Skip to main content

ಜನ್ಮ ಕುಂಡಲಿಯಲ್ಲಿ ವಿವಾಹಯೋಗ

ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಿಂದ ಸತಿ ಪತಿಯರ ವಿಚಾರವನ್ನು ಪರಿಶೀಲಿಸಬೇಕು. *ಸಪ್ತಮೇಶನು ಶುಭ ಗ್ರಹವಾಗಿದ್ದರೆ ಶುಕ್ರನು ಸ್ವಕ್ಷೇತ್ರ ಅಥವ ಉಚ್ಚದಲ್ಲಿದ್ದರೆ ಜಾತಕನ ವಿವಾಹವು ೧೯ನೇ ವಯಸ್ಸಿನಲ್ಲಾಗುತ್ತದೆ *ರವಿಯು ಸಪ್ತಮದಲ್ಲಿದ್ದು ಶುಕ್ರನಿಂದ ಯುಕ್ತವಾಗಿದ್ದರೆ ೨೧ನೇ ವರ್ಷದೊಳಗೆ ವಿವಾಹವಾಗುತ್ತದೆ. *ಲಗ್ನ ಕುಂಡಲಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಟುಂಬ ಸ್ಥಾನ ವೆಂದು ಕರೆಯುತ್ತಾರೆ. *ಲಗ್ನದ ಸಪ್ತಮ ಸ್ಥಾನವನ್ನು ಪತ್ನಿಸ್ಥಾನ ವೆನ್ನುವರು ೨ ಮತ್ತು ೭ನೇ ಸ್ಥಾನದಲ್ಲಿ ಶುಭಗ್ರಹಗಳು ಇದ್ದರೆ ವಿವಾಹ ಜೀವನ ಸುಖವಾಗಿರುತ್ತದೆ ಗುರು ಶುಕ್ರ ಲಗ್ನ ಅಥವ ಸಪ್ತಮದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ. *೭ನೇ ಸ್ಥಾನಾಧಿಪತಿ ೧೧ನೇಲಾಭಸ್ಥಾನದಲ್ಲಿದ್ದರೆ ೨೦ನೇ ವರ್ಷಕ್ಕೆ ವಿವಾಹವಾಗುತ್ತದೆ ಎಂದು ತಿಳಿಯಬೇಕು. *ಶುಕ್ರ ಮತ್ತು ಏಕಾದಶದಲ್ಲಿರುವ ಸಪ್ತಮೇಶರು ಶುಭದಯಕವಾಗಿದ್ದರೆ ಶುಭಫಲ,ನೀಚರಾದರೆ ಅಶುಭಫಲ ವಿವಾಹವೇ ಆಗುವುದಿಲ್ಲವೆಂದು ಹೇಳಬೇಕು. *ಶುಕ್ರನು ಕೇಂದ್ರದಲ್ಲಿದ್ದು ಲಗ್ನಾಧಿಪತಿಯು ಕುಂಭ,ಮಕರ ರಾಶಿಯಲ್ಲಿದ್ದರೆ ೨೧ನೇ ವರ್ಷಕ್ಕೆ ವಿವಾಹವಾಗುತ್ತದೆ,ಎಂದು ತಿಳಿಯಬೇಕು. *ಕುಟುಂಬಸ್ಥಾನ,ಸಪ್ತಮಸ್ಥಾನ,ಶುಕ್ರಸ್ಥಾನ ಲಗ್ನೇಶಸ್ಥಾನಗಳಲ್ಲಿ ವಿವೇಚಿಸಬೇಕು.ಕೇಂದ್ರದಲ್ಲಿ ಶುಕ್ರನಿಂದ ಅವನ ೭ನೇಸ್ಥಾನದಲ್ಲಿ ಶನಿ ಇದ್ದರೆ ೨೯ನೇ ವರ್ಷಕ್ಕೆ ವಿವಾಹಯೋಗ ಎಂದು ನಿರ್ದರಿಸಬೇಕು. *ಚಂದ್ರನು ಸಪ್ತಮದಲ್ಲಿದ್ದು ಏಕಾಕ್ಷಿಯು (ಶುಕ್ರ)೭ನೇ ಸ್ಥಾನದಲ್ಲಿದ್ದು೭ನೇ ಸ್ಥಾನದಲ್ಲಿ ಶನಿಗ್ರಹ ಇದ್ದರೆ ೨೮ನೇ ವರ್ಷಕ್ಕೆ ವಿವಾಹ ಆಗುವುದೆಂದು ನಿರ್ದರಿಸಬೇಕು. *ಕುಟುಂಬ ಸ್ಥಾನಾಧಿಪತಿಯು(ದ್ವಿತಿಯಾದಿಪತಿಯು)ಏಕಾದಶದಲ್ಲಿದ್ದರೆ ಲಗ್ನೇಶನು ದಶಮದಲ್ಲಿದ್ದರೆ ೨೮ನೇ ವಯಸ್ಸಿನಲ್ಲಿ ವಿವಾಹವಾಗುತ್ತದೆ ಎಂದು ತಿಳಿಯಬೇಕು. *ಕುಟುಂಬಸ್ಥಾನಾದಿಪತಿ೧೧ರಲ್ಲಿ ಲಾಭ ಸ್ಥಾನಾಧಿಪತಿ ಕುಟುಂಬಸ್ಥಾನದಲ್ಲಿ ಪರಿವರ್ತನೆ ಗೊಂಡಿದ್ದರೆ ೨೩ನೇ ವರ್ಷದಲ್ಲಿ ವಿವಾಹವಾಗುತ್ತದೆ. *ಅಷ್ಟಮದಲ್ಲಿ ಶುಕ್ರ ಅಷ್ಟಮಾದಿಪತಿ ಮಂಗಳನಿಂದ ಮುಕ್ತನಾಗಿದ್ದರೆ ೨೭ನೇ ವರ್ಷದಲ್ಲಿ ವಿವಾಹವಾಗುತ್ತದೆ. *೭ನೇ ಮನೆಯ ಅಧಿಪತಿ ವ್ಯಯಸ್ಥಾನ,ಸಪ್ತಮಸ್ಥಾನದ ರಾಶಿಯ ನವಾಂಶದಲ್ಲಿ ಲಗ್ನವಿದ್ದರೆ ೩೩ರಿಂದ ೩೬ನೆಯ ವರ್ಷದಲ್ಲಿ ವಿವಾಹವಾಗುತ್ತದೆ. *ನವಾಂಶ ಕುಂದಲಿಯ ಲಗ್ನದಲ್ಲಿ ಶುಕ್ರನಿದ್ದು ನವಾಂಶದ ಅಷ್ಟಮಭಾವದ ರಾಶಿ ಲಗ್ನ ಕುಂಡಲಿಯ ಸಪ್ತಮ ಸ್ಥಾನವಾದರೆ ೩೨ ರಿಂದ ೩೫ನೇ ವಯಸ್ಸಿನಲ್ಲಿ ವಿವಾಹವಾಗುತ್ತದೆಂದು ತಿಳಿಯಬೇಕು. *ವ್ಯಯಸ್ಥಾನದಲ್ಲಿ ರಾಹು,ಪಂಚಮದಲ್ಲಿ ಶುಕ್ರನಿದ್ದರೆ ೪೦ರಿಂದ ೪೩ಕ್ಕೆ ವಿವಾಹವೆಂದು ತಿಳಿಯಬೇಕು. *ದ್ವಿತೀಯ ಮತ್ತು ಸಪ್ತಮ ಭಾವಗಳಿಂದ ವಿವಾಹ ನಿಶ್ಚಯ ಮಾಡಬೇಕು.ಶುಕ್ರನಿದ್ದ ರಾಶಿಯಿಂದ ಸಪತಮದಲ್ಲಿ ಶುಕ್ರನಿರಬೇಕು.ಕುಂಡಲಿಯಲ್ಲಿ ಶುಕ್ರನಿರುವ ರಾಶಿಯ ದ್ವಿತೀಯದಲ್ಲಿ ಶುಕ್ರನಿರಬೇಕು *ಶುಕ್ರ ಚಂದ್ರರು ಒಂದೇ ರಾಶಿಯಲ್ಲಿರಬೇಕು. *ಸಪ್ತಮೇಶನಿದ್ದ ರಾಶಿಯಿಂದ ೭ನೇ ಸ್ಥಾನದಲ್ಲಿ ಶುಕ್ರನಿರಬೇಕು. ಈ ರೀತಿ ಜಾತಕದಲ್ಲಿ ಲಗ್ನ ಕುಂಡಲಿಯಲ್ಲಿ ಗ್ರಹಗಳು ಇದ್ದರೆ ಶುಭಕಾರ್ಯಗಳು ಬೇಗನೆ ನೆರವೇರುತ್ತವೆ. -ಡಿ ಎಸ್ ಮಹೇಶ್ ಕುಮಾರ್ ಶಾಸ್ತ್ರಿ,ಹಿರಿಯೂರು

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ