ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು
ಅಯ್ಯಪ್ಪ ಗಾಯತ್ರಿ
ಓಂ ಭೂತನಾತಾಯ ವಿದ್ಮಹೇ
ಮಹಾದೇವಾಯ ಧೀಮಹೀ
ತನ್ನೋ ಶಾಸ್ತ್ರ ಪ್ರಚೋದಯಾತ್
ಸುದರ್ಶನ ಗಾಯತ್ರಿ ಮಂತ್ರ
ಓಂ ಸುದರ್ಶನಾಯ ವಿದ್ಮಹೇ
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರಪ್ರಚೋದಯಾತ್
ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ
ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ
||ಕ್ರೀಂ ಕ್ರೀಂ ಕ್ರೀಂ
ಹುಂ ಹುಂ ಹ್ರೀಂ ಹ್ರೀಂ
ದಕ್ಷಿಣ ಕಾಳಿಕೆ
ಕ್ರೀಂ ಕ್ರೀಂ ಕ್ರೀಂ
ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ||
||ಓಂ ಹ್ರೀಂ ಹ್ರೀಂ ಹುಂ ಹುಂ
ಕ್ರೀಂ ಕ್ರೀಂ ಕ್ರೀಂ
ದಕ್ಷಿಣ ಕಾಳಿಕೆ
ಕ್ರೀಂ ಕ್ರೀಂ ಕ್ರೀಂ
ಹುಂ ಹುಂ ಹ್ರೀಂ ಹ್ರೀಂ ||
||ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ)
ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ||
ಓಂ ಮಹಾಕಾಳೇಶ್ವರಾಯ ನಮಃ
ಓಂ ಮಹಾಂ ಕಾಲಾಯ ನಮಃ
ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು.
ಅಥವ
ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ಆತನ ತಲೆಯ ಮೇಲೆ ನಿಂಬೆಹಣ್ಣನ್ನು ಎಡಕೈಯಲ್ಲಿ ಹಿಡಿದು ಬಲಗೈಯಲ್ಲಿ ಚಾಕುವಿನಿಂದ ಎರಡು ಹೋಳು ಮಾಡಿ ಒಂದಕ್ಕೆ ಅರಿಸಿಣ ಮತ್ತೊಂದಕ್ಕೆ ಕುಂಕುಮ ಹಚ್ಚಿ ಹೋಳುಗಳನ್ನು ಬಲಕೈಯಲ್ಲಿ ಹಿಡಿದು ವ್ಯಕ್ತಿಗೆ ಮೇಲಿಂದ ಕೇಳಗೆ ೭ಬಾರಿ ಇಳೆತಗೆಯಬೇಕು ನಿಂಬೆ ಹೋಳು ಈ ಸಮಯದಲ್ಲಿ ನೆಲಕ್ಕೆ ತಾಕದಂತೆ ನೋಡಿಕೊಳ್ಳಿ ನಂತರ ಈ ಹೋಳನ್ನು ೪ ದಾರಿ ಕೂಡಿರುವಕಡೇ ಅಥವ ಮನೆಯಿಂದ ದೂರದಲ್ಲಿರುವ ಕಸಕಡ್ಡಿ ಇರುವ ಜಾಗದಲ್ಲಿ ಎಸೆದು ಬರಬೇಕು ಹೋಗುವಾಗ ದಾರಿಯಲ್ಲಿ ಯಾರೊಂದಿಗೂ ಮಾತನಾಡಬಾರದು ಮತ್ತು ಆ ವ್ಯಕ್ತಿ ನೀವು ನಿಂಬೆಹಣ್ಣು ಎಸೆದು ಬರುವವರೆಗೂ ಮನೆಯಲ್ಲೇ ಇರಬೇಕು. ಎಸೆದು ಬಂದನೀವು ಕೈಕಾಲು ತೊಳೆದುಕೊಂಡು ದೇವರಿಗೆ ವಂದಿಸಬೇಕು.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments