Skip to main content

ಸಂಸ್ಕಾರಗಳು ೧೬

ಸಂಸ್ಕಾರಗಳು ಕೃಷಿಕನು ತನ್ನ ಹೊಲದಿಂದ ಭತ್ತದ ಗಿಡವನ್ನು ಕೊಯ್ದುತಂದು ಭತ್ತಗಳನ್ನು ಬೇರ್ಪಡಿಸಿ ಕುಟ್ಟಿ ಶುದ್ದಿಗೊಳಿಸಿ ಉತ್ತಮವಾದ ಅಕ್ಕಿಯನ್ನು ತಯಾರಿಸುವನೋ, ಹಾಗೇ ಸಂಸ್ಕಾರ ಎನ್ನುವುದು ಮನುಷ್ಯನನ್ನು ಪರಿಪಕ್ವನನ್ನಾಗಿ ಮಾಡುವುದು, ಶುದ್ಧೀಕರಿಸುವಂತಹದ್ದು. ಪ್ರಧಾನವಾಗಿ ೧೬ ಸಂಸ್ಕಾರಗಳು ಇವೆ. ೧. ಗರ್ಭಾದಾನ ಹೆಣ್ಣು ಮತ್ತು ಗಂಡು ಮದುವೆಯಾಗಿ ಅವರು ಸೇರುವ ಮುನ್ನ ತಮ್ಮ ಜನ್ಮಾಂತರದಿಂದ ಬರುವಂತಹ ದೋಷ ನಿವಾರಣೆಗಾಗಿ ಗರ್ಭಾದಾನವೆಂಬ ವೈದಿಕ ಸಂಸ್ಕಾರವನ್ನು ಮಾಡಬೇಕು. ಗರ್ಭಾದಾನವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ,ಮೂಲಾ, ಉ.ಷಾಢಾ, ಶ್ರವಣ, ರೇವತಿ, ಉ. ಭಾದ್ರ ತಿ,ಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಕಾಲ: ರಸಜ್ವಲೆ ಅಥವಾ ಋತುಮತಿಯಾದ ಮೇಲಿನ ೫ ರಿಂದ ೧೦ ದಿನದವರೆಗೆ ಮತ್ತು ೧೪ ರಿಂದ ೧೬ ದಿನದ ರಾತ್ರಿಯವರೆಗೆ ಲಗ್ನ: ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ಧನು, ಮೀನ ಹೀಗೆ ವೈದಿಕ ಸಂಸ್ಕಾರವಾದ ನಂತರ ಮೇಲೆ ಹೇಳಿದ ವಾರ, ತಿಥಿ, ನಕ್ಷತ್ರ, ಲಗ್ನಗಳಲ್ಲಿ ಪತಿ-ಪತ್ನಿಯರು ಸೇರಬೇಕು. ೨. ಪುಂಸವನ ಸಂಸ್ಕಾರ ಪ್ರಥಮ ಗರ್ಭ ಉಂಟಾದ ೩ನೇ ತಿಂಗಳಿನಲ್ಲಿ ಪುತ್ರ ಸಂತತಿ ಪ್ರಾಪ್ತಿಗಾಗಿ ಈ ವೈದಿಕ ಸಂಸ್ಕಾರವನ್ನು ಮಾಡಬೇಕು. ಈ ವಿಧಿಯಲ್ಲಿ ವಿಶೇಷವಾಗಿ ೨ ಉದ್ದು ಮತ್ತು ೧ ಗೋಧಿಯ ಪ್ರಾಶನವನ್ನು ವಿಧಿಸಿದೆ. ಪುಂಸವನ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ. ಭಾದ್ರ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಕಾಲ: ೩ನೇ ತಿಂಗಳಿನಲ್ಲಿ ಲಗ್ನ: ಮೇಷ, ಧನು, ಮೀನ ಈ ತಿಥಿ, ವಾರ, ನಕ್ಷತ್ರ, ಲಗ್ನ, ಕಾಲಗಳಲ್ಲಿ ಪುಂಸವನ ಸಂಸ್ಕಾರವನ್ನು ಮಾಡಬೇಕು. ೩. ಅನವಲೋಭನ ಸಂಸ್ಕಾರ ಗರ್ಭವು ಮಧ್ಯದಲ್ಲಿ ನಾಶವಾಗದಂತೆ ರಕ್ಷಿಸಲು ಈ ವೈದಿಕ ಸಂಸ್ಕಾರವನ್ನು ಮಾಡಬೇಕು. ಈ ಸಂಸ್ಕಾರವನ್ನು ಪುಂಸವನ ಸಂಸ್ಕಾರದಲ್ಲಿ ಹೇಳಲಾದ ತಿಥಿ, ವಾರ, ನಕ್ಷತ್ರ, ಲಗ್ನದಲ್ಲಿ ೩ನೇ ಅಥವಾ ೪ನೇ ತಿಂಗಳಲ್ಲಿ ಮಾಡಬೇಕು. ೪. ಸೀಮಂತ ಸಂಸ್ಕಾರ ಈ ಸಂಸ್ಕಾರವನ್ನು ಗರ್ಭಿಣಿಯ ಪ್ರಥಮ ಗರ್ಭದ ೭ನೇ ಅಥವ ೯ನೇ ತಿಂಗಳಲ್ಲಿ ಮಾಡಬೇಕು. ವೈದಿಕರಿಂದ ಉದಕ ಶಾಂತ್ಯಾದಿಯನ್ನು ಮಾಡಿಸಿ, ಗರ್ಭಿಣಿಯು ಬಯಸುವ ತಿಂಡಿ ತಿನಿಸುಗಳನ್ನು ಮಾಡಿ, ಉಡಿಯನ್ನು ತುಂಬಿ ಗುರು-ಹಿರಿಯರಿಂದ ಆಶೀರ್ವಾದವನ್ನು ಪಡೆಯುವುದು. ಇದು ಗರ್ಭಿಣಿಗೆ ಮಾಡುವಂತಹ ಮೊದಲನೆ ಸಂಸ್ಕಾರವಾಗಿರುತ್ತದೆ. ಸುಖ ಪ್ರಸವ ಹಾಗೂ ಗರ್ಭಸ್ಥ ಶಿಶುವಿನ ಸುಬುದ್ಧಿ ಬೆಳವಣಿಗೆಗೂ ಅನುಕೂಲವಾಗುತ್ತದೆ. ಯಾವಾಗ ಈ ಸಂಸ್ಕಾರವನ್ನು ಮಾಡಬೇಕು? ವಾರ: ಸೋಮವಾರ, ಬುಧವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಮೂಲ, ಉ.ಷಾಡ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ ಲಗ್ನ: ಮೇಷ, ಧನು, ಮೀನ ಉತ್ತಮ. ವೃಷಭ, ಕರ್ಕ ಸಾಮಾನ್ಯ. ಕಾಲ: ಪ್ರಥಮ ಗರ್ಭದ ೭ ಅಥವಾ ೮ನೇ ತಿಂಗಳು ( ೬ನೇ ಮತ್ತು ೮ನೇ ತಿಂಗಳಲ್ಲೂ ಕೆಲವರು ಮಾಡುತ್ತಾರೆ.) ೫. ಜಾತಕರ್ಮ ಸಂಸ್ಕಾರ ಈ ಸಂಸ್ಕಾರವನ್ನು ಮಗು ಜನಿಸಿದ ಮೇಲೆ ಮಗುವಿಗೆ ಎಲ್ಲಾ ವಿಧವಾದ ಮೃತ್ಯು ಪೀಡೆ ಪರಿಹಾರವಾಗಿ ಆಯುಃ ಶ್ರೀಃ ಬಲ ವೃದ್ಧಿಗಾಗಿ ಮಾಡುತ್ತಾರೆ. ಈ ವೇಳೆಯಲ್ಲಿ ಮಗುವಿಗೆ ಸುವರ್ಣದಿಂದ ಜೇನುತುಪ್ಪ ಮತ್ತು ತುಪ್ಪದ ಮಿಶ್ರಣವನ್ನು ಬಾಯಿಗೆ ಹಾಕುವುದು ರೂಢಿ. ಈ ಸಂಸ್ಕಾರ ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಮೂಲ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿಯಲ್ಲಿ ಚಂದ್ರಬಲವನ್ನು ನೋಡಿ ಮಾಡಬೇಕು. ೬. ನಾಮಕರಣ ಸಂಸ್ಕಾರ ಇದನ್ನು ಮಗು ಜನಿಸಿದ ೧೧ನೇ ದಿನ ಗೋಮಯ ಮತ್ತು ಪುಣ್ಯಾಹವಾಚನೆಗಳಿಂದ ಶುದ್ಧಗೊಳಿಸಿದ ಮೇಲೆ ಆಯುರ್ವೃದ್ಧಿ ಹಾಗೂ ಲೋಕದಲ್ಲಿ ವ್ಯವಹಾರ ಮತ್ತು ಪ್ರತಿಷ್ಠೆ ಪ್ರಾಪ್ತಿಗಾಗಿ ಮಾಡುತ್ತಾರೆ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಮಘ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ.ಷಾಢ , ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಸಿಂಹ, ಕುಂಭ ಉತ್ತಮ. (ಕರ್ಕ, ಮೀನ, ವೃಶ್ಚಿಕ ಸಾಮಾನ್ಯ) ಕಾಲಗಳು: ಮಗು ಜನಿಸಿದ ೧೧ನೇ ದಿನ, ಇಲ್ಲವಾದಲ್ಲಿ ೧೨ನೇ ದಿನ ೧೬-೨೦, ೨೨ನೇ ದಿನದಲ್ಲಿ ಬ್ರಾಹ್ಮಣ ಮುಖೇನ ಮಾಡುವುದು ಉತ್ತಮ. ೭. ನಿಷ್ಕ್ರಮಣ ಸಂಸ್ಕಾರ ಈ ಸಂಸ್ಕಾರವನ್ನು ಸಾಮಾನ್ಯವಾಗಿ ನಾಮಕರಣವಾದ ಮೇಲೆ ಹಾಲು ಮತ್ತು ಮೊಸರು, ಗಂಧ, ಪುಷ್ಪಕ್ಷತೆ ಜೊತೆಗೆ ತಾಯಿ ಮತ್ತು ಮಗು ಮನೆಯಿಂದ ಹೊರಗೆ ಬಂದು ಇಂದ್ರಾದಿ ಎಂಟು ದಿಕ್ಕಿನ ದೇವತೆಗಳಿಗೆ ನಮಸ್ಕರಿಸಿ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ದಿಗಂತದಲ್ಲಿರುವ ಎಲ್ಲ ದೇವತೆಗಳ ದರ್ಶನ ಪಡೆದು ಮಗುವನ್ನು ರಕ್ಷಿಸುವಂತೆ ಪ್ರಾರ್ಥನೆ ಮಾಡುವುದು. ಅಲ್ಲದೇ ಗುರು-ಹಿರಿಯರಿಂದ ಆಶೀರ್ವಾದವನ್ನು ಪಡೆಯುವುದು. ಇದನ್ನು ಮಾನಸಿಕ ಹಾಗೂ ಶಾರೀರಿಕ ಶಕ್ತಿವರ್ಧನೆಗೆಂದು ಮಾಡಬೇಕು. ಇದನ್ನು ನಾಮಕರಣದ ಜೊತೆಗೆ ಮಾಡುವುದು ಉತ್ತಮ. ಇಲ್ಲವಾದರೆ ಅವರವರ ಪದ್ಧತಿಯಂತೆ ಮಾಡಬಹುದು. ೮. ಅನ್ನ ಪ್ರಾಶನ ಸಂಸ್ಕಾರ ಅನ್ನಮಯವಾದ ಈ ದೇಹಕ್ಕೆ ಅನ್ನವೇ ಪ್ರಾಣ. ಅನ್ನವೇ ಅಮೃತ, ಅನ್ನವೇ ಸರ್ವಸ್ವ. ಹೀಗಾಗಿ ಈ ಮಗುವಿಗೆ ಅನ್ನದಿಂದ ಆಯುಷ್ಯ, ತೇಜಸ್ಸು, ಬಲವೃದ್ಧಿಯಾಗಲೆಂದು ಅನ್ನಪ್ರಾಶನ ಮಾಡಬೇಕು. ಈ ವೇಳೆಯಲ್ಲಿ ಮಗುವಿಗೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ ಈ ಪಂಚ ಅಮೃತ ಮಿಶ್ರಿತ ಅನ್ನವನ್ನು ಸುವರ್ಣದಿಂದ ಪ್ರಾಶನ ಮಾಡಿಸಬೇಕು. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ (ರವಿವಾರ) ನಕ್ಷತ್ರ: ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಪುಷ್ಯ, ಉತ್ತರಾ, ಹಸ್ತ, ಸ್ವಾತಿ, ಅನುರಾಧಾ, ಶ್ರವಣ, ಉ. ಭಾದ್ರ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಧನು, ಮೀನ ಕಾಲ: ಚಂದ್ರ, ಬುಧ, ಗುರು, ಶುಕ್ರ ಗ್ರಹಗಳು ಶುಭವಿದ್ದಾಗ ಗುರು ಮತ್ತು ಶುಕ್ರ ಅಸ್ತಂಗತವಿಲ್ಲದಿರುವಾಗ ಮಾಡಬೇಕು. ಗಂಡು ಮಗುವಿಗೆ ೬,೮,೧೦, ೧೨ನೇ ತಿಂಗಳಿನಲ್ಲಿ, ಹೆಣ್ಣು ಮಗುವಿಗೆ ೭,೯,೧೧ನೇ ತಿಂಗಳಿನಲ್ಲಿ ಈ ಸಂಸ್ಕಾರವನ್ನು ಮಾಡಬೇಕು. ೯. ಚೌಲ ಸಂಸ್ಕಾರ ಜನನವಾದಾಗಿನಿಂದ ಬೆಳೆದು ಬಂದಿರುವ ಕೇಶಗಳನ್ನು ಮಗುವಿನ ಆಯುರ್ವೃದ್ಧಿ, ತೇಜಸ್ಸು ವೃದ್ಧಿಗಾಗಿ ಅವರವರ ಕುಲ ಧರ್ಮದಂತೆ ಜುಟ್ಟು ಬಿಡುವ ಮೂಲಕ ಕೇಶಗಳನ್ನು ಶಾಸ್ತ್ರೋಕ್ತವಾಗಿ ತೆಗೆಯುವ ಸಂಸ್ಕಾರ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ (ರವಿವಾರ) ನಕ್ಷತ್ರ: ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಶ್ರವಣ, ಧನಿಷ್ಠ ಉತ್ತಮ.(ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಷಾಢ, ಉ.ಭಾದ್ರಪದ ) ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಧನು, ಮೀನ ಕಾಲ: ತಾಯಿ ಗರ್ಭಿಣಿ ಅಲ್ಲದಿರುವಾಗ ಜನ್ಮ ರಾಶಿಯಿಂದ ಅಷ್ಟಮ ಶುದ್ಧಿ ಇರುವಾಗ ಬೆಸ ತಿಂಗಳುಗಳಲ್ಲಿ ಅಂದರೆ ೭,೯,೧೧ನೇ ತಿಂಗಳಿನಲ್ಲಿ ಅಥವಾ ೩,೫ನೇ ವರ್ಷದಲ್ಲಿ ಉತ್ತರಾಯಣದಲ್ಲಿ ಮಾಡಬೇಕು. ೧೦. ಉಪನಯನ ಸಂಸ್ಕಾರ ಈ ಸಂಸ್ಕಾರವನ್ನು ಮಗುವಿಗೆ ಬುದ್ಧಿ, ಶಕ್ತಿ ವರ್ಧನೆಗೆ ಮತ್ತು ಬ್ರಹ್ಮ ತೇಜಸ್ಸು ವೃದ್ಧಿಗಾಗಿ ದ್ವಿಜತ್ವ ಪ್ರಾಪ್ತಿಗಾಗಿ ವೇದ, ಶಸ್ತ್ರಾ, ಪುರಾಣ ಅಧ್ಯಯನ, ಅಧಿಕಾರ ಪ್ರಾಪ್ತಿಗಾಗಿ ಮಾಡಲೇಬೇಕದಂತಹ ಸಂಸ್ಕಾರ. ಈ ಸಂಸ್ಕಾರವನ್ನು ಯಾವಾಗ ಮಾಡಬೇಕು? ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ನಕ್ಷತ್ರ: ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಹಸ್ತ, ಶ್ರವಣ, ಧನಿಷ್ಠ, ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಭಾದ್ರಪದ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕುಂಭ, ಮೀನ ಕಾಲ: ತಾಯಿ ಗರ್ಭಿಣಿ ಅಲ್ಲದಿರುವಾಗ ಮಗುವಿನ ಗರ್ಭಾದಿ ಅಷ್ಟಮ ವರ್ಷದಲ್ಲಿ ಅಂದರೆ ಬ್ರಾಹ್ಮಣರಿಗೆ ೭ ಮತ್ತು ೮ನೇ ವಯಸ್ಸಿನಲ್ಲಿ, ಕ್ಷತ್ರಿಯರಿಗೆ ೯ ಮತ್ತು ೧೦ನೇ ವಯಸ್ಸಿನಲ್ಲಿ, ವೈಶ್ಯರಿಗೆ ೧೧ನೇ ವರ್ಷದವರೆಗೆ ಉತ್ತರಾಯಣದಲ್ಲಿ ಚಂದ್ರಬಲವಿರುವಾಗ ಈ ಸಂಸ್ಕಾರವನ್ನು ಮಾಡಬೇಕು. ೧೧. ಮಹಾನಾಮ್ನಿ ವೃತ ೧೨. ಮಹಾವೃತ ೧೩. ಉಪನಿಷದ್ವೃತ ೧೪. ಗೋದಾನ ವೃತ ೧೫. ಸಮಾವರ್ತನ ೧೬. ವಿವಾಹ ಸಂಸ್ಕಾರ ಈ ಸಂಸ್ಕಾರಾದಿಗಳನ್ನು ಬ್ರಹ್ಮಚಾರಿಯು ಬ್ರಹ್ಮಚರ್ಯೆಯಿಂದ ಅಧ್ಯಯನಾದಿಗಳನ್ನು ಮುಗಿಸಿ ಬ್ರಹ್ಮಚರ್ಯೆಯನ್ನು ತ್ಯಜಿಸಿ ಗ್ರಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸುವ ವೇಳೆಯಲ್ಲಿ ಈ ಸಂಸ್ಕಾರಾದಿಗಳನ್ನು ಮಾಡಬೇಕು. ವಾರ: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ರವಿವಾರ ನಕ್ಷತ್ರ: ಅಶ್ವಿನಿ, ಮೃಗಶಿರಾ, ಮಘ, ಪುಷ್ಯ, ಹಸ್ತ, ಶ್ರವಣ, ರೋಹಿಣಿ,ಉತ್ತರ, ಸ್ವಾತಿ, ಅನುರಾಧಾ, ಉ.ಭಾದ್ರಪದ, ರೇವತಿ ತಿಥಿ: ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ ಲಗ್ನ: ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ಧನು ಮೀನ ಕಾಲ: ವಿವಾಹ ಲಗ್ನಕ್ಕೆ ಸಪ್ತಮ, ಅಷ್ಟಮ ಸ್ಥಾನ ಶುದ್ಧಿ ಇರುವಾಗ ಈ ಸಂಸ್ಕಾರಾದಿಗಳನ್ನು ಮಾಡಬೇಕು. -ಕೃಪೆ ಅಂತರ್ ಜಾಲ

Comments