ಶ್ರೀ ಮಹದೇವನ ಸ್ಮರಣೆ (ಸ್ತೋತ್ರ)
ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕಲಿಯುಗ ದೈವನಿಗೆ ನಲಿಯುವ ಮಹದೇವನಿಗೆ ಶರಣೆನ್ನಿರೋ
ಎಲ್ಲ ಶರಣೆನ್ನಿರೋ ಕರುಣೆಯಿಂದಲಿ ನಮ್ಮ ಕಾಯೆನ್ನಿರೋ ಕಷ್ಟ,ಅನಿಷ್ಟಗಳ ಕಳೆಯೆನ್ನಿರೋ ||ಪ||
ಮಲೆ ಮಾದಪ್ಪನಿಗೆ ಶರಣೆನ್ನಿರೋ ಮನೆ ಮನವ ಶುದ್ದಿಯಗೊಳಿಸೆನ್ನಿರೋ
ಶ್ರೀ ಮಂಜುನಾಥನಿಗೆ ಶರಣೆನ್ನಿರೋ ಶ್ರೀರಕ್ಷೆ ಯಿತ್ತೆಮ್ಮ ಕಾಯೆನ್ನಿರೋ
ಭೂತನಾತನಿಗೆ ಶರಣೆನ್ನಿರೋ ನಮ್ಮ ಭಯಭೀತಿಗಳ ಕಳೆಯೆನ್ನಿರೋ ||ಶರಣೆನ್ನಿರೋ||
ಚುಂಚನಗಿರಿಯೋಡೆಯನಿಗೆ ಶರಣೆನ್ನಿರೋ ಚಂದದಿ ಬಂದನವ ಕಳೆಯೆನ್ನಿರೋ
ಮುಕ್ಕಣ್ಣ ದೇವನಿಗೆ ಶರಣೆನ್ನಿರೋ ನಮ್ಮ ಸೊಕ್ಕುಗಳನೆಲ್ಲ ಅಳಿಸೆನ್ನಿರೋ
ನಂಜುಂಡಸ್ವಾಮಿಗೆ ಶರಣೆನ್ನಿರೋ ನಾನು ನನ್ನದೆಂಬುದ ಮರೆಸೆನ್ನಿರೋ ||ಶರಣೆನ್ನಿರೋ||
ವಿಶ್ವನಾಥನಿಗೆ ಶರಣೆನ್ನಿರೋ ನಮ್ಮ ವಿಪ್ಪತ್ತುಗಳನೆಲ್ಲ ಕಳೆಯೆನ್ನಿರೋ
ವೀರಭದ್ರಸ್ವಾಮಿಗೆ ಶರಣೆನ್ನಿರೋ ನಮ್ಮ ವಿರೋಧಿಗಳನೆಲ್ಲ ಅಳಿಸೆನ್ನಿರೋ
ವಿಶ್ವೇಶ್ವರಸ್ವಾಮಿಗೆ ಶರಣೆನ್ನಿರೋ ನಮ್ಮ ವಿಘ್ನಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ||
ಪಶುಪತಿನಾಥನಿಗೆ ಶರಣೆನ್ನಿರೋ ನಮ್ಮ ಪಾಪಗಳನೀ ಪರಿಹರಿಸೆನ್ನಿರೋ
ರುದ್ರದೇವನಿಗೆ ಶರಣೆನ್ನಿರೋ ನಮ್ಮ ರೋಗರುಜಿನಗಳ ಕಳೆಯೆನ್ನಿರೋ
ಶಂಕರದೇವನಿಗೆ ಶರಣೆನ್ನಿರೋ ನಮ್ಮ ಸಂಕಟಗಳನೆಲ್ಲ ಕಳೆಯೆನ್ನಿರೋ ||ಶರಣೆನ್ನಿರೋ||
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments