Skip to main content

ಬುದ್ಧಿಶಕ್ತಿಯನ್ನು ಕೊಲ್ಲುವ ಆಹಾರಗಳಿವು

ಬುದ್ಧಿಶಕ್ತಿಯನ್ನು ಕೊಲ್ಲುವ ಆಹಾರಗಳಿವು ಕೆಲವೊಂದು ಆಹಾರಗಳಲ್ಲಿರುವ ಪೋಷಕಾಂಶಗಳು ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ದೇಹದ ಶಕ್ತಿ ಹೆಚ್ಚಾಗಿ ಯಾವಾಗಲೂ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ. ಇನ್ನು ಕೆಲವು ಆಹಾರಗಳು ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಿಂದ ನಮ್ಮ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ. ಮಿದುಳಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ತಿಂದರೆ ಒಳ್ಳೆಯದು. ಆದರೆ ಮೆದುಳಿನ ಶಕ್ತಿಯನ್ನು ಕುಗ್ಗಿಸುವಂತಹ ಕೆಲವು ಆಹಾರಗಳು ಇವೆ. ಇದನ್ನು ನಾವು ತಿಳಿಯದೆ ತಿನ್ನುತ್ತಲೇ ಇರುತ್ತೇವೆ. ಇಂತಹ ಆಹಾರಗಳು ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜ್ಞಾಪಕ ಶಕ್ತಿಯನ್ನು ಕುಗ್ಗಿಸುತ್ತದೆ. ಇಂತಹ ಆಹಾರಗಳು ಮಿದುಳಿಗೆ ಋಣಾತ್ಮಕ ಪರಿಣಾಮ ಬೀರದಂತೆ ಮಾಡಲು ಕೆಲವೊಂದು ಸಲಹೆಗಳನ್ನು ನೀಡಲಾಗುತ್ತದೆ. ನಿಮ್ಮ ಜ್ಞಾಪಕ ಶಕ್ತಿಯನ್ನು ನಿಧಾನವಾಗಿ ಕೊಲ್ಲುವ 11 ಬಗೆಯ ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 1. ಸಕ್ಕರೆ ಉತ್ಪನ್ನಗಳು ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳು ನಿಮ್ಮಲ್ಲಿ ಬೊಜ್ಜು ಹೆಚ್ಚಿಸುವುದಲ್ಲದೆ, ಮಿದುಳಿನ ಕ್ರಿಯೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ದೀರ್ಘಾವಧಿ ತನಕ ಸಕ್ಕರೆ ಸೇವನೆಯಿಂದಾಗಿ ನರದ ಸಮಸ್ಯೆ ಉಂಟಾಗಬಹುದು ಮತ್ತು ಇದು ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಮತ್ತೊಂದು ಕಡೆಯಲ್ಲಿ ಸಕ್ಕರೆ ನಿಮ್ಮ ಕಲಿಯುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಇದರಿಂದಾಗಿ ಬೇಕರಿ ಪದಾರ್ಥಗಳು, ಸಕ್ಕರೆ, ಕಾರ್ನ್ ಸಿರಪ್ ಮತ್ತು ಫ್ರಕ್ಟೋಸ್ ಹೆಚ್ಚಾಗಿರುವ ಆಹಾರಗಳನ್ನು ತ್ಯಜಿಸಬೇಕು. 2. ಮದ್ಯಪಾನ ದೀರ್ಘಾವಧಿ ತನಕ ಮದ್ಯಪಾನ ಮಾಡಿದರೆ ಲಿವರ್ ಸಮಸ್ಯೆ ಕಾಡುವುದು ಸಾಮಾನ್ಯ ಮತ್ತು ಇದು `ಮಿದುಳಿನ ಮಂಜು'(ಬ್ರೈನ್ ಫಾಗ್)ನ್ನು ಉಂಟು ಮಾಡಬಹುದು. ಇದರ ಹೆಸರೇ ಹೇಳಿದಂತೆ ಮಿದುಳಿನ ಮಂಜುವಿನಿಂದ ಮಾನಸಿಕ ಗೊಂದಲವಾಗಬಹುದು. ಇದು ನಿಮ್ಮ ಯೋಚನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಹಾಗೂ ನಿಮ್ಮ ಜ್ಞಾಪಕ ಶಕ್ತಿ ಮೇಲೆಯೂ ಪರಿಣಾಮವಾಗಬಹುದು. ಕೆಲವು ಸಾಮಾನ್ಯ ವಸ್ತುಗಳ ಹೆಸರು ಅಥವಾ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದನ್ನು ಯಾವತ್ತಾದರೂ ಗಮನಿಸಿದ್ದೀರಾ? ಇದು ಕನಸೇ ಅಥವಾ ನಿಜವೇ ಎನ್ನುವ ಬಗ್ಗೆ ನಿಮಗೆ ಖಚಿತತೆಯಿಲ್ಲವೇ? ಹೀಗೆ ಆಗುತ್ತಿದ್ದರೆ ಅದು ಮದ್ಯಪಾನ ಸೇವನೆಯ ಪರಿಣಾಮ. ಇದು ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ನೀವು ಮದ್ಯಪಾನ ಸೇವನೆಯನ್ನು ಕಡಿಮೆ ಮಾಡಿದರೆ ಅಥವಾ ವಾರಕ್ಕೆ ಒಂದೆರಡು ಸಲ ಮಾತ್ರ ಮದ್ಯಪಾನ ಮಾಡಿದರೆ ಈ ಸಮಸ್ಯೆಯನ್ನು ನಿವಾರಿಸಬಹುದು. 3. ಜಂಕ್ ಫುಡ್ ಮೊಂಟ್ರೆಲಾದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ಜಂಕ್ ಫುಡ್ ನಿಂದ ಮೆದುಳಿನ ರಾಸಾಯನಿಕ ಬದಲಾವಣೆಯಾಗಿ ಇದು ಖಿನ್ನತೆ ಮತ್ತು ವ್ಯಾಕುಲತೆ ಉಂಟು ಮಾಡುತ್ತದೆ ಎನ್ನುವುದು ತಿಳಿದುಬಂದಿದೆ. ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರಗಳು ಸಹ ಕೆಲವು ಲಕ್ಷಣಗಳನ್ನು ಪ್ರಚೋದಿಸಬಹುದು. ನೀವು ಅವುಗಳನ್ನು ಸೇವಿಸುವುದನ್ನು ನಿಲ್ಲಿಸಿದಾಗ ಅವು ಇಂತಹ ಲಕ್ಷಣಗಳನ್ನು ತೋರಿಸಬಹುದು. ಸಂತಸ ಹಾಗೂ ಒಳ್ಳೆಯ ಭಾವನೆ ಉಂಟು ಮಾಡಲು ಪ್ರಮುಖವಾಗಿರುವ ರಾಸಾಯನಿಕ ಡೊಪಮೈನ್ ಉತ್ಪಾದನೆ ಮೇಲೆ ಇದು ಪರಿಣಾಮ ಬೀರಬಹುದು. ಡೊಪಮೈನ್ ಅರಿವಿನ ಕ್ರಿಯೆ, ಕಲಿಯುವ ಸಾಮರ್ಥ್ಯ, ಚುರುಕುತನ, ಪ್ರೇರಣೆ ಮತ್ತು ಸ್ಮರಣಶಕ್ತಿಗೆ ಬೆಂಬಲ ನೀಡುತ್ತದೆ. ಇದರಿಂದಾಗಿ ಕೊಬ್ಬು ಹೆಚ್ಚಾಗಿರುವ ಆಹಾರಗಳನ್ನು ತ್ಯಜಿಸುವುದು ತುಂಬಾ ಮುಖ್ಯ. 4. ಕರಿದ ತಿಂಡಿಗಳು ಬಹುತೇಕ ಎಲ್ಲಾ ಸಂಸ್ಕರಿತ ಆಹಾರಗಳು ರಾಸಾಯನಿಕಗಳು, ಬಣ್ಣ, ಸೇರ್ಪಡೆಗಳು, ಕೃತಕ ರುಚಿ, ಸಂಸ್ಕರಣವನ್ನು ಒಳಗೊಂಡಿರುತ್ತದೆ. ಈ ಹೈಪರ್ ಆ್ಯಕ್ಟಿವ್ ಉಂಟು ಮಾಡುವ ರಾಸಾಯನಿಕ ಕಾರಣ ಮಕ್ಕಳು ಮತ್ತು ವಯಸ್ಕರ ನಡವಳಿಕೆ ಮತ್ತು ಅರಿವಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಕರಿದ ಮತ್ತು ಸಂಸ್ಕರಿತ ಆಹಾರಗಳು ನಿಧಾನವಾಗಿ ಮೆದುಳಿನ ನರಮಂಡವನ್ನು ನಾಶ ಮಾಡುತ್ತದೆ. ಅದಾಗ್ಯೂ ಕೆಲವು ಎಣ್ಣೆಗಳು ತುಂಬಾ ಅಪಾಯಕಾರಿಯೆಂದು ಪರಿಗಣಿಸಲಾಗಿದೆ. ಅದರಲ್ಲೂ ಸೂರ್ಯಕಾಂತಿ ಎಣ್ಣೆ ಹೆಚ್ಚು ವಿಷಕಾರಿ ಅಂಶಗಳನ್ನು ಒಳಗೊಂಡಿದೆ. 5. ಸಂಸ್ಕರಿಸಿದ ಮತ್ತು ಮೊದಲೇ ಬೇಯಿಸಿದ ಆಹಾರಗಳು ಕರಿದ ಆಹಾರಗಳಂತೆ ಸಂಸ್ಕರಿಸಿದ ಮತ್ತು ಮೊದಲೇ ಬೇಯಿಸಿದ ಆಹಾರವು ಕೇಂದ್ರ ನರಮಂಡಲ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದ ಜೀವನದಲ್ಲಿ ಜ್ಞಾಪಕ ಶಕ್ತಿಯನ್ನು ಕಳಕೊಳ್ಳುವಂತಹ ಅಲ್ಜೈಮರ್ಸ್ ನಂತಹ ಕಾಯಿಲೆಗಳು ಕಾಡಬಹುದು. 6. ಹೆಚ್ಚು ಉಪ್ಪಿರುವ ಆಹಾರ ಹೆಚ್ಚು ಉಪ್ಪಿರುವ ಆಹಾರಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ ಮತ್ತು ಇದು ಹೃದಯದ ಮೇಲೂ ಪರಿಣಾಮ ಬೀರಬಹುದು. ಅದಾಗ್ಯೂ ಅಧ್ಯಯನಗಳು ಸಲಹೆ ಮಾಡುವಂತೆ ಹೆಚ್ಚು ಉಪ್ಪಿರುವ ಆಹಾರಗಳು ಅರಿವಿನ ಕ್ರಿಯೆ ಮತ್ತು ಯೋಚನಾ ಸಾಮರ್ಥ್ಯದ ಮೇಲೆ ಪರಿಣಾಮನ್ನುಂಟು ಮಾಡಬಹುದು. ಉಪ್ಪಿನಾಂಶ ಹೆಚ್ಚಿರುವ ಆಹಾರಗಳು ನಿಮ್ಮ ಜಾಣ್ಮೆಯನ್ನು ಕುಂದಿಸಬಹುದು. ಉಪ್ಪಿನಾಂಶ ಹೆಚ್ಚಾಗಿರುವ ಆಹಾರ ಮತ್ತು ನಿಕೋಟಿನ್ ಸೇವನೆ ಒಂದೇ ರೀತಿಯ ಪರಿಣಾಮ ಬೀರುತ್ತದೆ. 7. ಧಾನ್ಯಗಳು, ಶೇ. 100ರಷ್ಟು ಸಂಪೂರ್ಣ ಧಾನ್ಯ ಹೊರತುಪಡಿಸಿ ಎಲ್ಲಾ ವಿಧದ ಧಾನ್ಯಗಳು ನಿಮ್ಮ ಮೆದುಳಿನ ಕ್ರಿಯೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶೇ. 100ರಷ್ಟು ಸಂಪೂರ್ಣ ಧಾನ್ಯಗಳು ಸಮೃದ್ಧ ಮತ್ತು ನಾರಿನಾಂಶವನ್ನು ಹೊಂದಿರುತ್ತದೆ. ಇವು ಧಮನಿಯನ್ನು ವಯಸ್ಸಾಗುವುದಕ್ಕೆ ಕಾರಣವಾಗಬಹುದು. ನೀವು ದಿನನಿತ್ಯ ಧಾನ್ಯಗಳನ್ನು ಬಳಸಿದರೆ ನಿಮ್ಮ ದೇಹಕ್ಕೆ ಬೇಗನೆ ವಯಸ್ಸಾಗುತ್ತದೆ. ಇದರಿಂದ ಜ್ಞಾಪಕ ಶಕ್ತಿ ಕಳಕೊಳ್ಳುವುದು ಮತ್ತು ಮೆದುಳಿಗೆ ಮಂಜು ಮುಸುಕಿದಂತಹ ಅನುಭವವಾಗಹುದು. ಜಟಿಲ ಕಾರ್ಬೋಹೈಡ್ರೆಟ್ಸ್ ಗಳನ್ನು ನಿರಂತರವಾಗಿ ಸೇವನೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಶೇ. 100ರಷ್ಟು ಸಂಪೂರ್ಣ ಧಾನ್ಯದಿಂದ ಮಾಡಲಾಗಿರುವ ಬ್ರೆಡ್ ಸೇವಿಸಿ. 8. ಸಂಸ್ಕರಿಸಿದ ಪ್ರೊಟೀನ್ ಪ್ರೊಟೀನ್ ಗಳು ದೇಹದ ಸ್ನಾಯುಗಳ ಬೆಳವಣಿಗೆ ಮತ್ತು ದೇಹ ಸರಿಯಾಗಿ ಕಾರ್ಯನಿರ್ವಹಿಸಲು ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಾಂಸದಲ್ಲಿ ಉನ್ನತ ಗುಣಮಟ್ಟದ ಪ್ರೋಟೀನ್ ಇದೆ. ಆದರೆ ಹಾಟ್ ಡಾಗ್ಸ್, ಸಾಲಮಿ, ಸಾಸೇಜ್ ಮುಂತಾದವುಗಳನ್ನು ಕಡೆಗಣಿಸಿ. ನೈಸರ್ಗಿಕ ಪ್ರೋಟೀನ್ ನರವ್ಯೂಹದಲ್ಲಿ ನಿರೋಧಿಸಲು ದೇಹಕ್ಕೆ ನೆರವಾಗುತ್ತದೆ. ಸಂಸ್ಕರಿಸಿದ ಪ್ರೋಟೀನ್ ಇದಕ್ಕೆ ವಿರುದ್ಧವಾಗಿರುತ್ತದೆ. ನೈಸರ್ಗಿಕ ಮೀನು(ಟ್ಯುನ್ ಮತ್ತು ಸಲ್ಮೊನ್), ಹೈನು ಉತ್ಪನ್ನಗಳು, ವಾಲ್ ನಟ್ಸ್ ಮತ್ತು ನೈಸರ್ಗಿಕ ಬೀಜಗಳಕ್ಕು ಉನ್ನತ ಗುಣಮಟ್ಟದ ಪ್ರೋಟೀನ್ ಗಳಿವೆ. 9. ಅಪರಿಮಿತ ಕೊಬ್ಬನ್ನು ತ್ಯಜಿಸಿ ಅಪರಿಮಿತ ಕೊಬ್ಬು ಭಾರೀ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಹೃದಯ ಸಂಬಂಧಿ ಸಹಿತ ಮೇದಸ್ಸು ಮತ್ತು ಸ್ಥೂಲಕಾಯ ಇದರಲ್ಲಿ ಪ್ರಮುಖವಾದದ್ದು. ಅದಾಗ್ಯೂ ಇದು ನಿಮ್ಮ ಮೆದುಳಿಗೆ ತುಂಬಾ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಇದು ನಿಮ್ಮ ಮೆದುಳನ್ನು ನಿಷ್ಕ್ರೀಯವಾಗಿಸುತ್ತದೆ. ಇದು ಪ್ರತಿಫಲನ ಮತ್ತು ನಿಮ್ಮ ಮೆದುಳಿನ ಪ್ರತಿಕ್ರಿಯೆಯ ಗುಣಮಟ್ಟ ಮೇಲೆ ಪರಿಣಾಮ ಬೀರುತ್ತದೆ. ಇವುಗಳು ಪಾರ್ಶ್ಚವಾಯುವಿನ ಅಪಾಯವನ್ನು ಹೆಚ್ಚಿಸಬಹುದು. ಅತಿಯಾದ ಕೊಬ್ಬು ನಿಮ್ಮ ಮೆದುಳಿನ ಮೇಲೆ ಇತರ ಕೆಲವು ಪರಿಣಾಮ ಬೀರಬಹುದು: ದೀರ್ಘಾವಧಿಗೆ ಕೊಬ್ಬಿನ ಸೇವನೆಯಿಂದ ಮೆದುಳು ಸಂಕುಚಿತಗೊಳ್ಳುತ್ತದೆ. ಆಲ್ಜೈಮರ್ ಕಾಯಿಲೆಯಲ್ಲಿ ಆಗುವಂತೆ ಇಲ್ಲಿಯೂ ಮೆದುಳು ಸಂಕುಚಿತಗೊಳ್ಳುತ್ತದೆ. ಮೆದುಳಿನ ಕುಗ್ಗುವಿಕೆಯಿಂದ ಅಪಧಮನಿಗಳ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಅತಿಯಾದ ಕೊಬ್ಬಿನ ಸೇವನೆ ಮಿತಿಗೊಳಿಸುವುದರಿಂದ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. 10. ಕೃತಕ ಸಿಹಿ ತೂಕ ಕಡಿಮೆ ಮಾಡಲು ಪ್ರಯತ್ನಿಸುವಾಗ ಕೆಲವರು ಸಕ್ಕರೆ ಬದಲಿಗೆ ಕೃತಕ ಸಿಹಿಯನ್ನು ಬಳಸಿದರೆ ದಿನರಾತ್ರಿಯಾಗುವುದರೊಳಗೆ ತೂಕ ಕಳಕೊಳ್ಳಬಹುದು ಎಂದು ಭಾವಿಸುತ್ತಾರೆ. ಕೃತಕ ಸಿಹಿ ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದು ನಿಜ. ಆದರೆ ಇದು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದನ್ನು ಮಾಡುತ್ತದೆ. ದೀರ್ಘಾವಧಿಗೆ ಕೃತಕ ಸಿಹಿಯನ್ನು ಬಳಸಿದರೆ ಅದು ಮೆದುಳಿಗೆ ಪರಿಣಾಮ ಬೀರಿ ಸ್ಮರಣಶಕ್ತಿ ಕುಗ್ಗಿಸಬಹುದು. ಅದರಲ್ಲೂ ಅತಿಯಾದ ಕೃತಕ ಸಿಹಿ ಬಳಸುತ್ತಿದ್ದರೆ. 11. ನಿಕೋಟಿನ್ ನಿಕೋಟಿನ್ ಒಳ್ಳೆಯ ಆಹಾರ ಉತ್ಪನ್ನವಲ್ಲ, ಇದು ಅಂಗಾಗಕ್ಕೆ ರಕ್ತದ ಪ್ರವಹಿಸುವಿಕೆಯನ್ನು ನಿರ್ಬಂಧಿಸುವ ಮೂಲಕ, ಗ್ಲೂಕೋಸ್ ಮತ್ತು ಆಮ್ಲಜನಕದ ಸಾಮಾನ್ಯ ಹರಿವಿನೊಂದಿಗೆ ಮೆದುಳಿಗೆ ನಷ್ಟವನ್ನುಂಟು ಮಾಡುತ್ತಿದೆ. ನಿಕೋಟಿನ್ ನಿಂದಾಗಿ ಅಕಾಲಿಕ ವಯಸ್ಸಾಗುವಿಕೆ, ಬಾಯಿ ದುರ್ವಾಸನೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಇದು ರಕ್ತವಾಹಿನಿಗಳನ್ನು ಬಿಗಿಗೊಳಿಸಿ ನರಸಂವೇದಕಗಳ ನಿರ್ಮಾಣ ಮತ್ತು ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಮಿದುಳಿನ ಕ್ರಿಯೆಗೆ ಸಂಬಂಧಿಸಿದಂತೆ ಸಣ್ಣರಕ್ತನಾಳಗಳು ಪ್ರಮುಖ ಪಾತ್ರ ವಹಿಸುತ್ತದೆ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ