ಭಕ್ತರು ಶಿವನಿಗೆ ವಿಶೇಷವಾದ ಬಿಲ್ವ ಪತ್ರೆಯಿಂದ ಪೂಜಿಸಿ ಪಾವನರಾಗುತ್ತಾರೆ. ಶಿವನ ಪೂಜೆಗೆ ಬಿಲ್ವ ಪತ್ರೆ ಎಷ್ಟು ಮಹತ್ವವೋ ಅಂತೆಯೇ ಈ ಬಿಲ್ವಪತ್ರೆಯು ಔಷಧೀಯ ಗುಣಗಳನ್ನೂ ಹೊಂದಿವೆ.
ಬಿಲ್ವ ಸಮೃದ್ಧಿಯ ಸಂಕೇತ. ಇದರ ವೈಜ್ಞಾನಿಕ ಹೆಸರು ಛಿಜ್ಝಛಿ ಞಚ್ಟಞಛ್ಝಿಟ. ಬಿಲ್ವವನ್ನು ಭಾರತದೆಲ್ಲೆಡೆಯೂ ಬೆಳೆಯಲಾಗುತ್ತದೆ. ಬಿಲ್ವ ಮಧ್ಯಮ ಗಾತ್ರದ ಮರವಾಗಿದ್ದು, ಆರರಿಂದ ಏಳೂವರೆ ಮೀಟರ್ ಎತ್ತರ ಬೆಳೆಯುತ್ತದೆ.
ಉಪಯುಕ್ತ ಭಾಗ
ಬೇರು, ಎಲೆ, ತೊಗಟೆ, ಹೂ, ಹಣ್ಣು, ಕಾಯಿ ಎಲ್ಲವೂ ಔಷಧೀಯ ಗುಣ ಹೊಂದಿವೆ.
ರಾಸಾಯನಿಕ ಅಂಶಗಳು
ಎಲೆ: ರುಟಿನ್ ಮಾರ್ಮೆಸಿನ್, ಎಗಿಲಿನ್, ಎಗಿಲಿನಿನ್, ಆಲ್ಫಾ ಮತ್ತು ಬೀಟಾ ಫಿಲ್ಲಾಂಡ್ರಿನ್ ಇರುತ್ತವೆ.
ತಾಜಾ ಎಲೆಗಳಿಂದ ತೈಲವನ್ನು ತೆಗೆಯಲಾಗುತ್ತದೆ. ತೈಲವು ಹಳದಿಯುಕ್ತ ಹಸಿರು ಬಣ್ಣದಿಂದ ಕೂಡಿದ್ದು ಸುಗಂಧ ಹೊಂದಿರುತ್ತವೆ.
ಬಿಲ್ವದ ಬೇರು: ಕ್ಯಾಂಥೊಟಾಕ್ಸಿನ್, ಅಂಬೆಲಿಫೆರಾನ್, ಮಾರ್ಮೆಸಿನ್, ಮಾರ್ಮಿನ್, ಸ್ಕಿಮ್ನಿನ್ ಇರುತ್ತವೆ.
ಹಣ್ಣು: ಪಿಕ್ವಿನ್, ಟಾನಿನ್, ಮಾರ್ಮೆಸಿನ್ ಇರುತ್ತದೆ.
ಕಾಯಿ: ಮಾರ್ಮೆಲಿನ್, ಎಗೆಲಿನ್, ಇಂಪಿರೆಟೊರಿನ್ ಇರುತ್ತದೆ.
ಉಪಯುಕ್ತ ಗುಣಗಳು
ಕಾಮಾಲೆ: ಬಿಲ್ವದ ಎಲೆಯ ರಸವನ್ನು 10 ರಿಂದ 20 ಮಿಲಿಯಷ್ಟು ಜೇನು ತುಪ್ಪದೊಂದಿಗೆ ಬೆರೆಸಿ ಕಾಮಾಲೆಯಿಂದ ಬಳಲುವವರಿಗೆ 7 ರಿಂದ 14 ದಿನ ನೀಡಬೇಕು.
ಜ್ವರ ಇರುವವವರಿಗೆ ಎಲೆಯ ರಸದೊಂದಿಗೆ ಕಾಳುಮೆಣಸಿನ ಪುಡಿ (ಒಂದು ಚಿಟಿಕೆ) ಬೆರೆಸಿ ಕುಡಿಯಬೇಕು.
ರೋಗ ನಿರೋಧಕ ಶಕ್ತಿ: ಬಿಲ್ವ ರಸಾಯನವಾಗಿ ಕಾರ್ಯ ನಿರ್ವಹಿಸುತ್ತದೆ. ಬಿಲ್ವದ ತಿರುಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಊತ: ಮಂಡಿ ನೋವು, ತಲೆ ನೋವು, ಮುಂತಾದವುಗಳಿಂದ ಬಳಲುವವರು ಬಿಲ್ವದ ಎಲೆಯನ್ನು ಬಿಸಿ ಮಾಡಿ ವಾತ, ನೋವು ಇರುವ ಜಾಗದಲ್ಲಿರಿಸಿ ಶಾಖ ತೆಗೆದುಕೊಳ್ಳಬೇಕು.
ಅಜೀರ್ಣ: ಅಜೀರ್ಣದಿಂದ ಹೊಟ್ಟೆ ನೋವು ಉಂಟಾಗಿದ್ದರೆ ಬಿಲ್ವದ ಕಾಯಿಯ ತಿರುಳನ್ನು ಚಿಟಿಕೆ ಶುಂಠಿ ಪುಡಿ ಮತ್ತು ಬೆಲ್ಲ ಬೆರೆಸಿ ಸೇವಿಸಬೇಕು.
ಭೇದಿ: ಭೇದಿಗೆ ಒಳ್ಳೆಯ ಔಷಧ. ಬಿಲ್ವದ ಹಣ್ಣಿನ ತಿರುಳನ್ನು ಬೆಲ್ಲ ಮತ್ತು ಜೇನುತುಪ್ಪದೊಂದಿಗೆ ಸವಿಯಬೇಕು.
ಆಯುರ್ವೇದಲ್ಲಿ ಬಳಸಲಾಗುವ ಬಹು ಮುಖ್ಯ ಔಷಧವಾದ 'ದಶಮೂಲ'ಗಳಲ್ಲಿ ಬಿಲ್ವವೂ ಒಂದು.
ಚಿಕ್ಕ ಮಕ್ಕಳಲ್ಲಿ ಪದೇ ಪದೆ ಭೇದಿ ಉಂಟಾಗುತ್ತಿದ್ದರೆ ಬಿಲ್ವದ ತಿರುಳಿನಿಂದ ಶರಬತ್ ತಯಾರಿಸಿ ಜೇನು ಬೆರೆಸಿ ಕುಡಿಸಬೇಕು.
ಸಕ್ಕರೆ ಕಾಯಿಲೆ: ಸಕ್ಕರೆ ಕಾಯಿಲೆಯಿಂದ ಬಳಲುವವರು ಬಿಲ್ವದ ಎಲೆಯ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.
ಸಂಶೋಧನೆ: ಎಲೆಗಳಿಂದ ತೆಗೆದ ರಸ ಹೃದ್ರೋಗದಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಕಪ್ಪೆಗಳ ಮೇಲೆ ಮಾಡಿದ ಪ್ರಯೋಗದಿಂದ ಹೃದಯದ ಬಡಿತವನ್ನು ಸಹಜ ಸ್ಥಿತಿಗೆ ತರುತ್ತದೆ ಎಂದು ದೃಢಪಟ್ಟಿದೆ.
ಬಿಲ್ವದಿಂದ ತಯಾರಿಸಿದ ಬಿಲ್ವ ರಸಾಯನ, ಬಿಲ್ವ ತೈಲ, ಬಿಲ್ವ ಲೇಹ, ದಶಮೂಲಾರಿಷ್ಟ, ಬಿಲ್ವದ ವಟಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments