Skip to main content

ಪಂಚಗವ್ಯವನ್ನು ತಯಾರಿಸಲು ಬೇಕಾದ ವಸ್ತುಗಳು-

ಪಂಚಗವ್ಯವನ್ನು ತಯಾರಿಸಲು ಬೇಕಾದ ವಸ್ತುಗಳು- ಗೋಮೂತ್ರ (Cow Urine) ಗೋಮಯ (Cow Dung) ಗೋವಿನ ಹಾಲು (Cow Milk) ಗೋವಿನ ಮೊಸರು (Cow Curd) ಗೋವಿನ ತುಪ್ಪ (Cow Ghee) "ಪಂಚಗವ್ಯ ಕ್ಷೀರ ದಧಿ ಘೃತ ಗೋಮೂತ್ರ ಗೋಮಯೇ" ನಮಗೆ ಪಂಚಗವ್ಯ ಎಷ್ಟು ಬೇಕೆಂಬ ತೀರ್ಮಾನದ ಮೇಲೆ ಪ್ರಮಾಣವನ್ನು ನಿರ್ಧರಿಸಬೇಕು.ಅದರಲ್ಲಿ.. ಒಂದು ಭಾಗ ಗೋವಿನ ತುಪ್ಪ ಒಂದು ಭಾಗ ಗೋಮೂತ್ರ ಎರಡು ಭಾಗ ಗೋವಿನ ಮೊಸರು ಮೂರು ಭಾಗ ಗೋವಿನ ಹಾಲು ಅರ್ಧಭಾಗ ಗೋಮಯ ಉದಾಹರಣೆಗೆ - ಒಂದು ಚಮಚ ತುಪ್ಪ,ಒಂದು ಚಮಚ ಗೋಮೂತ್ರ,ಎರಡು ಚಮಚ ಗೋವಿನ ಮೊಸರು,ಮೂರು ಚಮಚಗಳಷ್ಟು ಗೋವಿನ ಹಾಲು ಹಾಗೂ ಅರ್ಧ ಚಮಚ ಗೋಮಯ ಈ ಪ್ರಮಾಣದಲ್ಲಿ ತಯಾರಿಸಬೇಕು. ಒಂದು ವಿಷಯ ಗಮನದಲ್ಲಿರಲಿ.ಪಂಚಗವ್ಯವನ್ನು ತಯಾರಿಸಲು ದೇಸಿ ತಳಿಯ ಉತ್ಪನ್ನಗಳೇ ಪರಿಣಾಮಕಾರಿ.ವಿದೇಶಿ ತಳಿಗಳ ಉತ್ಪನ್ನದಿಂದ ಪಂಚಗವ್ಯವನ್ನು ತಯಾರಿಸಿದರೆ ಪರಿಣಾಮಕಾರಿಯಾಗಲಾರದು. ಪಂಚಗವ್ಯ ತಯಾರಿಕೆಗೆ ಅಗಲವಾದ ಬಾಯುಳ್ಳ ಮಣ್ಣಿನ ಅಥವಾ ಪ್ಲಾಸ್ಟಿಕ್ ಪಾತ್ರೆ ಉತ್ತಮ.ಯಾವುದೇ ಕಾರಣಕ್ಕೂ ಲೋಹದಿಂದ ತಯಾರಿಸಲ್ಪಟ್ಟ ಪಾತ್ರೆಗಳನ್ನು ಉಪಯೋಗಿಸಬಾರದು. ಮೊದಲು ಗೋಮಯ ಹಾಗೂ ತುಪ್ಪವನ್ನು ಪಾತ್ರೆಯಲ್ಲಿ ಹಾಕಿ,ಮೂರುದಿನಗಳಷ್ಟು ಕಾಲ ಅವೆರಡನ್ನೂ ಬೆರೆಸಿಡಬೇಕು.ನಾಲ್ಕನೇ ದಿನ ಮೊಸರು,ಹಾಲು,ಗೋಮೂತ್ರವನ್ನು ಸೇರಿಸಬೇಕು. ೧೫ ದಿನಗಳವರೆಗೆ ದಿನಕ್ಕೆರದು ಸಲ ಅಂದರೆ ಬೆಳಿಗ್ಗೆ ಹಾಗೂ ಸಂಜೆ ಕದಡುತ್ತಾ ಇರಬೇಕು.೧೫ ದಿನಗಳ ನಂತರ ೪ ದಿನ ಯಥಾವತ್ ಸ್ಥಿತಿಯಲ್ಲಿಡಬೇಕು.೧೯ನೇ ದಿನ ಪಂಚಗವ್ಯ ಬಳಸಲು ಸಿದ್ಧವಾಗುತ್ತದೆ. ಪಂಚಗವ್ಯವಿರುವ ಪಾತ್ರೆಯನ್ನು ಯಾವಾಗಲೂ ನೆರಳಿನಲ್ಲೇ ಇಡಬೇಕು.ಕ್ರಿಮಿಕೀಟಗಳು ಪಾತ್ರೆಯೊಳಗೆ ನುಸಳದಂತೇ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಬೇಕು.ಇದು ಪಂಚಗವ್ಯವನ್ನು ಸರಿಯಾಗಿ ಉತ್ಪಾದಿಸುವ ವಿಧಾನ. ಇನ್ನು ಶುದ್ಧಿಕಾರ್ಯಗಳಿಗೆ ಅದೇ ದಿನ ಪಂಚಗವ್ಯವನ್ನು ತಯಾರಿಸುತ್ತಾರೆ.ಅದು ಕೇವಲ ಶುದ್ಧಿಗಾಗಿರುತ್ತದೆಯೇ ಹೊರತು ಔಷಧೀಯಗುಣಗಳನ್ನು ಹೊಂದಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ. ೫೦ ಮಿ.ಲಿ ಪಂಚಗವ್ಯವನ್ನು ೨೦೦ ಮಿ.ಲಿ ನೀರು ಹಾಗೂ ತೆಂಗಿನಕಾಯಿಯ ನೀರು (ಎಳನೀರಲ್ಲ) ,ಹಣ್ಣಿನ ಜ್ಯೂಸಿನೊಂದಿಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ಬೆಳಿಗ್ಗೆ ಎದ್ದ ಕೂಡಲೇ ೫೦ ಮಿ.ಲಿ ಪಂಚಗವ್ಯವನ್ನು ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸುತ್ತದೆ.ಪ್ರತಿದಿನ ಒಂದು ಚಮಚ ಪಂಚಗವ್ಯವನ್ನು ಸೇವಿಸುವುದರಿಂದ ಬಲಹೀನತೆ,ಅಜೀರ್ಣತೆ,ಮಲಬದ್ಧತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗಿ ದೇಹ ಕ್ರಿಯಾಶೀಲವಾಗಿರುತ್ತದೆ.ಇದಲ್ಲದೇ ಏಡ್ಸ್ ಹಾಗೂ ಪಾರ್ಶ್ವವಾಯು ರೋಗದಿಂದ ಪೀಡಿತರಾದವರೂ ಸಹ ನಿಯಮಿತವಾಗಿ ಪಂಚಗವ್ಯ ಸೇವನೆಯಿಂದ ಗುಣಮುಕ್ತರಾಗಿರುವ ಬಗ್ಗೆ ದಾಖಲೆಗಳಿವೆ. ಗೋಮಯದಿಂದ ಮನೆಯನ್ನು ಶುದ್ಧೀಕರಿಸಿದರೆ ವಿಷಾಣುಗಳು ನಾಶವಾಗಿ ಮಲೇರಿಯ ರೋಗ ಬರುವುದಿಲ್ಲವೆಂದು ಸಂಶೋಧನೆಗಳು ದೃಢಪಡಿಸಿವೆ. ಪಂಚಗವ್ಯವನ್ನು ಕೃಷಿಯಲ್ಲೂ ಬಳಸಲಾಗುತ್ತಿದೆ.ಮಾವು,ಬಾಳೆ,ಪೇರಲೆ,ಸಪೋಟ ಮುಂತಾದ ಹಣ್ಣುಗಳ ಉತ್ತಮ ಇಳುವರಿಗಾಗಿ ಪಂಚಗವ್ಯವನ್ನು ಸಿಂಪಡಿಸಲಾಗುತ್ತದೆ.ಹಾಗೇ ಅರಿಶಿನಬೆಳೆ ಹಾಗೂ ಕೆಲವು ಹೂವುಗಳಿಗೆ ಕ್ರಿಮಿನಾಶಕ ಔಷಧಿಯನ್ನಾಗಿ ಪಂಚಗವ್ಯವನ್ನು ಬಳಸಲಾಗುತ್ತಿದೆ. ಇದಲ್ಲದೇ ಸಾಕು ಪ್ರಾಣಿಗಳಾದ ಕುರಿ,ಹಂದಿ,ಕೋಳಿ,ಮೀನು,ದನಗಳಿಗೆ ಬರುವ ಹಲವು ಖಾಯಿಲೆಗಳಿಗೆ ಪಂಚಗವ್ಯ ದಿವ್ಯೌಷಧವೆಂದು ಸಾಬೀತಾಗಿದೆ.ಪಂಚಗವ್ಯ ಚಿಕಿತ್ಸೆಯೆಂಬ ಒಂದು ಚಿಕಿತ್ಸಾವಿಧಾನವೇ ಆವಿಷ್ಕೃತಗೊಂಡಿದೆ.ಹಲವು ದೇಶಿ ಹಾಗೂ ವಿದೇಶಿ ಆರೋಗ್ಯಸಂಸ್ಥೆಗಳು ಗೋಉತ್ಪನ್ನಗಳಿಂದ ಹಲವಾರು ರೋಗಗಳಿಗೆ ಔಷಧಿಯನ್ನು ಕಂಡುಹಿಡಿದಿವೆ.ಜಗತ್ತಿನಾದ್ಯಂತ ಇನ್ನೂ ಸಂಶೊಧನೆ,ಅಧ್ಯಯನ ನಡೆಯುತ್ತಲೇ ಇದೆ.ಹಾಗಾಗಿ ಗೋ ತಳಿಯ ಸಂರಕ್ಷಣೆಯಾಗಲೇಬೇಕಿದೆ. ಲೋಕಾಃ ಸಮಸ್ತಾಃ ಸುಖಿನೋ ಭವಂತು..

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ