ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ! ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು, ಹೌದು ಮಧುಮೇಹವನ್ನು ನಿಯಂತ್ರಸುವ ಆಹಾರವಸ್ತುಗಳನ್ನು ನಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ಇದನ್ನು ಆರ೦ಭದ ಹ೦ತದಲ್ಲಿಯೇ ತೊಡೆದು ಹಾಕಲು ಸಾಧ್ಯವಾಗುತ್ತದೆ. ಮಧುಮೇಹಿಗಳ ಪಾಲಿಗೆ ಅತ್ಯುತ್ತಮವಾಗಿರುವ ಈ ಆಹಾರವಸ್ತುಗಳ ಕುರಿತು ಅವಲೋಕಿಸುವಾಗ, ನಾವು ಮುಖ್ಯವಾಗಿ ಮಧುಮೇಹಿಗಳ ಪಾಲಿಗೆ ವರದಾನವಾಗಬಲ್ಲ ತರಕಾರಿಗಳ ಕುರಿತು ಬೆಳಕು ಬೀರಲಿದ್ದೇವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ ಜಂಬು ನೇರಳೆ ಹಣ್ಣು,ಸೀತಾಪಲ. ಗಡ್ಡೆಕೋಸು,ಬೆಂಡೆಕಾಯಿ. ಇವುಗಳು ಮದುಮೇಹ ನಿಯಂತ್ರಣದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ವಹಿಸುತ್ತವೆ ಪಾಲಕ್ ಸೊಪ್ಪು ಪಾಲಕ್ ಸೊಪ್ಪು ಹಚ್ಚಹಸುರಾದ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ. ಹಾಗಲಕಾಯಿ ಕಹಿ ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗ...