Skip to main content

ಅಪರಿಚಿತ ಗ್ರಹಗಳ ಮಹತ್ವ

ಭಾರತೀಯ ಜ್ಯೋತಿಷ್ಯಶಾಸ್ತ್ರದ ಅನುಸಾರ ಏಳು ಪ್ರಮುಖ ಗ್ರಹಗಳು ಮತ್ತು ಎರಡು ಛಾಯಾ ಗ್ರಹಗಳು ಜನ ಜೀವನದ ಮೇಲೆ ಪ್ರಭಾವ ಬೀರುವುದನ್ನು ಸ್ವೀಕರಿಸಲಾಗಿದೆ. ಪಾಶ್ಚಾತ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಏಳು ಗ್ರಹಗಳು ಹೊರತಾಗಿ ಹರ್ಷಲ್, ಪ್ಲೂಟೊ ಮತ್ತು ನೆಪ್ಚೂನ್ ಮೂರು ಗ್ರಹಗಳನ್ನು ಪರಿಗಣಿಸಲಾಗುತ್ತಿದೆ. ಆಳವಾದ ವಿಶ್ಲೇಷಣೆ ಮತ್ತು ಅಧ್ಯಯನದ ನಂತರ ಈ ಗ್ರಹಗಳು ಮಾನವ ಜೀವನದ ಮೇಲೆ ಬೀರುವ ಪ್ರಭಾವವನ್ನು ಒಪ್ಪಿಕೊಳ್ಳಬೇಕಾಗಿದೆ. *ಜನ್ಮ ಕುಂಡಲಿಯಲ್ಲಿ ನೆಪ್ಚೂನ್ ಮೀನ ರಾಶಿಗತನಾಗಿ ಯಾವುದೇ ಭಾವದಲ್ಲಿದ್ದರೂ ಅದರ ಶುಭತ್ವವು ಪ್ರಾಪ್ತವಾಗುತ್ತದೆ. *ನೆಪ್ಚೂನ್‌ದೊಂದಿಗೆ ಗುರುವೂ ಇದ್ದರೆ ಆ ಭಾವದ ಶುಭತ್ವವು ವೃದ್ಧಿಯಾಗುತ್ತದೆ. *ಪಂಚಮ ಭಾವದಲ್ಲಿ ನೆಪ್ಚೂನದೊಂದಿಗೆ ಮಂಗಲ ಅಥವಾ ರಾಹುವಿದ್ದರೆ ಸಂತಾನ ಸಂಬಂಧಿ ಕಷ್ಟವಿರುತ್ತದೆ. ಸ್ತ್ರೀಯರೇ ಜಾತಕದಲ್ಲಿ ಈ ಯೋಗವು ಗರ್ಭಪಾತ ಮಾಡಿಸುತ್ತದೆ. *ನೀಚ ರಾಶಿಯ ಸಪ್ತಮೇಶನೊಂದಿಗೆ ನೆಪ್ಚೂನ್ ಇದ್ದರೆ ದಾಂಪತ್ಯ ಸುಖ ಕಷ್ಟವಾಗುತ್ತದೆ. *ನೆಪ್ಚೂನ್ ಮತ್ತು ಶನಿ ಮಕರ ಅಥವಾ ಕುಂಭ ರಾಶಿಯಲ್ಲಿದ್ದು ದಶಮ ಭಾವದಲ್ಲಿದ್ದರೆ ವ್ಯವಹಾರದಲ್ಲಿ ಸಫಲತೆಯನ್ನು ನೀಡುತ್ತದೆ. ಆದರೆ ಪಿತೃ ಸುಖದಲ್ಲಿ ಕೊರತೆಯಾಗುತ್ತದೆ. *ದ್ವಾದಶ ಭಾವದಲ್ಲಿ ಕೇವಲ ನೆಪ್ಚೂನ್ ಇದ್ದರೆ ಅನೇಕ ಪ್ರಕಾರದ ಶುಭಫಲಗಳಿರುತ್ತವೆ. ಪಾಪ ಗ್ರಹದಿಂದ ಗ್ರಸ್ತವಾಗಿದ್ದರೆ ಧನಾಭಾವವಿರುತ್ತದೆ. *ಯಾವುದೇ ಭಾವದಲ್ಲಿ ನೆಪ್ಚೂನ್ ಶುಕ್ರ-ಬುಧ-ಚಂದ್ರ ಅಥವಾ ಶುಕ್ರ-ಚಂದ್ರ-ಗುರುಗಳ ಯುತಿಯಲ್ಲಿದ್ದರೆ ನಿಶ್ಚಯವಾಗಿ ರಾಜ ಯೋಗವಿರುತ್ತದೆ. *ಪುರುಷರ ಕುಂಡಲಿಯಲ್ಲಿ ಹರ್ಷಲ್ ಗ್ರಹವು ಚಂದ್ರನ ಯುತಿಯಲ್ಲಿದ್ದರೆ ದಾಂಪತ್ಯ ಜೀವನ ಹಾಳಾಗುತ್ತದೆ. ವಿಶೇಷವಾಗಿ ಸಪ್ತಮ ಭಾವದಲ್ಲಿ ಈ ಯುತಿ ಇದ್ದರೆ ಹೆಚ್ಚು ಋಣಾತ್ಮಕ ಪ್ರಭಾವವಿರುತ್ತದೆ. *ಸ್ತ್ರೀಯರ ಕುಂಡಲಿಯಲ್ಲಿ ಹರ್ಷಲ್ ಗ್ರಹವು ಸೂರ್ಯನೊಂದಿಗಿದ್ದರೆ ದಾಂಪತ್ಯ ಜೀವನ ಕಷ್ಟವಾಗುತ್ತದೆ. ಸಪ್ತಮ ಭಾವದಲ್ಲಿ ಈ ಯುತಿಯು ಹೆಚ್ಚು ಕಷ್ಟಕಾರಕವಾಗುತ್ತದೆ. *ಶನಿ ಹರ್ಷಲ್ ಯುತಿಯು ಯಾವ ಭಾವದಲ್ಲಿದ್ದರೂ ಜಾತಕನ ಮಾನ ಸನ್ಮಾನಗಳಲ್ಲಿ ಕೊರತೆಯಾಗುತ್ತದೆ. ದಶಮ ಭಾವದಲ್ಲಿ ಈ ಯುತಿಯು ಅಪಯಶಕಾರಕವಿರುತ್ತದೆ. *ತೃತೀಯ ಅಥವಾ ಏಕಾದಶ ಸ್ಥಾನದಲ್ಲಿ ಏಕಾಂಗಿಯಾಗಿ ಕುಳಿತಿರುವ ಹರ್ಷಲ್ ಜಾತಕನಿಗೆ ಬಹಳ ಧನ ಲಾಭ ಕೊಡುತ್ತಾನೆ. ಅಣ್ಣ ತಮ್ಮಂದಿರ, ಪರಿವಾರದವರ ಸುಖ ಪ್ರಾಪ್ತವಾಗುತ್ತದೆ. *ಸ್ತ್ರೀಯರ ಕುಂಡಲಿಯಲ್ಲಿ, ಪಂಚಮದಲ್ಲಿ, ಮಂಗಲ, ಹರ್ಷಲರ ಯುತಿ ಗರ್ಭಪಾತ ಮಾಡಿಸುತ್ತದೆ. *ದಶಮ ಭಾವದಲ್ಲಿ, ಏಕಾಂಗಿಯಾಗಿ ಹರ್ಷಲನು, ಮೇಷ ರಾಶಿಯನ್ನು ಬಿಟ್ಟು ಅನ್ಯ ಯಾವುದೇ ರಾಶಿಯಲ್ಲಿದ್ದು, ಗುರುವು 1, 4, 7 ಭಾವಗಳಲ್ಲಿದ್ದರೆ ಜಾತಕನಿಗೆ ಉನ್ನತ ಪದವಿ, ಅಧಿಕಾರ ಪ್ರಾಪ್ತವಾಗುತ್ತದೆ. *ಯಾವುದೇ ಭಾವದಲ್ಲಿ ಶುಕ್ರ ಹರ್ಷಲರ ಯುತಿಯು ಪತ್ನಿಯೊಂದಿಗೆ ವಿರಸವನ್ನು ತರುತ್ತದೆ. ಈ ಯುತಿಯು ಅಷ್ಟಮ ಭಾವದಲ್ಲಿದ್ದರೆ ವಿರಸದೊಂದಿಗೆ ಅನೈತಿಕ ಸಂಬಂಧವನ್ನೂ ಸೂಚಿಸುತ್ತದೆ. ಈ ಪ್ರಕಾರ ಕುಂಡಲಿಗಳನ್ನು ವಿಶ್ಲೇಷಣೆ ಮಾಡುವುದರಿಂದ ಮೂರೂ ಅಪರಿಚಿತ ಗ್ರಹಗಳ ಪ್ರಭಾವವನ್ನು ಕಂಡು ಹಿಡಿಯಬಹುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ