅದು ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ. ಈ ರಕ್ತಸ್ರಾವವು ಅಪಘಾತ, ಶಸ್ತ ಚಿಕಿತ್ಸೆ ಅಥವಾ ಇನ್ನಿತರ ಕಾರಣಗಳಿಂದ ಸಂಭವಿಸಬಹುದು. 3. ಅವಯವಗಳಲ್ಲಿ ಬಾವು ನಮ್ಮ ದೇಹದ ಅಂಗಾಂಗಳಲ್ಲಿ ತೀವ್ರ ತರದ ಬಾವು ಕಾಣಿಸಿಕೊಂಡಾಗ ಸಹ ಕಡಿಮೆ ರಕ್ತದೊತ್ತಡವು ಸಂಭವಿಸುತ್ತದೆ. ಇದು ಹೇಗೆ ಸಾಧ್ಯ? ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಯೋಚಿಸಿ ನಿಮ್ಮ ದೇಹದ ಅಂಗದಲ್ಲಿ ಒಂದು ಬಾವು ಆಗಿದೆ. ಅದಕ್ಕೆ ರಕ್ತ ಪರಿಚಲನೆಯಾಗುವಾಗ, ಆ ರಕ್ತವು ಬಾವಿನಲ್ಲಿರುವ ಜೀವಕೋಶಗಳ ಜೊತೆ ಸಂಪರ್ಕ ಪಡೆದು, ತನ್ನ ಶಕ್ತಿಯನ್ನು ಕುಂದಿಸಿಕೊಳ್ಳುತ್ತದೆ. 4.ದುರ್ಬಲವಾದ ಹೃದಯ ಸ್ನಾಯುಗಳು ನಿಮಗೆ ದುರ್ಬಲವಾದ ಹೃದಯ ಸ್ನಾಯುಗಳು ಇದ್ದರೆ, ನಿಮಗೆ ಕಡಿಮೆ ರಕ್ತದೊತ್ತಡ ಬರುವ ಸಾಧ್ಯತೆ ಇರುತ್ತದೆ. ದುರ್ಬಲ ಹೃದಯವು ಹೃದಯಾಘಾತದ ಅಪಾಯವನ್ನು ಎದುರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವು ಕ್ಷೀಣವಾಗಿರುತ್ತದೆ. ಇದರಿಂದಾಗಿ ಹಲವು ಬಾರಿ ಲಘು ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ ಅಥವಾ ವೈರಸ್‍ಗಳ ಪ್ರಭಾವದಿಂದ ಹೃದಯದ ಸ್ನಾಯುಗಳಲ್ಲಿ ನಂಜು ಉಂಟಾಗುತ್ತದೆ. 5. ಹೃದಯ ಸ್ತಂಭನ ಹೃದಯ ಸ್ತಂಭನವು ಹೃದಯಾಘಾತದಿಂದ ಸಂಭವಿಸುತ್ತದೆ ಅಥವಾ ಅತೆರೊಸ್ಕೆಲೆರೊಸಿಸ್‍ನಿಂದ ಸಂಭವಿಸುತ್ತದೆ. ಹೃದಯ ಸ್ತಂಭನದಲ್ಲಿ ಹೃದಯದಲ್ಲಿ ವಿದ್ಯುತ್ತನ್ನು ಉತ್ಪಾದಿಸುವ ವಿಶೇಷ ಕೋಶಗಳು ಹಾಳಾಗುತ್ತವೆ ಮತ್ತು ದೇಹದ ಇನ್ನಿತರ ಭಾಗದಿಂದ ಹೃದಯಕ್ಕೆ ತಲುಪ ಬೇಕಾದ ವಿದ್ಯುತ್ ಸಂಕೇತಗಳು ಸ್ಥಗಿತಗೊಳ್ಳುತ್ತವೆ. ಇವು ಮುಂದೆ ಸಂಪರ್ಕವನ್ನು ಕಡಿದುಕೊಂಡು ತಟಸ್ಥಗೊಳ್ಳುತ್ತವೆ. 6. ಅಸಾಮಾನ್ಯ ಹೃದಯದ ಬಡಿತದ ಪ್ರಮಾಣ ಯಾವಾಗ ಹೃದಯದ ಬಡಿತವು ಎಂದಿನಂತಿರುವುದಿಲ್ಲವೊ ಅಥವಾ ಹೆಚ್ಚಾಗಿರುತ್ತದೊ, ಆಗ ಹೃದಯದ ಬಡಿತವು ಊಹೆಗು ನಿಲುಕದಷ್ಟು ವೇಗವಾಗಿ ಬಡಿದುಕೊಳ್ಳುತ್ತದೆ. ಈ ವೇಗದಿಂದಾಗಿ ಉಂಟಾಗುವ ಹೃದಯನಾಳಗಳ ಅಸಾಮಾನ್ಯ ಸಂಕೋಚನವು ಅಗತ್ಯ ಪ್ರಮಾಣದ ರಕ್ತವನ್ನು ತೆಗೆದೊಕೊಳ್ಳಲು ಮತ್ತು ಪಂಪ್ ಮಾಡಲು ವಿಫಲವಾಗುತ್ತದೆ. 7. ಬಸಿರು ನೀವು ಒಂದು ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದರೆ, ನಿಮ್ಮ ರಕ್ತದೊತ್ತಡವು ಕಡಿಮೆಯಾಗುತ್ತದೆ. ಆದರು ಈ ಅವಧಿಯಲ್ಲಿ ಇದು ಸಾಮಾನ್ಯ. ಆದರೆ ಹಾಗೆಂದು ಇದನ್ನು ಉದಾಸೀನ ಮಾಡದೆ ಮೊದಲು ತಙ್ಞರ ಬಳಿ ತಪಾಸಣೆ ನಡೆಸಿ. 8. ತೀವ್ರ ತರದ ಸೊಂಕು ನಂಜು ಅಥವಾ ತೀವ್ರ ತರದ ಸೊಂಕು ಸಹ ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ. ಬ್ಯಾಕ್ಟೀರಿಯಾಗಳು ಶ್ವಾಸಕೋಶದ ಮೂಲಕ ಅಥವಾ ಅಬ್ಡೊಮೆನ್ ಮೂಲಕ ರಕ್ತದೊಳಗೆ ಪ್ರವೇಶಿಸಿದಾಗ ಇದು ಸಂಭವಿಸುತ್ತದೆ. ಈ ಬ್ಯಾಕ್ಟೀರಿಯಾಗಳು ರಕ್ತದಲ್ಲಿ ವಿಷಕಾರಿಗಳನ್ನು ಉತ್ಪಾದಿಸಿ, ರಕ್ತ ನಾಳಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತವೆ. ಅಲ್ಲದೆ ಇವು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತ ಸಾಗುತ್ತವೆ. 9. ಅಪೌಷ್ಟಿಕತೆ ನಾವೆಲ್ಲರು ಆರೋಗ್ಯವಾಗಿರಲು ನಮಗೆ ಪೌಷ್ಟಿಕಾಂಶಗಳ ಅವಶ್ಯಕತೆ ಇದೆ. ಕೇವಲ ಸ್ವಲ್ಪ ಮಾತ್ರ ಪೌಷ್ಟಿಕಾಂಶದ ಏರು ಪೇರು ನಿಮ್ಮ ದೇಹದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿ, ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತದೆ. 10. ಎಂಡೋಕ್ರೈನ್ ಸಮಸ್ಯೆಗಳು ಹೈಪೊಥೈರಾಯ್ಡಿಸಂ, ಪ್ಯಾರಾಥೈರಾಯಿಡ್ ಸಮಸ್ಯೆ, ಅಡ್ರೆನಲ್ ಕೊರತೆ, ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ ಮತ್ತು ಮಧುಮೇಹಗಳಂತಹ ಎಂಡೋಕ್ರೈನ್ ಸಮಸ್ಯೆಗಳು ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತವೆ. ಎಂಡೋಕ್ರೈನನ್ನು ಉತ್ಪಾದಿಸುವ ಹಾರ್ಮೋನ್‍‍ಗಳಲ್ಲಿ ಕೆಲವೊಂದು ಸಮಸ್ಯೆ ಉಂಟಾಗಿ ಈ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳೆಲ್ಲ ಸೇರಿ ಕಡಿಮೆ ರಕ್ತದೊತ್ತಡವನ್ನುಂಟು ಮಾಡುತ್ತವೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ