Skip to main content

Posts

ಕನಸೆನ್ನುವುದು ನಿಜಕ್ಕೂ ಏನು?

ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ. ಕೆಲವು ಸಿಹಿಗನಸಾದರೆ, ಮತ್ತೆ ಕೆಲವು ದುಃಸ್ವಪ್ನ! ಈ ಕನಸುಗಳು ಕೆಲವರಿಗೆ ಶಕುನಗಳಾಗಿ ಕಾಣುವುದೂ ಉಂಟು. ಇನ್ನು ಕೆಲವಕ್ಕೆ ಯಾವ್ಯಾವುದೋ ನಂಬಿಕೆಗಳನ್ನು ತಳುಕು ಹಾಕಲಾಗಿದೆ. ಉದಾಹರಣೆಗೆ, ಲೋಕದ ಕಣ್ಣಲ್ಲಿ ನಿಂದನೆಗೆ ಈಡಾಗಿರುವ ವೇಶ್ಯೆಯು ಕನಸಿನಲ್ಲಿ ಬಂದರೆ ಶುಭಶಕುನ! ಹೀಗೆ ವಾಸ್ತವಕ್ಕೂ ಕನಸಿನ ಗ್ರಹಿಕೆಗೂ ವೈರುಧ್ಯಗಳಿವೆ. ಹಾಗಾದರೆ, ಕನಸೆನ್ನುವುದು ನಿಜಕ್ಕೂ ಏನು? * ಲಕ್ಷ್ಮಿವಾರಣಾಶಿ ಅಡ್ಕತ್ತಿಮಾರ್ ಪ್ರತಿಯೊಬ್ಬನಿಗೂ ರಾತ್ರಿ ಕನಸುಗಳು ಬರುತ್ತವೆ. ಕೆಲವು ಜನ ತಮ್ಮ ಕನಸುಗಳು ನಿಜವಾಗಿಯೂ ಘಟಿಸಿದವು ಎಂದು ಹೇಳಿಕೊಂಡರೆ, ಮತ್ತೆ ಕೆಲವರು ಅವರ ಕನಸುಗಳು ಭಯಾನಕವಾದ ಚಿತ್ರಗಳನ್ನೊಳಗೊಂಡು ರಾತ್ರಿ ಎಲ್ಲಾ ಮನಸ್ಸನ್ನು ಕೆಡಿಸಿ ದುಃಸ್ವಪ್ನವಾಗಿ ಕಾಡಿತು ಎನ್ನುತ್ತಾರೆ. ಕನಸೆಂಬುದು ಯಾವತ್ತಿಗೂ ಪೂರ್ಣವಾಗಿ ಅರಿಯಲಾರದಂತಹ ಒಂದು ನಿಗೂಢವಾದಂತಹ, ಸತ್ಯವೋ, ಅಸತ್ಯವೋ ಎಂಬುದನ್ನು ತಿಳಿಯುವುದೂ ಕಷ್ಟಕರ. ಕೆಲವರ ಪ್ರಕಾರ, ನಾವು ಹಿಂದಿನ ದಿನ ರಾತ್ರಿ ಏನನ್ನು ಯೋಚಿಸಿಕೊಂಡು ಮಲಗುತ್ತೇವೋ ಅದಕ್ಕೆ ಪೂರಕವಾಗಿ ಕನಸುಗಳು ಬೀಳುತ್ತವೆ. ಅದರಲ್ಲೂ ನಾವು ರಾತ್ರಿ ಕಂಡ ಸ್ವಪ್ನಗಳು ಮುಂಜಾನೆ ಎಚ್ಚರವಾದ ನಂತರ ಸರಿಯಾಗಿ ನಮ್ಮ ನೆನಪಿಗೆ ಬರುವುದಿಲ್ಲ ! ಹೀಗಾಗಿ ಕನಸೆಂಬುದು ಎಷ್ಟು ನಿಜ ಎಂಬುದನ್ನು ನಿಖರವಾಗಿ ಅರಿತವರಿಲ್ಲ. ಗ್ರೀಕರು, 'ದೇವರೇ ಕನಸಿನ ಮೂಲಕ ಬಂದು ನಮಗೆ ಸಂದೇಶವನ್ನು ರವಾನಿ...

ವ್ಯಕ್ತಿತ್ವದ ಕನ್ನಡಿ ಜಾತಕ

ವ್ಯಕ್ತಿತ್ವದ ಕನ್ನಡಿ ಜಾತಕ ಗೌರಿಪುರ ಚಂದ್ರು 'ಕಣ್ಣು ಆರೋಗ್ಯದ ಕನ್ನಡಿ', 'ಹೃದಯ ಆರೋಗ್ಯದ ಕನ್ನಡಿ' ಎನ್ನುತ್ತದೆ ವಿಜ್ಞಾನ. ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯ ಆರೋಗ್ಯ, ಉನ್ನತಿ ಗ್ರಹಗಳ ಸ್ಥಾನಮಾನದ ಮೇಲೆ ಆಧರಿಸಿದೆ. ಜನ್ಮ ಲಗ್ನದಲ್ಲಿ ಪಾಪಗ್ರಹಗಳಿದ್ದಾಗ ವ್ಯಕ್ತಿಯ ಆರೋಗ್ಯ, ಅಭಿವೃದ್ಧಿ ಎಲ್ಲದರಲ್ಲೂ ಏರುಪೇರಾಗುತ್ತದೆ. ಕೆಲವೊಮ್ಮೆ ವೈದ್ಯರಿಗೂ ಗೋಚರವಾಗದಂತಹ ಅಥವಾ ವಾಸಿಯಾಗದ ಕಾಯಿಲೆಗಳು ಕಾಡುತ್ತವೆ. ಕರ್ಮ ಸಿದ್ಧಾಂತದ ಪ್ರಕಾರ ಅಂತಹ ಜಾತಕವನ್ನು ಪ್ರಾರಬ್ಧ ಕರ್ಮ ಕಾಡುತ್ತಿದೆ ಎನ್ನುತ್ತಾರೆ. ಇದನ್ನೇ ನಾವು ಸಂಕ್ಷಿಪ್ತವಾಗಿ 'ಪೂರ್ವ ಜನ್ಮ ಕೃತಂ ಪಾಪಂ ವ್ಯಾ ರೂಪಂ ಬಾಧಯೇತ್' ಎನ್ನುತ್ತೇವೆ. ಈ ಅಂಶವನ್ನು ಗಮನಿಸಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಗ್ರಹಗಳ ಚಲನವಲನದ ಮೇಲೆ ನಮ್ಮ ಆರೋಗ್ಯ, ಬೆಳವಣಿಗೆ, ಅಭಿವೃದ್ಧಿ ನಿಂತಿದೆ. ಗ್ರಹಗಳ ಚಲನವಲನವನ್ನು, ಅದರ ಸ್ಥಾನಮಾನವನ್ನು ಜಾತಕದ ಜನ್ಮ ಕುಂಡಲಿ ಸೂಚಿಸುತ್ತದೆ. ಇಲ್ಲಿ ಜನ್ಮ ಕುಂಡಲಿ ಕನ್ನಡಿಯಾಗುತ್ತದೆ. ಅಂದರೆ, ಜಾತಕ ಆರೋಗ್ಯದ ಕನ್ನಡಿ ಎಂದಾಯಿತು. ಜನ್ಮ ಕುಂಡಲಿಯಲ್ಲಿ ಏನಿದೆ? ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ರಾಶಿಯಲ್ಲಿ ಇದ್ದವೆಂದು ತಿಳಿಸುವ ವಿವರ ಅಥವಾ ನಕ್ಷೆಯೇ ಜನ್ಮ ಕುಂಡಲಿ. ಜನ್ಮ ಕುಂಡಲಿಯಲ್ಲಿ ಮುಖ್ಯವಾದುದೇ ಲಗ್ನ ಭಾವ. ಲಗ್ನ ಸ್ಥಾನವನ್ನು ಕುಂಡಲಿಯ ಮೊದಲ ಸ್ಥಾನ ಎನ್ನುತ್ತಾರೆ. ಲಗ್ನ ಸ್ಥಾನವನ್ನ...

ಎಚ್‌ಐವಿ/ಏಡ್ಸ್‌ ರೋಗಿಗಳಿಗಾಗಿ ಆಹಾರ ಕ್ರಮಗಳು

ಮನೀಷಾ ಮೋಹನಕುಮಾರ್‌,ಡಯಟೀಷಿಯನ್‌, ಕೆಎಂಸಿ, ಅತ್ತಾವರ, ಮಂಗಳೂರು. | Jun 24, 2013 ಕಳೆದ ಒಂದು ದಶಕದಿಂದ ಈಚೆಗೆ ಎಚ್‌ಐವಿ/ಏಡ್ಸ್‌ ರೋಗಿಗಳ ನಿರ್ವಹಣೆಯಲ್ಲಿ ಉತ್ತಮ ಪೋಷಕಾಂಶಗಳ ಆದ್ಯತೆಯು ಹೆಚ್ಚಾಗುತ್ತಿದೆ. ಏಡ್ಸ್‌ನ ಭಯಾನಕ ಪರಿಣಾಮಗಳ ವಿರುದ್ಧ ಹೋರಾಡುವಲ್ಲಿ ಪೋಷಣಾಭರಿತ ಆಹಾರಗಳು ಮಹತ್ವ ಪೂರ್ಣವಾದ ಸಾಧನಗಳಾಗಬಹುದು ಎಂದು ಇತ್ತೀಚಿನ ಸಂಶೋಧನೆಗಳ ವರದಿಗಳು ಹೇಳುತ್ತಿವೆ. ಉತ್ತಮ ಪೋಷಕಾಂಶಗಳು ಅಂದರೆ, ಸೇವಿಸಿದ ಆಹಾರದಿಂದ ಸಾಕಷ್ಟು ಪ್ರಮಾಣದಲ್ಲಿ ದೊಡ್ಡ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುವುದು. ದೊಡ್ಡ ಪೋಷಕಾಂಶಗಳು ಅಂದರೆ - ಕ್ಯಾಲೊರಿಗಳು (ಚೈತನ್ಯ): ಅಂದರೆ ಪ್ರೊಟೀನ್‌ಗಳು , ಕಾಬೋìಹೈಡ್ರೇಟ್ಸ್‌ ಮತ್ತು ಕೊಬ್ಬು. ಇವು ನಿಮ್ಮ ದೇಹದ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಸೂಕ್ಷ್ಮ ಪೋಷಕಾಂಶಗಳು ಅಂದರೆ ವಿಟಾಮಿನ್‌ಗಳು ಮತ್ತು ಖನಿಜಾಂಶಗಳು. ಇವು ನಿಮ್ಮ ಜೀವಕೋಶಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಕರಿಸುತ್ತವೆ. ಆದರೆ, ದೇಹದ ತೂಕ ಇಳಿಸುವಲ್ಲಿ ಇವುಗಳ ಪಾತ್ರವೇನೂ ಇಲ್ಲ. ಎಚ್‌ಐವಿ/ಏಡ್ಸ್‌ ಇರುವ ಅನೇಕ ರೋಗಿಗಳಿಗೆ ಉತ್ತಮ ಪೋಷಕಾಂಶಗಳದ್ದೇ ಸಮಸ್ಯೆಯಾಗಿರುತ್ತದೆ. ನಿಮ್ಮ ದೇಹವು ಯಾವುದಾದರೂ ಸೋಂಕಿನ ವಿರುದ್ಧ ಹೋರಾಡುತ್ತಿದೆ ಎಂದಾದರೆ, ಅದು ಹೆಚ್ಚಿನ ಶಕ್ತಿಯನ್ನು ಉಪಯೋಗಿಸುತ್ತಿರುತ್ತದೆ ಮತ್ತು ಇದಕ್ಕಾಗಿ ನೀವು ಸಾಮಾನ್ಯಕ್ಕಿಂತಲೂ ಹೆಚ್ಚಿನ ಆಹಾರವನ್ನು ಸೇವಿಸಬೇಕಾಗುತ್ತದೆ....

ಸರ್ಪಸುತ್ತಿನ ನಂತರದ ನರವೇದನೆ

ಸರ್ಪಸುತ್ತಿನ ನಂತರದ ನರವೇದನೆ ಡಾ| ಶಿವಾನಂದ ಪೈ,ನರರೋಗ ತಜ್ಞರು ಕೆಎಂಸಿ, ಅಂಬೇಡ್ಕರ್‌ ವೃತ್ತ, ಮಂಗಳೂರು ಪೋಸ್ಟ್‌ ಹಪೆìಟಿಕ್‌ ನ್ಯುರಾಲ್ಜಿಯಾ ಅಂದರೆ, ಸರ್ಪಸುತ್ತಿನ ನಂತರ ನರಗಳಲ್ಲಿ ಕಾಣಿಸಿಕೊಳ್ಳುವ ನೋವು. ಇದನ್ನು ಸರ್ಪಸುತ್ತಿನ ನಂತರದ ನರವೇದನೆ ಎಂದು ಕರೆಯಬಹುದು. ಇದು ಹಪೆìಸ್‌ ಝೋಸ್ಟರ್‌ ಅಥವಾ ಸರ್ಪಸುತ್ತಿನ ಕಾಯಿಲೆಯಲ್ಲಿ ಕಂಡು ಬರುವ ಬಹಳ ಸಾಮಾನ್ಯ ತೊಂದರೆ. ಸ್ಥೂಲವಾಗಿ, ಸರ್ಪಸುತ್ತಿನ ಲಕ್ಷಣಗಳು ಅಥವಾ ಗುಳ್ಳೆಗಳು ಮರೆಯಾದ ಬಳಿಕ, ಅಂದರೆ ಸುಮಾರು ಮೂರು ತಿಂಗಳವರೆಗೆ ಬಾಧಿಸುವ ನೋವು ಎಂಬುದಾಗಿ ಇದನ್ನು ವಿವರಿಸಬಹುದು. ಸರ್ಪಸುತ್ತು ಅಥವಾ ಹಪೆìಸ್‌ ಝೋಸ್ಟರ್‌ ನರಗಳನ್ನು ಬಾಧಿಸುವ ವೈರಸ್‌ ಸೋಂಕು. ಇದರಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಬಹಳ ನೋವಿನಿಂದ ಕೂಡಿರುತ್ತವೆ. ಸರ್ಪಸುತ್ತು ಬಾಧಿತವಾದ ನರಗಳು ಅಪರೂಪಕ್ಕೆ ಕೆಲವು ಸಲ ಕಾಯಿಲೆಯು ಗುಣವಾದ ಬಳಿಕವೂ ತೀವ್ರ ಯಾತನೆಯನ್ನು ಉಂಟು ಮಾಡುವುದಿದೆ. ಸರ್ಪಸುತ್ತಿನ ಗುಳ್ಳೆಗಳು, ಚರ್ಮದ ಮೇಲೆ ನೀರಿನ ಗುಳ್ಳೆಗಳ ಗೆರೆಗಳ ರೀತಿಯಲ್ಲಿ, ನರಗಳ ಮೇಲಿನ ಚರ್ಮದಲ್ಲಿ ಪಟ್ಟೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಪಟ್ಟೆಯು, ವೈರಸ್‌ ಚರ್ಮಕ್ಕೆ ಹರಡುವುದಕ್ಕೆ ಮೊದಲು, ಬಾಧಿತ ನರಗಳಿಗೆ ಹರಡುತ್ತದೆ. ಸರ್ಪಸುತ್ತು ಮಹಿಳೆ ಮತ್ತು ಪುರುಷರಿಬ್ಬರಲ್ಲಿಯೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಚಿಕನ್‌ಪಾಕ್ಸ್‌ ಅಥವಾ ಸೀತಾಳೆ ಸಿಡುಬನ್ನು ಹರಡುವ ಅದೇ ವೈರಸ್‌ (ವೆರಿ...

ಆರೋಗ್ಯಕರ ಅಡುಗೆಗಾಗಿ ಸಲಹೆಗಳು

1. ಅಡುಗೆಯಲ್ಲಿ ಕೆನೆ ರಹಿತ ಅಥವಾ ಕಡಿಮೆ ಕೊಬ್ಬುಯುಕ್ತ ಹಾಲಿನ ಉತ್ಪನ್ನಗಳನ್ನು (ಹಾಲು, ಯೋಗರ್ಟ್‌, ಚೀಸ್‌, ಬೆಣ್ಣೆ, ಕೆನೆ, ಐಸ್‌ಕ್ರೀಂ ಇತ್ಯಾದಿ) ಉಪಯೋಗಿಸಿ. 2. ಒಂದುವೇಳೆ ಯಾವುದಾದರೂ ಅಡುಗೆಗೆ ಎಣ್ಣೆ/ಬೆಣ್ಣೆ/ತುಪ್ಪ ಅತ್ಯವಶ್ಯ ಎನಿಸಿದರೆ, ಕ್ಯಾನೊಲ ಎಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಸಣ್ಣ ಪ್ರಮಾಣದಲ್ಲಿ ಉಪಯೋಗಿಸಬಹುದು. ಕಾವಲಿ ಅಥವಾ ಬಾಣಲೆಗೆ ಎಣ್ಣೆಯನ್ನು ಸುರಿಯುವುದಕ್ಕೆ ಬದಲಾಗಿ, ಎಣ್ಣೆಯನ್ನು ಸವರುವ ಅಥವಾ ಉಜ್ಜುವ ಅಭ್ಯಾಸವನ್ನು ಮಾಡ್ಕೊಳ್ಳಿ. 3. ಅಡುಗೆಗೆ ನಾನ್‌-ಸ್ಟಿಕ್‌ ಪಾತ್ರೆಗಳನ್ನೇ ಉಪಯೋಗಿಸಿ. 4. ಮೊದಲು ಪಾತ್ರೆಯನ್ನು ಬಿಸಿಮಾಡಿಕೊಳ್ಳಿ, ಆ ಮೇಲೆ ಎಣ್ಣೆಯನ್ನು ಸ್ಪ್ರೆà ಮಾಡಿ ಅಥವಾ ಪಾತ್ರೆಗೆ ಸವರಿ. ಕಾವಲಿ ಬಿಸಿಯಾಗಿದ್ದರೆ, ಅದರಲ್ಲಿ ಎಣ್ಣೆ ಚೆನ್ನಾಗಿ ಹರಡುತ್ತದೆ. 5. ಕರಿಯುವುದಕ್ಕೆ ಬದಲಾಗಿ ಸಾಧ್ಯವಿದ್ದರೆ, ಹಬೆಯಲ್ಲಿ ಬೇಯಿಸಿ, ಬಾರ್ಬೆಕ್ಯೂ ಮಾಡಿ ಅಥವಾ ಗ್ರಿಲ್‌ ಮಾಡಿ. 6. ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಬೇಡಿ. ಹೀಗೆ ಮಾಡುವುದರಿಂದ ಆಹಾರದ ಪೋಷಕಾಂಶಗಳು ನಷ್ಟವಾಗುತ್ತವೆ. 7. ತರಕಾರಿಗಳನ್ನು ಪೊಟ್ಯಾಷಿಯಂ ಪರಮಾಂಗನೇಟ್‌ ಸೇರಿಸಿದ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ, ಅದರಲ್ಲಿರಬಹುದಾದ ರಾಸಾಯನಿಕಗಳು ಅಥವಾ ಕೀಟನಾಶಕಗಳು ನಾಶವಾಗುತ್ತವೆ. ಆ ಮೇಲೆ, ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆಯಿರಿ. 8. ತರಕಾರಿಗಳನ್ನು ಅತಿಯಾಗಿ ಬೇಯಿಸಬೇಡಿ. ಹೀಗೆ ಮಾಡುವುದರ...

ಮೂತ್ರಕೋಶದ ಕಲ್ಲಿಗೆ ಪ್ರಕೃತಿ ಚಿಕಿತ್ಸೆ

ಮೂತ್ರದಿಂದ ಬೇರ್ಪಟ್ಟು ಮೂತ್ರಕೋಶದಲ್ಲಿ ಒಂದೆಡೆ ಗಟ್ಟಿಯಾಗಿ ಸೇರ್ಪಡೆಗೊಳ್ಳುವ ವಸ್ತುಗಳು ಮೂತ್ರಕೋಶದ ಕಲ್ಲುಗಳು ಅಂದೆನಿಸಿಕೊಳ್ಳುತ್ತವೆ. ಮೂತ್ರಕೋಶದಲ್ಲಿ ಕಲ್ಲುಗಳು ಬೆಳೆಯಲು ಹಲವಾರು ಕಾರಣಗಳಿವೆ. ಅವುಗಳೆಂದರೆ ಮೂತ್ರವು ಕ್ಯಾಲ್ಸಿಯಂ, ಆಕ್ಸಲೇಟ್, ಯೂರಿಕ್ ಆಸಿಡ್ ಮತ್ತು ಫಾಸ್ಫೇಟ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವುದು, ಮೂತ್ರದಲ್ಲಿ ನೀರಿನಂಶವು ಕಡಿಮೆಯಿರುವುದು, ಮೂತ್ರದಲ್ಲಿರುವ ಅಂಶಗಳು ಹೆಚ್ಚೆಚ್ಚು ಹೊರಹೋಗುವುದು, ವಾತಾವರಣದಲ್ಲಿ ಉಷ್ಣತೆ ಹೆಚ್ಚಿರುವುದು ಹಾಗೂ ನೀರನ್ನು ಕಡಿಮೆ ತೆಗೆದುಕೊಳ್ಳುವುದು, ಆಹಾರದಲ್ಲಿ ಪ್ರೋಟೀನ್, ಸೋಡಿಯಂ ಮತ್ತು ಕ್ಯಾಲ್ಸಿಯಂನ್ನು ಹೆಚ್ಚಾಗಿ ತೆಗೆದುಕೊಳ್ಳುವುದು, ಮೂತ್ರವನ್ನು ಸಮಯಕ್ಕೆ ಸರಿಯಾಗಿ ವಿಸರ್ಜಿಸದಿರುವುದು, ದೇಹದಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ ಶೇಖರಣೆಗೊಂಡಿರುವುದು ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಕಾರಣ. ಮೂತ್ರದಲ್ಲಿ ಕ್ಯಾಲ್ಸಿಯಂ ಇರುವುದನ್ನು ಹೆಚ್ಚು ಉಪ್ಪಿನಂಶವನ್ನು ತಿನ್ನುವವರಲ್ಲಿ ಕಾಣಬಹುದು. ಮೂತ್ರದಲ್ಲಿ ಆಕ್ಸ್‌ಲೇಟ್ ಸಾಮಾನ್ಯವಾಗಿ ಕರುಳಿನ ತೊಂದರೆ, ಪ್ಯಾನ್ಕ್ರಿಯಾಸ್‌ನ ತೊಂದರೆಗಳಲ್ಲಿ ಕಾಣಬಹುದು. ಸ್ಟ್ರುವೈಟ್‌ನ ಕಲ್ಲುಗಳು ಯೂರಿಯಾವನ್ನು ವಿಭಜಿಸುವ ಜೀವಿಯಿಂದ ಬರುತ್ತದೆ. ಈ ಕಲ್ಲುಗಳು ಮೂತ್ರ ನಾಳದಲ್ಲಿ ನಿಂತು ಬಿಡುತ್ತವೆ. ಯೂರಿಕ್ ಆಸಿಡ್ ಕಲ್ಲುಗಳು ಮೂತ್ರದಲ್ಲಿ ಯೂರಿಕ್ ಆಸಿಡ್‌ನ ಅಂಶವು ಹೆಚ್ಚಿದ್ದರೆ ಮೂತ್ರದ ಆಮ್ಲತೆ ಹೆಚ್ಚಿರುತ್ತದೆ. ಮೂತ್ರ...

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ --ಅನಿಮಿಯಾ ಎಂದರೇನು?

ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಅನಿಮಿಯಾ ಎಂದರೇನು? ನಿಮ್ಮ ರಕ್ತದಲ್ಲಿ ಹೆಮೊಗ್ಲೋಬಿನ್‌ ಅಂಶವು ಸಹಜ ಮಟ್ಟಕ್ಕಿಂತ ಕಡಿಮೆ ಇರುವ ಸ್ಥಿತಿಗೆ ಅನಿಮಿಯಾ ಅಥವಾ ರಕ್ತಹೀನತೆ ಎಂದು ಹೆಸರು. ಹೆಮೊಗ್ಲೋಬಿನ್‌ ಶರೀರದ ಕೆಂಪು ರಕ್ತಕಣಗಳಲ್ಲಿ ಇರುವ ಒಂದು ಅಂಶ. ಇದು ಶರೀರಕ್ಕೆ ಆಮ್ಲಜನಕವನ್ನು ಸರಬರಾಜು ಮಾಡಿ, ಇಂಗಾಲದ ಡೈ ಆಕ್ಸೆ„ಡ್‌ಅನ್ನು (ತ್ಯಾಜ್ಯ ಉತ್ಪನ್ನ) ದೇಹದಿಂದ ಹೊರಗೆ ತೆಗೆದು ಹಾಕುತ್ತದೆ. ಕಬ್ಬಿಣದ ಅಂಶದ ಕೊರತೆಯ ಅನಿಮಿಯಾ ಎಂದರೇನು? ಶರೀರದಲ್ಲಿ ಕಬ್ಬಿಣದ ಅಂಶದ ಕೊರತೆಯ ಕಾರಣದಿಂದಾಗಿ ಹೆಮೊಗ್ಲೋಬಿನ್‌ ಮಟ್ಟವು ಕುಸಿಯುವ ಸ್ಥಿತಿಗೆ ಕಬ್ಬಿಣದ ಅಂಶದ ಕೊರತೆಯ ಅನಿಮಿಯಾ ಎಂದು ಹೆಸರು. ಇದು ಜಗತ್ತಿನಾದ್ಯಂತ ಜನ ಸಾಮಾನ್ಯರಲ್ಲಿ ಕಂಡುಬರುವ ಬಹಳ ಸಾಮಾನ್ಯ ರೀತಿಯ ಅನಿಮಿಯಾ. ಕಬ್ಬಿಣದ ಅಂಶದ ಕೊರತೆಯ ರಕ್ತಹೀನತೆ ಹೇಗೆ ಉಂಟಾಗುತ್ತದೆ? ಸಾಮಾನ್ಯವಾಗಿ, ಕಳಪೆ ಆಹಾರ ಸೇವನೆ ಅಥವಾ ಆಹಾರದಲ್ಲಿರುವ ಕಬ್ಬಿಣದ ಅಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಆಗದಿರುವ ಶರೀರದ ಅಸಾಮರ್ಥ್ಯಗಳ ಕಾರಣದಿಂದಾಗಿ ಕಬ್ಬಿಣದ ಅಂಶದ ಕೊರತೆ ಬಾಧಿಸುತ್ತದೆ. ಈ ಸ್ಥಿತಿಯಲ್ಲಿ , ಕ್ರಮೇಣ ಶರೀರವು ಆರೋಗ್ಯವಂತ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಅಸಮರ್ಥವಾಗುತ್ತದೆ. ಸಾಕಷ್ಟು ಕಬ್ಬಿಣದ ಅಂಶಗಳು ಇಲ್ಲದೇ ಹೋದಾಗ, ಶರೀರವು ತಾನು ಈ ಹಿಂದೆ ಸಂಗ್ರಹಿಸಿದ ಕಬ್ಬಿಣದ ಅಂಶಗಳನ್ನು ಉಪಯೋಗಿಸಲು ಆರಂಭಿಸುತ್ತದೆ. ಕ್ರಮೇಣ ಈ ಸಂಗ್ರಹಿತ ಅಂಶವೂ ಸಹ ಮುಗಿದು ಹೋಗು...