ಪಿತೃದೋಷ ಏಕೆ ಬರುತ್ತದೆ?
*ಪಿತೃದೋಷ ಏಕೆ ಬರುತ್ತದೆ? ಜಾತಕದಿಂದ ಅದನ್ನು ಹೇಗೆ ನೋಡುವುದು, ಪರಿಹಾರ ಏನು?
ಜಾತಕದ ಲಗ್ನಾತ್ ಪಂಚಮಾಧಿಪತಿ ಮತ್ತು ಕರ್ಮಪತಿ ದುಃಸ್ಥಿತಿಯಲ್ಲಿದ್ದು, ಕುಜ-ಶನಿಗಳ ಅನಿಷ್ಟ ಭಾವವಿದ್ದೂ ಯಾ ಮಾಂದೀ-ಮಂದಾರ ಯೋಗಗಳಿದ್ದರೆ, ಆ ಕುಲದ ಪಿತೃಗಳು ಕರ್ಮದೋಷದಿಂದ ಬಳಲುತ್ತಿದ್ದಾರೆ ಎಂದು ನಿಶ್ಚಯ. ಸಾರಾವಳಿ, ಪರಾಶರಾದಿ ಸಂಹಿತೆಯಲ್ಲಿ ಈ ಕಾರಣಕ್ಕೆ ವಿವರ ನೀಡಿರುತ್ತಾರೆ. ದೈವ-ಗುರು-ಆಚಾರಗಳು ಕೆಟ್ಟಿದ್ದರೆ ಪಿತೃದೋಷ ಯಾ ಕುಟುಂಬ ಸೌಖ್ಯ ದೋಷಗಳು ಅನುಭವಕ್ಕೆ ಬರುತ್ತದೆ. ದಕ್ಷಿಣಾಯನದ ಪ್ರದೋಷ ಅಮಾವಾಸ್ಯೆ ಯಾ ಪಿತೃಪಕ್ಷದಲ್ಲಿ ವಿಧಿವತ್ತಾಗಿ ಪೂಜಾ ಪ್ರಾಯಶ್ಚಿತ್ತಗಳಿಂದ ಪರಿಹಾರ ಸಿಗುವುದು.
*ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುತ್ತಾ, ಧಾರ್ಮಿಕವಾಗಿ ಇದ್ದರೂ ಮಂಗಳ ಕಾರ್ಯಗಳು ಕಾಲಕ್ಕೆ ಏಕೆ ನಡೆಯುತ್ತಿಲ್ಲ?* ಎಚ್.ಎಸ್.ಸುಮಿತ್ರಾ, ಬೆಂಗಳೂರು
ಬೆಳೆ ಬಿತ್ತಿ ಉತ್ತಮ ಮಳೆಯಾದರೂ ಫಸಲು ಸೊರಗುವ ಕಾರಣವನ್ನು, ಬೀಜದ ಗುಣದಲ್ಲಿ ತಿಳಿಯಬೇಕಾಗುತ್ತದೆ. ಹಾಗೆಯೇ ಧಾರ್ಮಿಕವಾಗಿ ಇರುವುದರ ಹಿಂದೆ, ಕುಟುಂಬದ ಹಿರಿಯರ ನಡಾವಳಿ ಮತ್ತು ದೈವಾನುಕೂಲ ಹೇಗಿದೆ ಎಂದು ನೋಡಬೇಕು.-ಎಚ್.ಟಿ.ಶಂಕರ್, ಬೆಂಗಳೂರು
-ಸಂಗ್ರಹ
Comments