ಪ್ರಕೃತಿಯೇ ಹಾಗೆ ಆದರಲ್ಲಿ ಯಾವಾಗಲೂ ಆಧ್ಯಾತ್ಮಿಕ ಎನರ್ಜಿಯೊಂದು ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಆದರೆ ಮನೆಯೊಳಗೆ ಕೃತಕ ವಸ್ತುಗಳೇ ತುಂಬಿರುವುದರಿಂದ ಅಂತಹ ಶಕ್ತಿ ಒಳಗೆ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ನೈಸರ್ಗಿಕ ಶಕ್ತಿ ಮನೆಯೊಳಗೆ ಹರಿಯುವಂತೆ ಮಾಡಲು ಇನ್ನಷ್ಟು ಯತ್ನಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ಅಷ್ಟೇನೂ ಕಷ್ಟ ಪಡಬೇಕಾಗಿಲ್ಲ. ಮನೆಯೊಳಗೆ ಗಿಡ, ಹೂ, ಗಿಡಮೂಲಿಕೆಗಳನ್ನು ಬೆಳೆದರೆ ಸಾಕು. ಸ್ವಲ್ಪವೇ ದಿನದಳಲ್ಲಿ ಮನೆಯೊಳಗೆ ಪೊಸೆಟಿವ್ ಎನರ್ಜಿ ಹರಿದಾಡುವುದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.
ಕರಿಬೇವು : ಅಡುಗೆ ಮನೆಯ ಯಾವುದೇ ತಿಂಡಿ ಇರಲಿ ಅದಕ್ಕೆ ಕರಿಬೇವು ಸೇರಿಸಿದರೆ ಘಮಘಮ. ಇದು ಮನೆಯೊಳಗೆ ಸುಲಭವಾಗಿ ಬೆಳೆಯುತ್ತದೆ. ಪಾಟ್ನಲ್ಲಿ ಕರಿಬೇವನ್ನುಬೆಳೆಯಬಹುದು. ಆರಂಭದಲ್ಲಿ ಇದಕ್ಕೆ ಒಂದು ಆಧಾರ ಸ್ತಂಭ ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಬೀಳುತ್ತಿರಬೇಕು. ಜೊತೆಗೆ ದಿನಕ್ಕೊಮ್ಮೆ ನೀರು ಹಾಕಬೇಕು.
ಪುದಿನಾ : ಪುದಿನಾ ಒಂದು ತಂಪುಕಾರಕ ಸೊಪ್ಪು. ಇದರ ಬಳಕೆ ಆಯುರ್ವೇದದಲ್ಲಿ ಸಾಕಷ್ಟಿದೆ. ಉತ್ತಮ ಮಣ್ಣು ಕಿಟಕಿಯಿಂದ ಒಂದಿಷ್ಟು ಸೂರ್ಯ ಬೆಳಕು ಇದರ ಬೆಳವಣಿಗೆಗೆ ಸಾಕು. ಇದು ಬೇಗನೆ ಬೆಳೆಯುತ್ತದೆ. ಚಿಕ್ಕ ಪಾಟ್ನಲ್ಲಿ ಇದರ ಬೀಜಗಳನ್ನು ಹರವಿ ಬಿಡಿ. ಆದರೆ ಪಾಟ್ ಇಡುವ ಜಾಗದಲ್ಲಿ ಸೂರ್ಯ ಬಿಸಿಲು ಪ್ರಖರವಾಗಿ ಬೀಳಬಾರದು. ಹಾಗೆಂದು ಕಡಿಮೆಯೂ ಆಗಬಾರದು.
ಕೊತ್ತಂಬರಿ ಸೊಪ್ಪು : ಇದಂತೂ ಪ್ರತಿಯೊಂದು ಅಡುಗೆಗೂ ಬೇಕೇ ಬೇಕು. ದಿನ ನಿತ್ಯದ ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪನ್ನು ಕೂಡ ಮನೆಯೊಳಗೆ ಬೆಳೆಯಬಹುದು. ಅಗಲವಾದ ಪಾಟ್ನಲ್ಲಿ ಮಣ್ಣು ತುಂಬಿ ಅದರಲ್ಲಿ ದನಿಯಾ ಬೀಜಗಳನ್ನು ಹರಡಿ ಬಿಡಿ. ದಿನಕ್ಕೆ ಒಂದಿಷ್ಟು ನೀರು ಹಾಕುತ್ತಿರಿ. ಸೂರ್ಯನ ಬೆಳಕು ಪಾಟ್ ಮೇಲೆ ಬೀಳುವಂತಿರಲಿ. ಕೆಲವೇ ದಿನಗಳಲ್ಲಿ ಇದು ಮೊಳೆತು ಚಿಗುರು ಬಿಡುತ್ತದೆ. ಇದರ ಜೊತೆಗೆ ಲೆಮೆನ್ ಗಾಸ್ ಕೂಡ ಬೆಳೆಸಿ.
ಪರ್ಸ್ಲೆ : ಕನ್ನಡದಲ್ಲಿ ಅಚ್ಚುಮೂಡ ಎಂದು ಕರೆಯಲಾಗುವ ಇದು ಕೂಡ ಮನೆಯಲ್ಲಿ ಎನರ್ಜಿ ಹೆಚ್ಚಿಸಲು ಕಾರಣವಾಗುತ್ತದೆ. ಪಾಟ್ನಲ್ಲಿ ಮಣ್ಣು ಹರಡಿ ಇದರಲ್ಲಿ ಬೀಜಗಳನ್ನು ಬಿತ್ತಬೇಕು. ಇದು ನಿಧಾನವಾಗಿ ಮೊಳಕೆಯೊಡುವ ಕಾರಣ ಸ್ವಲ್ಪ ತಾಳ್ಮೆಯಿಂದ ಕಾಯಿರಿ. ಗಾಳಿ ಮತ್ತು ಬೆಳಕು ಚೆನ್ನಾಗಿ ಆಡುವ ಪ್ರದೇಶದಲ್ಲಿ ಇದು ಬೆಳೆಯುತ್ತದೆ. ಹಾಗೆಂದು ನೇರ ಸೂರ್ಯ ಬೆಳಕು ಇದರ ಮೇಲೆ ಬೀಳಬಾರದು.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments