Skip to main content

ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು.

ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು. ೧) ಬೆಟ್ಟದ ನೆಲ್ಲಿಕಾಯಿ ೧೧ ಅಥವ ೨೧ ರಲ್ಲಿ ದೀಪವನ್ನು ಮಾಡಿ ತುಪ್ಪದಿಂದ ದೀಪವನ್ನು ಮಾಡಿ ೧೧ ಶುಕ್ರವಾರ ಅಥವ ಗುರುವಾರ ಮುಂಜಾನೆ ಅಥವ ಸಂಜೆ ಯಲ್ಲಿ ಅರಳಿ ಅಥವ ಅತ್ತಿ ಮರದ ಬುಡದಲ್ಲಿ ಇಟ್ಟು ೧೧ ಪ್ರದಕ್ಷಿಣೆ ಮಾಡಿ ಗುರು ಮತ್ತು ಶುಕ್ರರನ್ನು ಪ್ರಾರ್ಥಿಸಿಕೊಂಡು ಬರುವುದು ಮೊದಲ ಮತ್ತು ಕೊನೆಯ ದಿನ ಗಳಂದು ಹಣ್ಣು ಕಾಯಿ ನೈವೇದ್ಯಗಳಿಂದ ವೃಕ್ಷವನ್ನು ಪೂಜಿಸುವುದು. ೨)ಇದು ವಿಶೇಷವಾದ ಖಚಿತ ಫಲವನ್ನು ನೀಡುವ ಪರಿಹಾರವಾಗಿದೆ ನಂಬಿಕೆ,ಶ್ರದ್ದೆ,ಭಕ್ತಿ ಬಹಳ ಮುಖ್ಯ. ಪೂಜೆಗೆ ಬೇಕಾದ ವಸ್ತುಗಳು ಒಂದು ತಾಮ್ರದ ಚಂಬು,೫ ಕೆಂಪು ಕುಪ್ಪಸ,೫ ಬೊಗಸೆ ಅಕ್ಕಿ, (೧೫ ಹಿಡಿ ಅಕ್ಕಿ)೫ ಕಗ್ಗಲಿ ೯ ಅಂಗುಲದ ಗಟ್ಟಿಯಾದ ತುಂಡು (ಗಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ) ಒಂದು ಮರದ ಮಣೆ ಅಥವ ತಟ್ಟೆ ಪೂಜಾ ಸಾಮಗ್ರಿಗಳು (ಹೂವು,ಹಣ್ಣು,ಎಲೆ ಅಡಿಕೆ,ಕಡ್ಡಿ ಕರ್ಪೂರ ಅರಿಸಿನ ಕುಂಕುಮ ಇತ್ಯಾದಿ) ಮಂಗಳವಾರದ ದಿನ ಮೊದಲು ಮನೆ ಶುಚಿಗೊಳಿಸಿ ನಂತರ ತಾವು ಶುಚಿಯಾಗಿ ದೇವರಮನೆಯಲ್ಲಿ ಒಂದು ಮಣೆಯನ್ನು ಹಾಕಿ ಅದರ ಮೇಲೆ ಒಂದು ಕೆಂಪು ಕುಪ್ಪಸ ಹಾಕಿ ಅದರ ಮೇಲೆ ಒಂದು ಬೊಗಸೆ ಅಕ್ಕಿ ಹಾಕಿ ಅದರ ಮೇಲೆ ತಾಮ್ರದ ಚಂಬು ಇಟ್ಟು ಚಂಬಿನಲ್ಲಿ ತುಗರಿ ಬೇಳೆ ತುಂಬಿ ಅದರ ಮೇಲೆ ೧ ಕಗ್ಗಲಿ ತುಂಡನ್ನು ಇಟ್ಟು ಮೇಲೆ ಒಂದು ಕೆಂಪು ಕುಪ್ಪಸವನ್ನು ಹಾಕಿ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಯಾವುದಾದರು ಶತನಾಮಾವಳಿ (ದುರ್ಗ,ಚಾಮುಂಡಿ,ಲಕ್ಷ್ಮಿ) ಯನ್ನು ೧೦೮ ಸಲ ಹೇಳಿ ಮಂಗಳಾರತಿ ಮಾಡುವುದು ಸಂಜೆ ಬಟ್ಟೆ ಮತ್ತು ಚಂಬು ಇಟ್ಟು ಕೊಂಡು ಅಕ್ಕಿ ಮತ್ತು ಬೇಳೆಯನ್ನು ಯಾವುದಾದರು ಸ್ತ್ರೀದೇವಾಲಯಕ್ಕೆ ನೀಡುವುದು ಕಗ್ಗಲಿ ತುಂಡನ್ನು ಹಸಿರು ಗಿಡದ ಬಳಿ ಇಟ್ಟು ಬರುವುದು ಈ ರೀತಿ ೩ ದಿನ ಮಾಡಿ ೪ನೇ ದಿನ ೫ ಜನ ಮುತೈದೆಯರನ್ನು ಕರೆದು ಅವರಿಗೆ ಹೋಳಿಗೆ ಉಣಬಡಿಸಿ ಕೆಂಪು ಕುಪ್ಪಸ ನೀಡಿ ಅರಿಸಿನ ಕುಂಕುಮವನ್ನು ನೀಡಬೇಕು ಒಂದು ಕುಪ್ಪಸವನ್ನು ೫ ಜನರಿಂದ ಮುಟ್ಟಿಸಿಕೊಂಡು ಇಟ್ಟುಕೊಳ್ಳಬೇಕು ೫ನೇ ದಿನ ಪೂಜೆಯ ನಂತರ ಪೂಜೆಗೆ ಬಳಸಿದ ಎಲ್ಲಾ ವಸ್ತುಗಳನ್ನು ಅಂದರೆ ಚಂಬನ್ನು ಬಿಟ್ಟು ಉಳಿದ ಅರಿಸಿನ ಕುಂಕುಮ ಒಣಗಿದ ಹೂವು ಇತ್ಯಾದಿ ಗಳನ್ನು ಕುಪ್ಪಸದಲ್ಲಿ ಕಟ್ಟಿಕೊಂಡು ಹರಿವ ನೀರಲ್ಲಿ ಬಿಡುವುದು ಅದೇ ನೀರಲ್ಲಿ ಸ್ನಾನ ಮಾಡಿ ಬರುವುದು. ಕಟ್ಟಿಗೆಯನ್ನು ಹಸಿರು ಗಿಡದ ಬಳಿ ಇಡುವುದು ಅಕ್ಕಿ ಮತ್ತು ಬೇಳೆಯನ್ನು ದೇವಾಲಯದಲ್ಲಿ ನೀಡಿ ಬರುವುದು. ೩)ಟಿ ನರಸೀ ಪುರದಲ್ಲಿರುವ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯದಲ್ಲಿರುವ ದೇವಿ ರಕ್ಷಾಂಭರಿ ದೇವಿಯ ದೇವಾಲಯಕ್ಕೆ ಶುಕ್ರವಾರ ಅಥವ ಹುಣ್ಣಿಮೆಯಲ್ಲಿ ಹೋಗಿ ವಿವಾಹ ವಿಳಂಭವಾಗುತ್ತಿರುವ ಸ್ತ್ರೀಯ ಜಾತಕವನ್ನು ತಗೆದುಕೊಂಡು ಹೋಗಿ ದೇವಿಗೆ ೧ಕಿಲೋ ಅರಿಸಿನ ಮತ್ತು ೧ಕಿಲೋ ಕುಂಕುಮವನ್ನು ತಗೆದುಕೊಂಡು ಹೋಗಿ ದೇವಿಯ ಬಲಪಾದಕ್ಕೆ ಅರಿಸಿನ ವನ್ನು ದೇವಿಯ ಎಡಪಾದಕ್ಕೆ ಕುಂಕುಮವನ್ನು ಅರ್ಪಿಸಿ ದೇವಿಯ ಎರಡೂಪಾದದ ಮದ್ಯೆ ಜಾತಕವನ್ನಿಟ್ಟು ದೇವಿಗೆ ಅರ್ಚನೆ ಮಾಡಿಸಿ ನಂತರ ಜಾತಕ ಮತ್ತು ಸ್ವಲ್ಪ ಅರಿಸಿನ ಮತ್ತು ಕುಂಕುಮವನ್ನು ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟುಕೊಳ್ಳಿ ಕುಂಕುಮವನ್ನು ಮನೆಯ ಎಲ್ಲಾ ಸ್ತ್ರೀಯರು ಇಟ್ಟುಕೊಳ್ಳಿ ಅರಿಸಿನವನ್ನು ವಿವಾಹ ವಿಳಂಭವಾಗಿರುವ ಸ್ತ್ರೀಯು ನಿತ್ಯ ಸ್ನಾನದಲ್ಲಿ ಬಳಸುತ್ತಿರಲಿ ವಿವಾಹ ಆಗುವವರೆಗು ಈ ಕಾರ್ಯ ನಿಲ್ಲಿಸಬಾರದು ವಿವಾಹಾ ನಂತರ ವಧು ವರರು ೩ ತಿಂಗಳ ವರೆಗೆ ಮಾಂಸ ಮದ್ಯವನ್ನು ಸೇವಿಸ ಬಾರದು ೩ ತಿಂಗಳ ನಂತರ ದಂಪತಿಗಳು ದೇವಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ನಂತರ ಮಾಂಸ ಮದ್ಯ ಸೇವಿಸಬಹುದು. ಈ ವಿಚಾರದಲ್ಲಿ ಅಸಡ್ಡೆ ತೋರಿದರೆ ಆಗುವ ತೊಂದರೆಗಳಿಗೆ ನೀವೇ ಜವಾಬ್ದಾರರಿರುತ್ತೀರಿ. ೪) ಅಕ್ಕಿ ತೌಡು(ಅಕ್ಕಿ ತರಿ),ಬಿಳಿ ಜೋಳ, ಬಟಾಣಿ, ಕಡಲೆ ಬೀಜ, ಗೋಧಿ,ಮುಸುಕಿನಜೋಳ, ಇವುಗಳನ್ನು ತಲಾ ೧ಕಿಲೋ ತಗೆದುಕೊಂಡು ಶುದ್ದಗೊಳಿಸಿ ಎಲ್ಲವನ್ನು ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ೨೧ ದಿನಗಳಕಾಲ ಬೆಳಗ್ಗೆ ತಮ್ಮ ಹಿಡಿಯಲ್ಲಿ ೭ ಹಿಡಿಯನ್ನು ತಗೆದುಕೊಂಡು ತಮ್ಮ ತಲೆಗೆ ೭ ಸಲ ೭ ಹಿಡಿಯನ್ನು ತಿರುಗಿಸಿ ಒಂದು ಚೀಲದಲ್ಲಿ ಹಾಕಿ ಕೊಂಡು ಎಲ್ಲಾದರು ಪಕ್ಷಿಗಳಿರುವ ಕಡೆಯಲ್ಲಿ ಹಾಕುವುದು ಈ ರೀತಿ ೨೧ ದಿನದಿಂದ ೪೧ ದಿನದ ವರೆಗೆ ಮಾಡಬೇಕು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...