Skip to main content

ನವರತ್ನಗಳ ಪರೀಕ್ಷಾ ವಿಧಾನ

ನೈಜ ರತ್ನಗಳನ್ನು ಪರೀಕ್ಸಿಸುವ ವಿಧಾನ ಮಾಣಿಕ್ಯ ಬೆಳ್ಳಿಯ ತಟ್ಟೆಯಲ್ಲಿ ಈ ಮಾಣಿಕ್ಯ ರತ್ನವನ್ನು ಇಟ್ಟು ಸೂರ್ಯನ ಕಿರಣ ಅದರ ಮೇಲೆ ಬೀಳುವಂತೆ ಮಾಡಿದರೆ ತಟ್ಟೆಯು ಕೇಸರಿ ಬಣ್ಣ ಹೊಂದಿರುವಂತೆ ಕಾಣಿಸುವುದು.ಇದು ನೈಜ ಮಾಣಿಕ್ಯವನ್ನು ಪರೀಕ್ಷೆಮಾಡುವ ವಿಧಾನವಾಗಿದೆ. ಮುತ್ತು ಗೋಮೂತ್ರದಲ್ಲಿ(ಗಂಜಲ)ಒಮ್ದು ದಿನ ಮುತ್ತನ್ನು ಇಡಬೇಕು ಆಗ ಕೃತಕ ಮುತ್ತಾದರೆ ಸೀಳುತ್ತದ್ದೆ,ತನ್ನ ಬಣ್ಣ ಬದಲಾವಣೆಯಾಗುತ್ತದೆ,ಆದರೆ ನಿಜವಾದ ಮುತ್ತು ಶುದ್ದವಾದ ಮುತ್ತು ಯಾವುದೇ ರೀತಿಯಲ್ಲಿ ಬದಲಾವಣೆಹೊಂದುವುದಿಲ್ಲ. ಹವಳ ನೈಜ ಹವಳವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಉಂಗುರ,ವಿಗ್ರಹ,ಆಭರಣ ಮುಂತಾದವುಗಳನ್ನು ತಯಾರಿಸಬಹುದಾಗಿದೆ ಆದರೆ ಕೃತಕ ಹವಳವನ್ನು ಇಷ್ಟ ಬಂದ ಆಕಾರಕ್ಕೆ ಕತ್ತರಿಸಲು ಸಾದ್ಯವಿಲ್ಲ, ಮತ್ತು ನೈಜ ಹವಳವನ್ನು ಅಂಗೈಯಲ್ಲಿಟ್ಟು ಮುಷ್ಟಿ ಮುಚ್ಚಿದರೆ ಸ್ವಲ್ಪ ಸಮಯದಲ್ಲೇ ಅಂಗೈ ಬಿಸಿಯ ಅನುಭವ ಪಡೆಯುವುದು. ಪಚ್ಚೆ ನಿಜವಾದ ಪಚ್ಚೆಯನ್ನು ಒಂದೇ ಸಮನೆ ನೋಡಿದಾಗ ಅಥವ ಅದರತ್ತ ದೃಷ್ಟಿಯನ್ನು ಕೇಂದ್ರೀಕರಿಸಿದರೆ ಕಣ್ಣು ಉರಿಯಾಗುವುದಿಲ್ಲ ಹಾಗು ತಂಪಾದ ಅನುಭವ ಉಂಟಾಗುತ್ತದೆ.ಆದರೆ ಕೃತಕ ಪಚ್ಚೆಯನ್ನು ದೃಷ್ಟೀಕರಿಸಿದರೆ ಕಣ್ಣುಗಳಲ್ಲಿ ಉರಿ ಪ್ರಾರಂಭವಾಗುತ್ತದೆ. ಪುಷ್ಯರಾಗ(ಕನಕ ಪುಷ್ಯರಾಗ) ನೈಜ ಪುಷ್ಯರಾಗ ರತ್ನವು ವಿಷ ವಸ್ತುಗಳ ಮುಂದೆ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತದೆ. ವಜ್ರದಷ್ಟೇ ಪ್ರಕಾಶಮಾನವುಳ್ಳ ಪುಷ್ಯರಾಗವನ್ನು ವಜ್ರಕ್ಕೆ ಬದಲಾಗಿ ಮೋಸಗೊಳಿಸಲು ಸಾದ್ಯವಿದೆ ಆದ್ದರಿಂದ ಎಚ್ಚರಿಕೆ ಅಗತ್ಯ. ವಜ್ರ ನಿಜವಾದ ವಜ್ರವನ್ನು ಕೃತಕವೆಂಂದು ಗುರುತು ಹಿಡಿಯುವುದು ಅಷ್ಟೋಂದು ಸುಲಭದ ಕಾರ್ಯವಲ್ಲ ಅನೇಕ ವೇಳೆ ವೈಕ್ರಾಂತವೆಂಬ ಉಪರತ್ನವನ್ನು ವಜ್ರವೆಂದು ಹೇಳಿ ಮೋಸಮಾಡುವುದುಂಟು.ಇದರಲ್ಲಿ ಎಚ್ಚರಿಕೆ ಅವಶ್ಯಕ.ಬಿಸಿಯಾದ ಹಾಲಿನಲ್ಲಿ ವಜ್ರವನ್ನು ಹಾಕಿದರೆ ಹಾಲು ಕೂಡಲೆ ತಣ್ಣಗಾಗುತ್ತದೆ.ಆಗ ಅದು ನೈಜ ವಜ್ರವೆಂದು ತಿಳಿಯಬಹುದು. ಪ್ರಯೋಗ ಶಾಲೆಯಲ್ಲಿ ರತ್ನಗಳನ್ನು ಪರೀಕ್ಷಿಸುವ ವಿಧಾನ ನೈಜ ರತ್ನಗಳನ್ನು ಹೈಡ್ರೋಕ್ಲೋರಿಕ್ ದ್ರಾವಣದಲ್ಲಿ ಹಾಕಿದರೆ ಅವುಗಳು ಕರಗುವುದಿಲ್ಲ.ಕೃತಕ ರತ್ನಗಳಾದರೆ ಕರಗುತ್ತವೆ. ನೈಜ ರತ್ನಗಳ ಮೇಲೆ ಗೀಚಿದರೆ ಅವುಗಳ ಮೇಲೆ ಗೀರುಗಳು ಉಂಟಾಗುವುದಿಲ್ಲ. ಆದರೆ ಕೃತಕ ರತ್ನಗಳಾದರೆ ಗೆರೆಗಳು ಸ್ಪಷ್ಟವಾಗಿ ಬೀಳುತ್ತವೆ. ನೈಜ ರತ್ನಗಲನ್ನು ಬೆಂಕಿಯಲ್ಲಿ ಕಾಯಿಸಿದಾಗ ಸೀಳುವುದಿಲ್ಲ. ಆದರೆ ಗಾಜು ಹಾಗು ಇತರ ಕ್ರುತಕ ರತ್ನವಾಗಿದ್ದರೆ ಒಡೆದು ಸೀಳಾಗುತ್ತವೆ. ಒಂದು ಲೋಟ ನೀರಿಗೆ ನಿಜವಾದ ವಜ್ರ ಹಾಕಿದರೆ ಅದರ ಪ್ರಕಾಶವನ್ನು ಹೊರಗಡೆ ನೋಡಲು ಸಾದ್ಯ.ಕೃತಕ ರತ್ನವನ್ನು ನೀರಿನಲ್ಲಿ ಹಾಕಿದರೆ ಅದರ ಪ್ರಕಾಶ ಗೋಚರವಾಗುವುದಿಲ್ಲ. ನೈಜ ರತ್ನವನ್ನು ಬಾಯಲ್ಲಿ ತುಟಿಯ ಮದ್ಯೆ ಇರಿಸಿಕೊಂಡರೆ ಶೀತದ ಅನುಭವ ಉಂಟಾಗುತ್ತದೆ. ಕೃತಕ ರತ್ನವನ್ನು ಬಾಯಲ್ಲಿಟ್ಟುಕೊಂಡರೆ ಶಾಖ ಉತ್ಪತ್ತಿಯಾಗುವುದು.ಹಾಗು ಯಾವುದೇ ರೀತಿಯಲ್ಲು ಬದಲಾವಣೆ ಉಂಟಾಗುವುದಿಲ್ಲ. ರತ್ನಗಳಂತೆಯೇ ಆಕಾರವನ್ನು ಕೊಟ್ಟು ರಸಾಯನಿಕ ವಸ್ತುಗಳನ್ನು ಗಾಜು ಮುಂತಾದವುಗಳೊಂದಿಗೆ ಸೇರಿಸಿ ಪಾರ್ದರ್ಶಕವಾಗಿರುವಂತೆ ತಯಾರುಮಾಡಿ ವ್ಯಾಪಾರ ಮಾಡುತ್ತಾರೆ,ಇದು ಮೋಸದ ವಿಧಾನವಾಗಿದ್ದು ಖರೀದಿಸುವಾಗ ಎಚ್ಚರವಾಗಿರಬೇಕಾದ್ದು ಬಹಳ ಮುಖ್ಯ. ಇವುಗಳು ಹೊರನೋತಕ್ಕೆ ನೈಜ ರತ್ನಗಳಂತೆ ಕಂಡುಬಂದರು ಗ್ರಹಗಳ ದೋಷ ಪರಿಹಾರಕ್ಕಾಗಲಿ ಔಷಧಿಯ ತಯಾರಿಕೆಗಳಲ್ಲಾಗಲಿ ಪರಿಣಾಮಕಾರಿಯಾಗಲಾರದು"ಬೆಳ್ಳಗಿರುವುದೆಲ್ಲಾ ಹಾಲಲ್ಲ" ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಖರೀದಿಸುವಾಗ ಬಹಳ ಎಚ್ಚರಿಕೆ ವಹಿಸುವುದು ಅವಶ್ಯಕ. -ಸಂಗ್ರಹ

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ