ದಾಂಪತ್ಯ ಕಲಹಗಳ ನಿವಾರಣೆಗಾಗಿ (ಪರಸ್ತ್ರೀ ಸಹವಾಸದಿಂದ ಉಂಟಾಗಿರುವ ಸಾಂಸಾರಿಕ ತೊಂದರೆಗಳ ನಿವಾರಣೆಗಾಗಿ ಪರಿಹಾರೋಪಾಯಗಳು)
೧.ಕೃತಿಕಾ ಉತ್ತರ ಉತ್ತರಾಷಾಡ ನಕ್ಷತ್ರ ಅಥವ ಸಪ್ತಮಿ ತಿಥಿ ಭಾನುವಾರ ಇರುವಾಗ ಹಿಂದಿನ ದಿನವೇ(ಶನಿವಾರದಂದು) ಬಿಳಿ ಎಕ್ಕದ ಗಿಡವನ್ನು ಪೂಜಾಸಾಮಗ್ರಿಗಳಿಂದ ಮೊಸರನ್ನ ನೈವೇದ್ಯ ಮಾಡಿ ಒಂದು ಅರಿಸಿನ ಕೊನೆಯನ್ನು ಅರಿಸಿನದ ದಾರಮಾಡಿ ಗಿಡಕ್ಕೆ ಕಟ್ಟಿ ೫ಜನ ಸ್ತ್ರೀಯರಿಗೆ ಅರಿಸಿನ ಕುಂಕುಮ ನೀಡಿ ಬರುವುದು ಭಾನುವಾರ ದಂದು ಆಗಿಡಬಳಿ ಬಂದು ಮತ್ತೆ ಪೂಜೆ ಮಾಡಿ ಅರಿಸಿನದ ಕೊಂಬು ಕಟ್ಟಿರುವ ಕೊಂಬೆಯನ್ನು ಕತ್ತರಿಕೊಂಡು ತಂದು ಮನೆಯಲ್ಲಿ ಒಂದು ತಟ್ಟೆಯಲ್ಲಿ ನವದಾನ್ಯ ಗಳಮೇಲೆ ಆ ಅರಿಸಿನದ ಕೊಂಬಿನ ಸಮೆತ ಇರುವ ಎಕ್ಕದ ಗಿಡವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ದೇವಿಯ ಯಾವುದಾದರು ಮಂತ್ರವನ್ನು ಅಥವ ಶತನಾಮಾವಳಿಯನ್ನು ೧೦೮ ಸಲ ಜಪಿಸಿ ನಂತರ ಆ ಗಿಡವನ್ನು ನಮಿಸಿ ದೇವರ ಮನೆಯಲ್ಲಿ ಅಥವ ಮನೆಯ ಮುಂಬಾಗಿಲಿನ ಗೋಡೆಗೆ ಒಳಬಾಗದಲ್ಲಿ ಕಟ್ಟುವುದು ನಿತ್ಯವು ಪೂಜೆಮಾಡುವುದು.
೨.ಪ್ರದೋಷ ವಿರುವ ದಿವಸ ನೋಡಿಕೊಂಡು ಒಂದು ತಾಮ್ರದ ತಗಡಿನಲ್ಲಿ ಪತಿಯ ಹೆಸರು,ಅವನ ತಾಯಿಯ ಹೆಸರು(ಅತ್ತೆಯ ಹೆಸರು)ಪತ್ನಿಯ ಹೆಸರು ತನ್ನ ತಾಯಿಯ ಹೆಸರು ಬರೆದು ಒಂದು ಜೇನುತುಪ್ಪದ ಬಾಟಲ್ ನಲ್ಲಿ ಹಾಕಿ ತಗಡನ್ನು ಸುತ್ತಿ ಜೇನಿನಲ್ಲಿ ಸಂಪೂರ್ಣ ಮುಳುಗುವಂತಿರಲಿ ಮುಚ್ಚಳ ಹಾಕಿ ಪೂಜೆ ಮಾಡಿ ಪ್ರಾಥಿಸಿಕೊಂಡು ಹರಿಯುವ ನೀರಲ್ಲಾಗಲಿ ಪಾಳು ಬಾವಿಯಲ್ಲಾಗಲಿ ಹುತ್ತದ ಕೋವಿನಲ್ಲಾಗಲಿ ಆಕಬೇಕು.
ಪ್ರದೋಷವು ಒಂದು ತಿಂಗಳಲ್ಲಿ ಎರಡು ಸಲ ಬರುತ್ತದೆ ಅಂದರೆ ಶುಕ್ಲಪಕ್ಷದಲ್ಲಿನ ತ್ರಯೋದಶಿ ತಿಥಿ ೧ ಮತ್ತು ಕೃಷ್ಣ ಪಕ್ಷದ ತ್ರಯೋದಶಿತಿಥಿ ೨)
೩.ದಾಗಡಿ ಬಳ್ಳಿಯ ಉಪಯೋಗ
ಪುಷ್ಯ ನಕ್ಷತ್ರ ವಿರುವದಿವಸ ಸ್ವತಃ ವ್ಯಕ್ತಿಯು ದಾಗಡಿಬಳ್ಳಿಯನ್ನು ತರುವುದು ಇದನ್ನು ಮನೆಯಲ್ಲಿ ಮುಂಬಾಗಿಲಿನ ಒಳಗಡೆ ಕಟ್ಟುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಉಂಟಾಗುತ್ತದೆ.
ಅಲ್ಲದೆ ಮನೆಯಲ್ಲಿ ಮಕ್ಕಳು ಹಾಸಿಗೆಯಲ್ಲಿ ಮೂತ್ರಿಸಿಕೊಳ್ಳುತ್ತಿದ್ದರೆ ಈ ಮೂಲಿಕೆಯನ್ನು ಮಕ್ಕಳ ತಲೆದಿಂಬಿನ ಕೆಳಗೆ ಇಡುವುದರಿಂದ ಪರಿಹಾರವಾಗುತ್ತದೆ.
ಹಾಗು ಸತಿ ಪತಿಗಳಲ್ಲಿ ಕಲಹಗಳು ಇಲ್ಲದಂತೆಮಾಡಲು ಈ ಬಳ್ಳಿಯನ್ನು ಶ್ರೀಗಂದದೊಂದಿಗೆ ಅರೆದು ಸತಿಪತಿಗಳು ನಿತ್ಯ ಪೂಜಾನಂತರ ತಿಲಕ ದರಿಸುವುದರಿಂದ ಕಲಹ ನಿಲ್ಲುತ್ತದೆ.
ದಾಂಪತ್ಯ ಕಲಹ ನಿವಾರಣೆಗಾಗಿ
ಚಿತ್ರಮೂಲಹೂಗಳನ್ನು(ಬಿಳಿ ಮತ್ತು ಹಳದಿ)ಪುಷ್ಯ ನಕ್ಷತ್ರ ವಿರುವದಿವಸ ತಂದು ಅದನ್ನು ದಿಂಬಿನಕೆಳಗೆ ಇಟ್ಟುಕೊಂಡು ಮಲಗುವುದು (೨೧ ದಿನಗಳವರೆಗೆ ಸತತವಾಗಿ ಇಟ್ಟುಕೊಳ್ಳುವುದು)ಆದರೆ ಯಾವುದೇ ಕಾರಣಕ್ಕೂ ದಂಪತಿಗಳ ಕೆಳಕ್ಕೆ ಅಂದರೆ ಬೆನ್ನಿಗೆಈ ಹೂವುಗಳು ಸಿಕ್ಕಿಕೊಳ್ಳಬಾರದು.)ಇದು ಕಷ್ಟವೆನಿಸಿದರೆ ಎರಡುತುಂಡು ಒಂದು ಇಂಚು ಅಥವ ಎರಡು ಇಂಚು ಕಡ್ಡಿಗಳನ್ನು ದಂಪತಿಗಳು ಮಲಗುವಕೋಣೆಯಲ್ಲಿನ ತಮ್ಮದೇ ಬಾವಚಿತ್ರದ ಹಿಂದೆ ಇಟ್ಟು ೨೧ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು.
ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ,ವಾತ್ಸಲ್ಯ ಸ್ಥಿರವಾಗಿ ಉಳಿಯಲಿಕ್ಕಾಗಿ ಈ ಪ್ರಯೋಗ ಮಾಡಬಹುದು.
ರಸಾಯನ ಅಥವ ಬೆಲ್ಲದಿಂದ ಶಿವಲಿಂಗಮಾಡಿ ಪ್ರಾಣ ಪ್ರತಿಷ್ಟಾಪನೆ ಮಾಡಿ,ಪೂಜಿಸಬೇಕು.ಇದು ಪ್ರತಿದಿನ ಮುಸ್ಸಂಜೆ(ಗೋದೂಳಿಸಮಯ)ಮಾಡಬೇಕು ನಂತರ ಅದನ್ನು ಶಿವಾಲಯದಲ್ಲಿ ಇಡಬೇಕು.ಈ ಪ್ರಯೋಗ ೫ ಮಂಗಳವಾರ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ನೆಮ್ಮದಿ ಉಂಟಾಗುತ್ತದೆ.
ವೀಳೆಯದ ಎಲೆಗೆ ಯಡಮುರಿ ಮೂಲಿಕೆ ಅದರಲ್ಲಿ ಒಂದು ಕರ್ಜೂರದ ಬೀಜವನ್ನು ಇಟ್ಟು ಎಲೆಯನ್ನು ಸುತ್ತಿ ದಾರದಿಂದ ಬಂದಿಸಿ ದಂಪತಿಗಳು ಮಲಗುವ ಕೋಣೆಯಲ್ಲಿನ ಒಂದು ಮೂಲೆಯಲ್ಲಿ ಕಟ್ಟುವುದು ೧೧ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು.(ಈ ಕಾರ್ಯಮಾಡುವುದು ದಂಪತಿಗೆತಿಳಿಯದಂತೆ ಮಾಡಬೇಕು ಕಟ್ಟಿದವರು ಕೂಡ ಅದನ್ನು ೧೧ದಿನದವರೆಗೆ ನೋಡಬಾರದು)
ಯಾವುದೇ ಕಾರ್ಯ ಕೈಗೂಡದಿದ್ದಲ್ಲಿ ಈ ರೀತಿ ಮಾಡಿ ನಿಮ್ಮ ಕಾರ್ಯ ಕೈಗೂಡುತ್ತದೆ.
ಮನೆಯಲ್ಲಿ ರಾತ್ರಿ ಮಲಗುವಮುನ್ನ ಎರಡು ಚಪಾತಿಯನ್ನು ಮಾಡಿ ಇಡುವುದು
ಹಿಂದಿನದಿನ ಮಾಡಿಟ್ಟಿರುವ ಚಪಾತಿಯನ್ನು ಕೆಲಸ ಆಗಬೇಕಾಗಿರುವ ವ್ಯಕ್ತಿ ಚೂರುಗಳನ್ನಾಗಿಮಾಡಿಕೊಂಡು ಅವುಗಳನ್ನು ಹಸುವಿಗೆ ತಿನ್ನಿಸಿ ನಂತರ ಸ್ನಾನ ಮಾಡಿ ಅರಳಿ ಮರಕ್ಕೆ ೧೨ ಪ್ರದಕ್ಷಿಣೆ ಹಾಕುವುದು.
ಈ ಸಣ್ಣ ಪರಿಹಾರಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇನ್ನು ಮುಂದೆ ಯಾವುದೇರೀತಿಯ ಸೋಲುಂಟಾಗುವುದಿಲ್ಲ.
ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ
Comments