Skip to main content

ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು

ಸಂಬಂಧಗಳನ್ನು ಗಟ್ಟಿಗೊಳಿಸಲು, ಹೊಸ ಸಂಬಂಧಗಳನ್ನು ಬೆಳೆಸಲು ಆಮಂತ್ರಣ ಪತ್ರಿಕೆ ಮಹತ್ವದ ಪಾತ್ರವಹಿಸುತ್ತದೆ. ಮಗುವಿನ ನಾಮಕರಣ, ಉಪನಯನ, ವಿವಾಹ ಮತ್ತು ಗೃಹಪ್ರವೇಶಾದಿ ಎಲ್ಲ ಕಾರ್ಯಗಳಲ್ಲಿ ಮುಹೂರ್ತವನ್ನು ನಿಗದಿಪಡಿಸಲು ವಿಶೇಷ ಮಹತ್ವ ಕೊಡಲಾಗುತ್ತದೆ. ಆದರೆ ಆಮಂತ್ರಣ ಪತ್ರಿಕೆಯ ವಿಷಯದಲ್ಲಿ ಈ ಅಂಶವನ್ನು ನಿರ್ಲಕ್ಷಿಸಲಾಗಿದೆ. ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವ ಪೂರ್ವದಲ್ಲಿ ಒಂದು ಹಸ್ತ ಲಿಖಿತ ಪ್ರತಿಯನ್ನು ತಯಾರಿಸಬೇಕು. ಅದನ್ನು ತಯಾರಿಸಲು ಮುದ್ರಣಕ್ಕೆ ಕೊಡಲು ಶುಭ ತಿಥಿ ವಾರ ಮತ್ತು ನಕ್ಷತ್ರಗಳನ್ನು ನೋಡುವುದು ಅವಶ್ಯವಾಗಿದೆ. ಆಮಂತ್ರಣ ಪತ್ರಿಕೆಗಳನ್ನು ಕೊಡಲು ವ್ಯಕ್ತಿಗತವಾಗಿ ಹೋಗುವುದಿದ್ದರೆ ಯಾವ ದಿನ ಯಾವ ದಿಕ್ಕಿಗೆ ಹೋಗಬೇಕು ಎನ್ನುವುದನ್ನು ಕೂಡ ಗಮನಿಸಬೇಕು. ಚಂದ್ರ ಚಂದ್ರನು ಮುಹೂರ್ತದ ಆಧಾರವಾಗಿರುವನು. ಕಾರಣ ಚಂದ್ರನು ಬಲಿಷ್ಣನಾಗಿರುವಾಗ ಆಮಂತ್ರಣ ಪತ್ರಿಕೆ ಬರೆಯಬೇಕು. ಶುಕ್ಲ ಪಕ್ಷದ ದಶಮಿಯಿಂದ ಕೃಷ್ಣ ಪಕ್ಷದ ಪಂಚಮಿಯವರೆಗೆ ಚಂದ್ರ ಬಲಿಷ್ಠನಾಗಿರುವನು. ಶುಕ್ಲ ಪಕ್ಷ ಪ್ರತಿಪಾದದಿಂದ ದಶಮಿಯವರೆಗೆ ಮಧ್ಯಮ ಬಲ ಮತ್ತು ಕೃಷ್ಣ ಪಕ್ಷದ ಪಂಚಮಿಯಿಂದ ಅಮಾವಾಸ್ಯೆಯವರೆಗೆ ಬಲಹೀನನಾಗಿರುತ್ತಾನೆ. ರಿಕ್ತಾ, ಅಮಾವಾಸ್ಯೆ, ಭದ್ರಾ, ಸಂಕ್ರಾಂತಿ ತಿಥಿಗಳು ನಿಷಿದ್ಧವಾಗಿವೆ. ವಾರ ಮತ್ತು ತಿಥಿ ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಶ್ರೇಷ್ಠವಾಗಿವೆ. ಸೋಮವಾರ ಮತ್ತು ಶನಿವಾರಗಳು ಮಧ್ಯಮ. ಅದರಲ್ಲಿಯೂ ಬುಧವಾರ ದ್ವಿತೀಯಾ, ಸಪ್ತಮಿ, ದಶಮಿ ಇದ್ದರೆ, ಗುರುವಾರ ಪಂಚಮಿ, ದಶಮಿ, ಪೂರ್ಣಿಮಾ ಇದ್ದರೆ, ಶುಕ್ರವಾರ ತೃತೀಯಾ, ಅಷ್ಟಮಿ, ತ್ರಯೋದಶಿ ತಿಥಿಗಳಿದ್ದರೆ ಅತಿ ಉತ್ತಮ. ಯಾವ ವಾರ ಕಾರ್ಯ ಪ್ರಾರಂಭಿಸಲಾಗುತ್ತದೆಯೋ ಆ ದಿನದ ಗ್ರಹವು (ಬುಧ, ಗುರು, ಶುಕ್ರ) ಪಾಪಗ್ರಹಗಳಿಂದ ದೃಷ್ಟವಾಗಿರಬಾರದು. ನಕ್ಷತ್ರಗಳು ಚಂದ್ರನು ಸ್ವಾತಿ, ಪುನರ್ವಸು, ಶ್ರವಣ, ಧನಿಷ್ಠ, ಶತ:ಭಿಷ, ಅಶ್ವಿನಿ ಮತ್ತು ಹಸ್ತ ನಕ್ಷತ್ರಗಳಲ್ಲಿದ್ದರೆ ವಿಶೇಷ ಶುಭ. ಉತ್ತರ ಫಾಲ್ಗುಣಿ, ಉತ್ತರ ಆಷಾಢ, ಉತ್ತರ ಭಾದ್ರಪದ, ರೋಹಿಣಿ, ಕೃತಿಕಾ, ಜ್ಯೇಷ್ಠಾ ಕೂಡ ಶುಭವಾಗಿವೆ. ಪ್ರಯಾಣ ಮುಹೂರ್ತ ಆಮಂತ್ರಣ ಪತ್ರಿಕೆಗಳನ್ನು ಕೊಡಲು ಪರ ಊರಿಗೆ ಹೋಗಬೇಕಾದರೆ, ಯಾವ ದಿಕ್ಕಿಗೆ ಹೋಗಬೇಕಾಗಿದೆಯೋ ಆ ಗ್ರಹದ ವಾರದಂದೇ ಹೋಗಬೇಕು. ಪೂರ್ವ-ಸೂರ್ಯ-ಭಾನುವಾರ, ಉತ್ತರಪೂರ್ವ-ಚಂದ್ರ-ಸೋಮವಾರ, ದಕ್ಷಿಣ ಪೂರ್ವ-ಶುಕ್ರ-ಶುಕ್ರವಾರ, ಪಶ್ಚಿಮ-ಶನಿ-ಶನಿವಾರ ಸಾಧ್ಯವಿದ್ದಷ್ಟು ವಿರುದ್ಧ ದಿಕ್ಕಿಗೆ ಹೋಗುವುದನ್ನು ತಪ್ಪಿಸಬೇಕು. ಇದಲ್ಲದೆ ಆಯಾ ವಾರದ ರಾಹುಕಾಲ ಮತ್ತು ಗೌರ ಪಂಚಾಂಗದಿಂದ ಆನಂದಾದಿ ಯೋಗಗಳನ್ನು ನೋಡಿಕೊಂಡು, ಗಣಪತಿ ಮತ್ತು ಕುಲದೇವತೆಗಳ ಧ್ಯಾನ ಮಾಡಿ ಆಮಂತ್ರಣ ಪತ್ರಿಕೆಯನ್ನು ಬರೆಯಬೇಕು. ಯಾವ ಕಾರ್ಯಕ್ಕಾಗಿ ಆಮಂತ್ರಣ ಪತ್ರಿಕೆಯನ್ನು ಬರೆಯಲಾಗುತ್ತದೆಯೋ ಅದು ನಿರ್ವಿಘ್ನವಾಗಿ ನೆರವೇರಲು ಸಾಮರ್ಥ್ಯಾನುಸಾರವಾಗಿ ಸಂಕಲ್ಪ ಮಾಡಿ ಬರೆದ ನಂತರ ದೇವರ ಫೋಟೊ ಅಥವಾ ಪ್ರತಿಮೆಗಳ ಸಮ್ಮುಖದಲ್ಲಿ ಇಟ್ಟು ಅರಿಶಿನ-ಕುಂಕುಮ-ಪುಷ್ಪಾದಿಗಳಿಂದ ಪೂಜೆ ಮಾಡಿ ನಂತರ ಮುದ್ರಣಕ್ಕೆ ಕೊಡಬೇಕು. ಮುದ್ರಿತವಾದ ಪತ್ರಿಕೆಗಳನ್ನು ಇದೇ ಪ್ರಕಾರ ಪೂಜಿಸಿ, ಮೊದಲನೆಯ ಪತ್ರಿಕೆಯನ್ನು ಕುಲದೇವರಿಗೆ, ಗುರುಗಳಿಗೆ ಅರ್ಪಿಸಿ ನಂತರ ಸಂಬಂಧಿಕರ ಕ್ರಮದಲ್ಲಿ ಬರೆಯಬೇಕು. -ಸಂಗ್ರಹ

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...