Skip to main content

ಹೋಮಗಳಿಂದ ಕೆಲವು ದೋಷಗಳಿಗೆ ಪರಿಹಾರ

1.ಮಹಾ ಸುದರ್ಶನ ಹೋಮ-ಅಬಿಚಾರ ದೋಷ,ಪ್ರೇತಬಾಧೆ,ಸಂಮೋಹನಕ್ರಿಯೆಗೆ. 2.ಮಹಾ ಮೃತ್ಯುಂಜಯ ಹೋಮ-ಮರಣಾವಸ್ಥೆಯಲ್ಲಿರುವವರಿಗೆ(ತೀವ್ರತರದ ವ್ಯಾಧಿಗಳಿಗೆ) 3.ಅಭಯಂಕರ ಹೋಮ-ದೀರ್ಘವ್ಯಾಧಿ,ಕುಷ್ಟ,ಚರ್ಮವ್ಯಾಧಿಗಳಿಗೆ 4.ತ್ರಯಂಭಕ ಹೋಮ-ಆಕಸ್ಮಿಕ ಮರಣಗಳಿಗೆ. 5.ದುರ್ಗಾ ಹೋಮ-ಕೃತ್ರಿಮ(ಮಾಟ)ಮಹಾ ಅನಿಷ್ಟಗಳಿಗೆ 6.ಅಶ್ಲೇಷಬಲಿ-ಸರ್ಪದೋಷ ಶ್ರೀಘ್ರವಿವಾಹ 7.ಸುಬ್ರಹ್ಮಣ್ಯಹೋಮ-ಶಸ್ತ್ರ ಚಿಕಿತ್ಸೆ,ವಾಹನ ಅಪಘಾತದಿಂದ ನಿವಾರಣೆಗಾಗಿ. 8.ವರುಣ ಹೋಮ-ಸಾಲ ಬಾಧೆನಿವಾರಣೆಗಾಗಿ. 9.ವಹ್ನಿಹೋಮ-ಶಸ್ತ್ರಾಪಘಾತ,ವಾಹನಾಪಗಾತಗಳಿಂದ ಪಾರಾಗುವುದ್ದಕ್ಕೆ. 10.ನಿರುತಿ ಹೋಮ-ಗೃಹದಲ್ಲಿ ದುಷ್ಟಶಕ್ತಿ ನಿಗ್ರಹಕ್ಕೆ. 11.ಗಣಪತಿ ಹೋಮ-ಸಕಲ ಕಾರ್ಯಗಳ ಸಾದನೆ,ಸಸ್ಪೆನ್ಷನ್ ಗಳಿಂದ ಮುಕ್ತಿ,ಇಚ್ಚಾಪೂರ್ತಿಗಾಗಿ. 12.ಪುರುಷ ಸೂಕ್ತ ಹೋಮ-ನೆನಪಿನ ಶಕ್ತಿ,ತೊದಲುಮಾತು ನಿವಾರಣೆಗಾಗಿ. 13.ಶ್ರೀ ದುರ್ಗಾ ಹೋಮ-ಅಪಘಾತ,ರಾಹುಗ್ರಹಪೀಡೆ ಪರಿಹಾರಗಳಿಗೆ,ಗರ್ಭದೋಷಗಳಿಗೆ. 14.ಶ್ರೀ ರುದ್ರ ಹೋಮ-ಕಠಿಣಜ್ವರಬಾದೆ,ಶರೀರಸೌಖ್ಯಕ್ಕೆ. 15.ನವಗ್ರಹ ಹೋಮ-ಸಕಲ ಆರೋಗ್ಯ,ಸಂಕಷ್ಟಗಳಿಗೆ,ನವಗ್ರಹದೋಷಗಳಿಗೆ. 16.ನಾರಾಯಣ ಬಲಿ ಹೋಮ- ಪ್ರೇತಬಾದೆಗೆ,ಪ್ರಕೃತಿ ವಿರೋಧ,ಮರಣಗಳಿಗೆ ಶಾಂತಿಗಾಗಿ. 17.ಅಘೊರ ಹೋಮ-ಪ್ರಾಣಿ,ಪಕ್ಷಿಗಳು ಗೃಹ ಪ್ರವೇಶದಿಂದ ಉಂಟಾಗುವ ದೋಷಗಳ ನಿವಾರಣೆಗಾಗಿ. 18.ಸಂತಾನ ಗೋಪಾಲ ಹೋಮ-ಸಂತಾನಕ್ಕಾಗಿ(ಪುರುಷಸೂಕ್ತ ಹೋಮ) 19.ಗೋಮುಖಪ್ರಸವಶಾಂತಿ ಹೋಮ-ದುಷ್ಟನಕ್ಷತ್ರದಲ್ಲಿ ಜನನ ಶಾಂತಿಗಾಗಿ. 20.ಕೂಷ್ಮಾಂಡ ಹೋಮ-ಮಹಾ ಪ್ರಾಯಶ್ಚಿತ್ತಕ್ಕೆ. 21.ಷಷ್ಟಿಪೂರ್ತಿ ಶಾಂತಿ ಹೋಮ-೬೦ನೇ ವರ್ಷದಲ್ಲಿ. 22.ಉಗ್ರ ರಥ ಶಾಂತಿ ಹೋಮ-೭೦ನೇ ವಯಸ್ಸಿನಲ್ಲಿ. 23.ಭೀಮರಥ ಶಾಂತಿ-೭೫ನೇ ವರ್ಷದಲ್ಲಿ. 24.ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ-೮೦ನೇ ವಯಸ್ಸಿನಲ್ಲಿ 25.ರಕ್ಷೋ ಗಣ ಹೋಮ- ಮನೆ ನಿರ್ಮಾಣ ಕಾಲದಲ್ಲಿ ಬಲಿಯಾದ ಜೀವ ಜಂತುಗಳ ಆತ್ಮಶಾಂತಿಗಾಗಿ. 26.ಸೂರ್ಯ ನಾರಾಯಣ ಹೋಮ-ಆರೋಗ್ಯವೃದ್ದಿಗಾಗಿ,ದೇಹ ಬಲಕ್ಕೆ,ದೃಷ್ಟಿ ದೋಷನಿವಾರಣೆಗೆ. 27.ತ್ರಿಪುರದಲ ಹೋಮ-ಶಸ್ತ್ರಚಿಕಿತ್ಸೆ(ಆಪರೇಷನ್ ಗಳ ಯಶಕ್ಕಾಗಿ) 28.ದನ್ವಂತ್ರಿ ಹೋಮ-ಆರೋಗ್ಯ ವೃದ್ದಿಗಾಗಿ. 29.ಗರುಡ ಹೋಮ-ಸರ್ಪಪೀಡೆ ತಪ್ಪಿಸಲು,ಕಾರ್ಯ ಯಶಸ್ಸಿಗಾಗಿ. 30.ತ್ವರಿತ ಹೋಮ-ಕೆಟ್ಟ ಕನಸು,ಪ್ರೇತಬಾಧೆ,ಗಾಳಿಸೋಕುಗಳನಿವಾರಣೆಗಾಗಿ. 31.ವೈವಸ್ವತಹೋಮ-ಪಿತಿಶಾಪ,ಮಾತೃಶಾಪನಿವಾರಣೆಗಾಗಿ. 31.ಚಂಡಿಕೇಶ್ವರ ಹೋಮ-ಬಾಲಗ್ರಹ ದೋಷ ನಿವಾರಣೆಗಾಗಿ. 33.ಗುಹ್ಯ ಕಾಳಿ ಹೋಮ-ಸ್ತ್ರೀ-ಪುರುಷರ ಗುಪ್ತಾಂಗ ರೋಗ ನಿವಾರಣೆಗಾಗಿ. 34.ವಾಯು ಹೋಮ-ವಾಯು ಸಂಬಂದ ವ್ಯಾಧಿಗಳ ನಿವಾರಣೆಗಾಗಿ. 36.ಶ್ರೀ ಲಲಿತ ಹೋಮ-ಮನೆಯ ನೆಮ್ಮದಿಗಾಗಿ. 37.ಮನೋ ವಾಂಚಿತ ಗಣಹೋಮ-ಇಚ್ಚಾಪೂರ್ಣತೆಗಾಗಿ. 38.ಶ್ರೀ ಗಾಯತ್ರಿ ಹೋಮ-ಸಕಲ ಪಾಪಗಳ ನಿವೃತ್ತಿಗಾಗಿ,ದುಷ್ಟರ ನಾಶಕ್ಕಾಗಿ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...