*ಓಂ ವಿಶ್ವಕರ್ಮಣೇನಮಃ ವಾಸ್ತುದೇವತಾಭ್ಯೋನಮಃ*
ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು
1.ಅರಿಸಿನ
2.ಕುಂಕುಮ
3.ಹೂವು
4.ಬಾಳೆಹಣ್ಣು
5.ಎಲೆ
6.ಅಡಿಕೆ
6.ತೆಂಗಿನಕಾಯಿ
7.ನವದಾನ್ಯದಗಂಟು ೯ (ಅಕ್ಕಿ,ಗೋಧಿ.ತುಗರಿ,ಹೆಸರು,ಕಡಲೆ,ಅವರೆ,ಎಳ್ಳು,ಉದ್ದು,ಉರುಳಿ)
8.ಪಂಚರತ್ನ(ಚಿನ್ನ,ಬೆಳ್ಳಿ,ತಾಮ್ರ,ಮುತ್ತು,ಹವಳ)
9.ಪಂಚಾಮೃತ(ಹಾಲು,ಮೊಸರು,ಜೇನು,ಕಲ್ಲುಸಕ್ಕರೆ,ಆಕಳತುಪ್ಪ)
10.ಬಾಳೆ ಎಲೆ
11.ಒಂದು ಕಳಸ(ತಾಮ್ರ ಅಥವ ಬೆಳ್ಳಿ ಚಂಬಿನ ಎಲೆ ಮತ್ತು ತೆಂಗಿನಕಾಯಿ,ಕಳಸದಸಾಮಾನುಗಳು)
12.ನೈವೇದ್ಯ(ಅವಲಕ್ಕಿ,ಹೆಸರುಬೇಳೆ,ಬಾಳೆಹಣ್ಣಿನ ರಸಾಯನ ಮಾಡಬಹುದು)
ಪೂಜೆ ಮಾಡುವವಿದಾನ:-
ವಿನಾಯಕನನ್ನು ಪ್ರತಿಸ್ಠಾಪಿಸಿ ಕಳಸವನ್ನಿಟ್ಟು ಒಂದು ನಾಲ್ಕು ಬಾಗ ಸಮನಾಗಿರುವ ಕಲ್ಲನ್ನು ತೊಳೆದುಕೊಂಡು ಸೈಟಿನ ಈಶಾನ್ಯಭಾಗವನ್ನು ಶುಚಿಗೊಳಿಸಿ ಕಲ್ಲನ್ನು ನಿಲ್ಲಿಸಿ ಅದರ ಪಕ್ಕದಲ್ಲಿ ಎಲೆಯಮೇಲೆ ಪಂಚಲೋಹ,ರತ್ನವನ್ನು ಇಟ್ಟು ಕೆಲಸದಸಾಮಾನುಗಳಾದ ಗುದ್ದಲಿ ಆರೆ ಪಿಕಾಶಿ ಇತ್ಯಾದಿಗಳನ್ನು ಇಟ್ಟು ವಿನಾಯಕನ ಪ್ರಾಥನೆಯೊಂದಿಗೆ ಆರಂಬಿಸಿ ತದನಂತರ ಮನೆದೇವರ ಪ್ರಾರ್ಥನೆ ಹಾಗು ವಾಸ್ತುದೇವನ ದ್ಯಾನ ಆವಾಹನಾದಿ ಶೋಡಶೋಪಚಾರ ಪೂಜೆಯನ್ನು ಮಾಡಿ ನಂತರ ಹಾಲು ತುಪ್ಪವನ್ನು ಅತ್ತಿ ಸೊಪ್ಪು,ಅಂಕೋಲೆ ಸಮೇತವಾದ ಕಲ್ಲಿಗೆ ಮನೆಯವರು ಬಿಡುವುದು.ನಂತರ ಐದುಜನ ಹಿರಿಯ ಮುತೈದೆಯರಿಗೆ ಅರಿಸಿನ ಕುಂಕುಮ ತಾಂಬೂಲನೀಡಿ ಅವರ ಆಶೀರ್ವಾದ ಪಡೆದು ಆನಂತರ ಅವರಿಂದ ಕಲ್ಲಿಗೆ ಪೂಜೆಮಾಡಿಸಿ ಹಾಲುತುಪ್ಪ ಬಿಡಿಸುವುದು.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments