ಬೇಕಾದ ಸಾಮಗ್ರಿ:-
ಹೊಸ ಮೊರ
ಹರಿಸಿನ
ಕುಂಕುಮ
ಹಸಿರುಬಳೆ
ಸೀರೆ,ಕುಪ್ಪಸ
ಬಾಳೆಹಣ್ಣು(೩,೫,೭,೯)
ತೆಂಗಿನಕಾಯಿ
ಹೂವು
ಎಲೆ ಅಡಿಕೆ
ಬೆಲ್ಲ ಎರಡು ಅಚ್ಚು
ಒಂದು ಸೇರು ಅಕ್ಕಿ
ಮೂರು ಹಿಡಿ ಅವಲಕ್ಕಿ
ಕೊಬ್ಬರಿ
ದಕ್ಷಿಣೆ
ಈ ಎಲ್ಲಾ ವಸ್ತುಗಳನ್ನು ತಗೆದುಕೊಂಡು ಹೋಗಿ ಗೋವಿಗೆ ಸ್ನಾನಾದಿಗಳನ್ನು ಮಾಡಿಸಿ ನಂತರ ಗೋವನ್ನು ಅರಿಸಿನ ಕುಂಕುಮಗಳಿಂದ ಹೂವು ವಸ್ತ್ರಗಳಿಂದ ಅಲಂಕರಿಸಿ ಬಕ್ತಿಪೂರ್ವಕವಾಗಿ ಗೋಮಾತೆಯನ್ನು (ಹಾಲುನೀಡುವ ಕರುಸಮೇತವಾಗಿರುವ ಗೋವನ್ನು) ಮಂಗಳವಾರ(ಕನಕಾಂಬರ,ಕೆಂಪುಕಣಗಲೆ,ಕೆಂಪು ಹೂವಿಂದ) ಮುಂಜಾನೆ ಅಥವ ಮುಸ್ಸಂಜೆ ಪೂಜಿಸುವುದರಿಂದ ಗೃಹ ಶಾಂತಿ,ಪತಿ ಪತ್ನಿ ಅತ್ತೆ ಸೊಸೆಯರ ವೈಮಸ್ಸುಗಳು ನಿವಾರಣೆಯಾಗುತ್ತವೆ,ಗೃಹಶಾಂತಿ ಉಂಟಾಗುತ್ತದೆ. ಇದೇರೀತಿ ಶುಕ್ರವಾರ(ಮಲ್ಲಿಗೆ ಅಥವ ಬಿಳಿಹೂವುಗಳಿಂದ)ಪೂಜೆ ಮಾಡುವುದರಿಂದ ನಿಮಗಿರುವ ಸಾಲದ ಬಾದೆ, ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. (ಸೂಚನೆ:- ನೀವು ಪರಿಶುದ್ದರಾಗಿ ಕಾಮಧೇನುಪೂಜೆ (ಗೋಪೂಜೆ)ಮಾಡಿದಾಗ ನಿಮ್ಮ ಕಷ್ಟ ನಿವಾರಣೆ ಆಗುವುದೆ ಇಲ್ಲವೆ ಎಂಬುದಕ್ಕೆ ಗೋವು ನೀವು ಪೂಜೆ ಮಾಡುವಾಗ ಮಲ(ಸಗಣಿ) ಮೂತ್ರ (ಗಂಜಲ) ಹಾಕಿದರೆ ವಿಶೇಷ ಫಲಗಳು ನಿಮಗೆ ದೊರೆಯುತ್ತವೆ.
ನೀವು ಪೂಜೆ ಮಾಡಲು ನಿರ್ದಾರ ಮಾಡಿದ ಹಿಂದಿನ ದಿನವೇ (ಅಕ್ಕಿ,ಗೋಧಿ,ತುಗರಿ,ಅವರೆ,ಕಡಲೆ,ಎಳ್ಳು,ಉದ್ದು,ಉರುಳಿ,(ಅಕ್ಕಿಒಂದುಹಿಡಿ,ಎಳ್ಳು ಒಂದುಹಿಡಿಹಾಕಿಉಳಿದವನ್ನು ಪ್ರತಿಯೊಂದು ದಾನ್ಯವನ್ನು ಕನಿಷ್ಟ ೨೫೦ಗ್ರಾಂಗಳಂತೆ ಹಾಕಿ,) ನವದಾನ್ಯಗಳನ್ನು ನೀರಲ್ಲಿ ನೆನೆಸಿಡಿ ನಂತರ ನೀವು ಪೂಜೆಗೆ ಹೋಗುವಾಗ ಅವುಗಳನ್ನು ಸ್ವಲ್ಪ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ರಾಗಿ ಹಿಟ್ಟು ಸೇರಿಸಿ ಸ್ವಲ್ಪ ಉಪ್ಪು ಹಾಕಿ ೩ ಅಥವ ೫ ಉಂಡೆ ತಂಬಿಟ್ಟಿನ ರೀತಿಯಲ್ಲಿ ಮಾಡಿಕೊಂಡು ಪೂಜಾನಂತರ ಗೋಮಾತೆಗೆ ಇದನ್ನೇ ನೈವೇದ್ಯರೀತಿಯಲ್ಲಿ ತಿನ್ನಿಸಿ ಅದು ತಿನ್ನುವಾಗ ಅದರ ಬಾಯಿಂದ ಬರುವ ಎಂಜಲನ್ನು ನಿಮ್ಮ ಕುಟುಂಬವರು ತಲೆಗೆ ಹಚ್ಚಿಕೊಳ್ಳಿ)
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments