Skip to main content

ನಾಗ ದೋಷ ಎಂದರೇನು?

ಪ್ರತಿಯೊಬ್ಬ ಪೃಚ್ಛಕನಿಗೂ ಇರುವಂತಹ ಒಂದು ನಿಗೂಢ ಗೊಂದಲ ನಾಗ ದೋಷದ ಬಗ್ಗೆ. ಅನೇಕರು ತಮ್ಮ ಯಾವುದೇ ಸಮಸ್ಯೆಗೆ '. ನಾಗ ದೋಷ ವಿದೆಯೇ' ಎಂದು ಮೊದಲಾಗಿ ತಮ್ಮ ಮನದೊಳಗಿನ ಗೊಂದಲ ಮುಂದಿಡುತ್ತಾರೆ. ಸರ್ಪ ಸಂಸ್ಕಾರ, ಆಶ್ಲೇಷಾಬಲಿ ಇತ್ಯಾದಿ ಸೇವೆಗಳನ್ನು ಮಾಡಿಸುತ್ತಾರೆ. ಯಾಕೆಂದರೆ ನಾಗದೋಷ ಪರಿಹಾರವಾಗಲಿ ಎಂಬ ಉದ್ದೇಶ. ಆದರೆ ಇವರಿಗೆ ನಾಗದೋಷ ಎಂದರೆ ಏನು ಎಂಬುದು ಗೊತ್ತಿಲ್ಲ. ನಾಗ ಬನಗಳನ್ನು ಮಲಿನ ಮಾಡಿದ್ದೋ, ನಾಶಮಾಡಿದ್ದೋ, ಸರ್ಪ ಹತ್ಯೆಯೋ ಇತ್ಯಾದಿಗಳಿಂದ. ದೋಷಗಳು ಉಂಟಾಗುವುದೇ ನಾಗದೋಷ ಎಂದು ತಿಳಿದುಕೊಳ್ಳುತ್ತಾರೆ.ಇಂತಹ ತಿಳುವಳಿಕೆಯಲ್ಲಿ ಮೇಲೆ ಹೇಳಿದ ಪೂಜೆ ಮಾಡಿದರೆ ಏನೋ ಶೇಕಡಾ.5ಭಾಗ ಸರಿಯಾದೀತಷ್ಟೆ. ಹಾಗಾದರೆ ಹಾಗಾದರೆ ನಾಗದೋಷದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾಗ ದೋಷಗಳನ್ನು ತಿಳಿಯುವುದು ರಾಹು ಗ್ರಹದ ಮೂಲಕ. ಈ ರಾಹು ಗ್ರಹನು ೧.ಯಾವ ಗ್ರಹ ಸಂಬಂಧಿ ನಕ್ಷತ್ರದಲ್ಲಿ ಇರುತ್ತಾನೋ ೨. ಯಾವ ಗ್ರಹನ ಕ್ಷೇತ್ರದಲ್ಲಿ ಇರುತ್ತಾನೋ ೩. ಯಾವ ಗ್ರಹನ ಯುತಿ ಯಲ್ಲಿ ಇರುತ್ತಾನೋ ೪. ರಾಶಿಯಲ್ಲಿ ಯಾವ ಗ್ರಹನ ಅಂಶದಲ್ಲಿ ಇರುತ್ತಾನೋ( ಇಲ್ಲಿ ಸಾಮಾನ್ಯವಾಗಿಕೇವಲ ನವಾಂಶ ಮಾತ್ರ ನೋಡುತ್ತಾರೆ.ಎಲ್ಲಾ ಅಂಶ ಶೋಧಿಸಿದರೆ ಉತ್ತಮ. ಆದರೆ ಅದು ಬಹಳ ಕಷ್ಟದ ಕೆಲಸ) ೫. ಯಾವ ಗ್ರಹನ ದೃಷ್ಟಿಗೊಳಗಾಗಿರುತ್ತಾನೋ - ಆ ಫಲಗಳನ್ನು ಕೊಡುತ್ತಾನೆ ಎಂದು ಹೇಳಿದೆ..ಆದರೆ ಕೊಡುವುದಲ್ಲ. ಆ ಫಲವನ್ನು ಉದ್ಧೀಪನ ಗೊಳಿಸುತ್ತಾನೆ ಎಂದರ್ಥ. ಇದು ರಾಹುವಿನ ಬಲಿಷ್ಟತೆಯ ಆಧಾರದಲ್ಲಿ ಇರುತ್ತದೆ. ಇನ್ನು ಮೇಲಿನ ವಿಚಾರದ ಉದ್ಧೀಪನಗೊಳ್ಳುವ ಭಾವದ ಆಧಾರದಲ್ಲಿ ನೋಡಬೇಕು. ಅಲ್ಲದೆ ಆಭಾ ವವು ಯಾವ ಸ್ವರೂಪದ್ದು ಎಂಬ ಚಿಂತನೆಯನ್ನೂ ಮಾಡಬೇಕು. ಉದಾಃ ಲಗ್ನದ ದ್ವಿತೀಯ ದಲ್ಲಿ ರಾಹು ಕುಜನ ಯುತಿಯಲ್ಲಿದ್ದರೆ- ಅದು ಚಂದ್ರ ಕ್ಷೇತ್ರ ಕರ್ಕವಾಗಿದ್ದರೆ - ದ್ವಿತೀಯವು ವಾಕ್ ಕ್ಷೇತ್ರ. ಇವರು ಉತ್ತಮ ವಾಗ್ಮಿ. ವಿಮರ್ಶಾತ್ಮಕ ಮಾತುಗಳಿರುತ್ತದೆ. ತನಗೆ ಇತರರ ಮಾತು ಹಿಡಿಸದಿದ್ದರೆ ಇವರು ಆ ಸಂಭಾಷಣೆಗೆ ಬೆಲೆ ಕೊಡುವುದಿಲ್ಲ.ಕುಜ ಯುತಿ ಇರುವುದರಿಂದ ಅನೀತಿ ಮಾತುಗಳನ್ನು ಕೇಳಿ ಕೋಪಗೊಂಡು ಕಡಕ್ ಉತ್ತರ ನೀಡಬಹುದು.ಅಥವಾ ಎದ್ದು ಹೋಗ ಬಹುದು. ಎದ್ದು ಹೋಗುವ ಮನಸ್ಸು ಬರುವುದು ಇವರಿಗೆ ಗುರು ಚೆನ್ನಾಗಿದ್ದರೆ ಮಾತ್ರ. ಗುರು ಸರಿ ಇಲ್ಲದಿದ್ದರೆ ಜಗಳ ಮಾಡಬಹುದು. ಕುಜ ಯುತಿಯಲ್ಲಿ ಇರುವು ದರಿಂದ ಋಣ ವಿಚಾರ, ಪ್ರತಿಷ್ಟೆ ಗೌರವಾದರಗಳ ವಿಚಾರದಲ್ಲಿ ಆಸಕ್ತರಾಗಿರುತ್ತಾರೆ. ಕುಜ ರೋಗ ಸ್ಥಾನಾಧಿಪನಾಗಿಯೂ ಇರುವುದರಿಂದ ಔಷಧಿ ಸಲಹೆಯಲ್ಲಿ ನಿಪುಣತೆ ಇವರಿಗಿರುತ್ತದೆ. ಜಲ ರಾಶಿಯಾಗಿರುವುದರಿಂದ ಇವರು ಸ್ವಚ್ಛ ನೀರಿನ ಹರಿವನ್ನು ಪ್ರೀತಿಸುತ್ತಾರೆ. ಕುಜ ಯುತಿಯಲ್ಲಿ ಇರುವುದರಿಂದ ಶತ್ರುಗಳನ್ನು ಮಾತಿನಲ್ಲೇ ಮುಗಿಸುತ್ತಾರೆ. ಇವರ ಮಾತಿಗೆ ಎದುರಾಡುವ ಸಾಮರ್ಥ್ಯ ಇತರರಿಗೆ ಇರುವುದಿಲ್ಲ.ಆಗ ಶತ್ರುಗಳು ಹಿಂದಿನಿಂದ ಇವರ image, ಹಾಳುಮಾಡಲು ಪ್ರಯತ್ನಿಸುತ್ತಾರೆ. ಇಂತಹ ಗುಣಗಳು ಸಮಯೋಚಿತವಾಗಿದ್ದಾಗ ಒಳ್ಳೆಯದಾಗಬಹುದು. wrong application ಆದಾಗ ಅಭಿವೃದ್ಧಿಗೆ ಹಾನಿಯೂ ಆಗಬಹುದು. ಆಗ ಕೆಲವೊಮ್ಮೆ, ಕೆಲವೊಂದು ವಿಚಾರಗಳಲ್ಲಿ ಕಣ್ಮುಚ್ಚಿ ಕುಳಿತು ಕೊಳ್ಳಬೇಕು.ಅಂದರೆ ಒಂದು ರೀತಿಯ compromise ಬೇಕು. ಇವರಿಗೆ ಇವನ ದಶಾಭುಕ್ತಿಗಳು ಉತ್ತಮ ಫಲ ನೀಡುತ್ತದೆ.ಆದರೆ ಇವನ ಚತುರ್ಥ ಕೇಂದ್ರದಲ್ಲಿ ಪಾಪ ಗ್ರಹರಿರಬಾರದು. ಇಂತಹ ಉದ್ಧೀಪನ (exiting nature, ambitious) ಇರುವ ವ್ಯಕ್ತಿಗಳು ಈ ಭಾವದ ವಿಚಾರ ಅಂದರೆ ಮಾತು, ಹಣಕಾಸು,ಕುಟುಂಬ ವಿಚಾರಗಳಲ್ಲಿ ಕೆಲವೊಮ್ಮೆ compromise ಮಾಡಿಕೊಂಡರೆ ಉತ್ತಮ. 'ಹೋಗಲಿ ನನಗೆ ಗೌರವ ಈ ಸಾರಿ ಸಿಕ್ಕದಿದ್ದರೂ ಪರವಾಗಿಲ್ಲ.ನನ್ನ ಕೆಲಸವಾದರೆ ಸಾಕು 'ಎಂಬ ಸ್ವಾರ್ಥದಲ್ಲಿ ಸುಮ್ಮನಾ ಗಬೇಕು. ಇವರು ರಾಹು ಪ್ರೀತ್ಯರ್ಥ ಅಂದರೆ ವಾಕ್ ಸ್ಥಾನದ ದೋಷ ನಿವಾರಣೆ ಗಾಗಿ,ಅಥವಾ ಉತ್ತಮ ಪರಿಣಾಮಕ್ಕಾಗಿ ವಾಣಿಕಾರಕಿ ಶಾರದೆಯ ಮಂತ್ರದ ಸಂಪುಟೀಕರಣದಲ್ಲಿ ನಾಗ ಮಂತ್ರ ಜಪಿಸಬೇಕು. ಅಥವಾ ದುರ್ಗಾ ಮಂತ್ರದಲ್ಲಿ ಸಂಪುಟೀಕರಣ ಮಾಡಿಕೊಂಡರೂ ಆಗುತ್ತದೆ.ಅದು ಹೇಗೆಂದರೆ- ಓಂ ದುಂ ದುರ್ಗಾಯೆಯೈನಮಃ ಎಂದು ಹನ್ನೆರಡು ಸಲ ಜಪಿಸಿಕೊಂಡು - ಒಂ ನಮೋ ಭಗವತೇ ಕಾಮ ರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ನಮಃ ' ಎಂದು ಇಷ್ಟ ಪಟ್ಟ ಸಂಖ್ಯೆಯಲ್ಲಿ(12,24,48, 108 ಇತ್ಯಾದಿ) ಜಪಮಾಡಿ ಕೊನೆಗೆ ಮತ್ತೆ ಹನ್ನೆರಡು ಸಲ ದುರ್ಗಾ ಜಪ ಮಾಡಬೇಕು.ಇದು ನೇರವಾಗಿ ದ್ವಿತೀಯ ಭಾವ ಸಂಬಂಧಿತ ನಾಡಿಗಳ ಜಾಗೃತಿಯನ್ನು ಮಾಡುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ 'ನಾಗದೋಷ' ಎಂದು ಕರೆದರು. ಉದ್ಧೀಪನ ಅಥವಾ ನಿರುತ್ಸಾಹಿ ಯಾಗುವಿಕೆಯ ನಿಯಂತ್ರಣ ಇರುವುದು ನಾಗದೇವರಲ್ಲಿ.ಅವನ ಸ್ಮರಣೆಯನ್ನು ನಿಯಮ ಪೂರ್ವಕವಾಗಿ ಮಾಡಿದರೆ ಕ್ಷೇಮವಾಗುತ್ತದೆ. ಹೀಗೆಯೇ ಭಾವಕ್ಕನುಗುಣವಾಗಿ ಚಿಂತನೆ ಬೇಕು.ಕೇವಲ ನಾಗನೇ ಸಾಲದು.ಹಲವು ದೇವತಾ ಶಕ್ತಿಗಳ ದರ್ಶನ ಉಪಾಸನೆಗಳು ರಾಹು ಸ್ಥಿತಿಗನುಗುಣವಾಗಿ ನೋಡಬೇಕು.ಇಲ್ಲಿ ಕೇವಲ ಒಂದು ಉದಾಹರಣೆ ಹೇಳಿದ್ದೇನೆ. ಅಂತೂ ನಾಗನು ಎಲ್ಲರಿಗೂ ಒಂದಲ್ಲ ಒಂದು ಭಾವಕ್ಕೆ ಇದ್ದೇ ಇರುತ್ತಾನೆ. ಇದನ್ನು ಸಕಲ ದೇವರ ಚಿತ್ರಗಳಲ್ಲಿ ನೋಡಬಹುದು.ಕೈಯಲ್ಲಿ ಹಿಡಿದ ಭದ್ರಕಾಳಿ,ಕುತ್ತಿಗೆಗೆ ಸುತ್ತಿಕೊಂಡ ಶಿವ,ಹೊಟ್ಟೆಗೆ ಸುತ್ತಿಕೊಂಡ ಗಣಪ ಹೀಗೇ ಹಲವು ಸಂಕೇತಗಳಿವೆ.ಇದರಲ್ಲಿ ಸಕಲವನ್ನೂ ನಿಯಂತ್ರಿಸಿಕೊಂಡವನೇ ಭಗವಾನ್ ಶ್ರೀಹರಿ. ನಾಗರಾಜನನ್ನೇ ಸುರುಳಿಹಾಕಿ ಹಾಸಿಗೆ ಮಾಡಿ ಮಲಗಿದವ. ಇದಕ್ಕಾಗಿ 'ನಾಗಾಂತರ್ಯಾಮಿ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ಮೂರ್ತಿ ಭಗವಾನ್ ವಾಸುದೇವ ಪ್ರಿಯಂತಾಂ' ಎಂದು ಪ್ರಾಜ್ಞರು ತಿಳಿಸಿದರು. ಪ್ರತಿಯೊಬ್ಬರೂ ಅಂದರೆ ನಾಗದೇವರನ್ನು ನಂಬುವವರು ನಾಗದೇವರ ಉಪಾಸನೆ ಮಾಡಲೇ ಬೇಕು. ಅಂತಹ ಜ್ಞಾನಿಗಳು,ತಪಸ್ವಿಗಳಿಗೆ ಇದೆಲ್ಲಾ ಬೇಕಾಗಿಲ್ಲ.ಆದರೆ ಅವರ ಪಾಠವೇ ಇದಾಗಿದೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ