Skip to main content

ದಾಂಪತ್ಯ ಕಲಹಗಳ ನಿವಾರಣೆಗಾಗಿ

ದಾಂಪತ್ಯ ಕಲಹಗಳ ನಿವಾರಣೆಗಾಗಿ (ಪರಸ್ತ್ರೀ ಸಹವಾಸದಿಂದ ಉಂಟಾಗಿರುವ ಸಾಂಸಾರಿಕ ತೊಂದರೆಗಳ ನಿವಾರಣೆಗಾಗಿ ಪರಿಹಾರೋಪಾಯಗಳು) ೧.ಕೃತಿಕಾ ಉತ್ತರ ಉತ್ತರಾಷಾಡ ನಕ್ಷತ್ರ ಅಥವ ಸಪ್ತಮಿ ತಿಥಿ ಭಾನುವಾರ ಇರುವಾಗ ಹಿಂದಿನ ದಿನವೇ(ಶನಿವಾರದಂದು) ಬಿಳಿ ಎಕ್ಕದ ಗಿಡವನ್ನು ಪೂಜಾಸಾಮಗ್ರಿಗಳಿಂದ ಮೊಸರನ್ನ ನೈವೇದ್ಯ ಮಾಡಿ ಒಂದು ಅರಿಸಿನ ಕೊನೆಯನ್ನು ಅರಿಸಿನದ ದಾರಮಾಡಿ ಗಿಡಕ್ಕೆ ಕಟ್ಟಿ ೫ಜನ ಸ್ತ್ರೀಯರಿಗೆ ಅರಿಸಿನ ಕುಂಕುಮ ನೀಡಿ ಬರುವುದು ಭಾನುವಾರ ದಂದು ಆಗಿಡಬಳಿ ಬಂದು ಮತ್ತೆ ಪೂಜೆ ಮಾಡಿ ಅರಿಸಿನದ ಕೊಂಬು ಕಟ್ಟಿರುವ ಕೊಂಬೆಯನ್ನು ಕತ್ತರಿಕೊಂಡು ತಂದು ಮನೆಯಲ್ಲಿ ಒಂದು ತಟ್ಟೆಯಲ್ಲಿ ನವದಾನ್ಯ ಗಳಮೇಲೆ ಆ ಅರಿಸಿನದ ಕೊಂಬಿನ ಸಮೆತ ಇರುವ ಎಕ್ಕದ ಗಿಡವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ದೇವಿಯ ಯಾವುದಾದರು ಮಂತ್ರವನ್ನು ಅಥವ ಶತನಾಮಾವಳಿಯನ್ನು ೧೦೮ ಸಲ ಜಪಿಸಿ ನಂತರ ಆ ಗಿಡವನ್ನು ನಮಿಸಿ ದೇವರ ಮನೆಯಲ್ಲಿ ಅಥವ ಮನೆಯ ಮುಂಬಾಗಿಲಿನ ಗೋಡೆಗೆ ಒಳಬಾಗದಲ್ಲಿ ಕಟ್ಟುವುದು ನಿತ್ಯವು ಪೂಜೆಮಾಡುವುದು. ೨.ಪ್ರದೋಷ ವಿರುವ ದಿವಸ ನೋಡಿಕೊಂಡು ಒಂದು ತಾಮ್ರದ ತಗಡಿನಲ್ಲಿ ಪತಿಯ ಹೆಸರು,ಅವನ ತಾಯಿಯ ಹೆಸರು(ಅತ್ತೆಯ ಹೆಸರು)ಪತ್ನಿಯ ಹೆಸರು ತನ್ನ ತಾಯಿಯ ಹೆಸರು ಬರೆದು ಒಂದು ಜೇನುತುಪ್ಪದ ಬಾಟಲ್ ನಲ್ಲಿ ಹಾಕಿ ತಗಡನ್ನು ಸುತ್ತಿ ಜೇನಿನಲ್ಲಿ ಸಂಪೂರ್ಣ ಮುಳುಗುವಂತಿರಲಿ ಮುಚ್ಚಳ ಹಾಕಿ ಪೂಜೆ ಮಾಡಿ ಪ್ರಾಥಿಸಿಕೊಂಡು ಹರಿಯುವ ನೀರಲ್ಲಾಗಲಿ ಪಾಳು ಬಾವಿಯಲ್ಲಾಗಲಿ ಹುತ್ತದ ಕೋವಿನಲ್ಲಾಗಲಿ ಆಕಬೇಕು. ಪ್ರದೋಷವು ಒಂದು ತಿಂಗಳಲ್ಲಿ ಎರಡು ಸಲ ಬರುತ್ತದೆ ಅಂದರೆ ಶುಕ್ಲಪಕ್ಷದಲ್ಲಿನ ತ್ರಯೋದಶಿ ತಿಥಿ ೧ ಮತ್ತು ಕೃಷ್ಣ ಪಕ್ಷದ ತ್ರಯೋದಶಿತಿಥಿ ೨) ೩.ದಾಗಡಿ ಬಳ್ಳಿಯ ಉಪಯೋಗ ಪುಷ್ಯ ನಕ್ಷತ್ರ ವಿರುವದಿವಸ ಸ್ವತಃ ವ್ಯಕ್ತಿಯು ದಾಗಡಿಬಳ್ಳಿಯನ್ನು ತರುವುದು ಇದನ್ನು ಮನೆಯಲ್ಲಿ ಮುಂಬಾಗಿಲಿನ ಒಳಗಡೆ ಕಟ್ಟುವುದರ‍ಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಉಂಟಾಗುತ್ತದೆ. ಅಲ್ಲದೆ ಮನೆಯಲ್ಲಿ ಮಕ್ಕಳು ಹಾಸಿಗೆಯಲ್ಲಿ ಮೂತ್ರಿಸಿಕೊಳ್ಳುತ್ತಿದ್ದರೆ ಈ ಮೂಲಿಕೆಯನ್ನು ಮಕ್ಕಳ ತಲೆದಿಂಬಿನ ಕೆಳಗೆ ಇಡುವುದರಿಂದ ಪರಿಹಾರವಾಗುತ್ತದೆ. ಹಾಗು ಸತಿ ಪತಿಗಳಲ್ಲಿ ಕಲಹಗಳು ಇಲ್ಲದಂತೆಮಾಡಲು ಈ ಬಳ್ಳಿಯನ್ನು ಶ್ರೀಗಂದದೊಂದಿಗೆ ಅರೆದು ಸತಿಪತಿಗಳು ನಿತ್ಯ ಪೂಜಾನಂತರ ತಿಲಕ ದರಿಸುವುದರಿಂದ ಕಲಹ ನಿಲ್ಲುತ್ತದೆ. ದಾಂಪತ್ಯ ಕಲಹ ನಿವಾರಣೆಗಾಗಿ ಚಿತ್ರಮೂಲಹೂಗಳನ್ನು(ಬಿಳಿ ಮತ್ತು ಹಳದಿ)ಪುಷ್ಯ ನಕ್ಷತ್ರ ವಿರುವದಿವಸ ತಂದು ಅದನ್ನು ದಿಂಬಿನಕೆಳಗೆ ಇಟ್ಟುಕೊಂಡು ಮಲಗುವುದು (೨೧ ದಿನಗಳವರೆಗೆ ಸತತವಾಗಿ ಇಟ್ಟುಕೊಳ್ಳುವುದು)ಆದರೆ ಯಾವುದೇ ಕಾರಣಕ್ಕೂ ದಂಪತಿಗಳ ಕೆಳಕ್ಕೆ ಅಂದರೆ ಬೆನ್ನಿಗೆಈ ಹೂವುಗಳು ಸಿಕ್ಕಿಕೊಳ್ಳಬಾರದು.)ಇದು ಕಷ್ಟವೆನಿಸಿದರೆ ಎರಡುತುಂಡು ಒಂದು ಇಂಚು ಅಥವ ಎರಡು ಇಂಚು ಕಡ್ಡಿಗಳನ್ನು ದಂಪತಿಗಳು ಮಲಗುವಕೋಣೆಯಲ್ಲಿನ ತಮ್ಮದೇ ಬಾವಚಿತ್ರದ ಹಿಂದೆ ಇಟ್ಟು ೨೧ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು. ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ,ವಾತ್ಸಲ್ಯ ಸ್ಥಿರವಾಗಿ ಉಳಿಯಲಿಕ್ಕಾಗಿ ಈ ಪ್ರಯೋಗ ಮಾಡಬಹುದು. ರಸಾಯನ ಅಥವ ಬೆಲ್ಲದಿಂದ ಶಿವಲಿಂಗಮಾಡಿ ಪ್ರಾಣ ಪ್ರತಿಷ್ಟಾಪನೆ ಮಾಡಿ,ಪೂಜಿಸಬೇಕು.ಇದು ಪ್ರತಿದಿನ ಮುಸ್ಸಂಜೆ(ಗೋದೂಳಿಸಮಯ)ಮಾಡಬೇಕು ನಂತರ ಅದನ್ನು ಶಿವಾಲಯದಲ್ಲಿ ಇಡಬೇಕು.ಈ ಪ್ರಯೋಗ ೫ ಮಂಗಳವಾರ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ನೆಮ್ಮದಿ ಉಂಟಾಗುತ್ತದೆ. ವೀಳೆಯದ ಎಲೆಗೆ ಯಡಮುರಿ ಮೂಲಿಕೆ ಅದರಲ್ಲಿ ಒಂದು ಕರ್ಜೂರದ ಬೀಜವನ್ನು ಇಟ್ಟು ಎಲೆಯನ್ನು ಸುತ್ತಿ ದಾರದಿಂದ ಬಂದಿಸಿ ದಂಪತಿಗಳು ಮಲಗುವ ಕೋಣೆಯಲ್ಲಿನ ಒಂದು ಮೂಲೆಯಲ್ಲಿ ಕಟ್ಟುವುದು ೧೧ದಿನದ ನಂತರ ಹರಿಯುವ ನೀರಲ್ಲಿ ಬಿಡುವುದು.(ಈ ಕಾರ್ಯಮಾಡುವುದು ದಂಪತಿಗೆತಿಳಿಯದಂತೆ ಮಾಡಬೇಕು ಕಟ್ಟಿದವರು ಕೂಡ ಅದನ್ನು ೧೧ದಿನದವರೆಗೆ ನೋಡಬಾರದು) ಯಾವುದೇ ಕಾರ್ಯ ಕೈಗೂಡದಿದ್ದಲ್ಲಿ ಈ ರೀತಿ ಮಾಡಿ ನಿಮ್ಮ ಕಾರ್ಯ ಕೈಗೂಡುತ್ತದೆ. ಮನೆಯಲ್ಲಿ ರಾತ್ರಿ ಮಲಗುವಮುನ್ನ ಎರಡು ಚಪಾತಿಯನ್ನು ಮಾಡಿ ಇಡುವುದು ಹಿಂದಿನದಿನ ಮಾಡಿಟ್ಟಿರುವ ಚಪಾತಿಯನ್ನು ಕೆಲಸ ಆಗಬೇಕಾಗಿರುವ ವ್ಯಕ್ತಿ ಚೂರುಗಳನ್ನಾಗಿಮಾಡಿಕೊಂಡು ಅವುಗಳನ್ನು ಹಸುವಿಗೆ ತಿನ್ನಿಸಿ ನಂತರ ಸ್ನಾನ ಮಾಡಿ ಅರಳಿ ಮರಕ್ಕೆ ೧೨ ಪ್ರದಕ್ಷಿಣೆ ಹಾಕುವುದು. ಈ ಸಣ್ಣ ಪರಿಹಾರಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇನ್ನು ಮುಂದೆ ಯಾವುದೇರೀತಿಯ ಸೋಲುಂಟಾಗುವುದಿಲ್ಲ.

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ