Skip to main content

ನವಗ್ರಹ ಆಧಾರದ ಮೇಲೆ ವ್ಯಾಧಿ ನಿರ್ಣಯ

ಆರೋಗ್ಯವೇ ಭಾಗ್ಯ. ಆರೋಗ್ಯವು ಜನ್ಮದತ್ತವಾಗಿ, ತಮ್ಮ ಪೂರ್ವ ಪುಣ್ಯಗಳಿಗನುಸಾರವಾಗಿ ಬರುತ್ತದೆ. 'ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧ್ಯತೇ' ಎಂಬಂತೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳಿಗನುಸಾರವಾಗಿ ವ್ಯಾಧಿಗಳು ನಮ್ಮನ್ನು ಕಾಡುತ್ತವೆ. ಇದನ್ನು ನಾವು ಜನ್ಮ ಜಾತಕದಿಂದ ತಿಳಿಯಬಹುದು. ಆರೋಗ್ಯ ಜ್ಯೋತಿಷ್ಯದ ಪ್ರಕಾರ ಕಾಲ ಪುರುಷನ ಅಂಗದ ಆಧಾರದ ಮೇಲೆ, ಲಗ್ನದಿಂದ ದ್ವಾದಶ ಭಾವಗಳ ಮೇಲೆ, ನವಗ್ರಹಗಳ ಆಧಾರದ ಮೇಲೆ ವ್ಯಾಧಿಗಳನ್ನು ನಿರ್ಧರಿಸಬಹುದು. 1. ಕಾಲ ಪುರುಷನ ಅಂಗಗಳನ್ನು ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹಂಚಿದ್ದಾರೆ. ಜಾತಕದಲ್ಲಿ ಯಾವ ರಾಶಿಯು ಪೀಡಿತವಾಗಿರುತ್ತದೋ ಆ ರಾಶಿಯ ಅಂಗ ವ್ಯಾಧಿಗ್ರಸ್ತವಾಗುತ್ತದೆ. ಮೇಷ: ತಲೆಯ ಭಾಗ, ಮಿದುಳು, ಬಾಯಿ, ಮನಸು. ವೃಷಭ: ಮುಖ, ಬಲಗಣ್ಣು, ಕಂಠ, ಕುತ್ತಿಗೆ, ಧ್ವನಿ ಪೆಟ್ಟಿಗೆ. ಮಿಥುನ: ಹೆಗಲು, ಬಾಹು, ಬಲಕಿವಿ, ಶ್ವಾಸಕೋಶ, ಉಸಿರಾಟ. ಕಟಕ:ಹೃದಯ, ವಕ್ಷಸ್ಥಳ, ಪಕ್ಕೆಗಳು ಸಿಂಹ: ಬೆನ್ನು, ಹೊಟ್ಟೆ, ಪಿತ್ತಕೋಶ, ರಕ್ತನಾಳಗಳು, ಜಠರ. ಕನ್ಯಾ: ಸೊಂಟ, ನಾಭಿ, ಸಣ್ಣಕರುಳು ತುಲಾ: ಕಿಬ್ಬೊಟ್ಟೆ, ದೊಡ್ಡಕರುಳು, ಪೃಷ್ಟ, ಮೂತ್ರಕೋಶ, ಗರ್ಭಕೋಶ. ವೃಶ್ಚಿಕ: ಗುಪ್ತಾಂಗ, ಜನನಾಂಗ, ಧನುಸ್ಸು: ತೊಡೆ, ಸ್ನಾಯುಗಳು. ಮಕರ:ಮೊಣಕಾಲು, ಮಂಡಿ,ಅಸ್ಥಿಗಳು. ಕುಂಭ:ಎಡ ಹಿಮ್ಮಡಿ, ಎಡ ಕಿವಿ, ಎಡ ಭುಜ, ಮೀನಖಂಡ ಮೀನ: ಪಾದಗಳು, ಕಾಲು ಬೆರಳುಗಳು, ರಸನಾತ್ಮಕ ದ್ರವ್ಯಗಳು, ಎಡಕಣ್ಣು. 2. ಲಗ್ನದಿಂದ ದ್ವಾದಶ ಭಾವಗಳ ಆಧಾರದ ಮೇಲೆ ವ್ಯಾಧಿಗಳ ನಿರ್ಣಯ ಮಾಡಬಹುದು. ಮೊದಲನೆ ಭಾವ: ರೋಗದ ವೈಶಿಷ್ಟ್ಯ, ನೈಸರ್ಗಿಕ ಜೀವನ ಶಕ್ತಿ, ತ್ರಿದೋಷ ಪ್ರಕೃತಿಯ ಗುಣಧರ್ಮ, ಶಿರೋ ರೋಗಗಳು, ಚರ್ಮ ವ್ಯಾಧಿ, ಉನ್ಮಾದ, ಅಪಸ್ಮಾರ, ಮೂರ್ಛೆ, ಪಾರ್ಶ್ವವಾಯು, ದುರ್ಮರಣ, ಅಪಘಾತ, ಮುಖರೋಗಗಳು, ಮಲರೋಗ. ದ್ವಿತೀಯ ಭಾವ: ನೇತ್ರ ವಿಕಾರ, ಕೆಮ್ಮು, ಶ್ವಾಸ, ಮುಖದ ರೋಗಗಳು, ಕಂಠ ರೋಗ, ಕರ್ಣ ರೋಗ ತೃತೀಯ ಭಾವ: ಮಿದುಳು ರೋಗ, ಕರ್ಣ ರೋಗ, ಕುತ್ತಿಗೆ ರೋಗ ಚತುರ್ಥ ಭಾವ: ಹೃದಯ ಬೇನೆ, ಸ್ತನ ವಿಕಾರ, ಆಯುಷ್ಯದ ಅಂತ್ಯವ್ಯಾಧಿ, ಕೋಮಾ. ಪಂಚಮ ಭಾವ; ಉದರವ್ಯಾಧಿ, ಗರ್ಭಾಶಯ ರೋಗಗಳು, ರಾಜಯಶ್ಮ, ಕಾಮಾಲೆ, ಜಲೋದರ, ಆಮ್ಲಪಿತ್ತ, ಪಾಂಡುತ್ವ, ಭೂತವಿಕಾರ ವ್ಯಾಧಿಗಳು, ಯಕೃತ್ ದೋಷ. ಷಷ್ಠಭಾವ: ತೀವ್ರಬಾಧೆಯ ರೋಗಗಳು, ಅತಿಸಾರ, ಅಗ್ನಿಮಾಂದ್ಯ, ಅಪಚನ, ವಾತ, ಊತ, ವಾಯು, ಶೀತ ಸಂಬಂಧ ಜ್ವರಗಳು. ಸಪ್ತಮ ಭಾವ: ಪ್ರಮೇಹ,ಸ್ತ್ರೀರೋಗಗಳು, ಮೂತ್ರಸಂಬಂಧಿ ಸಮಸ್ಯೆಗಳು, ಏಡ್ಸ್. ಅಷ್ಟಮ ಭಾವ: ನಾನಾ ರೀತಿಯ ಸ್ತ್ರೀ ರೋಗಗಳು, ವೃಷಣ ವ್ಯಾಧಿಗಳು, ಮರಣಸೂಚಕ ವ್ಯಾಧಿಗಳು, ಮೂಲವ್ಯಾಧಿ, ಅಪಘಾತ. ನವಮ ಭಾವ: ಸಂಧಿವಾತ, ಆಮ್ಲಪಿತ್ತ, ವಾತ ರಕ್ತ. ದಶಮ ಭಾವ; ಮಂಡಿ ನೋವು, ರಕ್ತ ಸಂಚಾರದಲ್ಲಿ ದೋಷ. ಏಕಾದಶ ಭಾವ: ಮೀನಖಂಡ ರೋಗಗಳು, ಮೊಳಕಾಲು, ಹಿಂಬದಿಯ ವ್ಯಾಧಿಗಳು, ಅನುವಂಶಿಕ ವ್ಯಾಧಿಗಳು. ದ್ವಾದಶ ಭಾವ: ಪಕ್ಷಾಘಾತ, ತೀವ್ರ ವ್ಯಾಧಿಗಳು. ಈ ರೀತಿಯಾಗಿ ಆಯಾ ಭಾವಗಳು ಪೀಡಿತವಾದರೆ ಆ ಜಾತಕರಿಗೆ ಆ ರೋಗಗಳು ಬರುತ್ತವೆ. 3. ನವಗ್ರಹಗಳ ಆಧಾರದ ಮೇಲೆ ವ್ಯಾಧಿ ನಿರ್ಣಯ: ರವಿ: ನಾನಾ ಬಗೆಯ ಜ್ವರ, ಪಿತ್ತ ಪ್ರಧಾನ ರೋಗಗಳು, ಮಸ್ತಿಷ್ಕ, ಬೆನ್ನು ರೋಗ, ಹೃದಯ ರೋಗ, ಆಮಾಶಯ, ಆಂತ್ರಿಕ ರೋಗ, ನೇತ್ರ ವಿಕಾರ, ಬಾವು, ದಾಹ, ಮಿದುಳು ರೋಗ, ಕ್ಷಯ, ಅತಿಸಾರ. ಚಂದ್ರ: ಕಫ ಪ್ರದಾನ ರೋಗಗಳು, ಮಕ್ಕಳ ಬೇನೆ, ಸ್ತ್ರೀ ರೋಗಗಳು, ಜಲೋದರ, ಪಾಂಡುರೋಗ, ಶ್ವಾಸ, ಮಾನಸಿಕ ರೋಗಗಳು, ಉನ್ಮಾದ, ಪ್ರಮೇಹ(ಹುಚ್ಚು), ದೃಷ್ಟಿದೋಷ, ಮೂರ್ಛೆ, ನಾಸಿಕ ದೋಷಗಳು. ಕುಜ: ಪಿತ್ತ ಪ್ರಧಾನ ದೋಷಗಳು, ನಾನಾ ಬಗೆಯ ಜ್ವರ, ರಕ್ತಸ್ರಾವ, ಆಮಾಶಯ ವ್ರಣ, ಆಮ್ಲಪಿತ್ತ, ಅಧಿಕ ಜ್ವರ, ಗರ್ಭಪಾತ. ಬುಧ: ಮಾನಸಿಕ ವಿಕಾರಗಳು, ಚರ್ಮರೋಗ, ಉನ್ಮಾದ, ಅಪಸ್ಮಾರ, ಮೂರ್ಛೆ ರೋಗ, ಪಾರ್ಶ್ವವಾಯು, ಅಸ್ತಮಾ, ವಾಗ್ದೋಷ, ನಿದ್ರಾಭಂಗ. ಗುರು: ಯಕೃತ್ತು, ಅಪಚನ, ಅಜೀರ್ಣ, ಜಲೋದರ, ರಕ್ತದೊತ್ತಡ, ಕಾಮಾಲೆ, ಶೀತಜ್ವರ. ಶುಕ್ರ: ಲೈಂಗಿಕ ರೋಗಗಳು, ಸ್ತ್ರೀರೋಗಗಳು, ಯೋನಿದೋಷ, ವೀರ‌್ಯದೋಷ. ಶನಿ: ವಾತರೋಗ, ಸಂಧಿವಾತ, ಮಂಡಿನೋವು, ವೃದ್ಧಾಪ್ಯ ರೋಗಗಳು, ದೀರ್ಘಾವಧಿ ರೋಗಗಳು, ಚರ್ಮರೋಗ, ಕಾಲರಾ, ಮೂಳೆರೋಗಗಳು. ರಾಹು: ಮಾನಸಿಕ ವಿಕಾರ, ಮೂರ್ಛೆ, ಅಪಸ್ಮಾರ, ಬಾಯಾರಿಕೆ, ಮೈಲಿಬೇನೆ. ಕೇತು: ಚರ್ಮ ರೋಗಗಳು, ಮೂರ್ಛೆ, ಅಪಸ್ಮಾರ. ವ್ಯಾಧಿಗೆ ಕಾರಣಗಳು: ಶುಭ ಗ್ರಹಗಳು 3,6,8,12ನೇ ಭಾವಗಳಲ್ಲಿ ಸ್ಥಿತರಾಗಿ ಪೀಡಿತರಾದರೆ ಆ ಗ್ರಹಕ್ಕೆ ಸಂಬಂಧವಾದ ರಾಶಿಗೆ ಸಂಬಂಧವಾದ ರೋಗಗಳುಂಟಾಗುತ್ತವೆ. ಪಾಪಗ್ರಹಗಳು ಯಾವುದೇ ಭಾವದಲ್ಲಿರಲಿ (3, 6, 8, 12ನ್ನು ಬಿಟ್ಟು )ಪೀಡಿತರಾದರೆ ಆ ಗ್ರಹ ರಾಶಿಗೆ ಸಂಬಂಧವಾದ ರೋಗಗಳುಂಟಾಗುತ್ತವೆ. ಇಷ್ಟೇ ಅಲ್ಲದೆ ನಕ್ಷತ್ರಗಳಿಂದ, ತತ್ತ್ವಗಳ ಆಧಾರದ ಮೇಲೆ, ತ್ರಿದೋಷಗಳ ಆಧಾರದ ಮೇಲೆ ರೋಗಗಳನ್ನು ನಿರ್ಣಯಿಸಬಹುದಾಗಿದೆ. ವ್ಯಾಧಿಗಳಲ್ಲಿ ನಾಲ್ಕು ವಿಧ. 1. ದೈಹಿಕ ವ್ಯಾಧಿ: ರವಿ, ಕುಜ, ಶನಿ, ಕಾರಕರು. 3,4,6,9,12ನೇ ಭಾವಗಳು. 2.ಮಾನಸಿಕ ವ್ಯಾಧಿಗಳು: ಬುಧ, ಚಂದ್ರ ಕಾರಕರು. 3.8,12ನೇ ಭಾವಗಳು. 3.ಚರ್ಮ ಸಂಬಂಧಿ ವ್ಯಾಧಿಗಳು: ಶುಕ್ರ, ಬುಧ, ಚಂದ್ರ, ಶನಿ ಕಾರಕರು. 4. ಭೂತ ವಿಕಾರ ವ್ಯಾಧಿಗಳು: ರಾಹು, ಕೇತು ಕಾರಕರು. ರಾಹು, ಕೇತು ಸ್ಥಿತ ಭಾವಗಳು ಹಾಗೂ ಲಗ್ನ. ಇಷ್ಟೇ ಅಲ್ಲದೆ ಗ್ರಹಗಳ ಯುತಿ, ಸ್ಥಿತಿ, ಪೀಡಿತಗಳನ್ನು ನೋಡಿ ವ್ಯಾಧಿಗಳನ್ನು ತಿಳಿಯಬಹುದು.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ