Skip to main content

Posts

ಚಂದ್ರನ ಮಹತ್ವ?

ಲಗ್ನದ ಚಂದ್ರನ ಮಹತ್ವ? ಕುಂಡಲಿಯ ಲಗ್ನದಲ್ಲಿ ಪೂರ್ಣಿಮಾ ಚಂದ್ರನು ಇದ್ದರೆ ಇಂತಹ ಜಾತಕದವರು ಉತ್ತಮ ರೂಪ, ಮೃದುತ್ವದ ದೇಹ ಹೊಂದಿರುತ್ತಾರೆ. ವೃಷಭ, ಮೇಷ ಕರ್ಕಾಟಕ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ರೂಪವಂತರೂ, ಹಣವಂತರೂ ಆಗುತ್ತಾರೆ. ಬೇರೆ ರಾಶಿಗಳಲ್ಲಿ ಚಂದ್ರನಿದ್ದರೆ ಇವರು ಜಡತೆ ರೋಗ, ಬಡತನವನ್ನು ಅನುಭವಿಸುತ್ತಾರೆ. ಕರ್ಕಾಟಕ, ವೃಷಭ, ಮೇಷ ಲಗ್ನದಲ್ಲಿ ಚಂದ್ರನಿದ್ದರೆ ದಯೆ, ದಾಕ್ಷಿಣ್ಯ, ಚತುರತೆ, ಸುಂದರ, ಧನಿಕ, ಗುಣವಂತರು ಆಗಿರುತ್ತಾರೆ. ಲಗ್ನದಲ್ಲಿರುವ ಚಂದ್ರನಿಂದ ಇಪ್ಪತ್ತೇಳನೇ ವರ್ಷದಲ್ಲಿ ಕಾಯಿಲೆಗಳು ಬರುತ್ತವೆ. ಲಗ್ನದಲ್ಲಿ ಚಂದ್ರ ಪಾಪಗ್ರಹ ಯುತನಾಗಿದ್ದರೆ ಇವರಿಗೆ ಆಗಾಗ ಶೀತ ಬಾಧೆ ಇರುತ್ತದೆ. ಲಗ್ನದಲ್ಲಿ ಬಲಿಷ್ಠವಾದ ಚಂದ್ರನು ಇದ್ದರೆ ಇಂತಹ ಜಾತಕದವರು ಮಹಾ ಚತುರರೂ, ಅಲ್ಲದೆ ಮುಖಂಡತ್ವವನ್ನು ವಹಿಸುವವರೂ ಆಗಿರುತ್ತಾರೆ. ಸ್ತ್ರೀಯರಿಂದ ಗೌರವ, ಸ್ಥಾನಮಾನಗಳು ಸಿಗುತ್ತದೆ. ಇವರು ಪರಾಕ್ರಮಿಗಳಾಗಿದ್ದು, ರಾಜ ವೈಭವವನ್ನು ಹೊಂದುತ್ತಾರೆ. ಚಂದ್ರನು ಚರ ರಾಶಿ ಅಥವಾ ಉಭಯ ರಾಶಿ ಗತನಾದರೆ ಸಂಚಾರಿ, ಸ್ಥಿರ ಇಲ್ಲದ ಬುದ್ಧಿ, ಸ್ತ್ರೀಯರ ಸ್ವಭಾವ, ಮಿತ್ರ ವತ್ಸಲ, ದಯಾಳು, ಸಮಾಜದೊಂದಿಗೆ ಬೆರೆತುಕೊಂಡಿರುತ್ತಾರೆ. ಸ್ತ್ರೀಯರಿಗೆ ಪ್ರಿಯನಾಗಿದ್ದು, ಮಿತ್ರರೊಂದಿಗೆ ಇರುವವನೂ, ಉದಾರಿಯೂ, ಸಜ್ಜನನೂ ಆಗಿರುತ್ತಾನೆ. ಸಾರ್ವಜನಿಕ ಹಿತಾಸಕ್ತಿಯುಳ್ಳವನಾಗಿದ್ದು, ಬಹು ಜನರೊಂದಿಗೆ ಬೆರೆತು ನೀಚ ಜನರಿಂದ ಮಾನ್ಯತೆ ಪಡೆಯುತ್ತಾರೆ. ...

ಮೂಲ ನಕ್ಷತ್ರ ಸರಸ್ವತಿ ದೇವಿಯ ನಕ್ಷತ್ರ

ಮೂಲ ನಕ್ಷತ್ರ ಸರಸ್ವತಿ ದೇವಿಯ ನಕ್ಷತ್ರ ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್ ರಾತ್ರಿ ಸಮಯದಲ್ಲಿ ನೀಲಾಂಬರವನ್ನು (ಆಕಾಶ) ನೋಡಿದರೆ ನಮಗೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜ ಪುಂಜರವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರ ಆಗುವುದು. ಭಾರತೀಯ ವೇದಾಂಗ ಜ್ಯೋತಿಷ್ಯಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುವರು. ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ವಿಶೇಷತೆ ಕೊಟ್ಟಿರುತ್ತಾರೆ. ಅವು ಯಾವುವು ಎಂದರೆ ಮೂಲ, ಆಶ್ಲೇಷ, ವಿಶಾಖ ಮತ್ತು ಜ್ಯೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಿಗಳಾಗಿವೆ ಎಂದು ಹೇಳಿರುವರು. ಮೂಲ ನಕ್ಷತ್ರದ ಬಗ್ಗೆ ಗಮನಹರಿಸಿದರೆ, ನಕ್ಷತ್ರಗಳನ್ನು 3 ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದತನಕ ಒಂದು ಗುಂಪು, ಮಖ ನಕ್ಷತ್ರದಿಂದ ಜ್ಯೇಷ್ಠ ನಕ್ಷತ್ರದತನಕ ಮತ್ತೊಂದು ಗುಂಪು, ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರ ಮೊದಲನೆ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದು ಅಗಿದ್ದರಿಂದ ಅದಕ್ಕೆ ಋಷಿಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ. ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣುಮಗು ಜನಿಸಿದರೆ 8 ವರ್ಷದವರೆಗೆ ಮಗು ತಂದೆಯನ್ನು ನೋಡಬಾರದು ಎಂದು, 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ, 4ನೇ ಪಾದವಾದರೆ ಶು...

ಕರ್ಮಕ್ಕೆ ತಕ್ಕ ಫಲ

ಕರ್ಮಕ್ಕೆ ತಕ್ಕ ಫಲ ಮನುಷ್ಯ ಈ ಭೂಮಿಯ ಮೇಲೆ ಹುಟ್ಟುವುದು ಕೇವಲ ಸುಖ-ಸಂತೋಷವನ್ನು ಅನುಭವಿಸಲೆಂದೇ ಅಥವಾ ಪಾಪ ಕರ್ಮಗಳನ್ನು ಮಾಡಲೆಂದೆ. ಸಂತುಷ್ಠನಾದ ಪರಮಾತ್ಮನು ಕರ್ಮಾನುಷ್ಠಾನ ಪರನಾದ ಚೇತನಿಗೆ ಮೇಲೆ ಮೇಲೆ ಶ್ರೇಯೋಭಿವೃದ್ಧಿಯನ್ನು ಉಂಟು ಮಾಡುವ ಕರ್ಮಗಲಲ್ಲಿ (ಕೆಲಸದಲ್ಲಿ) ತೊಡಗುವಂತೆ ಬುದ್ಧಿಯನ್ನು ಕೊಟ್ಟು ಅನುಗ್ರಹಿಸುತ್ತಾನೆ. ವರ್ಣಾಶ್ರಮ ಧರ್ಮಗಳಲ್ಲಿ ಮಾಡುವ ನಿತ್ಯ ನೈಮಿತ್ತಿಕ ಕರ್ಮಗಳು ಚೇತನಿಗೆ ಕೆಲ ಪಾಪಗಳನ್ನು ನಿವೃತ್ತಿ ಮಾಡುವುದರೊಡನೆ ಸಮಾಜದ ಸುವ್ಯವಸ್ಥೆಗೂ ಕಾರಣವಾಗುತ್ತದೆ. ಇವುಗಳನ್ನು ಅನುಷ್ಠಾನ ಮಾಡದಿದ್ದರೆ ವೈಯಕ್ತಿವಾಗಿ ಪಾಪ ಭೂಮಿಷ್ಠನಾಗುವುದರೊಡನೆ ಸಮಾಜದ ಅಳಿವಿಗೂ ಕಾರಣನಾಗುತ್ತಾನೆ. ವರ್ಣಾಶ್ರಮ ಮಾಡುವ ಕರ್ಮಗಳೆಲ್ಲವೂ ಭಗವಂತನ ಆಜ್ಞೆ. ಈ ಜನ್ಮದಲ್ಲಿ ಮನುಷ್ಯನು ತಾನು ಹಿಂದೆ ಮಾಡಿರುವ ಪುಣ್ಯ ಪಾಪ ಕರ್ಮಪಲಗಳ ರೂಪದಲ್ಲಿ ಅವನಿಗೆ ಬರುವ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತಾನೆ. ಈ ರೀತಿಯಾದ ಫಲ ಕೊಡಲು ಆರಂಭಿಸಿರುವ ಕರ್ಮವನ್ನು 'ಪ್ರಾರಬ್ಧ' ಕರ್ಮ ಎನ್ನುತ್ತಾರೆ. ಮನುಷ್ಯನು ಹಿಂದೆಯೇ ಮಾಡಿರುವ ಕೆಲ ಕರ್ಮಗಳು ಇನ್ನು ಫಲವನ್ನೀಯದೆ ಇರುತ್ತವೆ. ಅವು ಮುಂದೆ ಎಂದೋ ಅವನಿಗೆ ಪಲ ಕೊಡಲು ಕಾದಿರುತ್ತವೆ. ಇವುಗಳನ್ನು 'ಆಗಾಮಿ' ಕರ್ಮ ಎನ್ನುತ್ತಾರೆ. ಜನ್ಮ ಪಡೆದ ಮನುಷ್ಯ ಪ್ರಾರಬ್ಧ ಕರ್ಮವನ್ನು ಅನುಭವಿಸುತ್ತಲೇ ಜತೆಜತೆಯಲ್ಲೇ ಮತ್ತೆ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಈ ರೀತಿ ಕರ್ಮಕ್ಕೆ ...

ಅಶುಭ ಕಾಲ---ಜಾತಕದಲ್ಲಿ ‘ಕುಂಡಲಿ’ ಏನಿದರ ವೈಶಿಷ್ಟ್ಯ

ಅಶುಭ ಕಾಲ * ರತ್ನರಾಜ ಜೈನ್ ನವಗ್ರಹಗಳಲ್ಲಿ ಅತ್ಯಂತ ಶುಭ ಫಲಗಳನ್ನು ಕೊಡುವ ಗ್ರಹಗಳೆಂದರೆ ಗುರು ಮತ್ತು ಶುಕ್ರ. ಈ ಎರಡು ಗ್ರಹಗಳಲ್ಲಿ ಯಾವೊಂದು ಗ್ರಹ ಅಸ್ತನಾಗಿದ್ದರೂ ಆ ಸಮಯದಲ್ಲಿ ವಿವಾಹಾದಿ ಮಂಗಳ ಕಾರ್ಯ ಮಾಡಬಾರದು. ಆದರೆ 'ಮಹಾತ್ಮ ದರ್ಪಣ'ದ ಫಲದಂತೆ ಫಲ ಹೀಗಿದೆ. ಗುರು ಅಸ್ತನಾದ ಕಾಲದಲ್ಲಿ ಶುಕ್ರನು ಸ್ವಂತ ಕ್ಷೇತ್ರಗಳಾದ ವೃಷಭ, ತುಲಾ ರಾಶಿಗಳಲ್ಲೂ ಅಥವಾ ಮಿತ್ರ ಕ್ಷೇತ್ರಗಳಾದ ಮಕರ, ಕುಂಭ, ಮಿಥುನ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು. ಅದೇ ರೀತಿ ಶುಕ್ರ ಗ್ರಹ ಅಸ್ತನಾದ ಕಾಲದಲ್ಲಿ ಗುರುವು ಸ್ವಂತ ಕ್ಷೇತ್ರಗಳಾದ ಧನು ಮತ್ತು ಮೀನ ರಾಶಿಯಲ್ಲಿದ್ದರೆ, ಕರ್ಕಾಟಕ ರಾಶಿಯಲ್ಲಿದ್ದರೆ ಮಿತ್ರ ಕ್ಷೇತ್ರಗಳಾದ ಸಿಂಹ, ವೃಶ್ಚಿಕ ಮತ್ತು ಮೇಷ ರಾಶಿಗಳಲ್ಲಿದ್ದರೆ ವಿವಾಹ ಮಾಡಬಹುದು. ಆದರೆ ಈಗ ಶುಕ್ರನು 2013, ಫೆಬ್ರವರಿ 27 ರಂದು ಶತಭಿಷಃ ಕುಂಭರಾಶಿಯಲ್ಲಿ ಅಸ್ತನಾಗಿ 2013, ಏಪ್ರಿಲ್ 24 ರಂದು ಮೇಷ ರಾಶಿ ಭರಣಿ ನಕ್ಷತ್ರದಲ್ಲಿ ಉದಯಿಸುವನು. ಈ ಸಮಯ ಶುಕ್ರ ಅಸ್ತಕಾಲ. ಯಾವುದೇ ವಿವಾಹ ಸಂಬಂಧ ಶುಭ ಕಾರ್ಯಗಳನ್ನು ಮಾಡುವ ಹಾಗಿಲ್ಲ. ಒಂದು ವೇಳೆ ವಿವಾಹ ಆದರೂ ದಾಂಪತ್ಯ ಜೀವನ ಉತ್ತಮ ಇರಲಾರದು. ಸತಿ-ಪತಿಯಲ್ಲಿ ಭಿನ್ನಭಿಪ್ರಾಯ ಉಂಟಾಗಿ, ಬೇರೆ ಬೇರೆ ಆಗುವ ಸಾಧ್ಯತೆ. ಹಾಗೆಯೇ ಸ್ತ್ರೀ ದೌರ್ಜನ್ಯಗಳು ಹೆಚ್ಚುವ ಸಾಧ್ಯತೆ ಇದೆ. ಸತಿ-ಪತಿ ಮಧ್ಯೆ ವಿರಸ ಉಂಟಾಗುವ ಸಾಧ್ಯತೆ. ಶುಕ್ರನು ಅಸ್ತನಾದ ಕಾಲದಲ್ಲಿ ಗುರು ಮತ...

ಭಾರತೀಯ ಕ್ರಮದಲ್ಲಿ ಋತುಗಳು

ಭಾರತೀಯ ಕ್ರಮದಲ್ಲಿ ಋತುಗಳು * ಗುರುರಾಜ ಪೋಶೆಟ್ಟಿಹಳ್ಳಿ ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು. ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರ ಶುಕ್ಲ ಪ್ರಥಮ ದಿವಸದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆಷಾಢ ಅಮಾವಾಸ್ಯೆಯತನಕ ಗ್ರೀಷ್ಮ ಋತು. ಶ್ರಾವಣ ಶುಕ್ಲ ಪ್ರಥಮದಿಂದ ಪುಷ್ಯ ಅಮಾವಾಸ್ಯೆಯತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆಯತನಕ ಶಿಶಿರ ಋತು. ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ ಗ್ರೀಷ್ಮ ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಹೀಗೆ ಶುಕ್ಲ ಪಕ್ಷಾದಿಯಿಂದ ಅಮಾವಾಸ್ಯೆಯವರೆಗೆ ಕಾಲಗಣನೆ ಮಾಡುವ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು. ವಸಂತದಿಂದ ಶಿಶಿರದವರೆಗೆ:ಋತುಚರ್ಯೆಗೆ ಅನುಗುಣವಾಗಿಯೇ ಜೀವನ ಕ್ರಮ ರೂಪಿತವಾಗಿದ್ದು ಧರ್ಮ ಇದನ್ನು ನಿರ್ದೇಶಿಸುತ್ತದೆ. ಪ್ರತಿ ಭಾರತೀಯ ಆಚರಣೆ ಹಿಮದೆಯೂ ಜೀವನ್ಮುಖಿ ಅರ್ಥವಿದೆ. ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆ. ಪ್ರಕೃತಿಯ ಈ ಪರಿವರ್ತನೆಯ ಪ್ರವೃತ್ತಿಯನ್ನು ಋತುಗಳೆಂದು ಕರೆದರು. ಒಂದು ವರ್ಷಾವಧಿಯಲ್ಲಿ ಎರಡು ಮಾಸಗಳಿಗೊಂದರಂತೆ ಆರು ಋತು...

ನಾಡಿ ದೋಷ ವಿವೇಚನೆ

ನಾಡಿ ದೋಷ ವಿವೇಚನೆ * ಶ್ರೀಪಾದ ಆರ್. ಕುಲಕರ್ಣಿ ವಿವಾಹಕ್ಕೆ ಅನುಮತಿ ಕೊಡುವ ಮೊದಲು ವಧು-ವರರ ಜಾತಕಗಳನ್ನು ಪರಿಶೀಲಿಸಿ ಕೂಟ ಸಾಲಾವಳಿ, ದೋಷ ಸಾಮ್ಯ, ಆಯುಷ್ಯ, ಸಂತಾನ ಗೋತ್ರ, ಪ್ರವರ, ವಯಸ್ಸು, ವಂಶ, ಚಾರಿತ್ರ್ಯ, ದುರ್ಯೋಗಗಳು ಇತ್ಯಾದಿಗಳನ್ನು ವಿಚಾರಿಸಬೇಕಾಗುತ್ತದೆ. ಈ ಕೂಟ ಸಾಲಾವಳಿಗಳಲ್ಲಿ 8 ರಿಂದ 24ರವರೆಗೆ ಕೂಟಗಳಿರುತ್ತವೆ. ಆದರೆ ದಾಂಪತ್ಯ ಜೀವನಕ್ಕೆ ವರ್ಣ ಕೂಟ, ವಶ್ಯ ಕೂಟ, ತಾರಾ ಕೂಟ, ಯೋನಿ ಕೂಟ, ಗ್ರಹ ಮೈತ್ರಿ ಕೂಟ, ಗಣ ಕೂಟ, ರಾಶಿ ಕೂಟ, ನಾಡಿ ಕೂಟ ಈ ಎಂಟು ಕೂಟಗಳು ಮುಖ್ಯವಾಗಿವೆ. ಪ್ರತಿಯೊಂದು ಕೂಟವು ವಧುವಿನಿಂದ ವರನಿಗೆ ಗಣನೆಯು. ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಜ್ಯೇಷ್ಠಾ, ಉತ್ತರಾ, ಆರ್ದ್ರಾ, ಶತಭಿಷಾ, ಮೂಲಾ, ಹಸ್ತಾ, ಪುನರ್ವಸು, ಪೂರ್ವಭಾದ್ರಾ, ಅಶ್ವಿನಿ ಇವು ಆದ್ಯ ನಾಡಿಗಳು. ಪುಷ್ಯ, ಮೃಗಶಿರ, ಚಿತ್ರಾ, ಅನುರಾಧಾ, ಭರಣಿ, ಧನಿಷ್ಠ, ಪೂರ್ವಾಷಾಢ, ಹುಬ್ಬಾ, ಉತ್ತರ ಭಾದ್ರ ಇವು ಮಧ್ಯ ನಾಡಿ ನಕ್ಷತ್ರಗಳು. ಸ್ವಾತಿ, ಕೃತ್ತಿಕಾ, ಆಶ್ಲೇಷಾ, ಉತ್ತರಾಷಾಢ, ವಿಶಾಖಾ, ರೋಹಿಣಿ, ಮಘ, ಶ್ರವಣ, ರೇವತಿ ಇವು ಅಂತ್ಯ ನಾಡಿಗಳು. ವಧು-ವರರು ಏಕ ನಾಡಿಯಾದರೆ ಅಶುಭ. ಇಬ್ಬರದೂ ಮಧ್ಯ ನಾಡಿಯಾದರೆ ಮೃತ್ಯು. ಆದ್ಯ ನಾಡಿ ವಿಯೋಗಕರ. ಮಧ್ಯದ ಏಕ ನಾಡಿ ಮೃತ್ಯು ಪದ. ಅಂತ್ಯದ ಏಕ ನಾಡಿಯಾದರೆ. ದುಃಖಕರ ಭಿನ್ನ ನಾಡಿಯಾದರೆಉತ್ತಮ, ಸುಖ ದಾಂಪತ್ಯ. ಇವು ಸಾಮಾನ್ಯ ನಿಯಮಗಳ...

ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ

ಸುತ ಭಾವದ ಚಂದ್ರನಿಂದ ಪುತ್ರ ಸಂತತಿಗೆ ತಡೆ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಪಂಚಮದಲ್ಲಿ ಚಂದ್ರನಿದ್ದರೆ ಇವರಿಗೆ ಹೆಂಗಸರ ಬುದ್ಧಿ ಇರುತ್ತದೆ. ಬಹಳ ಶ್ರಮ ಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಪಂಚಮದಲ್ಲಿ ಚಂದ್ರನಿದ್ದು, ಬೇರೆ ಗ್ರಹಗಳು ಇಲ್ಲದಿದ್ದರೆ ಇವರಿಗೆ ಕನ್ಯಾ ಸಂತತಿ ಮಾತ್ರ ಇರುತ್ತದೆ. ಪುತ್ರ ಸಂತತಿ ಇರುವುದಿಲ್ಲ. ಚಂದ್ರನು ಕ್ಷೀಣಯುತನಾದರೆ ಚಂಚಲ ಪುತ್ರಿಯನ್ನು ಹೊಂದುತ್ತಾರೆ. ಇವರು ರೋಗಿಯೂ, ಭಯಾನಕರೂ ಆಗುವರು. ಪಂಚಮದ ಚಂದ್ರನು ಆರನೇ ವರ್ಷದಲ್ಲಿ ಅಗ್ನಿ ಯಾ ಬಿಸಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ. ಇದರಲ್ಲಿ ಚಂದ್ರನಿರಲು ಧೈರ್ಯ, ಒಳ್ಳೆಯ ಬುದ್ಧಿ, ಅಭಿವೃದ್ಧಿ ಹೊಂದುತ್ತಾರೆ. ಇವರದ್ದು ದೊಡ್ಡ, ಚೆಲುವಾದ ದೇಹ. ತೇಜಸ್ವಿ, ಮುಕ್ತ ವಿಚಾರಶೀಲರೂ ಆಗುತ್ತಾರೆ. ಇವರು ರಾಜಕೀಯದಲ್ಲಿ ಬಹಳ ಹೆಸರು ಮಾಡುತ್ತಾರೆ. ನಾಲ್ಕರ ಚಂದ್ರ ವಿಲಾಸ, ವಿನೋದ, ಮನೋರಂಜನೆಯಲ್ಲಿ ಆಸಕ್ತಿ ಇರುವವರೂ, ಮಕ್ಕಳಲ್ಲಿ, ಹೆಂಗಸರಲ್ಲಿ ಮೆಚ್ಚುಗೆ ಗಳಿಸುವವರೂ ಆಗುತ್ತಾರೆ. ಇವರ ಮಕ್ಕಳು ಚೆಲುವಾದ ದೇಹವನ್ನು ಹೊಂದುತ್ತಾರೆ. ಚಂದ್ರ ಬಲಿಷ್ಠನಾಗಿದ್ದರೆ ಇವರು ಮಟ್ಕಾ, ಜುಗಾರಿಯಲ್ಲಿ ಭಾರಿ ಲಾಭ ಪಡೆಯುತ್ತಾರೆ. ಚತುರ್ಥಮ ದ್ವಿಭಾವ ರಾಶಿಯಾಗಿದ್ದರೆ ಇವರಿಗೆ ಅವಳಿ ಜವಳಿ ಮಕ್ಕಳಾಗುತ್ತದೆ. ಪಂಚಮದ ಚಂದ್ರನನ್ನು ಶನಿ ನೋಡುತ್ತಿದ್ದರೆ ಇವರು ವಂಚಕ, ಕಪಟ ಬುದ್ಧಿಯುಳ್ಳವರಾಗಿರತ್ತಾರೆ. ಮಾತಿನಿಂದ ಮರಳುಗೊಳಿಸಿ ಆಪ್ತ ಜನರನ್ನು ಕಷ್ಟಕ್ಕೆ ಈಡು ಮಾಡಿ ಹ...