ಯೌವನಾವಸ್ಥೆಯಲ್ಲಿ ಕಾಡುವ ಸಮಸ್ಯೆಯಲ್ಲಿ ಮೂತ್ರಕೋಶದ ಕಲ್ಲು ಮುಖ್ಯವಾದದ್ದು. ಇದು ಮೂತ್ರ ಸಂಬಂಧಿತ ವ್ಯಾಧಿಯಲ್ಲೊಂದು.
ಮೂತ್ರದಲ್ಲಿ ಕಲ್ಲು ಬೀಳುವ ಸಮಸ್ಯೆ ಅನ್ನುವ ಇದು ಹಲವರನ್ನು ಕಾಡುತ್ತದೆ. ಇದಕ್ಕೆ ಹಲವಾರು ಚಿಕಿತ್ಸೆಗಳಿದ್ದರೂ ಸಮಸ್ಯೆಯನ್ನು ಸಂಪೂರ್ಣ ನಿಯಂತ್ರಿಸುವುದು ಮಾತ್ರ ಆಯುರ್ವೇದವೇ.
ಸಾಮಾನ್ಯವಾಗಿ 20ರಿಂದ 40ರ ವಯೋಮಾನದವರಲ್ಲಿ ಈ ವ್ಯಾಧಿ ಹೆಚ್ಚಾಗಿ ಕಾಣುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಅಶ್ಮರಿ ಅನ್ನುತ್ತೇವೆ. ಅಂದರೆ ಕಲ್ಲು ಎಂದರ್ಥ. ಇದನ್ನು ರಿನಲ್ ಕಾಲಿಕ್ಯುಲೈ ಅಂತಲೂ ಕರೆಯುತ್ತಾರೆ. ನಮ್ಮ ಶರೀರದ ಕೆಲವು ಭಾಗಗಳಲ್ಲಿ ಹರಳುಗಳು ಏರ್ಪಡುವವು. ಆದರೆ ಇವು ಮೂತ್ರದಲ್ಲಿ ಹೊರಗೆ ಹೋಗುತ್ತವೆ. ಆದರೆ ಇದು ಕಿಡ್ನಿಯ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚಿನ ಜಾಗೃತಿ ಅಗತ್ಯ.
ಇದಕ್ಕೆ ಕಾರಣಗಳೆಂದರೆ ಅತೀಯಾದ ಮಾಂಸಹಾರ ಸೇವನೆ, ಕಡಿಮೆ ದ್ರವ ಪದಾರ್ಥ ತೆಗೆದುಕೊಳ್ಳುವುದು, ಅತಿಯಾದ ಮಾನಸಿಕ ಒತ್ತಡ, ಅಧಿಕ ರಕ್ತದೊತ್ತಡ, ಮೆಗ್ನಿಶಿಯಂ, ಸಿಟಿಕ್, ಫಾಸ್ಪೆಟ್, ಆ್ಯಕ್ಸಿಲೆಟ್ಸ್ಗಳು ಈ ಸಮಸ್ಯೆಗೆ ಕಾರಣವಾಗುತ್ತವೆ.
ಲಕ್ಷಣ
ಈ ಸಮಸ್ಯೆ ನಿಗದಿತ ಲಕ್ಷಣಗಳನ್ನು ಒಳಗೊಂಡಿರುವುದಿಲ್ಲ. ಆದರೆ ಮೂತ್ರ ವಿಸರ್ಜನೆಯಲ್ಲಿ ಉರಿ ಆಗಬಹುದು. ಮೂತ್ರದಲ್ಲಿ ರಕ್ತ ಬರಬಹುದು. ವಾಂತಿ ಅಥವಾ ವಾಕರಿಕೆ, ಚಳಿ,ಜ್ವರ, ಬೆನ್ನುನೋವು ಕಾಣಿಸಬಹುದು.
ಜಾಗ್ರತಿ
ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಮುಖ್ಯವಾಗಿ ನೀರು, ಬಾರ್ಲಿ ಜ್ಯೂಸ್ ಹೆಚ್ಚು ಕುಡಿಯಬೇಕು. ಮಾಂಸಹಾರವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆಲ್ಕೊಹಾಲ್, ಕಾಫಿ, ಟೀ ಸೇವನೆಯಲ್ಲಿ ಹಿಡಿತವಿರಲಿ. ಎಣ್ಣೆಯ ಪದಾರ್ಥಗಳ ಸೇವನೆ ಬೇಡ. ಒತ್ತಡಮುಕ್ತರಾಗಿರಿ. ಆಯುರ್ವೇದದಲ್ಲಿ ಇದಕ್ಕೆ ಪ್ರತ್ಯೇಕ ಚಿಕಿತ್ಸೆಗಳಿವೆ. ಸಮಸ್ಯೆಯ ತೀವ್ರತೆಯನ್ನಾಧರಿಸಿ ಚಿಕಿತ್ಸೆ ನೀಡಲಾಗುವುದು.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments