Skip to main content

ಮಧುಮೇಹ ಮತ್ತು ಆಹಾರ

ಯಾವ ಕಾಯಿಲೆಗೆ ಯಾವ ಮನೆ ಔಷಧಿ : ೯. ಮಧುಮೇಹ ಮತ್ತು ಆಹಾರ “ನಿಜವಾದ ವೈದ್ಯರು ಮೊದಲು ಕಾಯಿಲೆಗೆ ಕಾರಣವೇನೆಂದು ಕಂಡುಹಿಡಿಯುತ್ತಾರೆ. ಕಾಯಿಲೆ ಇದೆಯೆಂದು ಗೊತ್ತಾದರೆ ಅವರು ಮೊದಲು, ಆಹಾರದಿಂದ ಗುಣಪಡಿಸಲು ಪ್ರಯತ್ನಿಸುತ್ತಾರೆ. ಆಹಾರ ಸೇವನೆಯಿಂದ ಸೋಲು ಉಂಟಾದರೆ ಅವರು ಔಷಧಿಯನ್ನು ಕೊಡುತ್ತಾರೆ” ಎಂದು ಚೀನಾ ದೇಶದ ಆರನೇ ಶತಮಾನದ ವೈದ್ಯಕೀಯ ಲೇಖಕ ಸನ್‌ಸೆಮಿಯೊ ತಿಳಿಸಿದ್ದಾರೆ. ಮೇಲ್ಕಂಡ ಮಾತು ಈವೊತ್ತಿಗೂ ನಿಜವಾಗಿದೆ. ಮಧುಮೇಹದ ನಿಯಂತ್ರಣದಲ್ಲಿ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸುವುದು ಮೂಲ ಭೂತವಾಗಿ ಆಹಾರವೇ, ಆಹಾರವನ್ನು ಶರೀರದ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕೇ ಹೊರತು, ಹಸಿವು ಎಂದು ಸಿಕ್ಕಾಪಟ್ಟೆ ತಿನ್ನಬಾರದು. ಆಹಾರವನ್ನು ಮೂಲಭೂತವಾಗಿ ಈ ಕೆಳಕಂಡಂತೆ ವಿಂಗಡಿಸಬಹುದು ೧. ಕಾರ್ಬೋಹೈಡ್ರೇಟ್‌ – ಸಕ್ಕರೆ ಪಿಷ್ಠಪದಾರ್ಥಗಳು ಇತ್ಯಾದಿ. ೨. ಕೊಬ್ಬಿನ ಪದಾರ್ಥಗಳು-ಎಣ್ಣೆ, ತುಪ್ಪ, ಬೆಣ್ಣೆ, ವನಸ್ಪತಿ ಇತ್ಯಾದಿ. ಇವೆರೆಡು ಶರೀರಕ್ಕೆ ಇಂಧನವಿದ್ದಂತೆ ಅಂದರೆ, ಶರೀರದಲ್ಲಿ ಉಷ್ಣತೆ ಮತ್ತು ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ೩. ಪ್ರೋಟೀನ್ಸ್‌ (ಸಸಾರಜನಕ) ಮೀನು, ಮಾಂಸ, ಮೊಟ್ಟೆ ಹಾಲು, ಮತ್ತು ಅದರ ಉತ್ಪನ್ನಗಳು, ಬೇಳೆ ಕಾಳುಗಳು-ಮೊದಲಾದುವು. ಇವು ಶರೀರದ (ಟಿಶ್ಯೂ-ಊತಕಗಳು) ನಿರ್ಮಾಣಕ್ಕೆ ಅಗತ್ಯ. ೪. ಖನಿಜಗಳು-ಕಬ್ಬಿಣ, ಸುಣ್ಣ, ಅಯೋಡಿನ್‌ ಮುಂತಾದವು. ೫. ವಿಟಮಿನ್‌ಗಳು-ನೀರು ಮತ್ತು ನೀರಿನಲ್ಲಿ ಕರಗುವಂತಹವು. ೬. ಸೆಲ್ಯೂಲೋಸ್‌ (ಗಿಡನಾರು). ೭. ನೀರು. ಆಹಾರ: ಮಾಡಬೇಕಾದ್ದು; ಮಾಡಬಾರದ್ದು ಮಧುಮೇಹ ಕಾಯಿಲೆಯ ಚಿಕಿತ್ಸೆಯಲ್ಲಿ ಆಹಾರ ಪ್ರಧಾನ ಪಾತ್ರವನ್ನು ವಹಿಸುತ್ತದೆ, ಔಷಧಿಗಳು ಮತ್ತು ವ್ಯಾಯಾಮ ಪೂರಕವಾಗಿರುತ್ತವೆ. ಮಧುಮೇಹದವರು ಆಹಾರದ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳು: ೧. ವೈದ್ಯರು ತಿಳಿಸಿರುವ ಆಹಾರವನ್ನೇ ಪ್ರತಿ ನಿತ್ಯ ಸೇವಿಸಬೇಕು. ಆಹಾರ ಸೇವನೆಯಲ್ಲಿ ವ್ಯತ್ಯಾಸ ಮಾಡಿಕೊಳ್ಳುವ ಉದ್ದೇಶವಿದ್ದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ. ೨. ಊಟದ ವಿಷಯದಲ್ಲಿ ತೊಂದರೆಯಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿರಿ. ೩. ನಿಮ್ಮ ವೈದ್ಯರು ಪಟ್ಟಿ ಮಾಡಿಕೊಟ್ಟಿರುವ ಆಹಾರವನ್ನೇ ಪ್ರತಿ ನಿತ್ಯ ಸೇವಿಸುವುದು ಸೂಕ್ತ. ೪. ಊಟವನ್ನು ಬಿಡಬಾರದು. ಅಲ್ಲದೆ, ನಿಶ್ಚಿತವಾದ ಊಟದ ನಡುವೆ ತಿಂಡಿ ತಿನಿಸನ್ನು ಸೇವಿಸದಿರುವುದು ಉತ್ತಮ. ಊಟದ ನಡುವೆ ಸಿಹಿ-ತಿಂಡಿಗಳನ್ನು, ಬೇಕರಿ ತಿಂಡಿಗಳನ್ನು ಆಲ್ಕೋಹಾಲನ್ನು ಕುಡಿದು ಊಟದಿಂದ ವಂಚಿತರಾಗಬೇಡಿ. ೫. ನೀವು, ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರೆ, ಆಹಾರವನ್ನು ನಿಗದಿಪಡಿಸಿದ ಸಮಯದಲ್ಲೇ ಸೇವಿಸಿರಿ. ಇನ್ಸುಲಿನ್‌ ತೆಗೆದುಕೊಳ್ಳುತ್ತಿರುವವರು ನಿಗದಿಪಡಿಸಿದ ವೇಳೆಯಲ್ಲಿ ಊಟವನ್ನು ಮಾಡುವುದರಿಂದ, ರಕ್ತದಲ್ಲಿ ಸಕ್ಕರೆಯ ಅಂಶದ ಕೊರತೆಯನ್ನು ತಡೆಗಟ್ಟಿಕೊಳ್ಳಬಹುದು. (ಹೈಪೋಗ್ಲೈ ಸಿಮಿಯಾ). ೬. ಅತಿಯಾಗಿ ಒಂದೇ ಸಾರಿ ಊಟ ಮಾಡುವ ಬದಲು, ಆಗಿಂದಾಗ್ಗೆ, ನಿಗದಿತ ವೇಳೆಯಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು. ೭. ಪ್ರತಿ ನಿತ್ಯ ಊಟವನ್ನು ನಿಗದಿತ ಸಮಯದಲ್ಲೇ ಮಾಡುವುದು ಸೂಕ್ತ. ೮. ವೈದ್ಯರ ಸಲಹೆಯನ್ನು ಪಡೆಯದೆ, ಕೂಡಲೇ ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿರಿ. ೯. ಪ್ರಮಾಣಬದ್ಧವಾದ ಆಹಾರವನ್ನು ಸೇವಿಸಿರಿ. ೧೦. ದ್ವಿದಳ ಧಾನ್ಯಗಳು, ಕಾಳುಗಳು, ತುಪ್ಪ ಅಥವಾ ಎಣ್ಣೆಯನ್ನು ಅಳತೆ ಪ್ರಮಾಣದಲ್ಲಿ ಸೇವಿಸಿರಿ. ಬೇಯಿಸಿದ ನಂತರ ಅಳತೆ ಪ್ರಮಾಣದಲ್ಲಿ ಸೇವಿಸಿರಿ. ೧೧. ಅನ್ನ, ಆಲೂಗಡ್ಡೆ, ಹಣ್ಣುಗಳನ್ನು ತಿನ್ನಬಾರದೆಂದು ನಿಷೇಧವೇನಿಲ್ಲ. ಆದರೆ ಅವುಗಳನ್ನು ಸೇವಿಸುವ ಮೊದಲು ಅವುಗಳಲ್ಲಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಕ್ಯಾಲೊರಿ ಮೌಲ್ಯವನ್ನು ಅರಿತಿರಬೇಕು. ನೆನೆಪಿಡಿ: ಮಧುಮೇಹದವರಿಗೆ, ವಿಶೇಷವಾದ ಆಹಾರದ ಅಗತ್ಯವೇನಿಲ್ಲ. ತನ್ನ ಕುಟುಂಬದ ಸದಸ್ಯರು ಸೇವಿಸುವ ಆಹಾರವನ್ನೇ ಅಳತೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದಷ್ಟೆ. ಈ ಕೆಳಕಂಡ ಆಹಾರ ಪದಾರ್ಥಗಳನ್ನು ಮಧುಮೇಹದವರು ಸೇವಿಸಬಹುದು. ೧. ನೀರು, ಸಕ್ಕರೆ ಇಲ್ಲದೆ ಕಾಫಿ, ಟೀ, ಕೊಬ್ಬು ಇಲ್ಲದ ಸೂಪನ್ನು ಸೇವಿಸಬಹುದು. ೨. ನಿಂಬೆಹಣ್ಣಿನ ರಸ, ಉಪ್ಪಿನ ಕಾಯನ್ನು ಸೇವಿಸಬಹುದು. ೩. ಕಡಿಮೆ ಪ್ರಮಾಣದಲ್ಲಿ Saffola ದಂತಹ ಎಣ್ಣೆಯನ್ನು ಉಪಯೋಗಿಸಬಹುದು. ೪. ಶೇಕಡ ಮೂರರಿಂದ, ನಾಲ್ಕರಷ್ಟು ಕಾರ್ಬೋಹೈಡ್ರೇಟ್ಸ್‌ (ಶರ್ಕರಪಿಷ್ಠಿ ಇರುವ) ತಾಜಾ ತರಕಾರಿಗಳನ್ನು, ಹಾಗೆಯೇ ಅಥವಾ ಅರ್ಧ ಬೇಯಿಸಿ (ಉದಾ: Beetroot, Potato, Carrot) ಕಡಿಮೆ ಪ್ರಮಾಣದಲ್ಲಿ ಉಳಿದವನ್ನು ಬೇಕಾದಷ್ಟು) ತಿನ್ನಬಹುದು. ೫. ಏಕದಳ ಧಾನ್ಯಗಳಲ್ಲಿ ರಾಗಿ, ಗೋಧಿ, ಅಕ್ಕಿಯನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಕೆಳಕಂಡ ಪದಾರ್ಥಗಳನ್ನು ಮಧುಮೇಹದವರು ಸೇವಿಸಬಾರದು: ೧. ಐಸ್‌ಕ್ಯಾಂಡಿ, ಐಸ್‌ಕ್ರೀಮ್‌, ಗ್ಲೂಕೋಸ್‌, ಜೇನುತುಪ್ಪ, ಬೆಲ್ಲ, ಜಾಮ್‌, ಸಕ್ಕರೆ, ಪಾನಕ. ೨. ಕೇಕ್‌ಗಳು, ಪೇಡ, ಬಿಸ್ಕತ್‌ಗಳು ಹಾಲಿನ ಉತ್ಪನ್ನಗಳು. ೩. ಬಿಯರ್, ವೈನ್‌ ಮತ್ತು ಇತರೆ ಆಲ್ಕೋಹಾಲ್‌ ಪದಾರ್ಥಗಳನ್ನು ಖಂಡಿತವಾಗಿಯೂ ಸೇವಿಸಬಾರದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ