Skip to main content

ನಾಡಿ ದೋಷ ವಿವೇಚನೆ

ನಾಡಿ ದೋಷ ವಿವೇಚನೆ * ಶ್ರೀಪಾದ ಆರ್. ಕುಲಕರ್ಣಿ ವಿವಾಹಕ್ಕೆ ಅನುಮತಿ ಕೊಡುವ ಮೊದಲು ವಧು-ವರರ ಜಾತಕಗಳನ್ನು ಪರಿಶೀಲಿಸಿ ಕೂಟ ಸಾಲಾವಳಿ, ದೋಷ ಸಾಮ್ಯ, ಆಯುಷ್ಯ, ಸಂತಾನ ಗೋತ್ರ, ಪ್ರವರ, ವಯಸ್ಸು, ವಂಶ, ಚಾರಿತ್ರ್ಯ, ದುರ್ಯೋಗಗಳು ಇತ್ಯಾದಿಗಳನ್ನು ವಿಚಾರಿಸಬೇಕಾಗುತ್ತದೆ. ಈ ಕೂಟ ಸಾಲಾವಳಿಗಳಲ್ಲಿ 8 ರಿಂದ 24ರವರೆಗೆ ಕೂಟಗಳಿರುತ್ತವೆ. ಆದರೆ ದಾಂಪತ್ಯ ಜೀವನಕ್ಕೆ ವರ್ಣ ಕೂಟ, ವಶ್ಯ ಕೂಟ, ತಾರಾ ಕೂಟ, ಯೋನಿ ಕೂಟ, ಗ್ರಹ ಮೈತ್ರಿ ಕೂಟ, ಗಣ ಕೂಟ, ರಾಶಿ ಕೂಟ, ನಾಡಿ ಕೂಟ ಈ ಎಂಟು ಕೂಟಗಳು ಮುಖ್ಯವಾಗಿವೆ. ಪ್ರತಿಯೊಂದು ಕೂಟವು ವಧುವಿನಿಂದ ವರನಿಗೆ ಗಣನೆಯು. ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಜ್ಯೇಷ್ಠಾ, ಉತ್ತರಾ, ಆರ್ದ್ರಾ, ಶತಭಿಷಾ, ಮೂಲಾ, ಹಸ್ತಾ, ಪುನರ್ವಸು, ಪೂರ್ವಭಾದ್ರಾ, ಅಶ್ವಿನಿ ಇವು ಆದ್ಯ ನಾಡಿಗಳು. ಪುಷ್ಯ, ಮೃಗಶಿರ, ಚಿತ್ರಾ, ಅನುರಾಧಾ, ಭರಣಿ, ಧನಿಷ್ಠ, ಪೂರ್ವಾಷಾಢ, ಹುಬ್ಬಾ, ಉತ್ತರ ಭಾದ್ರ ಇವು ಮಧ್ಯ ನಾಡಿ ನಕ್ಷತ್ರಗಳು. ಸ್ವಾತಿ, ಕೃತ್ತಿಕಾ, ಆಶ್ಲೇಷಾ, ಉತ್ತರಾಷಾಢ, ವಿಶಾಖಾ, ರೋಹಿಣಿ, ಮಘ, ಶ್ರವಣ, ರೇವತಿ ಇವು ಅಂತ್ಯ ನಾಡಿಗಳು. ವಧು-ವರರು ಏಕ ನಾಡಿಯಾದರೆ ಅಶುಭ. ಇಬ್ಬರದೂ ಮಧ್ಯ ನಾಡಿಯಾದರೆ ಮೃತ್ಯು. ಆದ್ಯ ನಾಡಿ ವಿಯೋಗಕರ. ಮಧ್ಯದ ಏಕ ನಾಡಿ ಮೃತ್ಯು ಪದ. ಅಂತ್ಯದ ಏಕ ನಾಡಿಯಾದರೆ. ದುಃಖಕರ ಭಿನ್ನ ನಾಡಿಯಾದರೆಉತ್ತಮ, ಸುಖ ದಾಂಪತ್ಯ. ಇವು ಸಾಮಾನ್ಯ ನಿಯಮಗಳು. ಆದರೆ ಕೆಲವು ನಕ್ಷತ್ರಾನುಸಾರ ನಾಡಿ ದೋಷವು ಇರುವುದಿಲ್ಲ ಅಥವಾ ಸ್ವತಃ ಪರಿಹಾರವಾಗುತ್ತದೆ. ವಿಶಾಖಾ, ಅನುರಾಧಾ, ಧನಿಷ್ಠ, ರೇವತಿ, ಹಸ್ತ, ಸ್ವಾತಿ, ಆರ್ದ್ರಾ ಪೂರ್ವ ಭಾದ್ರ-ಈ ಎಂಟು ನಕ್ಷತ್ರಗಳಲ್ಲಿ ವರ ಕನ್ಯೆ ಅಥವಾ ಇಬ್ಬರಲ್ಲಿ ಒಬ್ಬರು ಜನಿಸಿದರೆ ನಾಡಿ ದೋಷವಿರುವುದಿಲ್ಲ. ಶುಭವಾಗುತ್ತದೆ. ಉತ್ತರಭಾದ್ರ, ರೇವತಿ, ರೋಹಿಣಿ, ವಿಶಾಖಾ, ಶ್ರವಣ, ಆರ್ದ್ರಾ, ಪುಷ್ಯ, ಮಘಾ-ಈ ಎಂಟು ನಕ್ಷತ್ರಗಳಲ್ಲಿ ವರ ಕನ್ಯೆಯರ ಜನ್ಮ ನಕ್ಷತ್ರವಿದ್ದರೆ ನಾಡಿ ದೋಷವು ಶಾಂತವಾಗುತ್ತದೆ. ಭರಣಿ, ಮೃಗಶಿರಾ, ಶತಭಿಷ, ಹಸ್ತ, ಪೂರ್ವಾಸಾಢ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿಯೂ ನಾಡಿ ದೋಷ ಇರುವುದಿಲ್ಲ ಎಂದು ಕಾಲಾಮೃತಕಾರರು ಹೇಳುತ್ತಾರೆ. ವರ ಕನ್ಯೆಯರ ರಾಶಿ ಒಂದೇ ಆಗಿದ್ದು, ಭಿನ್ನ ಜನ್ಮ ನಕ್ಷತ್ರಗಳಿದ್ದರೆ ಅಥವಾ ನಕ್ಷತ್ರ ಒಂದೇ ಆಗಿದ್ದು ಭಿನ್ನ ರಾಶಿಯಾಗಿದ್ದರೆ ನಾಡಿ ದೋಷವು ಬರುವುದಿಲ್ಲ. ಒಂದೇ ನಕ್ಷತ್ರದಲ್ಲಿ ಚರಣ ಭೇದವಾಗಿದ್ದರೆ ಅನಿವಾರ್ಯ ಪಕ್ಷದಲ್ಲಿ ವಿವಾಹ ಮಾಡಬಹುದು ಎಂದು 'ಜಗನ್ಮೋಹನ'ದಲ್ಲಿ ಹೇಳಲಾಗಿದೆ. ಮೃಗಶಿರಾ, ಮಘ, ಸ್ವಾತಿ, ಅನುರಾಧಾ ಇವುಗಳನ್ನು ಮಹಾ ನಕ್ಷತ್ರಗಳೆಂದು ಕರೆಯಲಾಗುತ್ತದೆ. ವಧು-ವರರಲ್ಲಿ ಯಾರೊಬ್ಬರ ನಕ್ಷತ್ರವು ಮಹಾ ನಕ್ಷತ್ರವಾಗಿದ್ದರೆ ಕೂಟಗಳ ವೇಳಾಪಟ್ಟಿಯನ್ನು ಪರಿಗಣಿಸದೆ ವಿವಾಹಕ್ಕೆ ಸಮ್ಮತಿಸಬಹುದು. ಜಾತಕಗಳು ಶುಭ ಪ್ರದವಾಗಿದ್ದು ಕೂಟಗಳಲ್ಲಿ ಗುಣಾಧಿಕ್ಯವಿಲ್ಲದಿದ್ದರೂ ವಿವಾಹ ಮಾಡಬಹುದು ಎನ್ನುವುದಕ್ಕೆ ಶಾಸ್ತ್ರಾಧಾರಗಳಿವೆ. ಕಾರಣ ದೋಷಗಳನ್ನು ಕಂಡಾಗ ದೋಷ ಪರಿಹಾರಗಳನ್ನು ಕೂಡ ಗಮನದಲ್ಲಿಟ್ಟುಕೊಳ್ಳುವುದು ಅನಿವಾರ್ಯ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...