Skip to main content

ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳು

ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳು ಸಾಮಾನ್ಯವಾಗಿ ಸಂತಾನ ದೋಷಕ್ಕೆ,ಗರ್ಭಪಾತಕ್ಕೆ ಕುಶ್ಮಾಂಡ ಬಲಿಪೂಜೆ ಮಾಡುವ ವಿಧಿ ವಿದಾನಗಳನ್ನು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.ಆಗಿಂದಾಗ್ಗೆ ಆಗುವ ಗರ್ಭಪಾತ, ಗರ್ಭಕೋಶದ ಸಮಸ್ಯೆ,ಅಂಡಾಣು ಸಮಸ್ಯೆ,ವೀರ್ಯಾಣು ಕೊರತೆ,ತಿಂಗಳ ಮುಟ್ಟಿನ ಸಮಸ್ಯೆಯಿಂದ ಸಂತಾನಕ್ಕೆ ತೊಂದರೆಯಾಗುವುದು ಸರ್ವೇಸಾಮಾನ್ಯವಾಗಿರುತ್ತದೆ. ಅಲ್ಲದೆ ಸ್ತ್ರೀಯರಲ್ಲಿ ಸಪ್ತದಾತುವಿನಲ್ಲಿ( ರಸ,ರಕ್ತ,ಮಾಂಸ,ಅಸ್ತಿ,ಮಜ್ಜೆ ಶುಕ್ರ,ಮೇದಸ್ಸು(ಕೊಬ್ಬು)ಇವುಗಳ ಅಸಮತೋಲನ ದಿಂದಲೂ ಕೂಡ ಗರ್ಭದರಿಸಿದ ನಂತರ ಶಿಶುವಿಗೆ ಅಂಗವೈಕಲ್ಯತೆ ಉಂಟಾಗುವ ಸಾದ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಇಂತಹ ಸಮಯದಲ್ಲಿ ಗರ್ಭ ಧರಿಸಿದ ಸ್ತ್ರೀಯು ತನ್ನ ಗರ್ಭವನ್ನು ಸುರಕ್ಷಿತವಾಗಿರಿಸಿಕೊಂಡು ಆರೋಗ್ಯಯುತವಾದ ರೂಪಯುತವಾದ,ವಿದ್ಯಾವಂತನಾಗಬಲ್ಲಂತ ಒಳ್ಳೆಯ ಮಗುವನ್ನು ಪಡೆಯಲಿಚ್ಚಿಸುವ ಸ್ತ್ರೀಯರು ತಮ್ಮ ಗರ್ಭದಾರಣೆಯ ನಂತರ ೩,೬,೮ನೇ ತಿಂಗಳಿನಲ್ಲಿ ಕುಶ್ಮಾಂಡಪೂಜೆಯನ್ನು ಮಾಡುವುದರಿಂದ ತಮಗೆ ಜನಿಸುವ ಮಗುವು ಈ ಮೇಲಿನ ಯಾವುದೇ ತೊಂದರೆಯಿಂದ ಮುಕ್ತವಾಗಿ ಯಾವುದೇ ತೊಂದರೆಇಲ್ಲದೆ ಸುಖ ಪ್ರಸವವನ್ನು ಗರ್ಬಿಣಿಯು ಪಡೆಯುವಲ್ಲಿ ಯಶವನ್ನು ಹೊಂದುವಳು.ಒಂದುವೇಳೆ ಗರ್ಭದಲ್ಲಿನ ಶಿಶುವಿಗೇನಾದರು ಅಂಗಾಗವು ವಿಕಲವಾಗಿದೆಯೆಂಬ ವಿಷಯವು ಗರ್ಭದಲ್ಲಿದ್ದಾಗಲೇ ತಿಳಿದಲ್ಲಿ ಈ ಕುಶ್ಮಾಂಡಬಲಿ ಪೂಜೆಮಾಡುವುದರಿಂದ ಆ ನ್ಯೂನತೆಯಿಂದ ಗರ್ಭದಲ್ಲಿರುವ ಮಗುವನ್ನು ರಕ್ಷಿಸಬಹುದಾಗಿದೆ. ಅದೂ ಅಲ್ಲದೆ ನಮಗೆ ಯಾರಾದರು ಮಕ್ಕಳಾಗದಿರುವಂತೇನಾದರು ಮಾಟ ಮಾಡಿಸಿದ್ದರೆ, ಪಿಶಾಚಿಶಾಪದಿಂದ ಆಗಾಗ್ಗೆ ಗರ್ಭಪಾತಗಳಾಗುತ್ತಿದ್ದಲ್ಲಿ,ಸಂತಾನವೇ ಆಗಿರದಿದ್ದಲ್ಲಿ,ಜನನಾಂಗ ದೋಷದಿಂದಾಗಿ ಅಂಡಾಣುವಿಗೆ ತೊಂದರೆಯಿಂದಾಗಿ ,ಗರ್ಭಕೋಶದ ಕಾಯಿಲೆಯಿಂದ ಸಂತಾನವಾಗದೆ ಇದ್ದಲ್ಲಿ ಇಂತಹ ಎಲ್ಲಾ ಸಮಸ್ಯೆಗಳನಿವಾರಣೆಗಾಗಿ ಹುಣ್ಣಿಮೆ ಅಥವ ಅಮಾವಾಸ್ಯೆ ಅಥವ ತ್ರಯೋದಶಿ ತಿಥಿ ಇರುವ ದಿನ ಸಾಯಂಕಾಲ ಅಥವ ರಾತ್ರಿಯಲ್ಲಿ ಈ ಕುಶ್ಮಾಂಡಫಲದ ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂತಾನವು ಲಭಿಸುತ್ತದೆ. ಸಂತಾನ ವಿಚಾರಕ್ಕೆ ಕುಶ್ಮಾಂಡಫಲ ಪೂಜೆಯ ವಿಧಾನ: ಒಂದು ಸಾದಾರಣವಾದ ಬೂದುಕುಂಬಳಕಾಯನ್ನು ತಗೆದುಕೊಂಡು ಅದನ್ನು ಮದ್ಯಬಾಗದಲ್ಲಿ ಒಂದು ತ್ರಿಕೋನಾಕಾರವಾಗಿ ಕತ್ತರಿಸಿ ಕುಂಬಳಕಾಯ ಒಳಗೆ ರಕ್ತಚಂದನ ಅಥವ ಕುಂಕುಮವನ್ನು ಹಾಕಿ ಜೊತೆಯಲ್ಲಿ ೭ ಒಂದು ರೂಪಾಯಿ ಕಾಯಿನ್ ಹಾಕಿ ಮುಚ್ಚಿ ನಂತರ ಕುಂಬಳಕಾಯಿಗೆ ಅರಿಸಿಣ ಕುಂಕುಮಾದಿ ಅಕ್ಷತೆ ಹೂಗಳಿಂದ ಶೋಡಶೋಪಚಾರಪೂಜೆಯನ್ನು ಮಾಡಿ ಓಂ ಕುಶ್ಮಾಂಡದೇವಿಭ್ಯ ನಮಃ(ಕುಶ್ಮಾಂಡದೇವತಾಭ್ಯೋನಮಃ) ಎಂದು ೨೧ ಸಲ ಹೇಳಿ ಪೂಜಿಸುವುದು. ಗರ್ಭಿಣಿಯು ಈ ಪೂಜಿಸಿದ ಕುಂಬಳಕಾಯಿಯನ್ನು ಕೈಯಿಂದ ೭ ಸಲ ಸಂಪೂರ್ಣವಾಗಿ ಎರಡು ಹಸ್ತದಲ್ಲಿ ಮುಟ್ಟಿ ವಂದನಾಪೂರ್ವಕವಾದ ನಮಸ್ಕಾರವನ್ನು ಕುಶ್ಮಾಂಡಕ್ಕೆ ಮಾಡುವುದು. ಸಾದಾರಣವಾಗಿ ನೀವು ವಾಸಮಾಡುವ ಮನೆಯಲ್ಲಿ ವಾಸ್ತುದೋಷವಿದ್ದಲ್ಲಿ ಅಥವ ನಿಮ್ಮ ಮನೆಯಲ್ಲಿ ಯಾರಿಗಾದರು ಆಗಿಂದಾಗ್ಗೆ ಆಕಸ್ಮಿಕ ಅಪಘಾತಗಳು ಸಂಬವಿಸುತ್ತಿದ್ದಲ್ಲಿ ಈ ಕುಶ್ಮಾಂಡಪೂಜೆಯನ್ನು ಮಾಡುವುದರಿಂದ ಈ ತೊಂದರೆ ನಿವಾರಣೆಯಾಗುತ್ತದೆ.ಕುಂಬಳಕಾಯಿಯನ್ನು ತ್ರಿಕೋನಾಕಾರವಾಗಿ ಕತ್ತರಿಸಿ ತಗೆದು ಅದರಒಳಗೆ ರಕ್ತಚಂದನ(ಕುಂಕುಮ) ೧೩ ಒಂದು ರೂಪಾಯಿನ ಕಾಯಿನ್ ಗಳನ್ನು ಹಾಕಿ ಪೂಜಿಸುವುದು.ಈ ಪೂಜೆ ಮಾಡುವುದರಿಂದ ಮಲ.ಮೂತ್ರಾದಿ,ಗುಪ್ತಾಂಗಗಳ,ನವದ್ವಾರಗಳ,ನವದಾತುಗಳ ಯಾವುದೇ ತೊಂದರೆ ಇದ್ದಲ್ಲಿ ನಿವಾರಣೆಯಾಗುವುದು. -saMgraha

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ