Skip to main content

ಲಗ್ನದಲ್ಲಿರುವುದು ಸೌಂದರ್ಯ

ನೀವು ಸುಂದರರೇ? ನಿಮ್ಮ ಆಕೃತಿ, ಹಲ್ಲು, ಸೊಂಟ, ಇವ್ಯಾವುವಾದರೂ ನಿಮ್ಮನ್ನು ಕುರೂಪಿಗಳಾಗಿ ಕಾಣುವಂತೆ ಮಾಡುತ್ತಿದೆಯೇ? ಪರವಾಗಿಲ್ಲ ಚಿಂತಿಸದಿರಿ. ನಿಮ್ಮ ಲಗ್ನಕ್ಕನುಗುಣವಾಗಿ ರೂಪ ಇರುತ್ತದೆ. ನಿಮ್ಮ ಲಗ್ನವನ್ನು ನೋಡುವ, ಸ್ಥಿತವಾಗಿರುವ ಗ್ರಹಗಳಿಗನುಗುಣವಾಗಿ ನಿಮ್ಮ ರೂಪ ಇರುತ್ತದೆ. ಈ ಕೆಳಗೆ ರೂಪಕ್ಕೆ ತಕ್ಕ ಸಲಹೆಗಳನ್ನು ಕೊಡಲಾಗಿದೆ. ಮೇಷ: ಅಗಲವಾದ ದೊಡ್ಡದಾದ ಹಣೆ ಇರುತ್ತದೆ. ತಲೆಕೂದಲನ್ನು ಹಿಂದಕ್ಕೆ ಬಾಚಿದಲ್ಲಿ ನಿಮ್ಮ ಬುದ್ಧಿವಂತಿಕೆ ಹಾಗೂ ನಿಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ನಿಮ್ಮ ಗದ್ದ ಚಿಕ್ಕದಾಗಿರುವುದರಿಂದ ಮುಖಕ್ಕೆ ಪೌಡರ್ ಹಾಗೂ ಫೌಂಡೇಷನ್ ಕ್ರೀಮ್ ನಿಂದ ಅದನ್ನು ದೊಡ್ಡದಾಗಿ ಕಾಣಿಸುವಂತೆ ಮಾಡಿಕೊಳ್ಳಿ. ವೃಷಭ: ನಿಮ್ಮ ಗಂಟಲು ಹೊರಗೆ ಬಂದಂತೆ ಕಾಣಿಸುತ್ತದೆ. ಅದು ಹಂಸದಂತೆ ಉದ್ದವಾಗಿರುತ್ತದೆ. ಹಾಗಾಗಿ ಕತ್ತಿಗೆ ಆಭರಣಗಳನ್ನು ಉಪಯೋಗಿಸಿದಲ್ಲಿ ಕತ್ತು ಸುಂದರವಾಗಿ ಕಾಣುತ್ತದೆ. ಮಿಥುನ: ಕೈಕಾಲುಗಳು ತೆಳ್ಳಗೆ ಉದ್ದವಾಗಿರುತ್ತವೆ. ಬೆರಳುಗಳು ಹಾಗೂ ಉಗುರುಗಳು ಚೆನ್ನಾಗಿ ರೂಪುಗೊಂಡಿರುತ್ತವೆ. ಒಳ್ಳೆಯ ಕಂಪನಿಯ ಉಗುರುಬಣ್ಣವನ್ನು ಹಚ್ಚಬೇಕು. ಕಾಲ್ಬೆರಳಿಗೆ ಉಂಗುರಗಳನ್ನು ಹಾಕಿಕೊಳ್ಳುವುದು, ಗೆಜ್ಜೆಗಳನ್ನು ಹಾಕಿಕೊಂಡಲ್ಲಿ ಕೈಕಾಲುಗಳು ಸುಂದರವಾಗಿ ಕಾಣುತ್ತದೆ. ಕಟಕ: ಸೊಂಟ ಚೆನಾಗಿರುತ್ತದೆ. ಹೀಗಾಗಿ ಅದನ್ನು ಹಾಗೇ ಕಾಪಾಡಿಕೊಳ್ಳಿ. ಯದ್ವಾತದ್ವಾ ತಿಂದು ಸೊಂಟದ ಆಕಾರವನ್ನು ಕೆಡಿಸಿಕೊಳ್ಳಬೇಡಿ. ಸಿಂಹ: ತೆಳ್ಳಗಿದ್ದು ರಾಜ ಗಾಂಭೀರ್ಯವಿರುತ್ತದೆ. ನೀವು ನಿಮಗೆ ಮನಕ್ಕೆ ಇಷ್ಟವಾದುದನ್ನು ತಿನ್ನಿ. ನಿಮ್ಮ ಲಗ್ನಕ್ಕನುಗುಣವಾಗಿ ದಪ್ಪವಾಗುವ ಭಯ ಬಿಡಿ. ಬೇರೆ ಲಗ್ನದವರಿಗಿಂತ ನಿಮಗೆ ಬೇಗ ಸುಕ್ಕು ಬರುತ್ತದೆ. ಹಾಗಾಗಿ ನಿಮ್ಮ ಚರ್ಮ ಸುಕ್ಕಾಗುವುದನ್ನು ತಡೆಗಟ್ಟುವುದರ ಬಗ್ಗೆ ಯೋಚಿಸಿ. ಹಾಲಿನ ಕೆನೆ ಹಚ್ಚಿಕೊಂಡು ಚರ್ಮ ನುಣುಪಾಗಿರುವಂತೆ ನೋಡಿಕೊಳ್ಳಿ. ಕನ್ಯಾ: ಮುಖವೇ ನಿಮಗೆ ಅದೃಷ್ಟವನ್ನು ತಂದುಕೊಡುವಂತಿರುತ್ತದೆ. ದೊಡ್ಡ ಕಣ್ಣುಗಳು, ಆದರ್ಶ ಹಣೆ, ದಟ್ಟವಾದ ಕೂದಲು, ಸುಂದರ ದಂತಪಂಕ್ತಿ ಇವು ನಿಮ್ಮ ಆಸ್ತಿ. ಬುಧ ಅಧಿಪತಿಯಾಗಿರುವುದರಿಂದ ನುಣುಪಾದ ಮೂಗುಳ್ಳವರಾಗಿದ್ದು ದೇಹದ ಸ್ನಾಯುಗಳು ಸಂಕುಚಿತವಾಗುವ ಸಂಭವವಿರುವುದರಿಂದ ಅದನ್ನು ತಡೆಯುವಂತೆ ನೋಡಿಕೊಳ್ಳಬೇಕು. ತುಲಾ: ಅಂಡಾಕಾರದ ಮುಖ ಹಾಗೂ ಮುಖಾಕೃತಿ ಬಹಳ ಆಕರ್ಷಣೀಯ. ನೀವು ಮೇಕಪ್ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು. ನಿಮ್ಮ ಚರ್ಮ ಸಂರಕ್ಷಣೆಯನ್ನು ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಚರ್ಮದ ಮೇಲೆ ಚಿಕ್ಕ ಚಿಕ್ಕ ಗುರುತು ಅಥವಾ ಕಲೆಗಳು ಕಂಡುಬರುವುವು. ಇದಕ್ಕಾಗಿ ಹೆಚ್ಚು ನಾರಿನಂಶವುಳ್ಳ ಪದಾರ್ಥಗಳನ್ನೇ ತಿನ್ನಿ. ಚೆನ್ನಾಗಿ ನೀರು ಕುಡಿಯಿರಿ. ಹಣ್ಣಿನ ರಸ ಹಾಗೂ ತರಕಾರಿ ರಸವನ್ನು ಜಾಸ್ತಿ ಉಪಯೋಗಿಸಿರಿ. ಕಾಫಿ, ಟೀ ಕುಡಿಯುವುದನ್ನು ಬಿಡುವುದು ಒಳ್ಳೆಯದು. ವೃಶ್ಚಿಕ: ಗುಪ್ತ ಲಗ್ನದವರಾಗಿರುವ ನಿಮ್ಮ ಕಣ್ಣುಗಳು ಆಳವಾದ ನಿಗೂಢ ಕೊಳಗಳಂತಿರುತ್ತವೆ. ನೀವು ಬಹಳ ಜಾಗರೂಕತೆಯಿಂದ ಮೇಕಪ್ ಮಾಡಿಕೊಳ್ಳಬೇಕು. ನಿಮ್ಮದು ಜಲತತ್ತ್ವರಾಶಿಯಾಗಿರುವುದರಿಂದ ಸೊಂಟವನ್ನು ಗಮನಿಸಿಕೊಳ್ಳುತ್ತಿರಬೇಕು. ಹಾಗಾಗಿ ಐಸ್ಕ್ರೀಮ್, ಕೇಕ್, ಸಿಹಿ ಪದಾರ್ಥಗಳಿಂದ ದೂರವಿರಿ. ತುಂಬಾ ಬೆವರುವುದರಿಂದ ದಿನಕ್ಕೆರಡುಬಾರಿ ಸ್ನಾನ ಮಾಡಿ ಸ್ವಚ್ಛವಾಗಿರಿ. ಧನು: ಲಗ್ನಕ್ಕೆ ಗುರು ಅಧಿಪತಿಯಾಗಿರುವುದರಿಂದ ನಿಮ್ಮದು ಅಗಲವಾದ ಶರೀರ. ಹಾಗಾಗಿ ನೀವು ಉಡುಗೆತೊಡಿಗೆಯಲ್ಲಿ ಜಾಗರೂಕರಾಗಿರಿ. ತಿಳಿ ಬಣ್ಣವನ್ನು ಉಪಯೋಗಿಸಿ. ನಿಮ್ಮದು ಸ್ನೇಹಯುತವಾದ ಮುಖಭಾವ. ಹಾಗಾಗಿ ನಿಮಗೆ ಸಾಕಷ್ಟು ಸ್ನೇಹಿತರು ಇರುತ್ತಾರೆ. ಆಯ್ಕೆಯಲ್ಲಿ ಹುಷಾರಾಗಿರಿ. ನಿಮ್ಮ ಸೊಂಟ ದಪ್ಪಗಾಗುತ್ತಾ ಹೋಗುತ್ತದೆ. ಡುಮ್ಮಗಾಗುವುದರಿಂದ ಎಚ್ಚರವಾಗಿರಿ. ಮಕರ: ನಿಮ್ಮ ಚರ್ಮ ಒಣಗಿದಂತೆ ಇರುತ್ತದೆ. ಹಾಗಾಗಿ ಚರ್ಮವನ್ನು ಮೃದು ಮಾಡಲು ಒಳ್ಳೆಯ ಕೋಲ್ಡ್ ಕ್ರೀಮ್ ಬಳಸುವುದು ಒಳ್ಳೆಯದು. ತಾಜಾ ಹಣ್ಣಿನ ರಸ ಹಾಗೂ ತಾಜಾ ಸೊಪ್ಪು ಸೇವಿಸಿ. ನಿಮ್ಮ ಕೆನ್ನೆ ಒಳಗೆ ಹೋದಂತಿರುವುದರಿಂದ ಮೇಕಪ್ ಮಾಡಿ ಅದು ತುಂಬಿದಂತೆ ಕಾಣುವಂತೆ ನೋಡಿಕೊಳ್ಳಿ. ಕುಂಭ: ಚರ್ಮ ಹೊಳಪಿನಿಂದ ಕೂಡಿರುತ್ತದೆ. ಆದರೆ ನಿಮ್ಮದು ಯಾವಾಗಲೂ ದು:ಖಿತ ಮುಖ. ಯಾವಾಗಲೂ ನಗುನಗುತ್ತಾ ಇರುವಂತೆ ನೋಡಿಕೊಳ್ಳಿ. ಮುಖದ ಸ್ನಾಯುಗಳು ಜೋತು ಬೀಳದಂತೆ ಎಚ್ಚರವಹಿಸಿ. ಬೆನ್ನು ಬಾಗಿರುತ್ತದೆ. ಹಾಗಾಗಿ ಯೋಗಾಸನವನ್ನು ಪ್ರತಿದಿನ ಮಾಡಿ ಬೆನ್ನು ನೆಟ್ಟಗಿರುವಂತೆ ನೋಡಿಕೊಳ್ಳಿ. ಮೀನ: ಪಾರದರ್ಶಕ ವರ್ಣ. ಆಕರ್ಷಕ ಕಣ್ಣುಗಳು ಮತ್ತು ಕಪ್ಪಾದ ದಟ್ಟವಾದ ಕಣ್ರೆಪ್ಪೆಗಳು. ಮೃದುವಾದ ಚರ್ಮ ನಿಮ್ಮದು. ಮಾಂಸ ತುಂಬಿದಂತಿರುವುದು. ಹಾಗಾಗಿ ನೀವು ನಿತ್ಯ ಯೋಗಾಸನ ಮಾಡಿ ಬೊಜ್ಜಿನಿಂದ ದೂರವಿರಿ. ನಿಮ್ಮದು ಅಗಲವಾದ ಪಾದ. ಹಾಗಾಗಿ ನೀವು ಸರಿಯಾದ ಚಪ್ಪಲಿಗಳನ್ನು ಆರಿಸಿಕೊಳ್ಳಿ. ನೀವು ಸುಂದರವಾಗಿ ಅಂದರೆ ಅಂತರಂಗದಿಂದ ಸುಂದರವಾಗಿ ಕಾಣಬೇಕಾದರೆ ಪ್ರತಿದಿನ ರಾತ್ರಿ 12 ದಿವಸಗಳ ಕಾಲ ಊಟದ ನಂತರ 'ಗಂ ಗಣಾಧಿಪತಯೇ ನಮ:' ಮಂತ್ರಸ್ಮರಣೆಯೊಂದಿಗೆ ಚಿಕ್ಕ ಚಮಚದಷ್ಟು ಜೇನು, ತ್ರಿದಳ ತುಳಸಿ, 3 ಮೆಂತ್ಯ, 1 ಲವಂಗಗಳನ್ನು ಒಟ್ಟಿಗೆ ಸೇವಿಸುವುದು. -ಡಾ. ಅನಸೂಯ ಎಸ್. ರಾಜೀವ್

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...