||ಶ್ರೀ ಸಿಭೀಶ ಇಚ್ಚಾ ಜಯತುಃ||
ಶ್ರೀ ಗುರುಭ್ಯೋ ನಮಃ
( ಸರ್ವ ಕಾರ್ಯ ಸಿದ್ದಿಗಾಗಿ,ಆಪತ್ತು ಪರಿಹಾರಕ್ಕಾಗಿ ಶ್ರೀ ಸಿಭೀಶ ಲಕ್ಷ್ಮಿನರಸಿಂಹಸ್ವಾಮಿ ಸ್ತೋತ್ರ)
"ಓಂ ಕ್ಷಂ" ಶ್ರೀ ಲಕ್ಷ್ಮಿ ನರಸಿಂಹದೇವಾ
ಕಟ್ಟು ಕಟ್ಟು ಹೇ ಸಿಭೀ ವಾಸ
ಕಟ್ಟು ಕಟ್ಟು ದೃಷ್ಟಗ್ರಹಛಾಯಾಗಳನ್ನು
ಕಟ್ಟು ಒಟ್ಟು ದಶದಿಕ್ಕನು ಕಟ್ಟು
ಕಟ್ಟು ಸರ್ವ ಕೆಟ್ಟ ಯಂತ್ರ-ಮಂತ್ರ-ತಂತ್ರ
ಮೆಟ್ಟು ಮೆಟ್ಟು ಹಿಮ್ಮೆಟ್ಟು ದುಷ್ಟರಾ
ಹೆಡೆ ಮುರಿಯ ಕಟ್ಟು,ಬಂಧನವ ಮಾಡು
ಖೂಳ ದೈತ್ಯರ,ನರ,ವಾಕ್.ನೇತ್ರ,ದೇಹ,ಬುದ್ದಿಸ್ತಂಬನ ಮಾಡು
ದುರುಳರಿಗೆ ಕಾಣು ನೀ ಕರಾಳ ರೂಪವ
ತೋರು ತೋರೋ ನಿನ್ನ ಶರಣೆಂದವರಿಗೆ
ಮಾಡು ಮಾಡು ಸಕಲತ್ರ ಭದ್ರಮಯ
ನೀಡು ನೀಡು ನಿನ್ನ ದಾಸರ ಸಂಘ
ಹೌದಭಯಕರ ವರ ಕರುಣಾಕರ
ರಕ್ಷಿಸು ಮನ್ನಿಸು ಕಾಯೋ ಕೃಪಾಕರ
(ಶ್ರೀ) ಸಿರಿ ಜಯ ಸಿಭೀಶ ಲಕ್ಷ್ಮಿನರಸಿಂಹ... ನಿನ್ನ
ಸ್ಮರಣೆಯ ನಿತ್ತು ಸಕಲತ್ರ ಕಾಯೋ ನಿನ್ನ ದಾಸರ ದಾಸರನು
ಕಟ್ಟು ಕಟ್ಟು ಕಂಕಣವ ತೊಟ್ಟು
ಎನ್ನೊಡೆಯ ಶ್ರೀ ಗುರು ಪೊರಮೊಟ್ಟು
ಶ್ರೀ ತತ್ವಾಭಿಮಾನಿ ದೇವತೆಗಳಂತರ್ಗತ
ಶ್ರೀ ಸಿಭೀ ವಾಸ ಶೋಡಶಬಾಹುವೇ,ಎನ್ನ
ಸರ್ವ ದೋಶಗಳನ್ನು ದಹಿಸು ಹೇ ಕ್ಷಮಾಸಾಗರಾ......
ಸಿರಿ ಜಯ ಸಿಭೀನಾರಸಿಂಹಾ ನಿನ್ನ ಸ್ಮರಣೆಯನಿತ್ತು
ಸಕಲತ್ರ ಕಾಯೋ ನಿನ್ನ ದಾಸರ ದಾಸರನು
ಸೂಚನೆ:ದಿನಕ್ಕೆ ೧೧ ಸಲ,೨೧ಸಲ,ಅಥವ ೧೦೮ಸಲ ಪರಿಶುದ್ದ ಮನಸ್ಸಿನಿಂದ ಪಠಿಸಬೇಕು ಪ್ರತಿಫಲ ನಿಶ್ಚಯ.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments