Skip to main content

ಜಾತಕದಲ್ಲಿ ಗೃಹ ಯೋಗ

ವಾಸಯೋಗ್ಯವಾದ ಮನೆಯಿದ್ದರೂ, ಇನ್ನಿಲ್ಲದ ಅಡಚಣೆ. ಛೇ ಎಲ್ಲವೂ ಈ ಮನೆಯಿಂದ ಅಂತ ಗೊಣಗುವವರಿಗೇನು ಕಡಿಮೆಯಿಲ್ಲ. ಇನ್ನೂ ಎಷ್ಟೋ ಮಂದಿ ಮನೆ ಕಟ್ಟಿಸುತ್ತಾರೆ. ಆದರೆ ಕಟ್ಟಿಸಿದ ಮನೆಯಲ್ಲಿ ವಾಸ ಮಾಡಲಿಕ್ಕೆ ಅಗುವುದಿಲ್ಲ. ಇದೇಕೆ ಹೀಗೆ? ಎನ್ನುತ್ತಾರೆ. ಗೃಹನಾಶ ಯೋಗ : ನಿಮ್ಮ ಜಾತಕದಲ್ಲಿ ಚತುರ್ಥಧಿಪತಿಯು ವ್ಯಯ ಸ್ಥಾನವಾದ 12 ರಲ್ಲಿ ಪಾಪ ಗ್ರಹಗಳಿಂದ ಕೂಡಿದ್ದರೆ ಇಲ್ಲವೆ ವ್ಯಯಾಧಿಪತಿಯ ದೃಷ್ಟಿ ಇದ್ದರು ಗೃಹನಾಶ ಯೋಗ ಆಗುವುದು. ಇಂತಹ ಜಾತಕರಿಗೆ ಮನೆ ಇದ್ದರೂ ವಾಸಿಸಲು ಆಗುವುದಿಲ್ಲ. ಚತುರ್ಥಾಧಿಪತಿಯು ನವಾಂಶ ಕುಂಡಲಿಯಲ್ಲಿ ವ್ಯಯ ಸ್ಥಾನದಲ್ಲಿದ್ದರೆ ಮನೆಯ ಸಂಬಂಧವಾಗಿ ಹಣ ಮತ್ತು ಮನೆ ಎರಡನ್ನು ಕಳೆದು ಕೊಳ್ಳುವ ಸಂಭವ ಇರುತ್ತದೆ. ಚತುರ್ಥ ಸ್ಥಾನದಲ್ಲಿ ಪಾಪ ಗ್ರಹಗಳೇ ಇದ್ದರೆ ಅನೇಕ ರೀತಿಯ ಸಮಸ್ಯೆಗಳಿಗೆ ಸಿಲುಕಿ ಮನೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದು ಬಿಡುತ್ತಾರೆ ಅಥವಾ ಮನೆಯನ್ನು ಯಾರಿಗಾದರೂ ಮಾರಾಟ ಮಾಡಿ ಬಿಡುತ್ತಾರೆ. ಕಟ್ಟಿದ ಮನೆಯನ್ನು ಯಾರಾದರೂ ಖರೀದಿ ಮಾಡಬೇಕೆಂದು ಪ್ರಶ್ನೆ ಕೇಳಿದರೆ ಪ್ರಶ್ನಾಲಗ್ನ ಚತುರ್ಥ ಸ್ಥಾನಾಧಿಪತಿಗಳು ಕೇಂದ್ರ ತ್ರಿಕೋನದಲ್ಲಿ (1,4,7,10,5,9) ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದ್ದರೆ ಯಾವುದೇ ಆಸ್ತಿ ಮನೆಯನ್ನು ತೆಗೆದು ಕೊಳ್ಳಬಹುದು. ಲಗ್ನ ಚತುರ್ಥಾಧಿಪತಿಗಳು 6,8,12ನೇ ಭಾವಗಳಲ್ಲಿ ಇದ್ದು ಲಗ್ನ ಮತ್ತು ಚತುರ್ಥ ಭಾವದಲ್ಲಿ ಶನಿ, ರಾಹು ಭಗವಾನರು ಇದ್ದರೆ ಆ ಆಸ್ತಿ ಅಥವಾ ಮನೆಯಿಂದ ಕಷ್ಟ, ತೊಂದರೆಗಳು ಉಂಟಾಗುವುದು ಎಂದು ತಿಳಿಯಬೇಕು. ಸಪ್ತಮ ದಶಮ ಸ್ಥಾನದಲ್ಲಿ ಶನಿ, ಕುಜ, ರಾಹು, ಕೇತುಗಳು ಇದ್ದರೆ ಆ ಮನೆಯ ಯಜಮಾನರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವುದರಿಂದ ಆ ಮನೆಯನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿಯಬೇಕು. ಪಂಚಮ ಅಷ್ಟಮಾಧಿಪತಿಗಳು, ಷಷ್ಠ ವ್ಯಯ ಸ್ಥಾನದಲ್ಲಿ ಇದ್ದರೆ ಆ ಮನೆಯ ಯಜಮಾನನು ಸಾಲ ತೀರಿಸಲಾರದೆ ಮನೆಯನ್ನು ಮಾರಾಟ ಮಾಡುತ್ತಿದ್ದಾನೆ ಎಂದು ತಿಳಿಯಬೇಕು. ಕೇಂದ್ರ ತ್ರಿಕೋನ ಸ್ಥಾನಗಳಾದ ಲಗ್ನ ಚತುರ್ಥ ಸಪ್ತಮ, ದಶಮ ಪಂಚಮ ನವಮ ಸ್ಥಾನಗಳಲ್ಲಿ ಶುಭ ಗ್ರಹಗಳಾದ ಬುಧ-ಗುರು-ಶುಕ್ರ ಚಂದ್ರರು ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದ್ದರೆ ಆಸ್ತಿ ಅಥವಾ ಮನೆಯ ವ್ಯವಹಾರ ತುಂಬಾ ಅನುಕೂಲಕರವಾಗಿ ಇರುತ್ತದೆಂದು ತಿಳಿಯಬೇಕು. ಪಂಚಾಂಗದ ಪ್ರಶ್ನೆಯ ಪ್ರಕಾರ ನಿಮಗೆ ಮನೆ ಕಟ್ಟುವ ಸ್ಥಳದಿಂದ ಒಳ್ಳೆಯದಾಗುವುದೇ ಎಂಬ ಅನೇಕ ಪ್ರಶ್ನೆಗಳೀಗೆ ಸಮಂಜಸವಾದ ಉತ್ತರವನ್ನು ಜ್ಯೋತಿಷ್ಯ ಶಾಸ್ತ್ರದಿಂದ ತಿಳಿಯಬಹುದಾಗಿದೆ. ಹಾಗೆಯೇ ಮನೆ ಕಟ್ಟುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ ಲಗ್ನ ಮತ್ತು ಚತುರ್ಥಗಳ ಸ್ಥಾನಗಳ ಮೇಲಿಂದ ತಿಳಿಯ ಬೇಕಾಗುತ್ತದೆ. ಲಗ್ನ ಮತ್ತು ಚತುರ್ಥಾಧಿಪತಿಗಳು ಮಿತ್ರ ಗ್ರಹಗಳಾಗಿದ್ದು ಹಾಗೂ ಸ್ವ ಕ್ಷೇತ್ರ ಉಚ್ಚಕ್ಷೇತ್ರ ಮಿತ್ರ ಕ್ಷೇತ್ರಗಳಾಗಿದ್ದರೆ ಹಾಗೂ ಲಗ್ನ ಮತ್ತು ಚತುರ್ಥ ಸ್ಥಾನಗಳಿಗೆ ಯಾವುದೇ ಪಾಪಗ್ರಹಗಳ ದೃಷ್ಟಿ ಬೀಳಬಾರದು ಹಾಗೂ ಪಾಪ ಗ್ರಹಗಳ ಜತೆ ಸೇರಿರಬಾರದು ಲಗ್ನಾಧಿಪತಿಯಾಗಲಿ ಅಥವಾ ಚತುರ್ಥಾಧಿಪತಿಯಾಗಲಿ ಆಸ್ತನಾಗಿರಬಾರದು. ಲಗ್ನಾಧಿಪತಿಯಾಗಲಿ ಚತುರ್ಥಾಧಿಪತಿಯಾಗಲಿ ಶುಭ ಗ್ರಹಗಳಾದ ಗುರು, ಶುಕ್ರ ಪೂರ್ಣ ಚಂದ್ರ, ಬುಧ ಗ್ರಹಗಳಾಗಿದ್ದರೆ ತುಂಬಾ ಸುಂದರವಾದ ಮನೆಯನ್ನು ಕಟ್ಟಲು ಸಾಧ್ಯ ಆಗುತ್ತದೆ. ಲಗ್ನಾಧಿಪತಿಗಾಗಲಿ, ಚತುರ್ಥಾಧಿಪತಿಗಾಗಲಿ ಶುಭ ಗ್ರಹಗಳ ದೃಷ್ಟಿ ಇದ್ದರೆ ವೈಭವವುಳ್ಳ ಮನೆಯನ್ನು ಕಟ್ಟಿ ಅದರಲ್ಲಿ ಎಲ್ಲ ತರಹದ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಜಾತಕನು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕೇಂದ್ರ ತ್ರಿಕೋನಗಳಲ್ಲಿ ಶುಭ ಗ್ರಹಗಳು ಇರಬೇಕು ಹಾಗೂ ಲಗ್ನ ಮತ್ತು ಚತುರ್ಥಾಧಿಪತಿಗಳಿಗೆ 6-8-12ನೇ ರಾಶಿಗಳ ಗ್ರಹಗಳ ಸಂಬಂಧ ಇರಬಾರದು. ಈ ರಾಶಿಯ ಅಧಿಪತಿಗಳ ದೃಷ್ಟಿಯು ಬೀಳಬಾರದು ಮತ್ತು ಪಾಪ ಗ್ರಹಗಳಾದ ಕುಜ, ಶನಿ, ರಾಹು, ಕೇತು ಕ್ಷೀಣ ಚಂದ್ರ, ಪಾಪ ಗ್ರಹಗಳ ಜತೆಯಲ್ಲಿರುವ ಬುಧ ಈ ಗ್ರಹಗಳ ಸಂಬಂಧ ಲಗ್ನ, ಚತುರ್ಥಾಧಿಪತಿಗಳಿಗೆ ಬಂದರೆ ನೀವು ಕಟ್ಟುವ ಮನೆಯು ಪರಿಪೂರ್ಣವಾಗದೆ ಹಾಗೂ ಮನೆಯನ್ನು ಕಟ್ಟಿದರೂ ಆ ಮನೆಯಲ್ಲಿ ಸುಖ ಸಂತೋಷದಿಂದ ಇರುವುದಕ್ಕೆ ಸಾಧ್ಯ ಆಗುವುದಿಲ್ಲ. ಆದ್ದರಿಂದ ಲಗ್ನ ಚತುರ್ಥ ಸ್ಥಾನದಲ್ಲಿ ಶುಭ ಗ್ರಹಗಳು ಇದ್ದು ಶುಭ ಗ್ರಹಗಳ ದೃಷ್ಟಿಗೆ ಒಳಗಾಗಿರಬೇಕು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

12 ಲಗ್ನಗಳು,ಲಕ್ಷಣ ಫಲ, ದೋಷಗಳು

ವೃಷಭ ಲಗ್ನದ ಲಕ್ಷಣ ಫಲ, ದೋಷಗಳು * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ವಷಭ ಲಗ್ನವು ರಾತ್ರಿ ಬಲ ರಾಶಿ, ಪ್ರಷ್ಠೋದಯ ರಾಶಿ, ಸ್ಥಿರ ರಾಶಿ, ಭೂ ತತ್ವ ರಾಶಿ, ಸ್ತ್ರೀ ಮತ್ತು ಯುಗ್ಮ ರಾಶಿ, ವೈಶ್ಯ ವರ್ಣ ರಾಶಿ, ರಜೋ ಗುಣ ರಾಶಿ. ವೃಷಭ ಮತ್ತು ವಶ್ಚಿಕ ರಾಶಿಗೆ ಶುಕ್ರಗ್ರಹ ಅಧಿಪತಿ. ವೃಷಭ ಲಗ್ನದಲ್ಲಿ ಹುಟ್ಟಿದವರು ವಿಶಾಲವಾದ ಹಣೆಯುಳ್ಳವರೂ, ಸ್ಥೂಲವಾದ ತುಟಿಯುಳ್ಳವರೂ, ಉಬ್ಬಿದ ಕೆನ್ನೆಗಳುಳ್ಳವರೂ ಆಗಿರುತ್ತಾರೆ. ಅವರಿಗೆ ಶರೀರದಲ್ಲಿ ಶೀತ, ವಾತ ಧಾತುಗಳೇ ಅಧಿಕ. ಉದಾರ ಗುಣವುಳ್ಳವರೂ, ಸಮಯ ಬಿದ್ದರೆ ಯಾರ ಲಂಗು ಲಗಾಮು ಇಲ್ಲದೇ ಖರ್ಚು ಮಾಡುವವ ಜನ ಇವರು. ಇವರಿಗೆ ಅಲ್ಪ ಪುತ್ರ ಸಂತಾನ ಇರುತ್ತದೆ. ಸ್ತ್ರೀ ಸಂತತಿ ಅಧಿಕವಾಗಿರುತ್ತದೆ. ತಂದೆ ತಾಯಿಗಳಿಂದ ದೂರವಾಗಿರುವವರೂ, ಅಧರ್ಮ ಕಾರ್ಯಗಳಲ್ಲಿ ತೊಡಗಿ ದ್ರವ್ಯಾರ್ಜನೆ ಮಾಡ ತಕ್ಕವರೂ ಆಗಿರುತ್ತಾರೆ. ಈ ಲಗ್ನದ ಹೆಣ್ಣು ಮಕ್ಕಳು ಸದಾ ಕಾಲ ಪತಿಯ ಸಮ್ಮುಖದಲ್ಲಿರಲು ಅಪೇಕ್ಷೆ ಪಡುತ್ತಾರೆ. ಸ್ವಜನ ಸಂಪರ್ಕ ಇಲ್ಲದವರೂ, ಬಂಧುಗಳಿಂದ ತಿರಸ್ಕರಿಸಲ್ಪಟ್ಟವರಾಗಿರುತ್ತಾರೆ. ಇವರ ಕೋಪ ಶೀಘ್ರವಾಗಿ ಶಮನವಾಗುವುದಿಲ್ಲ. ಇವರದ್ದು ಎದುರಾಳಿಗಳ ಮೇಲೆ ಬಿದ್ದು ಕಾದಾಡುವ ಸ್ವಭಾವ. ಸಾಧಾರಣ ಐಹಿಕ ಸುಖಾಭಿಲಾಷೆ, ಸ್ವತಂತ್ರ ಮನೋಭಾವ, ಹೆಚ್ಚಿನ ತಾಳ್ಮೆ ಯೂ ಇವರಗೆ ಸಿದ್ಧಿಸಿರುತ್ತದೆ. ಹೀಗಾಗಿ ಇನ್ನೊಬ್ಬರೊಂದಿಗೆ ಸಿಕ್ಕಿಕೊಳ್ಳುವುದೇ ಇಲ್ಲ. ಇವರು ಯಾವುದೇ ಕೆಲಸ ಕೈಗೊಂಡರೂ, ಬಹಳ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ