Skip to main content

ಚಕ್ರದೀಪಾರಾದನೆ ಪೂಜಾವಿಧಾನ ಮತ್ತು ಉಪಯೋಗ

ದಿಕ್ಕು,ಅದಿದೇವತೆ,ಎಣ್ಣೆ,ದೇವತಾಮಂತ್ರ,ಯಾವದೋಷನಿವಾರಣೆಗಾಗಿ ಇತ್ಯಾದಿ ವಿವರ ಪೂರ್ವ-ಲಕ್ಷ್ಮಿ-ತುಪ್ಪ-ಓಂ ಮಹಾಲಕ್ಷ್ಮಿಯಾಯೈ ನಮಃ(ಹಣಕಾಸು,ಸಾಲಬಾದೆ,ಸುಖ ಸೌಖ್ಯ) ಆಗ್ನೇಯ-ಖಡ್ಗದಾರಿಣಿ-ಹಿಪ್ಪೆ ಎಣ್ಣೆ-ಓಂ ಖಡ್ಗಧಾರಿಣಿಯೇ ನಮಃ(ಜಾತಕದೋಷ,ನವ್ಗ್ರಹದೋಷ) ದಕ್ಷಿಣ-ವಾರಿಣೆ-ಎಳ್ಳೆಣ್ಣೆ-ಓಂ ವಾರಿಣಿಯೇ ನಮಃ (ಶನಿ ದೋಷನಿವಾರಣೆ,ಪೀಡೆ.ಪಿಶಾಚಿ ದೋಷನಿವಾರಣೆ) ನೈರುತ್ಯ-ಮೃಗವಾಹಿನಿ-ಕೊಬ್ಬರಿ ಎಣ್ಣೆ-ಓಂ ಮೃಗವಾಹಿನಿಯೇ ನಮಃ(ಸಂತಾನದೋಷ,ಸರ್ಪದೋಷ,ಕುಜದೋಷನಿವಾರಣೆ) ಪಶ್ಚಿಮ-ಕೌಮಾರಿ-ಅರಳೆಣ್ಣೆ-ಓಂ ಕೌಮಾರಿಯೇ ನಮಃ (ಪಿತೃದೋಷ,ಕುಲದೇವತಾ ಆಶ್ರೀರ್ವಾದಕ್ಕಾಗಿ ವಾಯುವ್ಯ-ಶೂಲಧಾರಿಣಿ-ಸಾಸಿವೆ ಎಣ್ಣೆ-ಓಂ ಶೂಲಧಾರಿನಿಯೇ ನಮಃ (ಶತೃ ಸಂಹಾರ,ಶತೃನಾಶಕ್ಕಾಗಿ) ಉತ್ತರ-ಬ್ರಾಹ್ಮಿ-ಅಕ್ಕಿತೌಡಿನ ಎಣ್ಣೆ-ಓಂ ಬ್ರಾಹ್ಮಿಯಾಯೈ ನಮಃ (ವಿದ್ಯೆ,ಬುದ್ದಿ,ಅನ್ನದ ಕೊರತೆ ನಿವಾರಣೆಗಾಗಿ,ಕೀರ್ತಿ ಸಂಪಾದನೆಗಾಗಿ) ಈಶಾನ್ಯ-ಸಿಂಹವಾಹಿನಿ-ಬೇವಿನ ಎಣ್ಣೆ-ಓಂ ಸಿಂಹವಾಹಿನಿಯೇ ನಮಃ(ವೈರಿ ನಾಶ,ಶಕ್ತಿ ದೇವತೆಗಳ ಕೃಪೆಗಾಗಿ) ಮದ್ಯೆ-ವಿಜಯದುರ್ಗ-ಹೊಂಗೇ ಎಣ್ಣೆ-ಓಂ ದುಂದುಂ ವಿಜಯದುರ್ಗಾಯಾಯೈ ನಮಃ (ಸಕಲೈಶ್ವರ್ಯ ಪ್ರಾಪ್ತಿಗಾಗಿ) ತುಪ್ಪ ಮತ್ತು ಹೊಂಗೆ ಎಣ್ಣೆ ಮದ್ಯೆ ವೈಷಣವಿದೇವಿ(ದುರ್ಗ)ಮೋಕ್ಷ ದಾಯಿನಿ-ಎಲ್ಲಾ ಎಣ್ಣೆ- ಓಂ ವೈಷ್ಣವಿದೇವಿಯೇ ನಮಃ (ಮುಕ್ತಿ ಸಂಪಾದನೆಗಾಗಿ) ಈ ಎಲ್ಲಾ ದೀಪಗಳ ಆರಾಧನೆಯನ್ನು ದಶದೇವತಾ ಚಕ್ರದೀಪಾರಾಧನೆ ಎಂದು ಕರೆಯುತ್ತಾರೆ ಈ ದೀಪಾರಾಧನೆ ಮಾಡುವ ವಿಧಾನ ಈ ರೀತಿಯಾಗಿದೆ ಮೊದಲು ಎಲ್ಲಾ ರೀತಿಯ ೯ ಬಗೆ ಎಣ್ಣೆಯನ್ನು ತಂದಿಟ್ಟುಕೊಳ್ಳಬೇಕು ನಂತರ ೧೦ ಮಣ್ಣಿನ ದೀಪಗಳನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು ನಂತರ ಅವುಗಳಿಗೆ ಬತ್ತಿ,ಅಕ್ಷತೆ ೯ಬಗೆಯ ಹೂಗಳನ್ನು ಸಿದ್ದಪದಿಸಿಕೊಂಡು ಚಕ್ರದೀಪಾರಾಧನ ಮಂಡಲ ಬರೆದು ದೀಪಗಳಿಗೆ ಆಯಾದಿಕ್ಕಿಗನುಗುಣವಾಗಿ ಎಣ್ಣೆ ಹಾಕಿ ಸಿದ್ದಮಾಡಿ ಮೊದಲು ಪೂರ್ವದ ದೀಪವನ್ನು ಪ್ರಾರ್ಥನೆಯೊಂದಿಗೆ ಹಚ್ಚಬೇಕು ಅದರಿಂದ ಆಗ್ನೇಯದ ದೀಪವನ್ನು ಹಚ್ಚಬೇಕು ಈಗೆ ಕ್ರಮವಾಗಿ ದಕ್ಷಿಣ-ನೈರುತ್ಯ-ಪಶ್ಚಿಮ-ವಾಯುವ್ಯ-ಉತ್ತರ-ಈಶಾನ್ಯ-ಮದ್ಯ(ವಿಜಯ)ನಂತರ ಅದರ ಮುಂದಿನ ಎಲ್ಲಾ ಎಣ್ಣೆಯದೀಪ ಹಚ್ಚಬೇಕು ನಂತರ ವಿಜಯದುರ್ಗಾ ಮುದ್ರೆಯೊಂದಿಗೆ (ಹೆಬ್ಬೆರಳಿನಿಂದ ಕಿರುಬೆರಳು ಮತ್ತು ಉಂಗುರಬೇರಳನ್ನು ಅದುಮಿಕೊಂಡು ತೋರು ಬೆರಳು ಮತ್ತು ಮದ್ಯ ಬೆರಳನ್ನು ವಿ ಆಕಾರದಲ್ಲಿ ಹಿಡಿದುಕೊಂಡು ಎರಡೂ ಕೈಗಳನ್ನು ವಿ ಆಕಾರದಲ್ಲಿ ಅದೇ ಮುದ್ರೆ ಯಲ್ಲಿ ಇಟ್ಟುಕೊಂಡು ೧೦೮ ಸಲ ವಿಜಯದುರ್ಗಾ ಮಂತ್ರ ಓಂ ದುಂ ದುಂ ವಿಜಯದುರ್ಗಾಯಾಯೈ ನಮಃ ಎಂದುಹೇಳಿ ಕನಿಷ್ಟ ಒಂದು ಗಂಟೆ ಕಾಲ ಪೂಜೆಮಾಡುವುದು.ಪೂಜೆಯನ್ನು ಶುಕ್ರವಾರ ಸಂಜೆ ಅಥವ ಅಮಾವಾಸ್ಯೆ/ಹುಣ್ಣಿಮೆ ದಿನ ಗೋದೂಳಿ ಸಮಯದಲ್ಲಿ ಮಾಡಿದರೆ ನಿಮಗೆ ಖಚಿತವಾಗಿ ಫಲ ಸಿಗುತ್ತದೆ. ಲಕ್ಷ್ಮಿ ತಂತ್ರ ಸಾರದಲ್ಲಿ ಈ ಉಲ್ಲೇಖವಿದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ