Skip to main content

ಕಂಕಣಬಲ ಕೂಡಿ ಬರಲು ಏನು ಮಾಡಬೇಕು?

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ಮದುವೆ. ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಕಂಡರೆ, ಕೆಲವರು ಕಾರಾಗೃಹವಾಸಿಗಳು ಸಹ ಆಗಿದ್ದಾರೆ. ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ. 2ನೇ ಮನೆಯ ಕುಟುಂಬ ಸ್ಥಾನ, 4ನೇ ಮನೆ ಸುಖದ ಸ್ಥಾನ, 9ನೇ ಮನೆ ಭಾಗ್ಯದ ಸ್ಥಾನ, 11ನೇ ಮನೆ ಲಾಭ ಸ್ಥಾನವಾಗಿರುತ್ತದೆ. ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ. ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ, ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ ಇಲ್ಲವೆ ರಾಜಕೀಯ ಸಂಘ-ಸಂಸ್ಥೆಗಳಲ್ಲಿ ದೊಡ್ಡ ಕೆಲಸದಲ್ಲಿರುವ ಸಂಗಾತಿ. ಏಕಪತ್ನಿ; ಪೀಡಿತನಾಗಿದ್ದರೆ ಅನೇಕ ಜನ ಪತ್ನಿಯರು, ವಯಸ್ಸಾದ ಮೇಲೆ ವಿವಾಹ, ಅನ್ಯ ಸ್ತ್ರೀ ಆಸಕ್ತ, ಸ್ತ್ರೀ ವಿಯೋಗ, ಸ್ತ್ರೀ ದ್ವೇಷಿ, ಸ್ತ್ರೀಯರಿಂದ ದ್ವೇಷಿಸಲ್ಪಡುವ, ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ, ತಂದೆ ಕಡೆ ಸಂಬಂಧದಲ್ಲಿ ವಿವಾಹ, ವಿವಾಹಕ್ಕೆ ಅನೇಕ ತೊಡರುಗಳು. ಚಂದ್ರ : ಬಲಿಷ್ಠನಾಗಿದ್ದರೆ ಸುಂದರಿ, ದ್ವಿಭಾರ್ಯ, ಪತ್ನಿಯಿಂದ ಭಾರಿ ಸುಖ, ಉತ್ತಮ ಯುವತಿಯ ಪತಿ, ಅತಿಕಾಮಿ, ಮೃದು ಪತ್ನಿ, ಪತ್ನಿ ಹೋಟೆಲ್, ಬಟ್ಟೆ, ರಸ ಪದಾರ್ಥ, ಸುಗಂಧ ದ್ರವ್ಯದ ವ್ಯಾಪಾರಿ, ಕ್ಷೀಣ ಚಂದ್ರನಿದ್ದರೆ ವಿಧುರ, ತಾಯಿ ಕಡೆ ಸಂಬಂಧದಲ್ಲಿ ವಿವಾಹ, ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಶೀಘ್ರ ಮರಣ. ಪತ್ನಿ ಗಂಡುಬೀರಿ. ಅನ್ಯರ ಸಂಗ, ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ. ಪತ್ನಿಗೆ ಭೂಮಿ, ವಿದ್ಯುತ್, ಆಸ್ಪತ್ರೆಯಲ್ಲಿ ಕೆಲಸ. ಬುಧ : ಪಂಡಿತೆ, ಇಷ್ಟ ಪಡುವ ಪತ್ನಿ, ಸುಂದರ ಅಲಂಕಾರಿಕ ವಸ್ತ್ರ ಆಭರಣ ಪ್ರಿಯ. ಪತ್ರಿಕೆ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ನಾಶ, ಪತ್ನಿಗೆ ಅನ್ಯರ ಸಂಬಂಧ. ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ. ಗುರು ಪೀಡಿತನಾಗಿದ್ದರೆ ಮೇಲೆ ತಿಳಿಸಿದ ಫಲಗಳಲ್ಲಿ ವ್ಯತ್ಯಾಸವುಂಟು. ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಖ್ಯಾತ ಕಲಾವಿದೆ ಇಲ್ಲವೆ ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮ ಪತ್ನಿ, ಪೀಡಿತನಾಗಿದ್ದರೆ ಹೀನ ಸ್ತ್ರೀ ಸಂಗ, ಪತ್ನಿ ಬಡವಿ, ಪತ್ನಿಗೆ ಮರಣ, ಕೆಳವರ್ಗದ ಕಲಾವಿದೆ. ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕೆಳವರ್ಗದ ಕೆಲಸದಲ್ಲಿರುವವಳು, ಸ್ತ್ರೀಯರಿಂದ ತಿರಸ್ಕಾರ, ಅನೇಕ ಸ್ತ್ರೀ ಸಂಗ. ವಿವಾಹಕ್ಕೆ ಅಡೆತಡೆ, ತಡವಾದ ವಿವಾಹ. ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿಗೆ ಋತಸ್ರಾವದ ತೊಂದರೆ, ಪತ್ನಿ ಅತಿ ಬುದ್ಧಿವಂತೆ, ಪರದೇಶ ವಾಸಿ, ಅನ್ಯ ಜಾತಿ ಪತ್ನಿಯಾಗಿರಲೂ ಸಾಧ್ಯ. ಕೇತು : ಅನ್ಯ ಜಾತಿ ವಿವಾಹ, ವಿವಾಹಕ್ಕೆ ಭಾರೀ ಅಡೆತಡೆ, ಬಹುತೇಕ ವಿವಾಹ ದುರಂತ (ಪತ್ನಿ ವಿಚ್ಚೇದನ ಅಥವಾ ಮರಣ) ದುಷ್ಟ ಪತ್ನಿ, ಹೀನ ಸ್ತ್ರೀಯರಲ್ಲಿ ಆಸಕ್ತಿ, ವಿವಾಹದ ಸಂಬಂಧ ಹೆಚ್ಚು ಗಲಾಟೆ, ಮಾನ ಹಾನಿ, ಸಂಗಾತಿಗೆ ಕಂಪ್ಯೂಟರ್, ಮ್ಯಾಜಿಕ್, ಮಾಟ ವಿದ್ಯೆ ಒಲಿಯುತ್ತದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...