Skip to main content

ಜಾತಕವನ್ನು ನೋಡಿ ಕೆಳಗಿನ ಅಂಶಗಳನ್ನು ಪರಿಶೀಲಿಸಿಕೊಳ್ಳಬಹುದು.

ಜಾತಕದಲ್ಲಿ ಚಂದ್ರನು ಆರನೇ ಭಾವದಲ್ಲಿ ಇದ್ದರೆ ಜಾತಕರು ದ್ರವರೂಪದ ಪದಾರ್ಥಗಳನ್ನು ದಾನ ಮಾಡಬಾರದು. ಜಾತಕರು ರಾಜಕಾರಣಿಗಳು, ಸಮಾಜಸೇವಕರಾಗಿದ್ದರೆ ಅವರು ಕುಡಿಯುವ ನೀರಿನ ಅರವಟ್ಟಿಗೆಗಳನ್ನು ಕಟ್ಟಿಸಬಾರದು. ಜಾತಕದಲ್ಲಿನ ಉಚ್ಚ ಗ್ರಹಗಳು, ಸ್ವಗೃಹಿ ಗ್ರಹಗಳು, ಮಿತ್ರಗೃಹಿ ಗ್ರಹಗಳ ವಸ್ತುಗಳನ್ನು ದಾನ ಮಾಡಬಾರದು. ಶನಿ ಎಂಟನೇ ಭಾವದಲ್ಲಿದ್ದರೆ ಧರ್ಮಶಾಲೆಗಳನ್ನು, ಛತ್ರಗಳನ್ನು ಕಟ್ಟಿಸಬಾರದು. ಅವುಗಳ ಕಟ್ಟಡಕ್ಕೆ ದಾನವನ್ನೂ ಮಾಡಬಾರದು. ಗುರು ಹತ್ತನೇ ಭಾವದಲ್ಲಿ ಹಾಗೂ ಚಂದ್ರ ನಾಲ್ಕನೇ ಭಾವದಲ್ಲಿದ್ದರೆ ದೇವಸ್ಥಾನಗಳನ್ನು ಕಟ್ಟಿಸಬಾರದು. ಒಂದು ವೇಳೇ ಇದನ್ನು ಮೀರಿದರೆ ಮೊಕದ್ದಮೆಗಳನ್ನು ಎದುರಿಸಬೇಕಾಗಬಹುದು. ಶುಕ್ರ ಒಂಬತ್ತರಲ್ಲಿ ಇದ್ದರೆ ವಿಧವೆಯರಿಗೆ, ಯಾತ್ರಿಗಳಿಗೆ ಆರ್ಥಿಕ ಸಹಾಯ ಮಾಡಬಾರದು. ಚಂದ್ರ ಹನ್ನೆರಡನೇ ಭಾವದಲ್ಲಿದ್ದರೆ ಆ ಜಾತಕರು ವಿದ್ಯಾರ್ಥಿಗಳಿಗೆ ಉಚಿತವಾಗಿ ಏನನ್ನೂ ಕೊಡಬಾರದು. ವಿದ್ಯಾಲಯಗಳನ್ನು ಕಟ್ಟಿಸಬಾರದು ಹಾಗೂ ಸಾಧುಗಳಿಗೆ ಭೋಜನ ಹಾಕಬಾರದು. ಏಳನೇ ಭಾವದಲ್ಲಿ ಗುರು ಇದ್ದರೆ ಸಾಧುಗಳಿಗೆ ಮತ್ತು ಇತರರಿಗೆ ಬಟ್ಟೆಯನ್ನು ದಾನವಾಗಿ ಕೊಡಕೂಡದು. ಜಾತಕದಲ್ಲಿ ಹನ್ನೆರಡನೆ ಭಾವ ಹಾಗೂ ಎಂಟನೆ ಭಾವಸ್ಥಿತ ಗ್ರಹಗಳು ಪರಸ್ಪರ ವೈರಿಗಳಾಗಿದ್ದರೆ ಹಾಗೂ ಎರಡನೇ ಭಾವವು ಖಾಲಿ ಇದ್ದರೆ ಮತ್ತು ಹನ್ನೆರಡನೆ, ಎಂಟನೇ ಭಾವದ ದೃಷ್ಟಿಯು ಎರಡನೇ ಭಾವದ ಮೇಲೆ ಬೀಳುತ್ತದೆ. ಎರಡನೇ ಭಾವವು ಪೂಜಾ ಸ್ಥಾನವಾಗಿರುವುದರಿಂದ ಆ ಜಾತಕರು ದೇವಸ್ಥಾನದ ಒಳಗೆ ಹೋದರೆ ಕೆಟ್ಟ ಪ್ರಭಾವಗಳನ್ನು ಕಾಣಬಹುದು. ಹೀಗಾಗಿ ಇಂಥ ಜಾತಕರು ಗರ್ಭಗುಡಿಯ ಒಳಗೆ ಹೋಗದೆ ಹೊರಗಡೆಯಿಂದಲೇ ನಮಸ್ಕಾರ ಮಾಡುವುದು ಒಳ್ಳೆಯದು. ಹನ್ನೆರಡನೆ ಹಾಗೂ ಎಂಟನೇ ಭಾವದಲ್ಲಿ ಶತ್ರು ಗ್ರಹಗಳಿದ್ದರೆ ಹಾಗೂ ಎರಡನೇ ಭಾವದಲ್ಲಿ ಅತ್ಯಂತ ಶುಭ ಗ್ರಹಗಳಿದ್ದರೆ ಜಾತಕರು ದೇವಸ್ಥಾನದ ಒಳಗೆ ತಪ್ಪದೇ ಹೋಗಬೇಕು ಹಾಗೂ ದೇವರ ಮೂರ್ತಿ, ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಬೇಕು. ಇದು ಅತ್ಯಂತ ಶುಭಕರವಾದದ್ದು. ಹನ್ನೊಂದನೇ ಭಾವದಲ್ಲಿರುವ ಗ್ರಹ, ಗೋಚಾರದಲ್ಲಿ ಎಂಟು ಅಥವಾ ಹನ್ನೊಂದಕ್ಕೆ ಬಂದರೆ, ಆ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಆರನೇ ಭಾವದ ಗ್ರಹ, ಗೋಚಾರಿಯಾಗಿ ಆರಕ್ಕೇ ಬಂದಾಗ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ಆ ಸಮಯದಲ್ಲಿ ಆ ಗ್ರಹದ ವಸ್ತುಗಳನ್ನು ಖರೀದಿಸಬಾರದು ಮತ್ತು ಆ ಗ್ರಹದ ವಸ್ತುಗಳನ್ನು ದಾನ ಮಾಡಬಹುದು. ಬುಧ, ಶನಿ ಹಾಗೂ ಕೇತು ಸಪ್ತಮ ಭಾವ ಅಥವ ಸಪ್ತಮ ಭಾವಕ್ಕ ಗೋಚಾರಿಯಾಗಿ ಬಂದರೆ ಹಾಗು ಅಶುಭ ಫಲ ನೀಡುತ್ತಿದ್ದರೆ ಅವುಗಳ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡಿ ಅಥವಾ ಅವುಗಳ ಕಾರಕ ಸಂಬಂಧಿಯಾದ ಸೇವೆಗಳನ್ನು ಮಾಡಬಹುದು. ಶನಿ-ಗುರು ಈ ಜೋಡಿ ಐದನೇ ಭಾವದಲ್ಲಿದ್ದರೆ ಜಾತಕರು ಮದ್ಯಪಾನವನ್ನು ಮಾಡಲೇಬಾರದು. ಮನೆಯಲ್ಲಿ ವಿಪರೀತ ಖರ್ಚು ಇದ್ದರೆ; ಆ ಜಾತಕರು ಮನೆಯ ಮುಖ್ಯಸ್ಥರು ಅಡುಗೆಮನೆಯಲ್ಲಿಯೇ ಕುಳಿತು ಊಟ ಮಾಡಬೇಕು. ಇದರಿಂದ ಕಾಣದ ಖರ್ಚು ಕಡಿಮೆಯಾಗುತ್ತದೆ. ಯಾವುದೇ ಭಾವದಲ್ಲಿ ನಾಲ್ಕರಿಂದ ಐದು ಗ್ರಹಗಳು ಒಟ್ಟಿಗೆ ಕುಳಿತಿದ್ದರೆ, ಅದರಲ್ಲಿ ರಾಹು ಅಥವಾ ಕೇತು ಇದ್ದರೆ ಒಳ್ಳೆಯದು. ಆದರೆ ಬುಧ ಗ್ರ ಇದ್ದರೆ ಜಾತಕರು ಬೀಡಿ, ಸಿಗರೇಟ್, ಮದ್ಯ, ತಂಬಾಕು ಇಂಥ ಮಾದಕ ವಸ್ತುಗಳನ್ನು ಸೇವಿಸಬಾರದು. ರಾಹು ಏಳನೇ ಭಾವದಲ್ಲಿದ್ದರೆ ಜಾತಕರು ನಾಯಿಗಳಿಗೆ ಏನನ್ನೂ ತಿನ್ನಲು ಕೊಡಬಾರದು. ಜತೆಗೆ ನಾಯಿಗಳನ್ನೂ ಸಾಕಬಾರದು. ಇದರಿಂದ ಜಾತಕರ ಮಕ್ಕಳಿಗೆ ತೊಂದರೆ ಬರುವ ಸಾಧ್ಯತೆಗಳಿರುತ್ತವೆ. ಗುರು ಹತ್ತನೇ ಭಾವದಲ್ಲಿದ್ದರೆ ದೇವಸ್ಥಾನಗಳನ್ನು, ಪೂಜಾಲಯಗಳನ್ನು ಕಟ್ಟಿಸಬಾರದು. ಒಂಬತ್ತನೇ ಭಾವದಲ್ಲಿ ಶುಕ್ರ ಗ್ರಹ ಇದ್ದರೆ ಜಾತಕರು ಅನಾಥ ಮಕ್ಕಳಿಗೆ ಸ್ವಂತ ಕೈಯಿಂದ ತಿನ್ನುವ ವಸ್ತುಗಳನ್ನು ನೀಡಬಾರದು. ರವಿ ಎಂಟು ಹಾಗೂ ಒಂಬತ್ತನೇ ಭಾವದಲ್ಲಿದ್ದರೆ ಬೆಳಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ದಾನಗಳನ್ನು ಮಾಡಬಾರದು. ಅಶುಭ ಭಾವಸ್ಥಿತ ಗ್ರಹಗಳ ವಸ್ತುಗಳನ್ನು ಎಂದಿಗೂ ಉಚಿತವಾಗಿ ಸ್ವೀಕರಿಸಬಾರದು ಹಾಗೂ ಶುಭ ಭಾವಗಳಲ್ಲಿ ಇರುವ ಗ್ರಹಗಳ ವಸ್ತುಗಳನ್ನು ಎಂದಿಗೂ ದಾನ ಮಾಡಬಾರದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...